AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇದಕ್ಕೆ ಕಡಿವಾಣ ಹಾಕದಿದ್ದರೆ ಕೆಲಸ ಹೋಗುತ್ತದೆ’; ಎಆರ್ ರೆಹಮಾನ್ ಆತಂಕ

ಪ್ರಸಿದ್ಧ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರು ತಮ್ಮ ಹಾಡುಗಳ ಅನಧಿಕೃತ ರಿಮಿಕ್ಸ್ ಮತ್ತು ಎಐ ಬಳಸಿ ಧ್ವನಿ ನಕಲು ಮಾಡುವುದನ್ನು ತೀವ್ರವಾಗಿ ಖಂಡಿಸಿದ್ದಾರೆ. ನೈತಿಕತೆಯನ್ನು ಉಲ್ಲಂಘಿಸುವ ಈ ಕೃತ್ಯಗಳಿಂದ ಸಂಗೀತಗಾರರಿಗೆ ಆರ್ಥಿಕ ಹಾನಿಯಾಗುವುದಲ್ಲದೆ, ಉದ್ಯೋಗ ನಷ್ಟವಾಗುವ ಸಾಧ್ಯತೆಯೂ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

‘ಇದಕ್ಕೆ ಕಡಿವಾಣ ಹಾಕದಿದ್ದರೆ ಕೆಲಸ ಹೋಗುತ್ತದೆ’; ಎಆರ್ ರೆಹಮಾನ್ ಆತಂಕ
ರೆಹಮಾನ್
TV9 Web
| Edited By: |

Updated on:Oct 25, 2024 | 2:29 PM

Share

ಮ್ಯೂಸಿಕ್ ಕಂಪೋಸರ್ ಎಆರ್ ರೆಹಮಾನ್ ಅವರು ಚಿತ್ರರಂಗದಲ್ಲಿ ಇದ್ದು 30 ವರ್ಷಗಳು ಕಳೆದಿವೆ. ಅವರು ಕಂಪೋಸ್ ಮಾಡಿರುವ ಸಾಂಗ್​ಗಳು ಸಾಕಷ್ಟಿವೆ. ಅವರ ಹಾಡುಗಳನ್ನು ಕೆಲವರು ಒಪ್ಪಿಗೆ ಇಲ್ಲದೆ ರಿಮಿಕ್ಸ್ ಮಾಡುತ್ತಿದ್ದಾರೆ. ಈ ಬಗ್ಗೆ ರೆಹಮಾನ್ ಅವರಿಗೆ ಬೇಸರ ಇದೆ. ಈ ವಿಚಾರವಾಗಿ ಎಆರ್​ ರೆಹಮಾನ್ ಅವರು ಮಾತನಾಡಿದ್ದಾರೆ. ಇದನ್ನು ಅವರು ಖಂಡಿದ್ದಾರೆ.

‘ನಾನು ಯಾವಾಗಲೂ ಎಥಿಕ್ಸ್​ನ ಫಾಲೋ ಮಾಡುತ್ತೇನೆ. ಮರುಕಲ್ಪನೆ ಹೆಸರಲ್ಲಿ ನೀವು ಸಿನಿಮಾದ ಹಾಡನ್ನು ತೆಗೆದುಕೊಂಡು ಅದನ್ನು ಆರು ವರ್ಷಗಳ ನಂತರ ಮತ್ತೊಂದು ಸಿನಿಮಾದಲ್ಲಿ ಬಳಸಲು ಸಾಧ್ಯವಿಲ್ಲ. ಯಾವುದೇ ಒಪ್ಪಿಗೆ ಇಲ್ಲದೆ ನೀವು ಹಾಡನ್ನು ರಿಮಿಕ್ಸ್ ಮಾಡಲು ಸಾಧ್ಯವಿಲ್ಲ. ಅದನ್ನು ಇನ್​ಸ್ಟಾಗ್ರಾಮ್​ನಲ್ಲಿ ಬೇಕಿದ್ದರೆ ಪೋಸ್ಟ್ ಮಾಡಬಹುದು. ಆದರೆ, ಮುಖ್ಯವಾಹಿನಿಗಳಲ್ಲಿ ನೀವು ಪೋಸ್ಟ್ ಮಾಡಬಾರದು’ ಎಂಬ ಅಭಿಪ್ರಾಯವನ್ನು ರೆಹಮಾನ್ ಹೊರಹಾಕಿದ್ದಾರೆ. ‘ಹಮ್ಮಾ ಹಮ್ಮಾ’ ಸೇರಿ ರೆಹಮಾನ್ ಅವರ ಅನೇಕ ಸಾಂಗ್​​ಗಳನ್ನು ಹಿಂದಿಯಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇವುಗಳನ್ನು ಒಪ್ಪಿಗೆ ಪಡೆದೇ ಮಾಡಲಾಗಿದೆ. ಒಪ್ಪಿಗೆ ಪಡೆಯದೆಯೂ ಅನೇಕ ಹಾಡುಗಳ ಬಳಕೆ ಆಗಿದೆ.

