AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅವರ ಪಾಲಿನ ಕಾವಲುಗಾರ’; ಮಗನ ಕಿಡ್ನ್ಯಾಪ್ ಮಾಡಿದವರಿಗೆ ಗೌತಮ್ ಎಚ್ಚರಿಕೆ

Amruthadhare Serial: ಅಮೃತಧಾರೆ ಧಾರಾವಾಹಿಯಲ್ಲಿ 5 ವರ್ಷದ ಲೀಪ್ ನಂತರ ಗೌತಮ್-ಭೂಮಿಕಾ ಬೇರೆಯಾಗಿದ್ದರು. ಈಗ ಕುಶಾಲನಗರದಲ್ಲಿ ಮಗ ಆಕಾಶನ್ ಕಿಡ್ನ್ಯಾಪ್ ಆಗಿದ್ದು, ಗೌತಮ್ ಆತನನ್ನು ರಕ್ಷಿಸಿದ್ದಾನೆ. ಭೂಮಿಕಾ ಎದುರಿಸಿದ MLAಗೆ ಗೌತಮ್ ಖಡಕ್ ಉತ್ತರ ನೀಡಿದ್ದು, ಇಬ್ಬರೂ ಮತ್ತೆ ಒಂದಾಗುವ ಸುಳಿವು ನೀಡಿದೆ.

‘ಅವರ ಪಾಲಿನ ಕಾವಲುಗಾರ’; ಮಗನ ಕಿಡ್ನ್ಯಾಪ್ ಮಾಡಿದವರಿಗೆ ಗೌತಮ್ ಎಚ್ಚರಿಕೆ
ಅಮೃತಧಾರೆ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Sep 29, 2025 | 8:37 AM

Share

‘ಅಮೃತಧಾರೆ’ ಧಾರಾವಾಹಿಯಲ್ಲಿ ಫ್ಯಾನ್ಸ್​ಗೆ ಇಷ್ಟ ಆಗುವ  ರೀತಿಯಲ್ಲಿ ಟ್ವಿಸ್ಟ್​ಗಳನ್ನು ನೀಡಲಾಗುತ್ತಿದೆ. ಈಗಾಗಲೇ ಕಥೆ ಐದು ವರ್ಷ ಮುಂದಕ್ಕೆ ಹೋಗಿದೆ. ಗೌತಮ್ ಹಾಗೂ ಭೂಮಿಕಾ ಬೇರೆ ಆಗಿದ್ದಾರೆ. ಈಗ ಇವರನ್ನು ಒಂದು ಮಾಡುವ ರೀತಿಯಲ್ಲಿ ಕಥೆ ಮೂಡಿ ಬರುತ್ತಿದೆ. ಹೀಗಿರುವಾಗಲೇ ಗೌತಮ್ ಹಾಗೂ ಭೂಮಿಕಾ ಮಗ ಆಕಾಶನ್​ ಕಿಡ್ನ್ಯಾಪ್ ಮಾಡಲಾಗಿದೆ. ಅವನನ್ನು ಗೌತಮ್ ಕಾಪಾಡಿದ್ದಾನೆ. ಅಲ್ಲದೆ ಅಮ್ಮ ಮಗನ ಕಾಪಾಡುವ ಕಾವಲುಗಾರ ಎಂದು ಹೇಳಿದ್ದಾನೆ.

ಸದ್ಯ ‘ಅಮೃತಧಾರೆ’ ಧಾರಾವಾಹಿಯ ಕಥೆ ಸಾಗುತ್ತಿರುವುದು ಕುಶಾಲನಗರದಲ್ಲಿ. ಗೌತಮ್ ಭೂಮಿಕಾನಾ ಹುಡುಕುತ್ತಾ ಅಲ್ಲಿಗೆ ಹೋಗಿದ್ದಾನೆ. ಈ ವೇಳೆ ಆತನಿಗೆ ಭೂಮಿಕಾ ಹಾಗೂ ಮಗ ಸಿಕ್ಕಿದ್ದಾರೆ. ಇಬ್ಬರನ್ನೂ ಮತ್ತೆ ಸೇರಿಸಲು ವಿಧಿಯೇ ಸಂಚು ರೂಪಿಸಿದೆ ಎಂದೇ ಹೇಳಬಹುದು. ಇಬ್ಬರೂ ಹಾಯಾಗಿ ದೂರದಿಂದಲೇ ಖುಷಿ ಪಡುವಾಗ ಇವರ ಮಧ್ಯೆ ಎಂಎಲ್​ಎ ಆಗಮನ ಆಗಿದೆ.

