AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಮೋಸ್ಟ್ ವಾಟೆಂಡ್ ಇಂಟರ್ ನ್ಯಾಷನಲ್ ಕ್ರಿಮಿನಲ್ಸ್ ಬಂಧನ ಪ್ರಕರಣ; ವಿಚಾರಣೆ ವೇಳೆ ಬಾಯ್ಬಿಟ್ಟರು ಸ್ಪೋಟಕ ಅಂಶ

ಬೆಂಗಳೂರಿನಲ್ಲಿ ಮೋಸ್ಟ್ ವಾಟೆಂಡ್ ಇಂಟರ್ ನ್ಯಾಷನಲ್ ಕ್ರಿಮಿನಲ್ಸ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಬಂಧಿತ ಆರೋಪಿಗಳಿಗೆ ಹಣಕಾಸು ನೀಡುತ್ತಿದ್ದವರು ಯಾರು? ಇವರು ಬೆಂಗಳೂರಿನಲ್ಲಿ ನೆಲಸಿದ್ದು ಏಕೆ ಎಂಬ ಅಂಶ ಬಹಿರಂಗವಾಗಿದೆ.

ಬೆಂಗಳೂರು: ಮೋಸ್ಟ್ ವಾಟೆಂಡ್ ಇಂಟರ್ ನ್ಯಾಷನಲ್ ಕ್ರಿಮಿನಲ್ಸ್ ಬಂಧನ ಪ್ರಕರಣ; ವಿಚಾರಣೆ ವೇಳೆ ಬಾಯ್ಬಿಟ್ಟರು ಸ್ಪೋಟಕ ಅಂಶ
ಸಿಸಿಬಿ
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: ವಿವೇಕ ಬಿರಾದಾರ|

Updated on:Aug 25, 2023 | 10:14 AM

Share

ಬೆಂಗಳೂರು: ನಗರದಲ್ಲಿ ಮೋಸ್ಟ್ ವಾಟೆಂಡ್ ಇಂಟರ್ ನ್ಯಾಷನಲ್ ಕ್ರಿಮಿನಲ್ಸ್ (International Criminals) ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ (CCB) ಪೊಲೀಸರು ಮತ್ತೆ ಇಬ್ಬರನ್ನು ಇಂದು (ಆ.25) ಬಂಧಿಸಿದ್ದಾರೆ. ಚೆನ್ನೈ (Chennai) ಮೂಲದ ಮನ್ಸೂರ್ ಮತ್ತು ವಿವೇಕ್ ನಗರದ ಅನ್ಬು ಬಂಧಿತ ಆರೋಪಿಗಳು. ಬಂಧಿತ ಮನ್ಸೂರ್​​ನಿಂದ ಸಿಸಿಬಿ ಪೊಲೀಸರು 57 ಲಕ್ಷ ರೂ. ನಗದು, 1.5 ಕೋಟಿ ಡಿಡಿ ವಶಪಡಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಹಲವು ವಿಚಾರಗಳನ್ನು ಬಾಯಿಬಿಟ್ಟಿದ್ದಾರೆ.

ಮನ್ಸೂರ್ ಚೆನ್ನೈನಲ್ಲಿದ್ದುಕೊಂಡು ಬೆಂಗಳೂರಿನಲ್ಲಿದ್ದ ಆರೋಪಿಗಳ ಖರ್ಚು ವೆಚ್ಚಕ್ಕೆ ಸುಮಾರು 57 ಲಕ್ಷ ರೂ. ಹಣ ಹೊಂದಿಸಿದ್ದನು. ಕೆಲವೇ ದಿನಗಳಲ್ಲಿ ಆ ಹಣವನ್ನು ಬೆಂಗಳೂರಿಗೆ ಬಂದು ಆರೋಪಿಗಳಿಗೆ ನೀಡಲು ಸಿದ್ದನಾಗಿದ್ದನು. ಈ ಹಣ ಕೈಗೆ ಸೇರುತ್ತಿದ್ದಂತೆ ನಗರದಿಂದ ವಿದೇಶಕ್ಕೆ ಹಾರಲು ಆರೋಪಿಗಳು ಸಿದ್ಧರಾಗಿದ್ದರಂತೆ. ಸದ್ಯ ಸಿಸಿಬಿ ಪೊಲೀಸರು ಮನ್ಸೂರ್ ಯಾರು..? ಈತನ ಹಿನ್ನಲೆ ಬಗ್ಗೆಯೂ ಮಾಹಿತಿ ಕಲೆಹಾಕುತ್ತಿದ್ದಾರೆ.

ಅಲ್ಲದೇ ಈ ಮನ್ಸೂರ್​​ ಓಮನ್​​ನಲ್ಲಿ ಬಂಧನವಾಗಿರುವ ಜಲಾಲ್​​ಗೆ ಬೇನಾಮಿಯಾಗಿದ್ದನು. ಜಲಾಲ್ ಮಾರ್ಗದರ್ಶನದಂತೆ ಮನ್ಸೂರ್ ಆತ ಹೇಳಿದವರಿಗೆ ಹಣ ನೀಡುತ್ತಿದ್ದನು. ಜಲಾಲ್ ಬಂಧನಕ್ಕೂ ಮುನ್ನ ಬೆಂಗಳೂರಿಗೆ ಬಂದ ಶ್ರೀಲಂಕ ಶಾರ್ಪ್ ಶೂಟರ್​ಗಳಿಗೆ 50 ಲಕ್ಷ ರೂ. ನೀಡಲು ಹೇಳಿದ್ದನಂತೆ. ಅದರಂತೆ ಮನ್ಸೂರ್​ 50 ಲಕ್ಷ ರೂ. ನೀಡಲು ಬೆಂಗಳೂರಿಗೆ ಬರಲು ಸಿದ್ಧನಾಗಿದ್ದನು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಅಂತಾರಾಷ್ಟ ಮಟ್ಟದ ಮೋಸ್ಟ್ ವಾಂಟೆಡ್​ ಕ್ರಿಮಿನಲ್​ಗಳ ಬಂಧನ, ಭಾರತಕ್ಕೆ ನುಸುಳಿದ್ದೇ ರೋಚಕ

