ಪವನ್ ಕಲ್ಯಾಣ್​ 4ನೇ ಮದುವೆಯಾಗ್ತಾರೆ, ರಾಜಕೀಯದಲ್ಲಿ ಏಳ್ಗೆಯಿಲ್ಲ: ವೇಣು ಸ್ವಾಮಿ ಭವಿಷ್ಯ

Pawan Kalyan: ನಟ ಪವನ್ ಕಲ್ಯಾಣ್​ ಈಗಾಗಲೇ ಮೂರು ಮದುವೆಯಾಗಿದ್ದಾರೆ. ಆದರೆ ಪವನ್​ರ ವೈವಾಹಿಕ ಜೀವನದ ಬಗ್ಗೆ ಭವಿಷ್ಯ ನುಡಿದಿರುವ ವೇಣುಸ್ವಾಮಿ, ಪವನ್​ ಮತ್ತೆ ಮದುವೆ ಆಗಲಿದ್ದಾರೆ ಎಂದಿದ್ದಾರೆ.

ಪವನ್ ಕಲ್ಯಾಣ್​ 4ನೇ ಮದುವೆಯಾಗ್ತಾರೆ, ರಾಜಕೀಯದಲ್ಲಿ ಏಳ್ಗೆಯಿಲ್ಲ: ವೇಣು ಸ್ವಾಮಿ ಭವಿಷ್ಯ
ಪವನ್ ಕಲ್ಯಾಣ್
Follow us
|

Updated on: Jan 05, 2024 | 8:57 PM

ತೆಲುಗು ರಾಜ್ಯಗಳ ಸೆಲೆಬ್ರಿಟಿ ಜ್ಯೋತಿಷಿ (Astrologer) ಎನಿಸಿಕೊಂಡಿರುವ ವೇಣು ಸ್ವಾಮಿ, ತೆಲುಗಿನ ಜನಪ್ರಿಯ ಸ್ಟಾರ್ ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ (Pawan Kalyan) ಕುರಿತು ಭವಿಷ್ಯ ನುಡಿದಿದ್ದಾರೆ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಪವನ್ ಕಲ್ಯಾಣ್​ರ ಖಾಸಗಿ ಜೀವನ, ರಾಜಕೀಯ ಜೀವನದ ಬಗ್ಗೆ ವೇಣು ಸ್ವಾಮಿ ಮಾತನಾಡಿದ್ದಾರೆ. ಪವನ್ ಕಲ್ಯಾಣ್ ಮುಂದೆ ಏನು ಮಾಡಿದರೆ ಅವರ ಜಿವನದಲ್ಲಿ ಏಳ್ಗೆ ಇರುತ್ತದೆ ಎಂಬ ಬಗ್ಗೆಯೂ ಭವಿಷ್ಯ ಹೇಳಿದ್ದಾರೆ.

ಪವನ್ ಕಲ್ಯಾಣ್ ರ ರಾಜಕೀಯ ವಿರೋಧಿಗಳು ಅವರ ಮೂರು ಮದುವೆ ವಿಷಯವನ್ನು ಸದಾ ಪವನ್​ರ ವಿರುದ್ಧ ಅಸ್ತ್ರವಾಗಿ ಬಳಸುತ್ತಿರುತ್ತಾರೆ. ಪವನ್​ಗೆ ಈಗಾಗಲೇ ಮೂರು ಮದುವೆಗಳಾಗಿವೆ, ಮೂರನೇ ಪತ್ನಿಗೂ ವಿಚ್ಛೇದನ ನೀಡಿ ನಾಲ್ಕನೇ ಮದುವೆ ಆಗಲು ತಯಾರಾಗಿದ್ದಾರೆ ಎಂದು ಕೆಲವು ದಿನಗಳ ಹಿಂದಷ್ಟೆ ವೈಸಿಪಿ ಪಕ್ಷದ ಮುಖಂಡರೊಬ್ಬರು ವಾಗ್ದಾಳಿ ನಡೆಸಿದ್ದರು. ಈ ಬಗ್ಗೆ ಮಾತನಾಡಿರುವ ವೇಣು ಸ್ವಾಮಿ, ‘ಈ ವರ್ಷದ ಜೂನ್ ವರೆಗೆ ಆ ರೀತಿಯ ಘಟನೆಗಳು ನಡೆಯುವುದಿಲ್ಲ ಆದರೆ ಜೂನ್ ತಿಂಗಳ ನಂತರ ಪವನ್ ಕಲ್ಯಾಣ್ ತಮ್ಮ ಮೂರನೇ ಪತ್ನಿಗೆ ವಿಚ್ಛೇದನ ನೀಡಿ ನಾಲ್ಕನೇ ಮದುವೆ ಆಗುವ ಸಾಧ್ಯತೆ ಇದೆ’ ಎಂದಿದ್ದಾರೆ.

