AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ಕೈದಿಯನ್ನೇ ಪ್ರೀತಿಸಿ ಜೈಲು ಪಾಲಾದ ಜೈಲರ್..!

Crime News In Kannada: ಪ್ರಿಯತಮೆಯ ನೆರವಿನಿಂದ ಜೈಲಿನಲ್ಲೇ ಮಾರ್ಕಸ್​ ಐಫೋನ್ ಮಾರಾಟವನ್ನು ಕೂಡ ಪ್ರಾರಂಭಿಸಿದ್ದ. ಆದರೆ ಯಾವತ್ತೂ ಸಿಕ್ಕಿ ಬಿದ್ದಿರಲಿಲ್ಲ.

Crime News: ಕೈದಿಯನ್ನೇ ಪ್ರೀತಿಸಿ ಜೈಲು ಪಾಲಾದ ಜೈಲರ್..!
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Aug 11, 2022 | 6:53 PM

Share

ಕೆಡುಕು ಮನದವನಿಗೆ ಸತಿಯಾಗಬೇಡ , ಒಡುಕು ಮನಕೆ ರತಿಯಾಗಬೇಡ…ಕುರುಡು ಪ್ರೀತಿಗೆ ಬಿಂಬವಾಗಬೇಡ…ಯಾರೋ ಬರೆದ ಈ ಸಾಲುಗಳು ದೂರದ ಇಂಗ್ಲೆಂಡ್​ನಲ್ಲಿರುವ ಜೈಲರ್​ಗೆ ಹೇಳಿ ಮಾಡಿಸಿದಂತಿದೆ. ಏಕೆಂದರೆ ಅಪರಾಧ ಮಾಡಿ ಜೈಲು ಸೇರಿದ್ದ ಕೈದಿಯನ್ನೇ ಪ್ರೀತಿಸಿ ಇದೀಗ ಅದೇ ಜೈಲಿನಲ್ಲಿಆಕೆ ಕೂಡ ಕೈದಿಯಾಗಿದ್ದಾಳೆ. ಲಂಡನ್ ಡರ್ಬಿ ಕ್ರೌನ್ ಜೈಲಿನಲ್ಲಿ ಇಂತಹದೊಂದು ಕತೂಹಲಕಾರಿ ಪ್ರಕರಣ ನಡೆದಿದೆ.

ಮಾರ್ಕಸ್ ಸೊಲೊಮನ್‌ ಎಂಬ ವ್ಯಕ್ತಿಯು  ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ತಿಂಗಳ ಹಿಂದೆ ಜೈಲು ಪಾಲಾಗಿದ್ದ. ಹೀಗೆ ನಾಲ್ಕು ಗೋಡೆಗಳ ನಡುವೆ ಬಂಧಿತನಾಗಿದ್ದ ಕೈದಿಯ ಮೇಲೆ ಅದೇ ಕಾರಾಗೃಹದ ಜೈಲರ್​​ ಎಮ್ಮಾ ಜಾನ್ಸನ್‌ ಆತ್ಮೀಯತೆ ಬೆಳೆಸಿಕೊಂಡಿದ್ದಳು.

ಇಬ್ಬರ ನಡುವಣ ಮಾತುಕತೆ ಆ ಬಳಿಕ ಸ್ನೇಹವಾಗಿ, ನಂತರ ಪ್ರೇಮವಾಗಿ, ಇದಾದ ಬಳಿಕ ಕರುಡು ಪ್ರೀತಿಯಾಗಿ ಬದಲಾಗಿದೆ. ಅಷ್ಟೇ ಆಗಿದ್ರೆ ಯಾವುದೇ ಸಮಸ್ಯೆ ಎದುರಾಗುತ್ತಿರಲಿಲ್ಲ. ಬದಲಾಗಿ ಎಮ್ಮಾ ಜಾನ್ಸನ್ ತನ್ನ ಪ್ರಿಯಕರನಿಗೆ ಐಫೋನ್ ಮೊಬೈಲ್​ ಅನ್ನು ಕೂಡ ಗಿಫ್ಟ್ ಆಗಿ ನೀಡಿದ್ದಾಳೆ. ಇದನ್ನು ಬಳಸಿ ಮಾರ್ಕಸ್ ಜೈಲಿನಿಂದಲೇ ತನ್ನ ಅವ್ಯವಹಾರ ಮುಂದುವರೆಸಿದ್ದ.

