ಆಕೆಗೆ ನಾನು ಬೇಕು, ಆದ್ರೆ ಅದು ಸಾಧ್ಯವಿಲ್ಲ: ತಬು ಮದುವೆ ಆಗದೇ ಇರಲು ಕಾರಣ ತಿಳಿದ ಅಜಯ್ ದೇವಗನ್

52 ವರ್ಷದ ಬಾಲಿವುಡ್ ನಟಿ ತಬು ಅವರು ಇನ್ನೂ ಮದುವೆಯಾಗಿಲ್ಲ. ಅವರ ಸ್ನೇಹಿತ ಅಜಯ್ ದೇವಗನ್ ಅವರು ಒಂದು ಹಳೆಯ ಸಂದರ್ಶನದಲ್ಲಿ ತಬು ಮದುವೆಯಾಗದಿರುವ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಶನದ ವಿಡಿಯೋ ತುಣುಕು ಈಗ ವೈರಲ್ ಆಗಿದೆ. ‘ತಬುಗೆ ನಾನೇ ಬೇಕು’ ಎಂದು ಹೇಳಿ ಅಜಯ್ ನಗುತ್ತಾರೆ. ಆದರೆ ಇಡೀ ಪ್ರಪಂಚದಲ್ಲಿ ತನ್ನಂತೆ ಬೇರೆ ಯಾರೂ ಇಲ್ಲ ಎಂದು ಕೂಡ ಅವರು ಹೇಳುತ್ತಾರೆ.

ಆಕೆಗೆ ನಾನು ಬೇಕು, ಆದ್ರೆ ಅದು ಸಾಧ್ಯವಿಲ್ಲ: ತಬು ಮದುವೆ ಆಗದೇ ಇರಲು ಕಾರಣ ತಿಳಿದ ಅಜಯ್ ದೇವಗನ್
ಅಜಯ್ ದೇವಗನ್, ತಬು
Follow us
|

Updated on: Oct 25, 2024 | 3:21 PM

ಬಾಲಿವುಡ್ ನಟಿ ತಬು ಅವರಿಗೆ ಈಗ 52 ವರ್ಷ. ಹಾಗಿದ್ದರೂ ಕೂಡ ಅವರು ಮದುವೆ ಆಗಿಲ್ಲ. ಬಣ್ಣದ ಲೋಕದಲ್ಲಿ ಅವರಿಗೆ ತುಂಬ ಬೇಡಿಕೆ ಇದೆ. ಹಲವಾರ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದಾರೆ. ಬಾಲಿವುಡ್ ನಟ ಅಜಯ್ ದೇವಗನ್ ಜೊತೆ ತಬು ಅವರಿಗೆ ಆಪ್ತತೆ ಇದೆ. ಅನೇಕ ಸಿನಿಮಾಗಳಲ್ಲಿ ಅವರಿಬ್ಬರು ಜೊತೆಯಾಗಿ ನಟಿಸಿದ್ದಾರೆ. ಅಷ್ಟಕ್ಕೂ ತಬು ಅವರು ಇಷ್ಟ ವರ್ಷಗಳು ಕಳೆದರೂ ಮದುವೆ ಆಗದೇ ಇರಲು ಕಾರಣ ಏನು? ಆ ಬಗ್ಗೆ ಹಳೆಯ ಸಂದರ್ಶನವೊಂದರಲ್ಲಿ ಅಜಯ್ ದೇವಗನ್ ಅವರು ಮಾತನಾಡಿದ್ದರು. ಆ ಸಂದರ್ಶನದ ವಿಡಿಯೋ ತುಣುಕು ಈಗ ಮತ್ತೆ ವೈರಲ್ ಆಗುತ್ತಿದೆ.

‘ದೇ ದೇ ಪ್ಯಾರ್ ದೇ’ ಸಿನಿಮಾ 2019ರಲ್ಲಿ ಬಿಡುಗಡೆ ಆಗಿತ್ತು. ಆ ಸಿನಿಮಾದಲ್ಲಿ ತಬು ಮತ್ತು ಅಜಯ್ ದೇವಗನ್ ಅವರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದರು. ಆ ಚಿತ್ರದ ಪ್ರಚಾರದ ವೇಳೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಟಬು ಮದುವೆ ಬಗ್ಗೆ ಪ್ರಸ್ತಾಪ ಆಯಿತು. ತಬು ಯಾಕೆ ಇಂದಿಗೂ ಸಿಂಗಲ್ ಆಗಿದ್ದಾರೆ ಎಂಬ ವಿಷಯಕ್ಕೆ ಅಜಯ್ ದೇವಗನ್ ಅವರು ಪ್ರತಿಕ್ರಿಯೆ ನೀಡಿದ್ದರು.