ಇನ್ನು ಮನ್ಸೂರ್​​ನನ್ನು ಎಲ್​​ಟಿಟಿ ಲಿಂಕ್ ಹೊಂದಿರುವ, ನೇಪಾಳದಲ್ಲಿರುವ ಸಂಜೀವ್ ಜೊತೆ ಸೇರಿಸಲು ಜಲಾಲ್ ಫ್ಲ್ಯಾನ್ ಮಾಡಿದ್ದನು. ಈ ಶ್ರೀಲಂಕಾದ ಕ್ರಿಮಿನಲ್ಸ್ ಎಕೆ -47 ಸೇರಿದಂತೆ ವಿವಿಧ ಹೈ ಹ್ಯಾಂಡ್ ವೆಪನ್ ಬಳಸುವಲ್ಲಿ ನುರಿತರಾಗಿದ್ದಾರೆ. ಸಂಜೀವ್ ಜೊತೆ ಜಲಾಲ್​ ಮತ್ತು ಮನ್ಸೂರ್​ ಶ್ರೀಲಂಕಾದ ಪ್ರಾದೇಶಿಕ ಭಾಷೆ ಸಿಂಹಳಿಯಲ್ಲಿ ಚಾಟಿಂಗ್ ಮಾಡಿದ್ದಾರೆ. ಇವರ ಫ್ಲಾನಿಂಗ್​ ಏನು, ಯಾವ ಯಾವ ಗ್ರೂಪ್​ಗಳಲ್ಲಿ ಇವರು ಸಕ್ರಿಯವಾಗಿದ್ದರೂ ಎನ್ನುವ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಮೊತ್ತೊಬ್ಬ ಆರೋಪಿ ಅನ್ಬು ಬೆಂಗಳೂರಿನಲ್ಲಿ ಪಾಸ್​​ಪೋರ್ಟ್ ಮಾಡಿಕೊಡುವ ಕೆಲಸ ಮಾಡುತ್ತಿದ್ದನು. ಶ್ರೀಲಂಕಾ ಪ್ರಜೆಗಳಿಗೆ ಭಾರತದ ಪಾಸ್​​ಪೋರ್ಟ್ ಮಾಡಿಕೊಡಲು ಪ್ಲಾನ್ ಇತ್ತು. ಅದಕ್ಕೆ ಬೇಕಾದ ದಾಖಲೆಗಳು ಸಂಗ್ರಹ ಮಾಡಲಾಗುತ್ತಿತ್ತು. ಹೀಗಾಗಿ ಪ್ರಕರಣದಲ್ಲಿ ಅನ್ಬು ಅರೆಸ್ಟ್ ಆಗಿದ್ದಾನೆ ಎಂದು ಮಾಹಿತಿ ದೊರೆತಿದೆ.

ಯಾರು ಈ ಜಲಾಲ್ ಅಲಿಯಾಸ್ ಮಹಮದ್ ಸಿದ್ದಿಕಿ ?

ಜಲಾಲ್ ಅಲಿಯಾಸ್ ಮಹಮದ್ ಸಿದ್ದಿಕಿ ಶ್ರೀಲಂಕಾದ ಡ್ರಗ್ಸ್ ಕಿಂಗ್​ಪಿನ್. ಶ್ರೀಲಂಕಾ ಅಂಡರ್ವರ್ಲ್ಡ್​​ನಲ್ಲಿ ಸಕ್ರಿಯನಾಗಿದ್ದನು. ಪಾಕಿಸ್ತಾನದ ಒರ್ವ ಡ್ರಗ್ಸ್ ಕಿಂಗ್​​ಪಿನ್ ಸಹೋದರಿಯನ್ನು ಮದುವೆಯಾಗಿದ್ದನು. ಶ್ರೀಲಂಕಾದಲ್ಲಿ ಅಪರಾಧ ಮಾಡಿ ಭಾರತದಲ್ಲಿ ತಲೆಮರೆಸಿಕೊಂಡಿದ್ದನು. ಭಾರತದ ಪಾಸ್​​ ಪೋರ್ಟ್​​ ಹೊಂದಿದ್ದನು. ಭಾರತದ ಪಾಸ್​​ ಪೋರ್ಟ್​​ ಬಳಸಿ ಒಮಾನ್ ದೇಶಕ್ಕೆ ಹೋಗಿದ್ದನು. ಭಾರತೀಯ ಇಂಟಲಿಜೆನ್ಸ್ ತಂಡದ ಸಹಕಾರದಿಂದ ಒಮಾನ್​ನಲ್ಲಿ ಬಂಧಿಸಲಾಗಿದೆ. ಸದ್ಯ ಇದೇ ಜಲಾನ್ ಅಲಿಯಾಸ್ ಮಹಮದ್ ಸಿದ್ದಿಕಿ ಮಾತಿನಿಂದ ಭಾರತದಲ್ಲಿ ಇಷ್ಟೆಲ್ಲ ಕೆಲಸ ನಡೆದಿರುವುದು ಪತ್ತೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:47 am, Fri, 25 August 23

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