AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದೇಶಿಗರಿಂದ ಇಂಗ್ಲೀಷ್, ಸ್ಪಾನಿಷ್ ಕಲಿತು ಮೈಸೂರು ರಾಜವಂಶಸ್ಥರ ಹೆಸರಲ್ಲಿ ವ್ಯಕ್ತಿಯಿಂದ ಯುವತಿಯರಿಗೆ ವಂಚನೆ

ಆರೋಪಿ ಯುಎಸ್ ಇಂಗ್ಲಿಷ್, ಸ್ಪಾನಿಷ್, ಮಳಯಾಳಂ ಮತ್ತು ಕನ್ನಡ ಭಾಷೆಗಳನ್ನು ಮಾತಾಡುತ್ತಾನೆ. ಪಿರಿಯಾಪಟ್ಟದಲ್ಲಿ ಪ್ರವಾಸಿಗಳಾಗಿ ಬರುವವರ ಬಳಿ ಭಾಷೆ ಕಲಿತಿದ್ದ. ಯೂಟ್ಯೂಬ್ ನೋಡಿ ವಂಚನೆ ನಡೆಸುವುದನ್ನು ಕಲಿತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿದೇಶಿಗರಿಂದ ಇಂಗ್ಲೀಷ್, ಸ್ಪಾನಿಷ್ ಕಲಿತು ಮೈಸೂರು ರಾಜವಂಶಸ್ಥರ ಹೆಸರಲ್ಲಿ ವ್ಯಕ್ತಿಯಿಂದ ಯುವತಿಯರಿಗೆ ವಂಚನೆ
ರಾಜವಂಶಸ್ಥರ ಹೆಸರಲ್ಲಿ ವಂಚನೆ ಎಸಗುತ್ತಿದ್ದ ವ್ಯಕ್ತಿ
TV9 Web
| Edited By: |

Updated on:Jul 12, 2021 | 7:57 PM

Share

ಬೆಂಗಳೂರು: ಮೈಸೂರು ರಾಜವಂಶಸ್ಥರ ಹೆಸರಿನಲ್ಲಿ ವ್ಯಕ್ತಿಯೋರ್ವ ಹಲವು ಯುವತಿಯರಿಗೆ ವಂಚನೆ ಎಸಗಿದ ಪ್ರಕರಣ ಪಿರಿಯಾಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ವ್ಯಕ್ತಿಯೋರ್ವ ಮದುವೆಯಾಗುವುದಾಗಿ ನಂಬಿಸಿ ಯುವತಿಯರಿಂದ ಹಣ ಪಡೆದು ವಂಚನೆ ಎಸಗಿದ್ದು, ವೈಟ್‌ಫೀಲ್ಡ್‌ ಸಿಇಎನ್ ಠಾಣೆಯಲ್ಲಿ ಯುವತಿಯೋರ್ವಳು ದೂರು ನೀಡಿದ್ದಳು. ಆರೋಪಿಯ ನಿಜವಾದ ಹೆಸರು ಮುತ್ತು ಎಂದು ತಿಳಿದುಬಂದಿದ್ದು, ಸಿದ್ದಾರ್ಥ ಎಂಬ ಹೆಸರಿನಲ್ಲಿ ಎಲ್ಲರಿಗೂ ಪರಿಚಯ ಮಾಡಿಕೊಂಡಿದ್ದ ಎಂದು ಬೆಂಗಳೂರಿನ ವೈಟ್‌ಫೀಲ್ಡ್‌ ಡಿಸಿಪಿ ದೇವರಾಜ್‌ ತಿಳಿಸಿದ್ದಾರೆ. ಮೂವರು ಯುವತಿಯರ ಬಳಿ ವೈಯಕ್ತಿಕ ಸಹಾಯ ಬೇಕೆಂದು ಹಣವನ್ನು ಖಾತೆಗೆ ಹಾಕಿಸಿಕೊಳ್ಳುತ್ತಿದ್ದ ಆರೋಪಿ ಒಟ್ಟಾರೆಯಾಗಿ ಮೂರು ಪ್ರಕರಣಗಳಲ್ಲಿ 40 ಲಕ್ಷ ವಂಚನೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿಯರಿಂದ ಹಣ ಹಾಕಿಸಿಕೊಂಡ ಅಕೌಂಟ್ ನಂಬರ್ ಪಡೆದು ಹೋದಾಗ ಪಿರಿಯಾಪಟ್ಟಣದಲ್ಲಿ ಆರೋಪಿಯ ಮಾಹಿತಿ ಸಿಕ್ಕಿತ್ತು. ಆರೋಪಿ ಯುಎಸ್ ಇಂಗ್ಲಿಷ್, ಸ್ಪಾನಿಷ್, ಮಳಯಾಳಂ ಮತ್ತು ಕನ್ನಡ ಭಾಷೆಗಳನ್ನು ಮಾತಾಡುತ್ತಾನೆ. ಪಿರಿಯಾಪಟ್ಟದಲ್ಲಿ ಪ್ರವಾಸಿಗಳಾಗಿ ಬರುವವರ ಬಳಿ ಭಾಷೆ ಕಲಿತಿದ್ದ. ಯೂಟ್ಯೂಬ್ ನೋಡಿ ವಂಚನೆ ನಡೆಸುವುದನ್ನು ಕಲಿತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬೈಲುಕುಪ್ಪೆಯಲ್ಲಿ ಕೂಲಿ ಕೆಲಸ ಮಾಡುವರಿಗೆ 2-3 ಸಾವಿರ ಹಣ ಕೊಟ್ಟು ಅವರ ಅಕೌಂಟ್ ಪಡೆದು ಆರ್​ಟಿಜಿಎಸ್ ಮಾಡುತ್ತಿದ್ದ. ಐಷಾರಾಮಿ‌ ಜೀವನ‌ ಮಾಡ್ತಿದ್ದು, ಗ್ಯಾಂಬ್ಲಿಂಗ್ ಮಾಡ್ತಿದ್ದ. ಯೂಟ್ಯೂಬ್​ನಲ್ಲಿ ಕೆಲ ವಿಡಿಯೋ ನೋಡಿ ಪ್ರೇರೇಪಿತನಾಗಿ ವಂಚನೆ ಮಾಡಲು ಮುಂದಾದೆ ಅಂತ ಹೇಳಿದ್ದಾನೆ. ಎರಡು ವರ್ಷದಿಂದ ಈ ಕೆಲಸ ಮಾಡಿದ್ದಾಗಿ ಮಾಹಿತಿ ಸಿಕ್ಕಿದೆ. ಏಳನೇ ತರಗತಿ ಮುಗಿಸಿ, ಆ ಬಳಿಕ ಶಾಲೆಗೆ ಹೋಗಿರಲಿಲ್ಲ. ಆರೋಪಿಗೆ ಸಹಾಯ ಮಾಡುತ್ತಿದ್ದ ಇನ್ನೋರ್ವನ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: 

ಹಿರಿಯ ಕ್ರೈಂ ವರದಿಗಾರ ಸುನಿಲ್ ಹೆಗ್ಗರವಳ್ಳಿ ಹೃದಯಾಘಾತದಿಂದ ನಿಧನ

Explainer: ಏನಿದು ರಿಪೇರಿ ಮಾಡಿಕೊಳ್ಳುವ ಹಕ್ಕು ಬೇಕೆಂಬ ಹೊಸ ಚಳವಳಿ? ಏನಿದೆ ಅನಿವಾರ್ಯತೆ?

(Man cheats women in the name of Mysore Royal Family in Periyapatna)

Published On - 7:54 pm, Mon, 12 July 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