AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ಗೆಳೆಯನ ಮದುವೆಗೆ ಬಂದಿದ್ದ ಸ್ನೇಹಿತರ ಜಗಳ; ಕುಡಿದ ಅಮಲಿನಲ್ಲಿ ಬಾಲ್ಯದ ಗೆಳೆಯನ ಗಂಟಲನ್ನೇ ಕುಯ್ದುಬಿಟ್ಟ

ಅವರ ಸ್ನೇಹಿತರೊಬ್ಬರು 1 ಗಂಟೆಯ ಸರಿಸುಮಾರಿಗೆ ಕರೆ ಮಾಡಿ ಟಿಂಕು ಟೆರೆಸ್​ನಿಂದ ಬಿದ್ದು ಅಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವಿಷಯ ತಿಳಿಸಿದರು. ಆದರೆ ಆಸ್ಪತ್ರೆಯಲ್ಲಿಯೇ ಗೊತ್ತಾದದ್ದು ದೀಪಕ್​ ಪಂಡಿತ್​ ನನ್ನ ಸಹೋದರನ ಗಂಟಲು ಕತ್ತರಿಸಿದ್ದಾನೆ ಎಂದು ಮೃತ ದುರ್ದೈವಿ ಟಿಂಕುವಿನ ಹಿರಿಯ ಸಹೋದರ ಹೇಳಿದ್ದಾರೆ.

Crime News: ಗೆಳೆಯನ ಮದುವೆಗೆ ಬಂದಿದ್ದ ಸ್ನೇಹಿತರ ಜಗಳ; ಕುಡಿದ ಅಮಲಿನಲ್ಲಿ ಬಾಲ್ಯದ ಗೆಳೆಯನ ಗಂಟಲನ್ನೇ ಕುಯ್ದುಬಿಟ್ಟ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jul 22, 2021 | 2:15 PM

Share

ಸಂತೋಷದಿಂದ ಆಚರಿಸುತ್ತಿದ್ದ ವಿವಾಹ ಮಹೋತ್ಸವದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಘಟನೆ ಘಾಜಿಯಾಬಾದ್​ನಲ್ಲಿ(Ghaziabad) ನಡೆದಿದ್ದು ಆಪ್ತ ಸ್ನೇಹಿತನ ತಂಗಿಯ ಮದುವೆಗೆಂದು ತೆರಳಿದ್ದ ಸ್ನೇಹಿತರ(Friends) ನಡುವೆ ಜಗಳ ಉಂಟಾಗಿದೆ. ವಾದ-ವಿವಾದ ವಿಪರೀತಕ್ಕೆ ಇಳಿದ  ಪರಿಣಾಮ 19 ವರ್ಷದ ಯುವಕ ಸಾವಿಗೀಡಾಗಿದ್ದಾನೆ(Crime News). ಪೊಲೀಸರು ಹೇಳಿದ ಮಾಹಿತಿ ಪ್ರಕಾರ, ಮೃತ ದುರ್ದೈವಿ ಟಿಂಕು ಎಂದು ಗುರುತಿಸಲಾಗಿದೆ.

ಟಿಂಕು ಸ್ಥಳೀಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಟಿಂಕು ಮತ್ತು ದೀಪಕ್​ ಪಂಡಿತ್​ ಬಾಲ್ಯದ ಗೆಳೆಯರು. ವಿವಾಹ ಕಾರ್ಯಕ್ರಮಕ್ಕಾಗಿ ಘಾಜಿಯಾಬಾದ್​ಗೆ ತೆರಳಿದ್ದರು. ಸ್ನೇಹತರೆಲ್ಲಾ ಸೇರಿ ಟೆರೇಸ್​ ಮೇಲೆ ಹತ್ತಿ ಕುಳಿತು ಪಾರ್ಟಿ(Drinks) ಮಾಡುತ್ತಿದ್ದರು. ಈ ಮಧ್ಯೆ ಟಿಂಕು ಮತ್ತು ಪಂಡಿತ್​ ನಡುವೆ ಜಗಳ ಉಂಟಾಗಿದೆ. ಮಾತುಕತೆ ವಿಪರೀತಗೊಂಡಿದ್ದು ದೀಪಕ್ ಪಂಡಿತ್​, ಕೈಯ್ಯಲ್ಲಿದ್ದ ಗಾಜಿನ ಬಾಟಲಿ(Glass) ಮೂಲಕ ಟಿಂಕುವಿನ ಕುತ್ತಿಗೆ ಕುಯ್ದುಹಾಕಿದ್ದಾನೆ. ಬಳಿಕ ಪಂಡಿತ್​ ಸ್ಥಳದಿಂದ ಪರಾರಿಯಾಗಿದ್ದಾನೆ. ಟಿಂಕುವಿನ ಕುತ್ತಿಗೆಯಿಂದ ರಕ್ತ ಹರಿಯಲು ಪ್ರಾರಂಭವಾಗಿದೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಯ ಮಧ್ಯೆ ಕೊನೆಯುಸಿರುಬಿಟ್ಟಿದ್ದಾನೆ.

ಅವರ ಸ್ನೇಹಿತರೊಬ್ಬರು 1 ಗಂಟೆಯ ಸರಿಸುಮಾರಿಗೆ ಕರೆ ಮಾಡಿ ಟಿಂಕು ಟೆರೆಸ್​ನಿಂದ ಬಿದ್ದು ಅಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವಿಷಯ ತಿಳಿಸಿದರು. ಆದರೆ ಆಸ್ಪತ್ರೆಯಲ್ಲಿಯೇ ಗೊತ್ತಾದದ್ದು ದೀಪಕ್​ ಪಂಡಿತ್​ ನನ್ನ ಸಹೋದರನ ಗಂಟಲು ಕತ್ತರಿಸಿದ್ದಾನೆ ಎಂದು ಮೃತ ದುರ್ದೈವಿ ಟಿಂಕುವಿನ ಹಿರಿಯ ಸಹೋದರ ಹೇಳಿದ್ದಾರೆ. ಭಾರತೀಯ ದಂಡ ಸಂಹಿತೆ ಸೆಕ್ಷನ್​ 304 ಅಡಿಯಲ್ಲಿ ಪಂಡಿತ್​ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

ದಾವಣಗೆರೆ: ಒಂಟಿ ವೃದ್ಧೆ ಕೊಲೆ ಪ್ರಕರಣ ಪತ್ತೆ ಹಚ್ಚಿದ ಪೊಲೀಸ್ ಡಾಗ್ ತುಂಗಾ; ಶ್ವಾನದ ಯಶೋಗಾಥೆ ಇಲ್ಲಿದೆ

Murder News: ನಿನ್ನಿಂದ ಮಗು ಹುಟ್ಟಿಸಲು ಸಾಧ್ಯವಿಲ್ಲ ಎಂದ ವೈದ್ಯೆಯ ಬರ್ಬರ ಹತ್ಯೆ!; ಭಾವನಿಂದಲೇ ಕೊಲೆಯಾದ ಮಾಜಿ MLA ಸೊಸೆ

ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'