ಇದನ್ನೂ ಓದಿ: ಅಜಯ್ ದೇವಗನ್​ಗೆ ನಮಸ್ಕಾರ ಮಾಡಿಲ್ಲ ಅಂತ ಹಿರಿಯ ನಟನನ್ನೇ ಸಿನಿಮಾದಿಂದ ತೆಗೆದ ನಿರ್ಮಾಪಕ

‘ತಬು ಮದುವೆ ಆಗಬೇಕು ಅಂದರೆ ನೀವು ಹುಡುಗನನ್ನು ಹೇಗೆ ಹುಡುಕುತ್ತೀರಿ? ತಬುಗೆ ಯಾವ ರೀತಿಯ ಹುಡುಗ ಬೇಕು ಅಂತ ನನಗೆ ಪ್ರಶ್ನೆ ಕೇಳಿದ್ದರು. ಅದಕ್ಕೆ ನಾನು ಉತ್ತರಿಸಿದ್ದೆ. ತಬುಗೆ ನಾನು ಬೇಕು. ಆದರೆ ಆಕೆಗೆ ನಾನು ಸಿಗುವುದಿಲ್ಲ’ ಎಂದು ಹೇಳಿ ಅಜಯ್ ದೇವಗನ್ ಅವರು ನಕ್ಕಿದ್ದರು. ಅವರ ಮಾತು ಕೇಳಿ ತಬು ಕೂಡ ನಗುನಗುತ್ತಲೇ ಹುಸಿ ಕೋಪ ಮಾಡಿಕೊಂಡರು.

View this post on Instagram

A post shared by ehsas (@eh_sas12)