ಎಐ ಬಳಕೆ ಮಾಡಿಕೊಂಡು ಬೇರೆಯವರ ಧ್ವನಿಯನ್ನು ಸುಲಭದಲ್ಲಿ ಕಾಪಿ ಮಾಡಬಹುದು. ಯಾರದ್ದೋ ಧ್ವನಿಯನ್ನು ಇನ್ಯಾರಿಗೋ ಜೋಡಿಸಬಹುದು. ಇದರ ಫಲಿತಾಂಶ ಕೂಡ ಕರಾರುವಕ್ಕಾಗಿಯೇ ಇರುತ್ತದೆ. ಈ ಬಗ್ಗೆ ರೆಹಮಾನ್​ಗೆ ಆತಂಕ ಇದೆ. ‘ಎಐ ಎಂಬುದು ದೊಡ್ಡ ದೆವ್ವ. ಕೆಲವರು ಎಐ ಮೂಲಕ ಖ್ಯಾತ ನಾಮರ ಧ್ವನಿಯನ್ನು ಕಾಪಿ ಮಾಡುತ್ತಿದ್ದಾರೆ. ಇದರಿಂದ ಗಾಯಕರಿಗೆ ಯಾವುದೇ ಹಣ ಸಿಗುವುದಿಲ್ಲ. ಇದಕ್ಕೆ ಕಡಿವಾಣ ಹಾಕಲೇಬೇಕು. ಜನರು ಕೆಲಸ ಕಳೆದುಕೊಳ್ಳಬಹುದು’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಅಪ್ಪು ಸಿನಿಮಾಗೆ ರೆಹಮಾನ್ ಮ್ಯೂಸಿಕ್ ಮಾಡ್ತಾರೆ ಎಂದುಕೊಂಡಿದ್ದೆ’; ಹಳೆಯ ಘಟನೆ ನೆನೆದ ಗುರುಕಿರಣ್

‘ಎಐ ಮಾಸ್ಟರಿಂಗ್ ಪ್ರಕ್ರಿಯೆಯಲ್ಲಿ ಸಹಾಯ ಮಾಡಬಹುದು. ಆದರೆ, ಒಂದು ಟ್ಯೂನ್ ಹುಟ್ಟಲು ಹೃದಯ ಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ. ‘ಫೇಮಸ್ ಗಾಯಕರ ಹಾಡನ್ನು ಇನ್​ಸ್ಟಾಗ್ರಾಮ್​ನಲ್ಲಿ ರೀ ಕ್ರಿಯೇಟ್ ಮಾಡಲಾಗುತ್ತಿದೆ. ಇದು ಸರಿ ಅಲ್ಲ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:29 pm, Fri, 25 October 24

ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ಸನ್​ರೂಫ್ ಬಳಿ ನಿಂತು ಕೈ ಬೀಸುತ್ತಿದ್ದಾಗ ಬ್ರೇಕ್ ಹಾಕಿದ ಕಾರು
ಸನ್​ರೂಫ್ ಬಳಿ ನಿಂತು ಕೈ ಬೀಸುತ್ತಿದ್ದಾಗ ಬ್ರೇಕ್ ಹಾಕಿದ ಕಾರು
ಡ್ರಗ್ಸ್​ ದಂಧೆಕೋರರಿಗೆ ಶಾಕ್​: 3 ಕೆ.ಜಿ. MDMA ಸೀಜ್​, ಇಬ್ಬರು ಅರೆಸ್ಟ್​
ಡ್ರಗ್ಸ್​ ದಂಧೆಕೋರರಿಗೆ ಶಾಕ್​: 3 ಕೆ.ಜಿ. MDMA ಸೀಜ್​, ಇಬ್ಬರು ಅರೆಸ್ಟ್​