AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟಿಯ ಟಾಪ್​ಲೆಸ್​ ಫೋಟೋಗೆ ಕೊಳಕು ಕಮೆಂಟ್​ ಮಾಡಿ, ಆಮೇಲೆ ಅಕ್ಕ ಎಂದ ಈ ಭೂಪ ಯಾರು?

Tina Dutta Topless Photo: ಟೀನಾ ದತ್ತ ಅವರ ಟಾಪ್​ಲೆಸ್​ ಫೋಟೋ ಕಂಡ ನೆಟ್ಟಿಗನೊಬ್ಬ ತೀರಾ ಅಸಭ್ಯ, ಅಶ್ಲೀಲ ಭಾಷೆಯಲ್ಲಿ ಕಮೆಂಟ್​ ಮಾಡಿದ್ದಾನೆ. ಅಂತಹ ಕೀಳು ಪದಗಳನ್ನು ಬಳಸಿ ಆತ ಕಮೆಂಟ್​ ಮಾಡಿರುವುದು ನಟಿಯ ಕೋಪಕ್ಕೆ ಕಾರಣ ಆಗಿದೆ.

ನಟಿಯ ಟಾಪ್​ಲೆಸ್​ ಫೋಟೋಗೆ ಕೊಳಕು ಕಮೆಂಟ್​ ಮಾಡಿ, ಆಮೇಲೆ ಅಕ್ಕ ಎಂದ ಈ ಭೂಪ ಯಾರು?
ಟೀನಾ ದತ್ತ
TV9 Web
| Updated By: ಮದನ್​ ಕುಮಾರ್​|

Updated on:Jun 04, 2021 | 9:38 AM

Share

ಸೆಲೆಬ್ರಿಟಿಗಳಿಗೆ ಸೋಶಿಯಲ್​ ಮೀಡಿಯಾದಲ್ಲಿ ಟ್ರೋಲಿಗರು ಕಾಟ ಕೊಡುವುದು ಹೊಸದೇನಲ್ಲ. ಆದರೆ ಎಲ್ಲದಕ್ಕೂ ಒಂದು ಮಿತಿ ಇರಲೇಬೇಕು. ನೆಟ್ಟಿಗರ ಕಮೆಂಟ್​ ಕೆಲವೊಮ್ಮೆ ಅಸಭ್ಯತೆಯ ಗಡಿ ಮೀರುತ್ತದೆ. ಆಗ ಯಾವ ಸೆಲೆಬ್ರಿಟಿಯೂ ಸುಮ್ಮನೆ ಕೂರುವುದಿಲ್ಲ. ಇತ್ತೀಚೆಗೆ ನಟಿ ಟೀನಾ ದತ್ತ ಅವರಿಗೆ ಅದೇ ರೀತಿ ಆಗಿದೆ. ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು ಫಾಲೋ ಮಾಡುತ್ತಿರುವ ಒಬ್ಬ ವ್ಯಕ್ತಿಯ ಬಣ್ಣವನ್ನು ಅವರು ಬಯಲು ಮಾಡಿದ್ದಾರೆ. ಆತ ಮಾಡಿದ ಕೊಳಕು ಕಮೆಂಟ್​ಗಳ ಸ್ಕ್ರೀನ್​ಶಾಟ್​ಗಳನ್ನು ಟೀನಾ ದತ್ತ ಬಹಿರಂಗ ಪಡಿಸಿದ್ದಾರೆ. ಇಷ್ಟೆಲ್ಲ ಆದ ಬಳಿಕ ಆತ ಹೊಸ ಡ್ರಾಮಾ ಶುರು ಮಾಡಿದ್ದಾನೆ.