ಇದನ್ನೂ ಓದಿ
Image
Crime News: ಮುದುಕರಿಗೆ ಬೆತ್ತಲೆ ವಿಡಿಯೋ ಕರೆ ಮಾಡಿ 3 ಲಕ್ಷ ರೂ. ಪೀಕಿದ ಖತರ್ನಾಕ್ ಲೇಡಿ..!
Image
Crime News: ಡ್ರಗ್ಸ್​ನೊಂದಿಗೆ ಯುವತಿ ಜೊತೆ ಲಾಡ್ಜ್​​ನಲ್ಲಿದ್ದ ನಾಲ್ವರ ಬಂಧನ..!
Image
Crime Story: ಪೊಲೀಸ್ ಮಗ, ಎಲ್​ಎಲ್​ಬಿ ಪದವೀಧರ: ಯಾರು ಈ ಡಾನ್ ಲಾರೆನ್ಸ್ ಬಿಷ್ಣೋಯ್?
Image
Crime Story: ಕಿಂಗ್ ಆಫ್ ಕ್ರೈಮ್: ದಾವೂದ್ ಇಬ್ರಾಹಿಂಗೆ ನಡುಕ ಹುಟ್ಟಿಸಿದ್ದ ಸ್ಲಂ ಡಾನ್

ಅಷ್ಟೇ ಯಾಕೆ ಜೈಲರ್ ಪ್ರಿಯತಮೆಯ ನೆರವಿನಿಂದ ಜೈಲಿನಲ್ಲೇ ಮಾರ್ಕಸ್​ ಐಫೋನ್ ಮಾರಾಟವನ್ನು ಕೂಡ ಪ್ರಾರಂಭಿಸಿದ್ದ. ಆದರೆ ಯಾವತ್ತೂ ಸಿಕ್ಕಿ ಬಿದ್ದಿರಲಿಲ್ಲ. ಇದಕ್ಕೂ ನೆರವಾಗಿದ್ದು ಎಮ್ಮಾ ಜಾನ್ಸನ್ ಎಂಬುದು ಇಲ್ಲಿ ವಿಶೇಷ. ಅಂದರೆ  ಹಿರಿಯ ಅಧಿಕಾರಿ ಜೈಲಿನಲ್ಲಿ ತಪಾಸಣೆಗೆ ಹೋಗುವ ಸಮಯದಲ್ಲಿ ಎಮ್ಮಾ ಜಾನ್ಸನ್ ತನ್ನ ಗೆಳೆಯನಿಗೆ ಮಾಹಿತಿ ರವಾನಿಸುತ್ತಿದ್ದಳು. ಅಲ್ಲದೆ ಮೊಬೈಲ್​ಗಳನ್ನು ಎಲ್ಲಿ ಬಚ್ಚಿಡಬೇಕೆಂದು ತಿಳಿಸುತ್ತಿದ್ದಳು. ಹೀಗಾಗಿ ಮಾರ್ಕಸ್ ಮತ್ತು ಇತರೆ ಕೈದಿಗಳು ಸಿಕ್ಕಿ ಬಿದ್ದಿರಲಿಲ್ಲ.