ಅಜಯ್​ ದೇವಗನ್ ಅವರು ತಮ್ಮ ಮಾತಿಗೆ ಕೂಡಲೇ ಸ್ಪಷ್ಟನೆ ನೀಡಿದರು. ‘ನಾನು ಬೇಕು ಅಂದರೆ, ನನ್ನ ರೀತಿಯ ಹುಡುಗ ಬೇಕು ಅಂತ. ಆದರೆ ಇಡೀ ಪ್ರಪಂಚದಲ್ಲಿ ನನ್ನ ರೀತಿ ಬೇರೆ ಯಾರೂ ಇಲ್ಲ’ ಎಂದು ಅಜಯ್​ ದೇವಗನ್ ಹೇಳಿದರು. ‘ನೀವು ಹೇಳಿದ್ದು ನನಗೆ ಅರ್ಥ ಆಯ್ತು’ ಎನ್ನುತ್ತಾ ಅಜಯ್ ದೇವಗನ್ ಕೈಗೆ ತಬು ಕಿಸ್ ಮಾಡಿದರು. ತಬು ಮತ್ತು ಅಜಯ್ ದೇವಗನ್ ಅವರು ಫ್ಯಾಮಿಲಿ ಫ್ರೆಂಡ್ಸ್​ ಕೂಡ ಹೌದು. ಅವರಿಬ್ಬರ ಒಡನಾಟ ಹಲವು ವರ್ಷಗಳದ್ದು. ಸಂದರ್ಶನದಲ್ಲಿ ಅವರಿಬ್ಬರ ನಡುವೆ ನಡೆದ ಮಾತುಕಥೆ ಕೇವಲ ತಮಾಷೆಯಾಗಿತ್ತು. ಆದರೆ ತಬು ಸಿಂಗಲ್ ಆಗಿ ಉಳಿದುಕೊಳ್ಳಲು ಕಾರಣ ಏನು ಎಂಬುದು ಕಡೆಗೂ ಬಹಿರಂಗ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಯೋಗೇಶ್ವರ್​ಗೆ ಟಿಕೆಟ್ ನೀಡದ್ದು ಬಿಜೆಪಿಯಲ್ಲಿ ಅಸಮಾಧಾನಕ್ಕೆ ಕಾರಣವಾಯಿತೇ?
ಯೋಗೇಶ್ವರ್​ಗೆ ಟಿಕೆಟ್ ನೀಡದ್ದು ಬಿಜೆಪಿಯಲ್ಲಿ ಅಸಮಾಧಾನಕ್ಕೆ ಕಾರಣವಾಯಿತೇ?
ಹಾಸನಾಂಬೆಯ ದರ್ಶನಕ್ಕೆ ಬೆಳಗ್ಗೆ 4 ಗಂಟೆಯಿಂದ ಸರತಿ ಸಾಲಲ್ಲಿ ಭಕ್ತರ ದಂಡು
ಹಾಸನಾಂಬೆಯ ದರ್ಶನಕ್ಕೆ ಬೆಳಗ್ಗೆ 4 ಗಂಟೆಯಿಂದ ಸರತಿ ಸಾಲಲ್ಲಿ ಭಕ್ತರ ದಂಡು
ಗೋಕಾಕ್: ಭಾರಿ ಮಳೆಗೆ ತುಂಬಿ ಹರಿದ ಹಳ್ಳ ದಾಟಲು ಜೆಸಿಬಿ ಏರಿದ ಶಾಲೆ ಮಕ್ಕಳು
ಗೋಕಾಕ್: ಭಾರಿ ಮಳೆಗೆ ತುಂಬಿ ಹರಿದ ಹಳ್ಳ ದಾಟಲು ಜೆಸಿಬಿ ಏರಿದ ಶಾಲೆ ಮಕ್ಕಳು
KSRTC ಬಸ್​ನಲ್ಲಿ ಚಪ್ಪಲಿಯಿಂದ ಹೊಡೆದಾಡಿಕೊಂಡ ಮಹಿಳೆಯರು
KSRTC ಬಸ್​ನಲ್ಲಿ ಚಪ್ಪಲಿಯಿಂದ ಹೊಡೆದಾಡಿಕೊಂಡ ಮಹಿಳೆಯರು
ಕಿವೀಸ್ ಬ್ಯಾಟರ್ ಎದುರು ಹಿಂದಿಯಲ್ಲಿ ಮಾತನಾಡಿ ಪೇಚಿಗೆ ಸಿಲುಕಿದ ಪಂತ್
ಕಿವೀಸ್ ಬ್ಯಾಟರ್ ಎದುರು ಹಿಂದಿಯಲ್ಲಿ ಮಾತನಾಡಿ ಪೇಚಿಗೆ ಸಿಲುಕಿದ ಪಂತ್
ಮುಡಾ ಪ್ರಕರಣ; ಕೋರ್ಟ್ ಆದೇಶ ಮರುಪರಿಶೀಲನೆ ಕೋರುವ ಅವಕಾಶವಿದೆ: ಪರಮೇಶ್ವರ್
ಮುಡಾ ಪ್ರಕರಣ; ಕೋರ್ಟ್ ಆದೇಶ ಮರುಪರಿಶೀಲನೆ ಕೋರುವ ಅವಕಾಶವಿದೆ: ಪರಮೇಶ್ವರ್
1 ರನ್​ಗೆ ಸುಸ್ತಾದ ಕೊಹ್ಲಿ; ಹಳೆಯ ದೌರ್ಬಲ್ಯಕ್ಕೆ ಮತ್ತೊಮ್ಮೆ ಬಲಿ
1 ರನ್​ಗೆ ಸುಸ್ತಾದ ಕೊಹ್ಲಿ; ಹಳೆಯ ದೌರ್ಬಲ್ಯಕ್ಕೆ ಮತ್ತೊಮ್ಮೆ ಬಲಿ
ಫೂಜೆಯಲ್ಲಿ ನಿಖಿಲ್ ಪತ್ನಿ ರೇವತಿ ಮತ್ತು ಹೆಚ್ ಡಿ ಕುಮಾರಸ್ವಾಮಿ ಸಹ ಭಾಗಿ
ಫೂಜೆಯಲ್ಲಿ ನಿಖಿಲ್ ಪತ್ನಿ ರೇವತಿ ಮತ್ತು ಹೆಚ್ ಡಿ ಕುಮಾರಸ್ವಾಮಿ ಸಹ ಭಾಗಿ
ಹಾಸನಾಂಬೆ ದರ್ಶನಕ್ಕೆ ಹೇಗಿದೆ ವ್ಯವಸ್ಥೆ? ಭಕ್ತರು ಹೇಳೋದೇನು ನೋಡಿ
ಹಾಸನಾಂಬೆ ದರ್ಶನಕ್ಕೆ ಹೇಗಿದೆ ವ್ಯವಸ್ಥೆ? ಭಕ್ತರು ಹೇಳೋದೇನು ನೋಡಿ
ಬಿಜೆಪಿ ಪ್ರಬಲ ಪ್ರತಿಸ್ಪರ್ಧಿ ಎಂದಿದ್ದ ನನಗೆ ಟಿಕೆಟ್ ವಂಚಿಸಲಾಗಿದೆ: ಖಾದ್ರಿ
ಬಿಜೆಪಿ ಪ್ರಬಲ ಪ್ರತಿಸ್ಪರ್ಧಿ ಎಂದಿದ್ದ ನನಗೆ ಟಿಕೆಟ್ ವಂಚಿಸಲಾಗಿದೆ: ಖಾದ್ರಿ