AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ram Setu: ರಾಮ ಸೇತುವೆ ವಿಚಾರದಲ್ಲಿ ಮುಂದುವರಿಯಲು ಅಭಿಮಾನಿಗಳ ಅಭಿಪ್ರಾಯ ಕೇಳುತ್ತಿರುವ ನಟ ಅಕ್ಷಯ್​ ಕುಮಾರ್​!

Akshay Kumar: ಈ ಹಿಂದಿನ ಸಿನಿಮಾಗಳಿಗಿಂತಲೂ ಭಿನ್ನವಾದ ಲುಕ್​ನೊಂದಿಗೆ ‘ರಾಮ್​ ಸೇತು’ಗಾಗಿ ಅಕ್ಷಯ್​ ಕುಮಾರ್​ ಶೂಟಿಂಗ್​ ಆರಂಭಿಸಿದ್ದಾರೆ. ಸ್ವಲ್ಪ ಉದ್ದ ಕೂದಲು, ಗಂಭೀರ ಮುಖಭಾವ, ಅದಕ್ಕೆ ಒಪ್ಪುವಂತಹ ಕನ್ನಡಕ ಧರಿಸಿ ಅಕ್ಕಿ ಪೋಸ್ ನೀಡಿದ್ದಾರೆ.

Ram Setu: ರಾಮ ಸೇತುವೆ ವಿಚಾರದಲ್ಲಿ ಮುಂದುವರಿಯಲು ಅಭಿಮಾನಿಗಳ ಅಭಿಪ್ರಾಯ ಕೇಳುತ್ತಿರುವ ನಟ ಅಕ್ಷಯ್​ ಕುಮಾರ್​!
ಅಕ್ಷಯ್​ ಕುಮಾರ್​ - ರಾಮ್​ ಸೇತು
ಮದನ್​ ಕುಮಾರ್​
|

Updated on: Mar 31, 2021 | 8:49 AM

Share

ಬಾಲಿವುಡ್​ನ ಬೇರೆಲ್ಲ ನಟರನ್ನೂ ಹಿಂದಿಕ್ಕಿ ತಮ್ಮದೇ ಆದ ಚಾರ್ಮ್​ ಕಾಪಾಡಿಕೊಂಡಿರುವ ನಟ ಅಕ್ಷಯ್​ ಕುಮಾರ್​ ಅವರು ಸದ್ಯ ‘ರಾಮ್​ ಸೇತು’ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಈ ಬಹುನಿರೀಕ್ಷಿತ ಚಿತ್ರಕ್ಕೆ ಇತ್ತೀಚೆಗಷ್ಟೇ ಅಯೋಧ್ಯೆಯಲ್ಲಿ ಮುಹೂರ್ತ ನೆರವೇರಿಸಿ ಶೂಟಿಂಗ್​ ಆರಂಭಿಸಲಾಗಿತ್ತು. ಎಲ್ಲವೂ ಸರಾಗವಾಗಿ ನಡೆಯುತ್ತಿದೆ ಎನ್ನುವಾಗ ಅಕ್ಷಯ್​ ಕುಮಾರ್​ ಅವರು ಈ ಸಿನಿಮಾ ಕುರಿತಂತೆ ಅಭಿಮಾನಿಗಳ ಸಲಹೆ ಕೇಳುತ್ತಿದ್ದಾರೆ!

ಅಭಿಮಾನಿಗಳ ಬಳಿ ಅಕ್ಷಯ್​ ಕುಮಾರ್​ ಸಲಹೆ ಕೇಳುತ್ತಿದ್ದಾರೆ ಎಂದಮಾತ್ರಕ್ಕೆ ಅವರಿಗೆ ಏನೋ ಗೊಂದಲ ಕಾಡುತ್ತಿದೆ ಎಂದೇನಲ್ಲ. ಸದ್ಯ ಅವರು ಈ ಸಿನಿಮಾದಲ್ಲಿ ತಮ್ಮ ಲುಕ್​ ಹೇಗಿರಲಿದೆ ಎಂಬುದನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಆ ಲುಕ್​ ಬಗ್ಗೆ ಫ್ಯಾನ್ಸ್​ ಕಡೆಯಿಂದ ಪ್ರತಿಕ್ರಿಯೆ ಪಡೆಯಲು ಕಾಯುತ್ತಿದ್ದಾರೆ. ಈ ಕುರಿತಂತೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​​ ಮಾಡಿದ್ದಾರೆ.