ಹಿಂದಿ ಕಿರುತೆರೆಯ ಅನೇಕ ಧಾರಾವಾಹಿ ಮತ್ತು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು ಜನಪ್ರಿಯತೆ ಗಳಿಸಿರುವ ನಟಿ ಟೀನಾ ದತ್ತ ಅವರು ಸೋಶಿಯಲ್​ ಮೀಡಿಯಾದಲ್ಲೂ ಹೆಚ್ಚು ಫೇಮಸ್​​ ಆಗಿದ್ದಾರೆ. ಇತ್ತೀಚೆಗೆ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಒಂದು ಫೋಟೋ ಹಂಚಿಕೊಂಡಿದ್ದರು. ಟಾಪ್​ಲೆಸ್​ ಆಗಿ ಪೋಸ್​ ನೀಡಿ, ಮಾದಕ ನೋಟ ಬೀರಿದ್ದರು. ಅದನ್ನು ಕಂಡ ನೆಟ್ಟಿಗನೊಬ್ಬ ತೀರಾ ಅಸಭ್ಯ, ಅಶ್ಲೀಲ ಭಾಷೆಯಲ್ಲಿ ಕಮೆಂಟ್​ ಮಾಡಿದ್ದಾನೆ. ಈ ಸುದ್ದಿಯಲ್ಲಿ ಆ ಪದಗಳನ್ನು ಬರೆಯಲು ಸಾಧ್ಯವೇ ಇಲ್ಲ. ಅಂತಹ ಕೀಳು ಪದಗಳನ್ನು ಬಳಸಿ ಆತ ಕಮೆಂಟ್​ ಮಾಡಿರುವುದು ಟೀನಾ ದತ್ತ ಕೋಪಕ್ಕೆ ಕಾರಣ ಆಗಿದೆ. ಕೂಡಲೇ ಆತನ ಕಮೆಂಟ್​ಗಳ ಸ್ಕ್ರೀನ್​ ಶಾಟ್​ ಹಂಚಿಕೊಂಡಿರುವ ಟೀನಾ ದತ್ತ ಅವರು ಆ ಕಿಡಿಗೇಡಿಯ ಮರ್ಯಾದೆ ಹರಾಜು ಹಾಕಿದ್ದಾರೆ.

ಆತನ ಫೋಟೋ ಮತ್ತು ಗುರುತನ್ನು ಜಗಜ್ಜಾಹೀರು ಮಾಡುವ ಮೂಲಕ ಕೀಳು ಮನಸ್ಥಿತಿಯ ಆ ನೆಟ್ಟಿಗನಿಗೆ ಟೀನಾ ದತ್ತ ಪಾಠ ಕಲಿಸಿದ್ದಾರೆ. ಈಗ ಎಲ್ಲರೆದುರು ಮಾನ ಹರಾಜು ಆಗುತ್ತಿದ್ದಂತೆಯೇ ಆತ ಟೀನಾಗೆ ಮೆಸೇಜ್​ ಮಾಡಿ ಕ್ಷಮೆ ಕೇಳಿದ್ದಾನೆ. ಅಚ್ಚರಿ ಎಂದರೆ, ಕೆಲವೇ ಕ್ಷಣಗಳ ಹಿಂದೆ ಅಶ್ಲೀಲ ಪದಗಳಿಂದ ಕಮೆಂಟ್​ ಮಾಡಿದ್ದವನು ಈಗ ‘ಅಕ್ಕ.. ದಯವಿಟ್ಟು ಕ್ಷಮಿಸಿ’ ಎಂದು ಮೆಸೇಜ್​ ಮಾಡಿರುವುದು ಕಂಡು ಟೀನಾಗೆ ಅಚ್ಚರಿ ಆಗಿದೆ. ‘ನೋಡಿ ಈಗ ಅಕ್ಕ ಎನ್ನುತ್ತಿದ್ದಾನೆ’ ಎಂದು ಆ ಮೆಸೇಜ್​ನ ಸ್ಕ್ರೀನ್​ಶಾಟ್ ಅನ್ನು ಕೂಡ ಟೀನಾ ಬಹಿರಂಗಪಡಿಸಿದ್ದಾರೆ.

ಇಷ್ಟೆಲ್ಲ ಆದ ಬಳಿಕ ಅವರು ಕಮೆಂಟ್​ ಆಯ್ಕೆಯನ್ನೇ ನಿಷ್ಕ್ರಿಯಗೊಳಿಸಿದ್ದಾರೆ.

ಇದನ್ನೂ ಓದಿ:

ನೀಲಿ ಚಿತ್ರಕ್ಕೆ ಮಲಯಾಳಂ ನಟಿ ಫೋಟೋ ಅಂಟಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ ಶಾಕ್​ ಆದ ರಮ್ಯಾ ಸುರೇಶ್

ನಿಮ್ಮ ಪರ್ಸನಲ್​ ಮೆಸೇಜ್​ ಬೇರೆ ಯಾರೂ ಓದಬಾರದು ಎಂದರೆ ಏನು ಮಾಡ್ಬೇಕು? ಇಲ್ಲಿದೆ ಸನ್ನಿ ಲಿಯೋನ್​ ಉಪಾಯ

