AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಷಯ್ ಕುಮಾರ್, ಹಣದಾಸೆ ಇರುವ ನಟರೇ? ಇತಿಹಾಸ ಏನು ಹೇಳುತ್ತದೆ?

Akshay Kumar Films: ಅಕ್ಷಯ್ ಕುಮಾರ್ ಬಗ್ಗೆ ಚಿತ್ರರಂಗದಲ್ಲಿ ಒಂದು ಋಣಾತ್ಮಕ ಅಭಿಪ್ರಾಯವೂ ಇದೇ. ಅಕ್ಷಯ್ ಕುಮಾರ್ ಕೇವಲ ಹಣದ ಬಗ್ಗೆ ಮಾತ್ರ ಯೋಚಿಸುತ್ತಾರೆ. ಕತೆಯ ಕಾರಣಕ್ಕಾಗಿ ಅಲ್ಲದೆ ಹಣಕ್ಕಾಗಿಯೇ ಅವರು ಒಂದರ ಹಿಂದೊಂದು ಸಿನಿಮಾ ಒಪ್ಪಿಕೊಳ್ಳುತ್ತಾರೆ. ಶೂಟಿಂಗ್, ಅಡ್ವಾನ್ಸ್ ಇನ್ನಿತರೆ ವಿಷಯಗಳಲ್ಲಿಯೂ ಸಹ ಅವರು ಪ್ರತಿ ಗಂಟೆಗೆ ಕೋಟ್ಯಂತರ ರೂಪಾಯಿ ಚಾರ್ಜ್ ಮಾಡುತ್ತಾರೆ ಎಂಬೆಲ್ಲ ಸುದ್ದಿ ಚಾಲ್ತಿಯಲ್ಲಿದೆ.

ಅಕ್ಷಯ್ ಕುಮಾರ್, ಹಣದಾಸೆ ಇರುವ ನಟರೇ? ಇತಿಹಾಸ ಏನು ಹೇಳುತ್ತದೆ?
Akshay Kumar
ಮಂಜುನಾಥ ಸಿ.
|

Updated on: Jun 19, 2026 | 11:21 AM

Share

ಅಕ್ಷಯ್ ಕುಮಾರ್ (Akshay Kumar) ಬಾಲಿವುಡ್​​ನ ಬಲು ಬ್ಯುಸಿ ನಟ. ಸ್ಟಾರ್ ನಟ ಆಗಿರುವವರು ವರ್ಷಕ್ಕೆ ಒಂದು ಸಿನಿಮಾ ಸಹ ಮಾಡುತ್ತಿಲ್ಲ, ಆದರೆ ಅಕ್ಷಯ್ ಕುಮಾರ್ ವರ್ಷಕ್ಕೆ ನಾಲ್ಕೈದು ಸಿನಿಮಾಗಳಲ್ಲಿ ನಟಿಸುತ್ತಾರೆ. ಸ್ಟಾರ್ ನಟರಾಗಿಯೂ ವರ್ಷಕ್ಕೆ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಏಕೈಕ ವ್ಯಕ್ತಿ ಅಕ್ಷಯ್ ಕುಮಾರ್. ಆದರೆ ಅಕ್ಷಯ್ ಕುಮಾರ್ ಬಗ್ಗೆ ಚಿತ್ರರಂಗದಲ್ಲಿ ಒಂದು ಋಣಾತ್ಮಕ ಅಭಿಪ್ರಾಯವೂ ಇದೇ. ಅಕ್ಷಯ್ ಕುಮಾರ್ ಕೇವಲ ಹಣದ ಬಗ್ಗೆ ಮಾತ್ರ ಯೋಚಿಸುತ್ತಾರೆ. ಕತೆಯ ಕಾರಣಕ್ಕಾಗಿ ಅಲ್ಲದೆ ಹಣಕ್ಕಾಗಿಯೇ ಅವರು ಒಂದರ ಹಿಂದೊಂದು ಸಿನಿಮಾ ಒಪ್ಪಿಕೊಳ್ಳುತ್ತಾರೆ. ಶೂಟಿಂಗ್, ಅಡ್ವಾನ್ಸ್ ಇನ್ನಿತರೆ ವಿಷಯಗಳಲ್ಲಿಯೂ ಸಹ ಅವರು ಪ್ರತಿ ಗಂಟೆಗೆ ಕೋಟ್ಯಂತರ ರೂಪಾಯಿ ಚಾರ್ಜ್ ಮಾಡುತ್ತಾರೆ ಎಂಬೆಲ್ಲ ಸುದ್ದಿ ಚಾಲ್ತಿಯಲ್ಲಿದೆ.

