AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ಗೆಳೆಯನ ಮದುವೆಗೆ ಬಂದಿದ್ದ ಸ್ನೇಹಿತರ ಜಗಳ; ಕುಡಿದ ಅಮಲಿನಲ್ಲಿ ಬಾಲ್ಯದ ಗೆಳೆಯನ ಗಂಟಲನ್ನೇ ಕುಯ್ದುಬಿಟ್ಟ

ಅವರ ಸ್ನೇಹಿತರೊಬ್ಬರು 1 ಗಂಟೆಯ ಸರಿಸುಮಾರಿಗೆ ಕರೆ ಮಾಡಿ ಟಿಂಕು ಟೆರೆಸ್​ನಿಂದ ಬಿದ್ದು ಅಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವಿಷಯ ತಿಳಿಸಿದರು. ಆದರೆ ಆಸ್ಪತ್ರೆಯಲ್ಲಿಯೇ ಗೊತ್ತಾದದ್ದು ದೀಪಕ್​ ಪಂಡಿತ್​ ನನ್ನ ಸಹೋದರನ ಗಂಟಲು ಕತ್ತರಿಸಿದ್ದಾನೆ ಎಂದು ಮೃತ ದುರ್ದೈವಿ ಟಿಂಕುವಿನ ಹಿರಿಯ ಸಹೋದರ ಹೇಳಿದ್ದಾರೆ.

Crime News: ಗೆಳೆಯನ ಮದುವೆಗೆ ಬಂದಿದ್ದ ಸ್ನೇಹಿತರ ಜಗಳ; ಕುಡಿದ ಅಮಲಿನಲ್ಲಿ ಬಾಲ್ಯದ ಗೆಳೆಯನ ಗಂಟಲನ್ನೇ ಕುಯ್ದುಬಿಟ್ಟ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jul 22, 2021 | 2:15 PM

Share

ಸಂತೋಷದಿಂದ ಆಚರಿಸುತ್ತಿದ್ದ ವಿವಾಹ ಮಹೋತ್ಸವದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಘಟನೆ ಘಾಜಿಯಾಬಾದ್​ನಲ್ಲಿ(Ghaziabad) ನಡೆದಿದ್ದು ಆಪ್ತ ಸ್ನೇಹಿತನ ತಂಗಿಯ ಮದುವೆಗೆಂದು ತೆರಳಿದ್ದ ಸ್ನೇಹಿತರ(Friends) ನಡುವೆ ಜಗಳ ಉಂಟಾಗಿದೆ. ವಾದ-ವಿವಾದ ವಿಪರೀತಕ್ಕೆ ಇಳಿದ  ಪರಿಣಾಮ 19 ವರ್ಷದ ಯುವಕ ಸಾವಿಗೀಡಾಗಿದ್ದಾನೆ(Crime News). ಪೊಲೀಸರು ಹೇಳಿದ ಮಾಹಿತಿ ಪ್ರಕಾರ, ಮೃತ ದುರ್ದೈವಿ ಟಿಂಕು ಎಂದು ಗುರುತಿಸಲಾಗಿದೆ.

ಟಿಂಕು ಸ್ಥಳೀಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಟಿಂಕು ಮತ್ತು ದೀಪಕ್​ ಪಂಡಿತ್​ ಬಾಲ್ಯದ ಗೆಳೆಯರು. ವಿವಾಹ ಕಾರ್ಯಕ್ರಮಕ್ಕಾಗಿ ಘಾಜಿಯಾಬಾದ್​ಗೆ ತೆರಳಿದ್ದರು. ಸ್ನೇಹತರೆಲ್ಲಾ ಸೇರಿ ಟೆರೇಸ್​ ಮೇಲೆ ಹತ್ತಿ ಕುಳಿತು ಪಾರ್ಟಿ(Drinks) ಮಾಡುತ್ತಿದ್ದರು. ಈ ಮಧ್ಯೆ ಟಿಂಕು ಮತ್ತು ಪಂಡಿತ್​ ನಡುವೆ ಜಗಳ ಉಂಟಾಗಿದೆ. ಮಾತುಕತೆ ವಿಪರೀತಗೊಂಡಿದ್ದು ದೀಪಕ್ ಪಂಡಿತ್​, ಕೈಯ್ಯಲ್ಲಿದ್ದ ಗಾಜಿನ ಬಾಟಲಿ(Glass) ಮೂಲಕ ಟಿಂಕುವಿನ ಕುತ್ತಿಗೆ ಕುಯ್ದುಹಾಕಿದ್ದಾನೆ. ಬಳಿಕ ಪಂಡಿತ್​ ಸ್ಥಳದಿಂದ ಪರಾರಿಯಾಗಿದ್ದಾನೆ. ಟಿಂಕುವಿನ ಕುತ್ತಿಗೆಯಿಂದ ರಕ್ತ ಹರಿಯಲು ಪ್ರಾರಂಭವಾಗಿದೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಯ ಮಧ್ಯೆ ಕೊನೆಯುಸಿರುಬಿಟ್ಟಿದ್ದಾನೆ.

ಅವರ ಸ್ನೇಹಿತರೊಬ್ಬರು 1 ಗಂಟೆಯ ಸರಿಸುಮಾರಿಗೆ ಕರೆ ಮಾಡಿ ಟಿಂಕು ಟೆರೆಸ್​ನಿಂದ ಬಿದ್ದು ಅಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವಿಷಯ ತಿಳಿಸಿದರು. ಆದರೆ ಆಸ್ಪತ್ರೆಯಲ್ಲಿಯೇ ಗೊತ್ತಾದದ್ದು ದೀಪಕ್​ ಪಂಡಿತ್​ ನನ್ನ ಸಹೋದರನ ಗಂಟಲು ಕತ್ತರಿಸಿದ್ದಾನೆ ಎಂದು ಮೃತ ದುರ್ದೈವಿ ಟಿಂಕುವಿನ ಹಿರಿಯ ಸಹೋದರ ಹೇಳಿದ್ದಾರೆ. ಭಾರತೀಯ ದಂಡ ಸಂಹಿತೆ ಸೆಕ್ಷನ್​ 304 ಅಡಿಯಲ್ಲಿ ಪಂಡಿತ್​ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

ದಾವಣಗೆರೆ: ಒಂಟಿ ವೃದ್ಧೆ ಕೊಲೆ ಪ್ರಕರಣ ಪತ್ತೆ ಹಚ್ಚಿದ ಪೊಲೀಸ್ ಡಾಗ್ ತುಂಗಾ; ಶ್ವಾನದ ಯಶೋಗಾಥೆ ಇಲ್ಲಿದೆ

Murder News: ನಿನ್ನಿಂದ ಮಗು ಹುಟ್ಟಿಸಲು ಸಾಧ್ಯವಿಲ್ಲ ಎಂದ ವೈದ್ಯೆಯ ಬರ್ಬರ ಹತ್ಯೆ!; ಭಾವನಿಂದಲೇ ಕೊಲೆಯಾದ ಮಾಜಿ MLA ಸೊಸೆ

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್