Published On - 9:35 am, Fri, 4 June 21

ಶಾಹೀನ್ ಅಫ್ರಿದಿ ಬ್ಯಾಟಿಂಗ್ ಶ್ಲಾಘಿಸಿದ ಕುಲ್ದೀಪ್ ಯಾದವ್
ಶಾಹೀನ್ ಅಫ್ರಿದಿ ಬ್ಯಾಟಿಂಗ್ ಶ್ಲಾಘಿಸಿದ ಕುಲ್ದೀಪ್ ಯಾದವ್
ಬುರುಡೆ ಜತೆ ಸಿಕ್ಕ ID ಕಾರ್ಡ್,ವಾಕಿಂಗ್ ಸ್ಟಿಕ್ ಬಗ್ಗೆ ಸತ್ಯ ಬಿಚ್ಚಿಟ ಮಗ
ಬುರುಡೆ ಜತೆ ಸಿಕ್ಕ ID ಕಾರ್ಡ್,ವಾಕಿಂಗ್ ಸ್ಟಿಕ್ ಬಗ್ಗೆ ಸತ್ಯ ಬಿಚ್ಚಿಟ ಮಗ
ಬೆಂಗಳೂರಿನಲ್ಲಿ ಮಳೆ ರುದ್ರನರ್ತನ: ವಾಹನ ಸವಾರರಿಗೆ ನರಕ ದರ್ಶನ
ಬೆಂಗಳೂರಿನಲ್ಲಿ ಮಳೆ ರುದ್ರನರ್ತನ: ವಾಹನ ಸವಾರರಿಗೆ ನರಕ ದರ್ಶನ
ಸಂಪುಟ ಸಭೆಯಲ್ಲಿ ಜಾತಿ ಜ್ವಾಲೆ:ಏರು ಧ್ವನಿಯಲ್ಲೇ ಸಚಿವರಿಂದ ಆಕ್ಷೇಪ
ಸಂಪುಟ ಸಭೆಯಲ್ಲಿ ಜಾತಿ ಜ್ವಾಲೆ:ಏರು ಧ್ವನಿಯಲ್ಲೇ ಸಚಿವರಿಂದ ಆಕ್ಷೇಪ
ಧರ್ಮಸ್ಥಳ ಕೇಸ್: ಇಂದು ಇನ್ನಷ್ಟು ತಲೆಬುರುಡೆ, ಅಸ್ಥಿಪಂಜರಗಳು ಪತ್ತೆ
ಧರ್ಮಸ್ಥಳ ಕೇಸ್: ಇಂದು ಇನ್ನಷ್ಟು ತಲೆಬುರುಡೆ, ಅಸ್ಥಿಪಂಜರಗಳು ಪತ್ತೆ
ಒಳನುಸುಳುಕೋರರನ್ನು ರಕ್ಷಿಸಲು ರಾಹುಲ್ ಗಾಂಧಿ ಯಾತ್ರೆ; ಅಮಿತ್ ಶಾ ವಾಗ್ದಾಳಿ
ಒಳನುಸುಳುಕೋರರನ್ನು ರಕ್ಷಿಸಲು ರಾಹುಲ್ ಗಾಂಧಿ ಯಾತ್ರೆ; ಅಮಿತ್ ಶಾ ವಾಗ್ದಾಳಿ
ಆಳಂದ ಮತಗಳ್ಳತನ:ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ
ಆಳಂದ ಮತಗಳ್ಳತನ:ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ
ಇನ್ಮುಂದೆ ಕಿಚ್ಚ ಸುದೀಪ್ ಅವರೇ ವಿಷ್ಣುವರ್ಧನ್​ ಮಗ: ಅಭಿಮಾನದ ಮಾತು
ಇನ್ಮುಂದೆ ಕಿಚ್ಚ ಸುದೀಪ್ ಅವರೇ ವಿಷ್ಣುವರ್ಧನ್​ ಮಗ: ಅಭಿಮಾನದ ಮಾತು
ವಿಷ್ಣುವರ್ಧನ್ ಎಂದಿಗೂ ನಮ್ಮ ಜೊತೆಗೇ ಇರುತ್ತಾರೆ: ಶಿವರಾಜ್ ಕುಮಾರ್
ವಿಷ್ಣುವರ್ಧನ್ ಎಂದಿಗೂ ನಮ್ಮ ಜೊತೆಗೇ ಇರುತ್ತಾರೆ: ಶಿವರಾಜ್ ಕುಮಾರ್
ಸುಮ್ಮನೆ ನಿಂತಿದ್ದ ಅಂಪೈರ್​ ತಲೆಗೆ ಗಾಯ ಮಾಡಿದ ಪಾಕ್ ಆಟಗಾರ; ವಿಡಿಯೋ
ಸುಮ್ಮನೆ ನಿಂತಿದ್ದ ಅಂಪೈರ್​ ತಲೆಗೆ ಗಾಯ ಮಾಡಿದ ಪಾಕ್ ಆಟಗಾರ; ವಿಡಿಯೋ