AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪುಷ್ಪ 2’ ರಿಲೀಸ್​ ಡೇಟ್​ ಬಗ್ಗೆ ಬಿಗ್​ ಅಪ್​ಡೇಟ್​; ಮತ್ತೆ ಆ ಯಶಸ್ವಿ ದಿನಾಂಕದ ಮೇಲೆ ಕಣ್ಣಿಟ್ಟ ಅಲ್ಲು ಅರ್ಜುನ್​?

ಈಗಾಗಲೇ ವರ್ಷದ ಮೊದಲ ತಿಂಗಳು ಕಳೆದಿದೆ. ‘ಪುಷ್ಪ 2’ ಚಿತ್ರದ ಸಾಕಷ್ಟು ಕೆಲಸಗಳು ಬಾಕಿ ಇವೆ. ಅಷ್ಟರೊಳಗೆ ರಿಲೀಸ್​ ಡೇಟ್​ ಕುರಿತು ಸುದ್ದಿ ಹರಿದಾಡುತ್ತಿದೆ.

‘ಪುಷ್ಪ 2’ ರಿಲೀಸ್​ ಡೇಟ್​ ಬಗ್ಗೆ ಬಿಗ್​ ಅಪ್​ಡೇಟ್​; ಮತ್ತೆ ಆ ಯಶಸ್ವಿ ದಿನಾಂಕದ ಮೇಲೆ ಕಣ್ಣಿಟ್ಟ ಅಲ್ಲು ಅರ್ಜುನ್​?
‘ಪುಷ್ಪ’ ಚಿತ್ರದಲ್ಲಿ ಅಲ್ಲು ಅರ್ಜುನ್
TV9 Web
| Updated By: ಮದನ್​ ಕುಮಾರ್​|

Updated on: Feb 02, 2022 | 9:43 AM

Share

‘ಪುಷ್ಪ’ ಸಿನಿಮಾ ಅಲ್ಲು ಅರ್ಜುನ್​ (Allu Arjun) ಅವರ ವೃತ್ತಿಜೀವನಕ್ಕೆ ದೊಡ್ಡ ಮೈಲೇಜ್ ನೀಡಿದೆ. ಅವರು ಊಹಿಸದ ರೀತಿಯಲ್ಲಿ ಈ ಸಿನಿಮಾ ಕಲೆಕ್ಷನ್​ ಮಾಡಿದೆ. ಅದರಲ್ಲೂ ಬಾಲಿವುಡ್​ ಒಂದರಲ್ಲೇ ಈ ಚಿತ್ರ ಬರೋಬ್ಬರಿ 100 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದರಿಂದ ಚಿತ್ರತಂಡಕ್ಕೆ ಹೊಸ ಹುರುಪು ಸಿಕ್ಕಿದೆ. ‘ಪುಷ್ಪ 2’ (Pushpa 2) ಚಿತ್ರವನ್ನೂ ಹೆಚ್ಚು ಕಾಳಜಿ ವಹಿಸಿ ಶೂಟ್​ ಮಾಡಲು ಚಿತ್ರತಂಡ ಪ್ಲ್ಯಾನ್​ ಮಾಡಿಕೊಂಡಿದೆ. ಈಗ ಈ ಚಿತ್ರದ ರಿಲೀಸ್​ ಡೇಟ್​ ಬಗ್ಗೆ ಹೊಸ ಅಪ್​ಡೇಟ್​ ಒಂದು ಕೇಳಿ ಬರುತ್ತಿದೆ. ‘ಪುಷ್ಪ ಪಾರ್ಟ್​ 1’ ಚಿತ್ರ 2021ರ ಡಿ.17ಕ್ಕೆ ಬಿಡುಗಡೆ ಆಗಿ ಯಶಸ್ವಿ ಆಯಿತು. ಈಗ ಮತ್ತೆ ಡಿ.17ರ ಮೇಲೆ ಚಿತ್ರತಂಡ ಕಣ್ಣಿಟ್ಟಿದೆ. ಅಂದರೆ, 2022ರ ಡಿಸೆಂಬರ್​ 17ರಂದು ಎರಡನೇ ಪಾರ್ಟ್​ ರಿಲೀಸ್​ ಮಾಡಲು ಪ್ಲ್ಯಾನ್​ ರೂಪಿಸಿದೆ ಎಂಬ ಗುಸುಗುಸು ಕೇಳಿಬಂದಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಅಚ್ಚರಿ ಹೊರ ಹಾಕಿದ್ದಾರೆ. ‘ಪುಷ್ಪ’ (Pushpa Movie) ಸಿನಿಮಾ ಅದ್ದೂರಿಯಾಗಿ ಮೂಡಿ ಬಂದಿತ್ತು. ಆದರೆ, ಸಾಕಷ್ಟು ಅಡೆತಡೆಗಳನ್ನು ಚಿತ್ರ ಎದುರಿಸಿತ್ತು. ಇದರಲ್ಲಿ ಮುಖ್ಯವಾಗಿ ಚಿತ್ರತಂಡಕ್ಕೆ ಕೊವಿಡ್​ನಿಂದ ತೊಂದರೆ ಆಗಿತ್ತು. ಇದಲ್ಲದೆ, ಕೆಲವರಿಗೆ ಡೆಂಘೆ ಕಾಣಿಸಿಕೊಂಡಿದ್ದರಿಂದ ಸಿನಿಮಾ ಶೂಟಿಂಗ್​ ವಿಳಂಬವಾಗಿತ್ತು. ಕಾಡಿನಲ್ಲಿ ಶೂಟ್​ ಮಾಡುವುದು ಕೂಡ ಒಂದು ಚಾಲೆಂಜ್​ ಆಗಿತ್ತು. ಹೀಗಾಗಿ, ಚಿತ್ರತಂಡ ‘ಪುಷ್ಪ’ಕ್ಕಾಗಿ ಸಾಕಷ್ಟು ಶ್ರಮವಹಿಸಿದೆ. ಇದರ ಪರಿಣಾಮವಾಗಿಯೇ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿದೆ. ಈಗ ಪಾರ್ಟ್​ 2 ಮೇಲೆ ಎಲ್ಲರ ಕಣ್ಣಿದೆ.

