ಅಜಿತ್ ಕುಮಾರ್ಗೆ ಸಾವಿನ ಬಗ್ಗೆ ಶುರುವಾಗಿದೆ ಭಯ? ವಿಚಿತ್ರವಾಗಿ ಮಾತನಾಡಿದ ನಟ
ನಟ ಅಜಿತ್ ಕುಮಾರ್ ಅವರು ಸಾವಿನ ಅಂಚಿನ ಅನುಭವಗಳ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. ನಿವೃತ್ತಿಯ ಬಗ್ಗೆ ಪ್ರಶ್ನಿಸಿದಾಗ, ಜೀವನದ ಅಮೂಲ್ಯತೆಯನ್ನು ಅರಿತುಕೊಂಡ ಅವರು ಪ್ರತಿ ಕ್ಷಣವನ್ನು ಸದುಪಯೋಗಪಡಿಸಿಕೊಳ್ಳುವ ಬಗ್ಗೆ ಮಾತನಾಡಿದ್ದಾರೆ. ಅವರ ಈ ಹೇಳಿಕೆಗಳು ಅನೇಕರನ್ನು ಆಲೋಚನೆಗೆ ಹಚ್ಚಿದೆ .

ಕೆಲವೊಮ್ಮೆ ಸಾವನ್ನು ಹತ್ತಿರದಿಂದ ಕಂಡು ಬಂದಾಗ ಅದರ ಬಗ್ಗೆ ಭಯ ಶುರುವಾಗುತ್ತದೆ. ನಿತ್ಯ ಏಳೋದೇ ಸಮಸ್ಯೆ ಎಂದು ದೂರು ನೀಡುವವರು ಸಾವನ್ನು ಹತ್ತಿರದಿಂದ ಕಂಡು ಬಂದ ಬಳಿಕ ಬದುಕಿದ್ದೇನಲ್ಲ ಎಂದು ಸಂತೋಷಪಡುತ್ತಾರೆ. ಈಗ ನಟ ಅಜಿತ್ ಕುಮಾರ್ (Ajith Kumar) ಅವರಿಗೂ ಹೀಗೇಯೇ ಆಯಿತೇ ಎನ್ನುವ ಪ್ರಶ್ನೆ ಮೂಡಿದೆ. ಸಾವನ್ನು ಹತ್ತಿರದಿಂದ ಕಂಡು ಬಂದ ಅಜಿತ್ ಕುಮಾರ್ ಆಲೋಚನೆಗಳು ಸಂಪೂರ್ಣವಾಗಿ ಭಿನ್ನವಾಗಿದೆ. ಅವರು ಇತ್ತೀಚೆಗೆ ಮಾತನಾಡುವಾಗ ಸಾವಿನ ಬಗ್ಗೆ ತಮ್ಮ ಆಲೋಚನೆಗಳನ್ನು ಹೊರಹಾಕಿದ್ದಾರೆ.
ರಿಟೈರ್ಮೆಂಟ್ ಬಗ್ಗೆ ಅವರಿಗೆ ಕೇಳಲಾಗಿದೆ. ಈ ಬಗ್ಗೆ ಮಾತನಾಡಿದ ಅಜಿತ್, ‘ಅದು ನಿಮಗೆ ಗೊತ್ತೂ ಆಗುವುದಿಲ್ಲ. ಯಾವಾಗ ನಿವೃತ್ತಿ ಆಗಬೇಕು ಎಂದು ಯೋಜಿಸುವುದಿಲ್ಲ. ನನಗೆ ನಿವೃತ್ತಿ ಪಡೆಯುವಂತೆ ಒತ್ತಾಯ ಬರಹಬುದು. ನಾನು ಯಾವುದನ್ನೂ ಲಘುವಾಗಿ ತೆಗೆದುಕೊಳ್ಳುವುದಿಲ್ಲ. ಜನರು ಜೀವನದ ಬಗ್ಗೆ ದೂರುತ್ತಾರೆ. ಆದರೆ, ನಿತ್ಯ ಬದುಕಿತ್ತಿರೋದು ಒಂದು ಆಶೀರ್ವಾದ’ ಎಂದಿದ್ದಾರೆ ಅಜಿತ್.
‘ನಾನು ಇಲ್ಲಿ ತಾತ್ವಿಕವಾಗಿ ಮಾತನಾಡುತ್ತಿಲ್ಲ. ನಾನು ಶಸ್ತ್ರಚಿಕಿತ್ಸೆ ಮತ್ತು ಗಾಯಗಳನ್ನು ನೋಡಿದ್ದೇನೆ. ಕ್ಯಾನ್ಸರ್ನಿಂದ ಬದುಕುಳಿದ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ನನಗೆ ಇದ್ದಾರೆ. ಜೀವನ ಎಷ್ಟು ಅಮೂಲ್ಯವಾದುದು ಎಂದು ನಮಗೆ ತಿಳಿದಿದೆ. ನನ್ನ ಜೀವನದ ಪ್ರತಿ ಸೆಕೆಂಡ್ ಅನ್ನು ಬಳಸಿಕೊಳ್ಳಲು ನಾನು ಬಯಸುತ್ತೇನೆ. ಅದರಿಂದ ಹೆಚ್ಚಿನದ್ದನ್ನು ಪಡೆಯಲು ಬಯಸುತ್ತೇನೆ’ ಎಂದು ಅಜಿತ್ ಹೇಳಿದ್ದಾರೆ.
‘ನನ್ನ ಸಮಯ ಬಂದಾಗ, ‘ನಾನು ಈ ಆತ್ಮಕ್ಕೆ ಜೀವ ಕೊಟ್ಟೆ ಮತ್ತು ಅವನು ಅದನ್ನು ಸರಿಯಾಗಿ ಬಳಿಸಿಕೊಂಡ’ ಎಂದು ನನಗೆ ಜೀವ ಕೊಟ್ಟ ದೇವರಿಗೆ ಅನಿಸಬೇಕು. ಸಮಯ ವ್ಯರ್ಥ ಮಾಡದೇ ಬದುಕಲು ಬಯಸುತ್ತೇನೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾದ ಅಜಿತ್ ಕುಮಾರ್; ಈ ಪರಿಸ್ಥಿತಿ ಬರಲು ಅಭಿಮಾನಿಗಳೇ ಕಾರಣ
ಅಜಿತ್ ಅವರು 90ರ ದಶಕದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಅವರ ವೃತ್ತಿ ಜೀವನದಲ್ಲಿ ಏರಿಳಿತ ಇದೆ. ಇತ್ತೀಚೆಗೆ ಅವರಿಗೆ ದೊಡ್ಡ ಗೆಲುವು ಸಿಕ್ಕಿಲ್ಲ. ಅವರಿಗೆ ಇತ್ತೀಚೆಗೆ ಪದ್ಮಭೂಷಣ ಸಿಕ್ಕಿದೆ. ಅಜಿತ್ಗೆ ಕಾರ್ ರೇಸಿಂಗ್ ಹವ್ಯಾಸ ಇದೆ. ಅನೇಕ ಬಾರಿ ರೇಸಿಂಗ್ ತರಬೇತಿ ವೇಳೆ ಸಾವಿನಿಂದ ಪಾರಾಗಿ ಬಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:59 am, Fri, 2 May 25