AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇದಕ್ಕೆ ಕಡಿವಾಣ ಹಾಕದಿದ್ದರೆ ಕೆಲಸ ಹೋಗುತ್ತದೆ’; ಎಆರ್ ರೆಹಮಾನ್ ಆತಂಕ

ಪ್ರಸಿದ್ಧ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರು ತಮ್ಮ ಹಾಡುಗಳ ಅನಧಿಕೃತ ರಿಮಿಕ್ಸ್ ಮತ್ತು ಎಐ ಬಳಸಿ ಧ್ವನಿ ನಕಲು ಮಾಡುವುದನ್ನು ತೀವ್ರವಾಗಿ ಖಂಡಿಸಿದ್ದಾರೆ. ನೈತಿಕತೆಯನ್ನು ಉಲ್ಲಂಘಿಸುವ ಈ ಕೃತ್ಯಗಳಿಂದ ಸಂಗೀತಗಾರರಿಗೆ ಆರ್ಥಿಕ ಹಾನಿಯಾಗುವುದಲ್ಲದೆ, ಉದ್ಯೋಗ ನಷ್ಟವಾಗುವ ಸಾಧ್ಯತೆಯೂ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

‘ಇದಕ್ಕೆ ಕಡಿವಾಣ ಹಾಕದಿದ್ದರೆ ಕೆಲಸ ಹೋಗುತ್ತದೆ’; ಎಆರ್ ರೆಹಮಾನ್ ಆತಂಕ
ರೆಹಮಾನ್
TV9 Web
| Edited By: |

Updated on:Oct 25, 2024 | 2:29 PM

Share

ಮ್ಯೂಸಿಕ್ ಕಂಪೋಸರ್ ಎಆರ್ ರೆಹಮಾನ್ ಅವರು ಚಿತ್ರರಂಗದಲ್ಲಿ ಇದ್ದು 30 ವರ್ಷಗಳು ಕಳೆದಿವೆ. ಅವರು ಕಂಪೋಸ್ ಮಾಡಿರುವ ಸಾಂಗ್​ಗಳು ಸಾಕಷ್ಟಿವೆ. ಅವರ ಹಾಡುಗಳನ್ನು ಕೆಲವರು ಒಪ್ಪಿಗೆ ಇಲ್ಲದೆ ರಿಮಿಕ್ಸ್ ಮಾಡುತ್ತಿದ್ದಾರೆ. ಈ ಬಗ್ಗೆ ರೆಹಮಾನ್ ಅವರಿಗೆ ಬೇಸರ ಇದೆ. ಈ ವಿಚಾರವಾಗಿ ಎಆರ್​ ರೆಹಮಾನ್ ಅವರು ಮಾತನಾಡಿದ್ದಾರೆ. ಇದನ್ನು ಅವರು ಖಂಡಿದ್ದಾರೆ.