ಸ್ವತಃ ಅಕ್ಷಯ್ ಕುಮಾರ್ ಸಹ ಕೆಲ ಸಂದರ್ಶನಗಳಲ್ಲಿ ತಮಾಷೆಯಾಗಿ ತಮಗೆ ಹಣ ಮುಖ್ಯ, ಹಣ ಬಾಕಿ ಉಳಿಸಿಕೊಂಡಿದ್ದ ನಿರ್ಮಾಪಕನ ಮನೆಗೆ ನುಗ್ಗಿ ದೊಡ್ಡ ಮ್ಯೂಸಿಕ್ ಸಿಸ್ಟಮ್ ಎತ್ತಿಕೊಂಡು ಬಂದಿದ್ದ ಘಟನೆಗಳನ್ನು ಹೇಳಿಕೊಂಡಿದ್ದರು. ಅಕ್ಷಯ್ ಕುಮಾರ್ ಅವರು ಸೆಟ್​​ಗೆ ಕಾಲಿಡುತ್ತಿದ್ದಂತೆ ಅವರ ಸಂಭಾವನೆಯ ಮೀಟರ್ ಶುರು ಆಗುತ್ತದೆ. ಸಂಜೆ ಐದು ಗಂಟೆ ಆಗುತ್ತಿದ್ದಂತೆ ಮೀಟರ್ ನಿಲ್ಲುತ್ತದೆ ಎಂದೆಲ್ಲ ಅವರ ಸಹ ನಟರು ಸಹ ಕೆಲವು ಬಾರಿ ಹೇಳಿದ್ದಿದೆ. ಇದೆಲ್ಲ ಕಾರಣಗಳಿಂದ ಅಕ್ಷಯ್ ಕುಮಾರ್ ಅವರನ್ನು ಮನಿ ಮೈಂಡೆಂಡ್ ನಟ ಎಂದೇ ಅಭಿಮಾನಿಗಳು ಅಂದುಕೊಂಡಿದ್ದರು.

ಆದರೆ ಆ ಬಗ್ಗೆ ನಟ ಅಕ್ಷಯ್ ಕುಮಾರ್ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಅದು ಸಂಪೂರ್ಣ ಸುಳ್ಳು ಎಂದು ಹೇಳಿದ್ದಾರೆ. ‘ನನ್ನನ್ನು ನೆಗೆಟಿವ್ ಆಗಿ ಬಿಂಬಿಸಲಾಗಿದೆ. ನಾನು ನನ್ನ ವೃತ್ತಿ ಜೀವನದಲ್ಲಿ ನನ್ನ ಸಿನಿಮಾಗಳಿಗೆ ನಾನೇ ಹಣ ಕೊಟ್ಟು ಸಿನಿಮಾ ಪೂರ್ತಿಗೊಳಿಸಲು ಸಹಾಯ ಮಾಡಿದ್ದೇನೆ. ನಾನು ಚಿತ್ರರಂಗಕ್ಕೆ ಬಂದು ದಶಕಗಳಾಯ್ತು. ನನ್ನ ಒಂದೇ ಒಂದು ಸಿನಿಮಾ ಸಹ ಶುರುವಾದ ಬಳಿಕ ನಿಂತಿದ್ದೇ ಇಲ್ಲ. ರಿಲೀಸ್ ಮಾಡಲು ನಿರ್ಮಾಪಕರ ಬಳಿ ಹಣ ಇಲ್ಲ ಎಂದಾಗ ನಾನೇ ಹಣ ಕೊಟ್ಟು ರಿಲೀಸ್ ಮಾಡಿಸಿದ್ದೀನಿ’ ಎಂದಿದ್ದಾರೆ ಅಕ್ಷಯ್ ಕುಮಾರ್.

ಇದನ್ನೂ ಓದಿ:1.8 ಕೋಟಿ ರೂಪಾಯಿಗೆ ಕುಸಿಯಿತಾ ಅಕ್ಷಯ್ ಕುಮಾರ್ ಸಂಭಾವನೆ? ಇಲ್ಲಿದೆ ಟ್ವಿಸ್ಟ್

ಮುಂದುವರೆದು ಮಾತನಾಡಿ, ‘ನಾನು ಈ ವರೆಗೆ ಹಲವಾರು ಸಿನಿಮಾ ನಿರ್ಮಾಪಕರುಗಳ ಜೊತೆಗೆ ಕೆಲಸ ಮಾಡಿದ್ದೀನಿ. ನನ್ನ ಸಿನಿಮಾಗಳು ಸೋತಾಗ ಖುದ್ದು ನಾನೇ ನಿರ್ಮಾಪಕರಿಗೆ ಕರೆ ಮಾಡಿ ಮಾತನಾಡುತ್ತೇನೆ. ಹೆದರಬೇಡಿ, ಮತ್ತೆ ಸಿನಿಮಾ ಮಾಡೋಣ ಎನ್ನುತ್ತೇನೆ ಮಾತ್ರವಲ್ಲದೆ ಸಿನಿಮಾ ಫ್ಲಾಪ್ ಆದರೆ ಬಾಕಿ ಹಣ ಕೊಡಬೇಡಿ ಎಂದು ಹೇಳುವ ಏಕೈಕ ನಟ ನಾನೇ. ನೀವು ಯಾವ ನಿರ್ಮಾಪಕರನ್ನಾದರೂ ಕೇಳಬಹುದು’ ಎಂದು ಅಕ್ಷಯ್ ಕುಮಾರ್ ಸವಾಲು ಹಾಕಿದ್ದಾರೆ.