ಇದನ್ನೂ ಓದಿ
Image
ನಾನು ಬಾಲ್ಯದಲ್ಲಿ ಕುಂದಾಪುರದ ಬಗ್ಗೆ ಕೇಳಿದ ಕಥೆ ಸಿನಿಮಾ ಆಗಿದೆ; JR NTR
Image
‘ಇನ್ಮುಂದೆ ಈ ರೀತಿಯ ವಿಡಿಯೋ ಬರಲ್ಲ’ ಎಂದ ಮಮ್ಮಿ ಅಶೋಕ್
Image
‘ಬಿಗ್ ಬಾಸ್’ ಮನೆ ಪ್ರವೇಶಿಸಿದ ಎಲ್ಲಾ ಸ್ಪರ್ಧಿಗಳ ಫೋಟೋ, ಹೆಸರು, ವಿವರ
Image
ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಮಧ್ಯೆ ಎಷ್ಟು ಸಾಮ್ಯತೆ ಇದೆ ನೋಡಿ

ಆ ಭಾಗದ ಎಂಎಲ್​ಎಯ ವಿರೋಧವನ್ನು ಭೂಮಿಕಾ ಕಟ್ಟಿಕೊಂಡಳು. ಎಂಎಲ್​ಎ ಮಗ ಕೆಟ್ಟ ಅಭ್ಯಾಸ ರೂಢಿಸಿಕೊಂಡಿದ್ದಾನೆ ಎಂದು ಆತನಿಗೆ ಎಚ್ಚರಿಸೋ ಕೆಲಸ ಮಾಡಿದಳು ಭೂಮಿಕಾ. ಇದು ತಪ್ಪು ಎಂದು ಆತನಿಗೆ ಭೂಮಿಕಾ ಹೇಳಿದಳು. ಇದು ಎಂಎಲ್​ಎ ಕೋಪಕ್ಕೆ ಕಾರಣ ಆಗಿದೆ. ಈ ಕಾರಣಕ್ಕೆ ಭೂಮಿಕಾ ಮಗನ ಕಿಡ್ನ್ಯಾಪ್ ಮಾಡಲಾಗಿದೆ.

View this post on Instagram

A post shared by Zee Kannada (@zeekannada)

ಕಿಡ್ನ್ಯಾಪ್ ಮಾಡುತ್ತಿದ್ದಂತೆ ಗೌತಮ್ ಅವರ ರಕ್ಷಣೆಗೆ ಹೋಗಿದ್ದಾನೆ. ಮಗುವನ್ನು ರಕ್ಷಣೆ ಮಾಡಿದ್ದಾನೆ. ‘ನಿನಗೂ ಇವರಿಗೂ ಏನು ಸಂಬಂಧ’ ಎಂದು ಎಂಎಲ್​ಎ ಕೇಳಿದ್ದಾನೆ. ಇದಕ್ಕೆ ಉತ್ತರಿಸಿದ ಗೌತಮ್, ‘ಗಂಡ ಹೆಂಡತಿ ಸಂಬಂಧ, ಅಪ್ಪ ಮಗನ ಸಂಬಂಧ. ಅವರನ್ನು ಕಾಪಾಡೋ ಕಾವಲುಗಾರ’ ಎಂದು ಗೌತಮ್ ಹೇಳಿದ್ದಾನೆ.

ಇದನ್ನೂ ಓದಿ: ರಾಕೆಟ್ ರೀತಿ ಏರಿತು ‘ಅಮೃತಧಾರೆ’ ಟಿಆರ್​ಪಿ; ಟಾಪ್ ಐದರಿಂದ ‘ನಾ ನಿನ್ನ ಬಿಡಲಾರೆ’ ಔಟ್

ಕಥೆಯಲ್ಲಿ ಗೌತಮ್ ಸಿಎಂ ಅಥವಾ ಇನ್ಯಾವುದೋ ಹಿರಿಯ ರಾಜಕಾರಣಿಗೆ ಕರೆ ಮಾಡಬಹುದು. ಕರೆ ಮಾಡಿ, ಎಂಎಲ್​ಎ ಅನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು. ಈ ಬಗ್ಗೆ ವೀಕ್ಷಕರಿಗೆ ಕುತೂಹಲ ಮೂಡಿದೆ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಇವರು ಬೇಗ ಒಂದಾಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.