‘ನಾನು ಯಾವಾಗಲೂ ಎಥಿಕ್ಸ್​ನ ಫಾಲೋ ಮಾಡುತ್ತೇನೆ. ಮರುಕಲ್ಪನೆ ಹೆಸರಲ್ಲಿ ನೀವು ಸಿನಿಮಾದ ಹಾಡನ್ನು ತೆಗೆದುಕೊಂಡು ಅದನ್ನು ಆರು ವರ್ಷಗಳ ನಂತರ ಮತ್ತೊಂದು ಸಿನಿಮಾದಲ್ಲಿ ಬಳಸಲು ಸಾಧ್ಯವಿಲ್ಲ. ಯಾವುದೇ ಒಪ್ಪಿಗೆ ಇಲ್ಲದೆ ನೀವು ಹಾಡನ್ನು ರಿಮಿಕ್ಸ್ ಮಾಡಲು ಸಾಧ್ಯವಿಲ್ಲ. ಅದನ್ನು ಇನ್​ಸ್ಟಾಗ್ರಾಮ್​ನಲ್ಲಿ ಬೇಕಿದ್ದರೆ ಪೋಸ್ಟ್ ಮಾಡಬಹುದು. ಆದರೆ, ಮುಖ್ಯವಾಹಿನಿಗಳಲ್ಲಿ ನೀವು ಪೋಸ್ಟ್ ಮಾಡಬಾರದು’ ಎಂಬ ಅಭಿಪ್ರಾಯವನ್ನು ರೆಹಮಾನ್ ಹೊರಹಾಕಿದ್ದಾರೆ. ‘ಹಮ್ಮಾ ಹಮ್ಮಾ’ ಸೇರಿ ರೆಹಮಾನ್ ಅವರ ಅನೇಕ ಸಾಂಗ್​​ಗಳನ್ನು ಹಿಂದಿಯಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇವುಗಳನ್ನು ಒಪ್ಪಿಗೆ ಪಡೆದೇ ಮಾಡಲಾಗಿದೆ. ಒಪ್ಪಿಗೆ ಪಡೆಯದೆಯೂ ಅನೇಕ ಹಾಡುಗಳ ಬಳಕೆ ಆಗಿದೆ.

ಎಐ ಬಳಕೆ ಮಾಡಿಕೊಂಡು ಬೇರೆಯವರ ಧ್ವನಿಯನ್ನು ಸುಲಭದಲ್ಲಿ ಕಾಪಿ ಮಾಡಬಹುದು. ಯಾರದ್ದೋ ಧ್ವನಿಯನ್ನು ಇನ್ಯಾರಿಗೋ ಜೋಡಿಸಬಹುದು. ಇದರ ಫಲಿತಾಂಶ ಕೂಡ ಕರಾರುವಕ್ಕಾಗಿಯೇ ಇರುತ್ತದೆ. ಈ ಬಗ್ಗೆ ರೆಹಮಾನ್​ಗೆ ಆತಂಕ ಇದೆ. ‘ಎಐ ಎಂಬುದು ದೊಡ್ಡ ದೆವ್ವ. ಕೆಲವರು ಎಐ ಮೂಲಕ ಖ್ಯಾತ ನಾಮರ ಧ್ವನಿಯನ್ನು ಕಾಪಿ ಮಾಡುತ್ತಿದ್ದಾರೆ. ಇದರಿಂದ ಗಾಯಕರಿಗೆ ಯಾವುದೇ ಹಣ ಸಿಗುವುದಿಲ್ಲ. ಇದಕ್ಕೆ ಕಡಿವಾಣ ಹಾಕಲೇಬೇಕು. ಜನರು ಕೆಲಸ ಕಳೆದುಕೊಳ್ಳಬಹುದು’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಅಪ್ಪು ಸಿನಿಮಾಗೆ ರೆಹಮಾನ್ ಮ್ಯೂಸಿಕ್ ಮಾಡ್ತಾರೆ ಎಂದುಕೊಂಡಿದ್ದೆ’; ಹಳೆಯ ಘಟನೆ ನೆನೆದ ಗುರುಕಿರಣ್

‘ಎಐ ಮಾಸ್ಟರಿಂಗ್ ಪ್ರಕ್ರಿಯೆಯಲ್ಲಿ ಸಹಾಯ ಮಾಡಬಹುದು. ಆದರೆ, ಒಂದು ಟ್ಯೂನ್ ಹುಟ್ಟಲು ಹೃದಯ ಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ. ‘ಫೇಮಸ್ ಗಾಯಕರ ಹಾಡನ್ನು ಇನ್​ಸ್ಟಾಗ್ರಾಮ್​ನಲ್ಲಿ ರೀ ಕ್ರಿಯೇಟ್ ಮಾಡಲಾಗುತ್ತಿದೆ. ಇದು ಸರಿ ಅಲ್ಲ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:29 pm, Fri, 25 October 24

Follow Us
Web contact
Web contact

TV9 Kannada

Read More
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!