ಕಥೆ ಬರೆಯಲಿದ್ದಾರೆ ಅಲ್ಲು ಅರ್ಜುನ್? ಕೊನೆಗೂ ಹೊರಬಿತ್ತು ದುಬೈ ಟ್ರಿಪ್ನ ರಹಸ್ಯ
ಅಲ್ಲು ಅರ್ಜುನ್ ಸದ್ಯ ದುಬೈ ಟ್ರಿಪ್ನಲ್ಲಿದ್ದಾರೆ. ಅವರು ದುಬೈನಲ್ಲಿರುವ ಫೋಟೋ ಹಂಚಿಕೊಂಡಿದ್ದಾರೆ. ಕುಟುಂಬದ ಜತೆಗೆ ಅವರು ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಸದ್ಯ, ಈ ಫೋಟೋ ಸಾಕಷ್ಟು ವೈರಲ್ ಆಗುತ್ತಿದೆ. ‘
ಅಲ್ಲು ಅರ್ಜುನ್ (Allu Arjun) ಅವರು ಸದ್ಯ ‘ಪುಷ್ಪ’ ಸಿನಿಮಾ (Pushpa Movie) ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಸಿನಿಮಾ ಅವರ ವೃತ್ತಿ ಜೀವನಕ್ಕೆ ಸಾಕಷ್ಟು ಮೈಲೇಜ್ ನೀಡಿದೆ. ಅಲ್ಲು ಅರ್ಜುನ್ ಟಾಲಿವುಡ್ನಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅವರು ಬಾಲಿವುಡ್ನಲ್ಲೂ ಗಟ್ಟಿ ನೆಲೆ ಕಂಡುಕೊಳ್ಳೋಕೆ ಈ ಸಿನಿಮಾ ಸಹಕಾರಿಯಾಗಿದೆ. ‘ಶ್ರೀವಲ್ಲಿ..’ ಹಾಡಿಗೆ ಅವರು ಹಾಕಿದ ಐಕಾನಿಕ್ ಸ್ಟೆಪ್ಅನ್ನು ಎಲ್ಲರೂ ಅನುಕರಣೆ ಮಾಡುತ್ತಿದ್ದಾರೆ. ವೆಸ್ಟ್ ಇಂಡೀಸ್ ಕ್ರಿಕೆಟ್ ಆಟಗಾರರಿಂದ ಹಿಡಿದು ಸಾಕಷ್ಟು ಮಂದಿ ಈ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಈ ಮೂಲಕ ಅವರ ಖ್ಯಾತಿ ವಿಶ್ವಾದ್ಯಂತ ಹಬ್ಬುತ್ತಿದೆ. ಈಗ ಅಲ್ಲು ಅರ್ಜುನ್ ಹೊಸದೊಂದು ಪ್ರಯೋಗಕ್ಕೆ ಮುಂದಾಗಿದ್ದಾರೆ. ಅವರು ಈಗ ಸಿನಿಮಾ ಕಥೆಯೊಂದನ್ನು ಬರೆಯಲಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ಕೇಳಿ ಅವರ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಅಚ್ಚರಿ ಎಂದರೆ, ದುಬೈ ಟ್ರಿಪ್ಗೂ ಅಲ್ಲು ಅರ್ಜುನ್ ಕಥೆ ಬರೆಯುವುದಕ್ಕೂ (Allu Arjun Dubai Trip) ಒಂದು ಲಿಂಕ್ ಇದೆ.
ಅಲ್ಲು ಅರ್ಜುನ್ ಸದ್ಯ ದುಬೈ ಟ್ರಿಪ್ನಲ್ಲಿದ್ದಾರೆ. ಅವರು ದುಬೈನಲ್ಲಿರುವ ಫೋಟೋ ಹಂಚಿಕೊಂಡಿದ್ದಾರೆ. ಕುಟುಂಬದ ಜತೆಗೆ ಅವರು ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಸದ್ಯ, ಈ ಫೋಟೋ ಸಾಕಷ್ಟು ವೈರಲ್ ಆಗುತ್ತಿದೆ. ‘ಪುಷ್ಪ’ ಯಶಸ್ಸಿನ ಹಿನ್ನೆಲೆಯಲ್ಲಿ ಅವರು ಪ್ರವಾಸ ತೆರಳಿದ್ದಾರೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ. ಆದರೆ, ಈ ವಿಚಾರದ ಬಗ್ಗೆ ಹೊಸದೊಂದು ಅಪ್ಡೇಟ್ ಬಂದಿದೆ.
