AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವತಿಗಾಗಿ ಪಾಗಲ್​ ಪ್ರೇಮಿಯಾದ ರೌಡಿ ಶೀಟರ್​, ಒಬ್ಬಳೇ ಸಿಕ್ಕಾಗ ಏನ್​ ಮಾಡ್ದಾ ಗೊತ್ತಾ?

ಬೆಂಗಳೂರು: ತಾನು ಪ್ರೀತಿಸುತ್ತಿದ್ದ ಹುಡುಗಿ ತನ್ನಿಂದ ದೂರವಾಗ್ತಿದ್ದಾಳೆ ಅಂತಾ ಸಿಟ್ಟಾದ ರೌಡಿ ಶೀಟರ್​ ಆಕೆಯನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಗಿರಿನಗರ ಬಳಿಯಿರುವ ದ್ವಾರಕಾನಗರದಲ್ಲಿ ನಡೆದಿದೆ. 19 ವರ್ಷದ ಯುವತಿ ನರ್ಮದಾ ಮೃತ ದುರ್ದೈವಿ. ಯುವತಿಗಾಗಿ ಪಾಗಲ್​ ಪ್ರೇಮಿಯಾದ ಅಭಿಷೇಕ್ ಗೌಡ ರಾಜಾಜಿನಗರ ಏರಿಯಾದಲ್ಲಿ ಗುರುತಿಸಿಕೊಂಡಿದ್ದ ರೌಡಿಶೀಟರ್​. ಕಳೆದ ಕೆಲವು ವರ್ಷಗಳಿಂದ ನರ್ಮದಾಳನ್ನ ಡೀಪಾಗಿ ಲವ್​ ಮಾಡ್ತಿದ್ದನಂತೆ. ಆದರೆ ಇತ್ತೀಚೆಗೆ, ಯುವತಿ ತನ್ನ ಸಂಬಂಧಿಕನ ಜೊತೆ ಸಲಿಗೆಯಿಂದ ವರ್ತಿಸುತ್ತಿದ್ದಳಂತೆ. ಇದರಿಂದ ಸಿಟ್ಟಾದ ಅಭಿ ಈ ಬಗ್ಗೆ ಪ್ರಶ್ನಿಸಲು […]

ಯುವತಿಗಾಗಿ ಪಾಗಲ್​ ಪ್ರೇಮಿಯಾದ ರೌಡಿ ಶೀಟರ್​, ಒಬ್ಬಳೇ ಸಿಕ್ಕಾಗ ಏನ್​ ಮಾಡ್ದಾ ಗೊತ್ತಾ?
KUSHAL V
| Edited By: |

Updated on:Jul 14, 2020 | 6:07 PM

Share

ಬೆಂಗಳೂರು: ತಾನು ಪ್ರೀತಿಸುತ್ತಿದ್ದ ಹುಡುಗಿ ತನ್ನಿಂದ ದೂರವಾಗ್ತಿದ್ದಾಳೆ ಅಂತಾ ಸಿಟ್ಟಾದ ರೌಡಿ ಶೀಟರ್​ ಆಕೆಯನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಗಿರಿನಗರ ಬಳಿಯಿರುವ ದ್ವಾರಕಾನಗರದಲ್ಲಿ ನಡೆದಿದೆ. 19 ವರ್ಷದ ಯುವತಿ ನರ್ಮದಾ ಮೃತ ದುರ್ದೈವಿ. ಯುವತಿಗಾಗಿ ಪಾಗಲ್​ ಪ್ರೇಮಿಯಾದ ಅಭಿಷೇಕ್ ಗೌಡ ರಾಜಾಜಿನಗರ ಏರಿಯಾದಲ್ಲಿ ಗುರುತಿಸಿಕೊಂಡಿದ್ದ ರೌಡಿಶೀಟರ್​.

ಕಳೆದ ಕೆಲವು ವರ್ಷಗಳಿಂದ ನರ್ಮದಾಳನ್ನ ಡೀಪಾಗಿ ಲವ್​ ಮಾಡ್ತಿದ್ದನಂತೆ. ಆದರೆ ಇತ್ತೀಚೆಗೆ, ಯುವತಿ ತನ್ನ ಸಂಬಂಧಿಕನ ಜೊತೆ ಸಲಿಗೆಯಿಂದ ವರ್ತಿಸುತ್ತಿದ್ದಳಂತೆ. ಇದರಿಂದ ಸಿಟ್ಟಾದ ಅಭಿ ಈ ಬಗ್ಗೆ ಪ್ರಶ್ನಿಸಲು ನಿನ್ನೆ ನರ್ಮದಾಳನ್ನು ತನ್ನ ರೂಂಗೆ ಕರೆದೊಯ್ದಿದ್ದ. ಈ ವಿಚಾರವಾಗಿ ಅವಳ ಜೊತೆ ಜಗಳ ಆರಂಭಿಸಿದ್ದ ಆರೋಪಿ, ನಂತರ ಮಾತಿಗೆ ಮಾತು ಬೆಳೆದು ಮನೆಯಲ್ಲಿದ್ದ ಚಾಕುವಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಕತ್ತು ಹಾಗೂ ಹೊಟ್ಟೆಗೆ ಇರಿದು ಕೊಲೆಗೈದಿದ್ದಾನೆ. ಕೃತ್ಯವೆಸಗಿದ ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಗಿರಿನಗರ ಪೊಲೀಸರು ಆರೋಪಿಯನ್ನ ಹಿಡಿಯಲು ಬಲೆ ಬೀಸಿದರು. ಕೊನೆಗೆ ರಾಜಾಜಿನಗರದ ಪೊಲೀಸರ ನೆರವಿನಿಂದ ಅಭಿಷೇಕ್ ಗೌಡನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Published On - 6:01 pm, Tue, 14 July 20

ವಿಜಯೇಂದ್ರಗೆ ಯತ್ನಾಳ್​​ ಬಹಿರಂಗ ಸವಾಲು: ಹೇಳಿದ್ದೇನು?
ವಿಜಯೇಂದ್ರಗೆ ಯತ್ನಾಳ್​​ ಬಹಿರಂಗ ಸವಾಲು: ಹೇಳಿದ್ದೇನು?
ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ರಿಷಬ್​​ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ರಿಷಬ್​​ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