ಈಗಾಗಲೇ ಜನವರಿ ತಿಂಗಳು ಕಳೆದಿದೆ. ಸಿನಿಮಾವನ್ನು 2022ರ ಡಿಸೆಂಬರ್​ನಲ್ಲೇ ತೆರೆಗೆ ತರಲು ಪ್ಲ್ಯಾನ್​ ರೂಪಿಸಿದ್ದು ಹೌದಾದಲ್ಲಿ ಸಿನಿಮಾ ತಂಡಕ್ಕೆ ಉಳಿದಿದ್ದು ಕೇವಲ 10 ತಿಂಗಳು ಮಾತ್ರ. ಆ ಹತ್ತು ತಿಂಗಳಲ್ಲಿ ಶೂಟಿಂಗ್​ ಪೂರ್ಣಗೊಳ್ಳಬೇಕು. ಸಿನಿಮಾದ ಪೋಸ್ಟ್ ಪ್ರೊಡಕ್ಷನ್​ ಕೆಲಸಗಳು ಮುಗಿಯಬೇಕು. ಇದರ ಜತೆಗೆ ಪ್ರಚಾರದ ಕಾರ್ಯ ಕೂಡ ನಡೆಯಬೇಕು. ಇದು ಚಿತ್ರತಂಡದ ಪಾಲಿಗೆ ನಿಜಕ್ಕೂ ಚಾಲೆಂಜಿಂಗ್​. ಇದನ್ನು ಚಿತ್ರತಂಡ ಹೇಗೆ ಸ್ವೀಕರಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

‘ಪುಷ್ಪ 2’ ಸಿನಿಮಾ ಜತೆಜತೆಗೆ ಮತ್ತೊಂದು ಸಿನಿಮಾ ಒಪ್ಪಿಕೊಂಡು, ನಟಿಸಲು ಅಲ್ಲು ಅರ್ಜುನ್​ ಪ್ಲ್ಯಾನ್​ ರೂಪಿಸಿದ್ದರು. ಆದರೆ, ಡಿಸೆಂಬರ್​ 17ಕ್ಕೆ ಪಾರ್ಟ್​ 2 ತರಬೇಕು ಎನ್ನುವ ಇಚ್ಛೆಯನ್ನು ಅಲ್ಲು ಅರ್ಜುನ್​ ಮುಂದೆ ಇಟ್ಟಿದ್ದಾರೆ ನಿರ್ದೇಶಕ ಸುಕುಮಾರ್​. ಈ ಕಾರಣಕ್ಕೆ ಇದೊಂದೇ ಪ್ರಾಜೆಕ್ಟ್ ​ಮೇಲೆ ಗಮನ ಹರಿಸಲು ಅಲ್ಲು ಅರ್ಜುನ್​ ನಿರ್ಧರಿಸಿದ್ದಾರೆ.

ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಕೂಡ ಸಾಕಷ್ಟು ಬ್ಯುಸಿ ಇದ್ದಾರೆ. ಅವರು ಹಲವು ಪ್ರಾಜೆಕ್ಟ್​ಗಳಲ್ಲಿ ತೊಡಗಿಕೊಂಡಿದ್ದಾರೆ. ಅವರು ಕೂಡ ಈ ಸಿನಿಮಾದ ಶೂಟಿಂಗ್​ ಬೇಗ ಮುಗಿಸಲು ಕೆಲ ತ್ಯಾಗಗಳನ್ನು ಮಾಡಬೇಕಾಗುತ್ತದೆ ಎನ್ನುವ ಮಾತಿದೆ. ಆ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇದನ್ನೂ ಓದಿ:

ಹಿಂದಿ ಡಬ್ಬಿಂಗ್​​ ಮೂಲಕ 100 ಕೋಟಿ ರೂ. ಬಾಚಿದ ‘ಪುಷ್ಪ’ ಚಿತ್ರ; ಹಾಗಾದ್ರೆ ‘ಕೆಜಿಎಫ್​’ ಗಳಿಸಿದ್ದೆಷ್ಟು?

ಅಲ್ಲು ಅರ್ಜುನ್​ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿದ್ದು ಹೇಗೆ? ‘ಪುಷ್ಪ’ ಚಿತ್ರದ ಟ್ರೇಡ್​ ಸೀಕ್ರೆಟ್​ ಇಲ್ಲಿದೆ..

ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್