ದುಬೈ ಮಾತ್ರವಲ್ಲದೆ, ಅಲ್ಲು ಅರ್ಜುನ್ ಯುರೋಪ್ ರಾಷ್ಟ್ರಗಳಿಗೂ ಭೇಟಿ ನೀಡಲಿದ್ದಾರೆ. ಪ್ರಕೃತಿ ಸೌಂದರ್ಯ ಸವಿಯಲು ಅಲ್ಲಿಗೆ ತೆರಳುತ್ತಾರೆ ಎಂದಾದರೆ ಈಗ ಹೇಳಿ ಮಾಡಿಸಿದ ಸಮಯ. ಈ ಕಾರಣಕ್ಕೆ ಇಲ್ಲಿಗೆ ಹೆಚ್ಚೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಅಲ್ಲು ಅರ್ಜುನ್ ಕೂಡ ಇದೇ ಪ್ಲ್ಯಾನ್ ಮಾಡಿದ್ದಾರೆ. ಹಾಗಾದರೆ, ಅವರು ಯುರೋಪ್ಗೆ ಭೇಟಿ ನೀಡುತ್ತಿರುವುದು ಏಕೆ? ಅದಕ್ಕೂ ಕಾರಣವಿದೆ.
ಮೂಲಗಳ ಪ್ರಕಾರ ಯುರೋಪ್ಗೆ ತೆರಳಿ ಕಥೆ ಬರೆಯುವ ಆಲೋಚನೆಯಲ್ಲಿ ಅಲ್ಲು ಅರ್ಜುನ್ ಇದ್ದಾರೆ. ಈ ಸಿನಿಮಾದಲ್ಲಿ ಅವರೇ ನಟಿಸುತ್ತಾರಾ ಅಥವಾ ಬೇರೆ ಹೀರೋಗೆ ಅವಕಾಶ ನೀಡುತ್ತಾರಾ ಎಂಬುದು ಸದ್ಯದ ಕುತೂಹಲ. ಒಂದೊಮ್ಮೆ ಅವರು ಕಥೆ ಬರೆದಿದ್ದೇ ಹೌದಾದಲ್ಲಿ ಅಲ್ಲು ಅರ್ಜುನ್ ಟಾಲಿವುಡ್ನಲ್ಲಿ ಕಥೆಗಾರನಾಗಿಯೂ ಗುರುತಿಸಿಕೊಳ್ಳಲಿದ್ದಾರೆ.
View this post on Instagram
ಚೇ ಗುವಾರ ಅವರ ಮೋಟರ್ ಸೈಕಲ್ ಡೈರಿ ಆಧರಿಸಿ ಕಥೆ ಒಂದು ಸಿದ್ಧಗೊಂಡಿತ್ತು. ಈ ಕಥೆಗೆ ದಿಲ್ ರಾಜು ಬಂಡವಾಳ ಹೂಡುವವರಿದ್ದರು. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ನಟಿಸಬೇಕಿತ್ತು. ಆರಂಭದಲ್ಲಿ ಕಥೆ ಕೇಳಿ ಒಪ್ಪಿದ್ದ ಅವರು ನಂತರ ಈ ಪ್ರಾಜೆಕ್ಟ್ ಅನ್ನು ಕ್ಯಾನ್ಸಲ್ ಮಾಡಿದ್ದರು. ಈಗ ಅಲ್ಲು ಅರ್ಜುನ್ ಅವರು ಯುರೋಪ್ನಲ್ಲಿ ಹೆಚ್ಚು ಸಮಯ ಕಳೆದು ಕಥೆ ಬರೆಯುವ ಆಲೋಚನೆಯಲ್ಲಿದ್ದಾರೆ.
ಇದನ್ನೂ ಓದಿ: ಅಲ್ಲು ಅರ್ಜುನ್ ಹೊಸ ಚಿತ್ರಕ್ಕೆ ಅಟ್ಲಿ ನಿರ್ದೇಶನ; ಸಂಭಾವನೆ ಎಷ್ಟು ಅಂತ ಕೇಳಿದ್ರೆ ಅಚ್ಚರಿ ಆಗತ್ತೆ
ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು ಹೇಗೆ? ‘ಪುಷ್ಪ’ ಚಿತ್ರದ ಟ್ರೇಡ್ ಸೀಕ್ರೆಟ್ ಇಲ್ಲಿದೆ..