ಅಕ್ಷಯ್ ಕುಮಾರ್ ಪ್ರಸ್ತುತ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ಭೂತ್ ಬಂಗ್ಲ’ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಇದೀಗ ‘ವೆಲ್​​ಕಮ್ ಟು ಜಂಗಲ್’ ಸಿನಿಮಾ ಬಿಡುಗಡೆ ಹಂತದಲ್ಲಿದೆ. ‘ಹೈವಾನ್’ ಹೆಸರಿನ ಹಾರರ್ ಸಿನಿಮಾನಲ್ಲಿ ನಟಿಸಿದ್ದಾರೆ. ‘ಗೋಲ್​​ಮಾಲ್ 5’ ಸಿನಿಮಾನಲ್ಲಿ ನಟಿಸಲಿದ್ದಾರೆ. ಮಹಾರಾಜ ಶಿವಾಜಿ ಪಾತ್ರದಲ್ಲಿ ನಟಿಸಲಿದ್ದಾರೆ. ಅಜೀಮ್ ಬಾಜ್ಮಿ ನಿರ್ದೇಶನದ ಹೊಸ ಸಿನಿಮಾನಲ್ಲಿಯೂ ಅಕ್ಷಯ್ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
JDS ಶಾಸಕರ ಅಡ್ಡಮತದಾನದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದೇನು ನೋಡಿ
JDS ಶಾಸಕರ ಅಡ್ಡಮತದಾನದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದೇನು ನೋಡಿ
ತಾಯಿ ಆನೆ ಮಡಿಲಲ್ಲಿ ಮಲಗಿದ್ದ ಮರಿಗಳ ಕ್ಯೂಟ್ ದೃಶ್ಯ ವೈರಲ್
ತಾಯಿ ಆನೆ ಮಡಿಲಲ್ಲಿ ಮಲಗಿದ್ದ ಮರಿಗಳ ಕ್ಯೂಟ್ ದೃಶ್ಯ ವೈರಲ್
ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ದುರಂತ: ಬಿಹಾರ, ತಮಿಳುನಾಡಿನ ಇಬ್ಬರು ನಾಪತ್ತೆ
ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ದುರಂತ: ಬಿಹಾರ, ತಮಿಳುನಾಡಿನ ಇಬ್ಬರು ನಾಪತ್ತೆ
ಮೂಗು ಹೇಳುತ್ತೆ ನಿಮ್ಮ ವ್ಯಕ್ತಿತ್ವ! ಸಾಮುದ್ರಿಕ ಶಾಸ್ತ್ರ ಹೇಳೋದೇನು ನೋಡಿ
ಮೂಗು ಹೇಳುತ್ತೆ ನಿಮ್ಮ ವ್ಯಕ್ತಿತ್ವ! ಸಾಮುದ್ರಿಕ ಶಾಸ್ತ್ರ ಹೇಳೋದೇನು ನೋಡಿ
ಈ ರಾಶಿಯವರಿಗೆ ಮಧ್ಯಾಹ್ನ 12:20 ರಿಂದ ಶುಭ ಕಾಲ ಆರಂಭ
ಈ ರಾಶಿಯವರಿಗೆ ಮಧ್ಯಾಹ್ನ 12:20 ರಿಂದ ಶುಭ ಕಾಲ ಆರಂಭ
ಪ್ರಿಯ ಮಿತ್ರ ನರೇಂದ್ರ; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಮ್ಯಾಕ್ರನ್
ಪ್ರಿಯ ಮಿತ್ರ ನರೇಂದ್ರ; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಮ್ಯಾಕ್ರನ್
ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ
ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ
ಜೈಲಲ್ಲಿ ಪವಿತ್ರಾ ಗೌಡಗೆ ಕೆಲಸ ಮಾಡಿಕೊಡಲು ಆಳುಗಳು ಇದ್ದಾರೆ: ಸಂಧ್ಯಾ ಆರೋಪ
ಜೈಲಲ್ಲಿ ಪವಿತ್ರಾ ಗೌಡಗೆ ಕೆಲಸ ಮಾಡಿಕೊಡಲು ಆಳುಗಳು ಇದ್ದಾರೆ: ಸಂಧ್ಯಾ ಆರೋಪ
ವಡೋದರಾದಲ್ಲಿ 4 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಲ್ಕೋಹಾಲ್ ಬಾಟಲಿಗಳ ಧ್ವಂಸ
ವಡೋದರಾದಲ್ಲಿ 4 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಲ್ಕೋಹಾಲ್ ಬಾಟಲಿಗಳ ಧ್ವಂಸ
ಪರಿಷತ್‌ ಚುನಾವಣೆ: ಗೆಲುವು ಬೆನ್ನಲ್ಲೇ ತಿಪ್ಪಣ್ಣಪ್ಪ ಕಮಕನೂರು ಭಾವುಕ
ಪರಿಷತ್‌ ಚುನಾವಣೆ: ಗೆಲುವು ಬೆನ್ನಲ್ಲೇ ತಿಪ್ಪಣ್ಣಪ್ಪ ಕಮಕನೂರು ಭಾವುಕ