‘ನನ್ನ ಪಾಲಿನ ಒಂದು ವಿಶೇಷ ಸಿನಿಮಾದ ಪಯಣ ಇಂದು ಶುರುವಾಗಿದೆ. ರಾಮ್​ ಸೇತು ಶೂಟಿಂಗ್​ ಆರಂಭ ಮಾಡಿದ್ದೇವೆ. ಒಬ್ಬ ಪುರಾತತ್ವಶಾಸ್ತ್ರಜ್ಞನಾಗಿ ಈ ಸಿನಿಮಾದಲ್ಲಿ ನಾನು ನಟಿಸುತ್ತಿದ್ದೇನೆ. ನನ್ನ ಲುಕ್​ ಹೇಗಿದೆ ಎಂಬುದನ್ನು ನಿಮ್ಮಿಂದ ಕೇಳಿ ತಿಳಿದುಕೊಳ್ಳಲು ಬಯಸುತ್ತೇನೆ. ನಿಮ್ಮ ಅಭಿಪ್ರಾಯ ನನಗೆ ಯಾವಾಗಲೂ ಮುಖ್ಯವಾಗುತ್ತದೆ’ ಎಂದು ಅಕ್ಷಯ್​ ಕುಮಾರ್​ ಪೋಸ್ಟ್​ ಮಾಡಿದ್ದಾರೆ.

ಈ ಹಿಂದಿನ ಸಿನಿಮಾಗಳಿಗಿಂತಲೂ ಭಿನ್ನವಾದ ಲುಕ್​ನೊಂದಿಗೆ ‘ರಾಮ್​ ಸೇತು’ಗಾಗಿ ಅಕ್ಷಯ್​ ಕುಮಾರ್​ ಶೂಟಿಂಗ್​ ಆರಂಭಿಸಿದ್ದಾರೆ. ಸ್ವಲ್ಪ ಉದ್ದ ಕೂದಲು, ಗಂಭೀರ ಮುಖಭಾವ, ಅದಕ್ಕೆ ಒಪ್ಪುವಂತಹ ಕನ್ನಡಕ ಧರಿಸಿ ಅಕ್ಕಿ ಪೋಸ್ ನೀಡಿದ್ದಾರೆ. ಅಭಿಮಾನಿಗಳಿಗೆ ಈ ಲುಕ್​ ತುಂಬ ಇಷ್ಟವಾಗಿದೆ. ರಾಮ ಸೇತು ನಿಜವೋ ಅಥವಾ ಕಾಲ್ಪನಿಕವೋ ಎಂಬ ಚರ್ಚೆ ಬಹಳ ಕಾಲದಿಂದಲೂ ನಡೆಯುತ್ತಲೇ ಇದೆ. ಅದೇ ಅಂಶವನ್ನು ಕೇಂದ್ರವಾಗಿಟ್ಟುಕೊಂಡು ಈ ಸಿನಿಮಾ ತಯಾರಾಗುತ್ತಿದೆ.

View this post on Instagram

A post shared by Akshay Kumar (@akshaykumar)

2020ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಕ್ಷಯ್​ ಕುಮಾರ್​ ಈ ಚಿತ್ರವನ್ನು ಘೋಷಿಸಿದರು. ಆಗಿನಿಂದಲೇ ‘ರಾಮ್​ ಸೇತು’ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿತು. ಈ ಚಿತ್ರಕ್ಕೆ ಕೇಪ್​ ಆಫ್​ ಗುಡ್​ ಫಿಲ್ಮ್ಸ್​, ಅಬಂಡಾನ್ಷಾ ಎಂಟರ್​ಟೇನ್​ಮೆಂಟ್​, ಅಮೇಜಾನ್​ ಪ್ರೈಂ ವಿಡಿಯೋ ಮತ್ತು ಲೈಕಾ ಪ್ರೊಡಕ್ಷನ್ಸ್​ ಸಂಸ್ಥೆಗಳು ಬಂಡವಾಳ ಹೂಡುತ್ತಿವೆ.

ಇದನ್ನೂ ಓದಿ: ರಾಮ ಸೇತು ವಿಚಾರಕ್ಕೆ ಕೈ ಹಾಕಿದ ಅಮೇಜಾನ್​ ಪ್ರೈಂ! ಅಕ್ಷಯ್​ ಕುಮಾರ್​ ಮೇಲೆ ದೊಡ್ಡ ಜವಾಬ್ದಾರಿ

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