ಇದಾಗ್ಯೂ ಜೈಲಿನೊಳಗೆ ನಡೆಯುತ್ತಿದ್ದ ಕಳ್ಳ-ಪೊಲೀಸ್ ಆಟದ ಬಗ್ಗೆ ಹಿರಿಯ ಪೊಲೀಸರಿಗೆ ಅನುಮಾನ ಮೂಡಿತ್ತು. ಹೀಗಾಗಿ ಮಾರ್ಕಸ್ ಹಾಗೂ ಎಮ್ಮಾ ಮೇಲೆ ಕೆಲ ಪೊಲೀಸರು ವಿಶೇಷ ಕಣ್ಣಿಟ್ಟಿದ್ದರು. ಅದರಂತೆ ಇದೀಗ ಎಮ್ಮಾ ಜಾನ್ಸನ್​ಗೆ ಕೈದಿಯೊಂದಿಗೆ ಸಂಬಂಧ ಬಹಿರಂಗವಾಗಿದೆ. ಹೀಗಾಗಿ ಇಬ್ಬರನ್ನೂ ಹಿರಿಯ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ನಡೆದ ಘಟನೆಗಳನ್ನು ಬಾಯಿಬಿಟ್ಟಿದ್ದಾರೆ.

ಅದರಂತೆ ಪ್ರಕರಣ ದಾಖಲಿಸಿ ಜೈಲರ್​ನನ್ನೇ ಪೊಲೀಸರು ಕೋರ್ಟ್​ಗೆ ಹಾಜರುಪಡಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಡರ್ಬಿ ಕ್ರೌನ್ ಕೋರ್ಟ್‌ ಆಕೆಯನ್ನು ತಪಿತಸ್ಥಳೆಂದು ಪರಿಗಣಿಸಿದೆ. ಅಷ್ಟೇ ಅಲ್ಲದೆ ಕೈದಿಯನ್ನು ಪ್ರೀತಿಸುವುದರಲ್ಲಿ ತಪ್ಪೇನಿಲ್ಲ. ಆದಾಗ್ಯೂ, ಜೈಲು ಸೂಪರಿಂಟೆಂಡೆಂಟ್ ತನ್ನ ಕೆಲಸದ ಮಹತ್ವವನ್ನು ಮರೆತಿದ್ದಾರೆ. ಅಲ್ಲದೆ ಕೈದಿಗಳಿಗೆ ಮೊಬೈಲ್ ಫೋನ್​ಗಳನ್ನು ಬಳಸಲು ಅವಕಾಶ ನೀಡಿದ್ದಾರೆ. ಹೀಗಾಗಿ ಎಮ್ಮಾ ಜಾನ್ಸನ್ ಅವರನ್ನು ಕೆಲಸದಿಂದ ವಜಾ ಮಾಡುವಂತೆ ಕೋರ್ಟ್ ತಿಳಿಸಿದೆ.

ಇದೀಗ ಕೆಲಸವನ್ನು ಕಳೆದುಕೊಂಡಿರುವ ಎಮ್ಮಾ ಜಾನ್ಸನ್ ಜೈಲು ಪಾಲಾಗಿದ್ದಾರೆ. ಇಲ್ಲಿ ವಿಶೇಷ ಎಂದರೆ ಮಾರ್ಕಸ್ ಸೊಲೊಮನ್​ಗೆ 13 ತಿಂಗಳ ಜೈಲು ಶಿಕ್ಷೆ ವಿಧಿಸಿದ್ದರೆ, ಆತನ ಜೈಲರ್ ಪ್ರಿಯತಮೆ ಎಮ್ಮಾ ಜಾನ್ಸನ್​ಗೆ 15 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಒಟ್ಟಿನಲ್ಲಿ ತನ್ನ ಕೆಲಸದ ಮಹತ್ವವನ್ನು ಮರೆತ ಜೈಲರ್ ತಾನು ಕೆಲಸ ಮಾಡುತ್ತಿದ್ದ ಕಾರಾಗೃಹದಲ್ಲೇ ಜೈಲು ಪಾಲಾಗಿರುವುದು ಮಾತ್ರ ವಿಪರ್ಯಾಸ.

Follow Us
Web contact
Web contact

TV9 Kannada

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