AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ಗೆಳೆಯನ ಮದುವೆಗೆ ಬಂದಿದ್ದ ಸ್ನೇಹಿತರ ಜಗಳ; ಕುಡಿದ ಅಮಲಿನಲ್ಲಿ ಬಾಲ್ಯದ ಗೆಳೆಯನ ಗಂಟಲನ್ನೇ ಕುಯ್ದುಬಿಟ್ಟ

ಅವರ ಸ್ನೇಹಿತರೊಬ್ಬರು 1 ಗಂಟೆಯ ಸರಿಸುಮಾರಿಗೆ ಕರೆ ಮಾಡಿ ಟಿಂಕು ಟೆರೆಸ್​ನಿಂದ ಬಿದ್ದು ಅಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವಿಷಯ ತಿಳಿಸಿದರು. ಆದರೆ ಆಸ್ಪತ್ರೆಯಲ್ಲಿಯೇ ಗೊತ್ತಾದದ್ದು ದೀಪಕ್​ ಪಂಡಿತ್​ ನನ್ನ ಸಹೋದರನ ಗಂಟಲು ಕತ್ತರಿಸಿದ್ದಾನೆ ಎಂದು ಮೃತ ದುರ್ದೈವಿ ಟಿಂಕುವಿನ ಹಿರಿಯ ಸಹೋದರ ಹೇಳಿದ್ದಾರೆ.

Crime News: ಗೆಳೆಯನ ಮದುವೆಗೆ ಬಂದಿದ್ದ ಸ್ನೇಹಿತರ ಜಗಳ; ಕುಡಿದ ಅಮಲಿನಲ್ಲಿ ಬಾಲ್ಯದ ಗೆಳೆಯನ ಗಂಟಲನ್ನೇ ಕುಯ್ದುಬಿಟ್ಟ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jul 22, 2021 | 2:15 PM

Share

ಸಂತೋಷದಿಂದ ಆಚರಿಸುತ್ತಿದ್ದ ವಿವಾಹ ಮಹೋತ್ಸವದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಘಟನೆ ಘಾಜಿಯಾಬಾದ್​ನಲ್ಲಿ(Ghaziabad) ನಡೆದಿದ್ದು ಆಪ್ತ ಸ್ನೇಹಿತನ ತಂಗಿಯ ಮದುವೆಗೆಂದು ತೆರಳಿದ್ದ ಸ್ನೇಹಿತರ(Friends) ನಡುವೆ ಜಗಳ ಉಂಟಾಗಿದೆ. ವಾದ-ವಿವಾದ ವಿಪರೀತಕ್ಕೆ ಇಳಿದ  ಪರಿಣಾಮ 19 ವರ್ಷದ ಯುವಕ ಸಾವಿಗೀಡಾಗಿದ್ದಾನೆ(Crime News). ಪೊಲೀಸರು ಹೇಳಿದ ಮಾಹಿತಿ ಪ್ರಕಾರ, ಮೃತ ದುರ್ದೈವಿ ಟಿಂಕು ಎಂದು ಗುರುತಿಸಲಾಗಿದೆ.

ಟಿಂಕು ಸ್ಥಳೀಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಟಿಂಕು ಮತ್ತು ದೀಪಕ್​ ಪಂಡಿತ್​ ಬಾಲ್ಯದ ಗೆಳೆಯರು. ವಿವಾಹ ಕಾರ್ಯಕ್ರಮಕ್ಕಾಗಿ ಘಾಜಿಯಾಬಾದ್​ಗೆ ತೆರಳಿದ್ದರು. ಸ್ನೇಹತರೆಲ್ಲಾ ಸೇರಿ ಟೆರೇಸ್​ ಮೇಲೆ ಹತ್ತಿ ಕುಳಿತು ಪಾರ್ಟಿ(Drinks) ಮಾಡುತ್ತಿದ್ದರು. ಈ ಮಧ್ಯೆ ಟಿಂಕು ಮತ್ತು ಪಂಡಿತ್​ ನಡುವೆ ಜಗಳ ಉಂಟಾಗಿದೆ. ಮಾತುಕತೆ ವಿಪರೀತಗೊಂಡಿದ್ದು ದೀಪಕ್ ಪಂಡಿತ್​, ಕೈಯ್ಯಲ್ಲಿದ್ದ ಗಾಜಿನ ಬಾಟಲಿ(Glass) ಮೂಲಕ ಟಿಂಕುವಿನ ಕುತ್ತಿಗೆ ಕುಯ್ದುಹಾಕಿದ್ದಾನೆ. ಬಳಿಕ ಪಂಡಿತ್​ ಸ್ಥಳದಿಂದ ಪರಾರಿಯಾಗಿದ್ದಾನೆ. ಟಿಂಕುವಿನ ಕುತ್ತಿಗೆಯಿಂದ ರಕ್ತ ಹರಿಯಲು ಪ್ರಾರಂಭವಾಗಿದೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಯ ಮಧ್ಯೆ ಕೊನೆಯುಸಿರುಬಿಟ್ಟಿದ್ದಾನೆ.

ಅವರ ಸ್ನೇಹಿತರೊಬ್ಬರು 1 ಗಂಟೆಯ ಸರಿಸುಮಾರಿಗೆ ಕರೆ ಮಾಡಿ ಟಿಂಕು ಟೆರೆಸ್​ನಿಂದ ಬಿದ್ದು ಅಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವಿಷಯ ತಿಳಿಸಿದರು. ಆದರೆ ಆಸ್ಪತ್ರೆಯಲ್ಲಿಯೇ ಗೊತ್ತಾದದ್ದು ದೀಪಕ್​ ಪಂಡಿತ್​ ನನ್ನ ಸಹೋದರನ ಗಂಟಲು ಕತ್ತರಿಸಿದ್ದಾನೆ ಎಂದು ಮೃತ ದುರ್ದೈವಿ ಟಿಂಕುವಿನ ಹಿರಿಯ ಸಹೋದರ ಹೇಳಿದ್ದಾರೆ. ಭಾರತೀಯ ದಂಡ ಸಂಹಿತೆ ಸೆಕ್ಷನ್​ 304 ಅಡಿಯಲ್ಲಿ ಪಂಡಿತ್​ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

ದಾವಣಗೆರೆ: ಒಂಟಿ ವೃದ್ಧೆ ಕೊಲೆ ಪ್ರಕರಣ ಪತ್ತೆ ಹಚ್ಚಿದ ಪೊಲೀಸ್ ಡಾಗ್ ತುಂಗಾ; ಶ್ವಾನದ ಯಶೋಗಾಥೆ ಇಲ್ಲಿದೆ

Murder News: ನಿನ್ನಿಂದ ಮಗು ಹುಟ್ಟಿಸಲು ಸಾಧ್ಯವಿಲ್ಲ ಎಂದ ವೈದ್ಯೆಯ ಬರ್ಬರ ಹತ್ಯೆ!; ಭಾವನಿಂದಲೇ ಕೊಲೆಯಾದ ಮಾಜಿ MLA ಸೊಸೆ

Follow Us
TV9 Web
TV9 Web

TV9 Kannada

Read More
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