ಅವರ ಖಾಸಗಿ ಜೀವನದಲ್ಲಿ ಬಹಳಷ್ಟು ಏರು-ಪೇರುಗಳು ಜೂನ್ ತಿಂಗಳ ಬಳಿಕ ನಡೆಯಲಿವೆ ಎಂದಿರುವ ವೇಣು ಸ್ವಾಮಿ, ಪವನ್​ ಹಠಾತ್ತನೆ ನಿರ್ಣಯ ತೆಗೆದುಕೊಳ್ಳುವ ವ್ಯಕ್ತಿ. ಅವರ ಎಲ್ಲ ನಿರ್ಣಯಗಳು ಹೃದಯದಿಂದ ಬಂದಿರುತ್ತವೆ, ಯೋಚನೆ ಮಾಡುವುದಿಲ್ಲ ಹಾಗಾಗಿ ಹಲವು ತಪ್ಪುಗಳನ್ನು ಅವರು ಜೀವನದಲ್ಲಿ ಮಾಡುತ್ತಾ ಬಂದಿದ್ದಾರೆ ಮುಂದೆಯೂ ಮಾಡುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ:ಪವನ್ ಕಲ್ಯಾಣ್ ಆಸ್ತಿ ಎಷ್ಟು? ಇರುವ ಸಾಲವೆಷ್ಟು?

ಪವನ್ ಕಲ್ಯಾಣ್ ರಾಜಕೀಯ ಜೀವನದ ಬಗ್ಗೆ ಮಾತನಾಡಿರುವ ವೇಣು ಸ್ವಾಮಿ, ‘ಪವನ್ ಕಲ್ಯಾಣ್​ಗೆ ರಾಜಕೀಯದಲ್ಲಿ ಯೋಗವಿಲ್ಲ. ಅವರು ರಾಜಕೀಯದಿಂದ ಆದಷ್ಟು ಶೀಘ್ರವೇ ದೂರವಾದರೆ ಒಳ್ಳೆಯದು. ಆದರೆ ಅವರಿಗೆ ಸಿನಿಮಾ ರಂಗದಲ್ಲಿ ಎದುರಾಳಿಯೇ ಇಲ್ಲ. ಈ ವಿಚಾರದಲ್ಲಿ ರಜನೀಕಾಂತ್ ಹಾಗೂ ಪವನ್​ರದ್ದು ಒಂದೇ ರೀತಿಯ ಗ್ರಹಗತಿ. ಇಬ್ಬರಿಗೂ ರಾಜಕೀಯದಲ್ಲಿ ಏಳ್ಗೆಯಿಲ್ಲ ಆದರೆ ಸಿನಿಮಾದಲ್ಲಿ ಎದುರೇ ಇಲ್ಲ’ ಎಂದಿದ್ದಾರೆ ವೇಣು ಸ್ವಾಮಿ.

ವೇಣು ಸ್ವಾಮಿ ತೆಲುಗು ರಾಜ್ಯಗಳ ಸೆಲೆಬ್ರಿಟಿ ಜ್ಯೋತಿಷಿ, ರಶ್ಮಿಕಾ ಮಂದಣ್ಣ ಸಹ ಇವರ ಬಳಿ ವಿಶೇಷ ಪೂಜೆ ಮಾಡಿಸಿಕೊಂಡಿದ್ದರು. ಆ ಬಳಿಕ ಅವರ ವೃತ್ತಿ ಜೀವನದಲ್ಲಿ ಭಾರಿ ಜಿಗಿತ ಉಂಟಾಯ್ತು. ಹಲವು ಸ್ಟಾರ್ ನಟರ ಸಿನಿಮಾಗಳಿಗೆ ಮುಹೂರ್ತ ನೆರವೇರಿಸಿದ್ದಾರೆ. ಚಂದ್ರಬಾಬು ನಾಯ್ಡು ಸರ್ಕಾರದಲ್ಲಿ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ಪೂಜೆ ಮಾಡಿದವರು ಇವರೇ. ಸೆಲೆಬ್ರಿಟಿಗಳ ಭವಿಷ್ಯ ಹೇಳುವ ವೇಣು ಸ್ವಾಮಿ, ಸಮಂತಾ-ನಾಗಚೈತನ್ಯ ವಿಚ್ಛೇದನ ಪಡೆದುಕೊಳ್ಳುತ್ತಾರೆಂದು ಮೊದಲೇ ನುಡಿದಿದ್ದರು. ಇದೀಗ ರಶ್ಮಿಕಾ-ವಿಜಯ್ ಮದುವೆಯಾದರೆ ಅವರೂ ಸಹ ವಿಚ್ಛೇದನ ಪಡೆದುಕೊಳ್ಳುತ್ತಾರೆ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