AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಯಾಲಿಟಿ ಶೋನಲ್ಲೇ ನಟಿಗೆ ಪ್ರಪೋಸ್​ ಮಾಡಿದ್ದ ಕಿರುತೆರೆ ನಟ; ಲಾಕ್​ಡೌನ್​ನಿಂದ ಮುರಿದು ಬಿತ್ತು ಸಂಬಂಧ

ಹಿಂದಿ ಕಿರುತೆರೆ ನಟ ಅವಿನಾಶ್​ ಸಚ್​ದೇವ್​ ಅವರು ನಟಿ ಪಲಕಾ​ ಪುರ್​ಸ್ವಾಮಿ ಜತೆ ಪ್ರೀತಿಯಲ್ಲಿದ್ದರು. 2018ರಲ್ಲಿ ಕಾರ್ಯಕ್ರಮವೊಂದರಲ್ಲಿ ಮೊದಲ ಬಾರಿಗೆ ಭೇಟಿ ಆಗಿದ್ದ ಇಬ್ಬರೂ ನಂತರ ಗೆಳೆಯರಾಗಿದ್ದರು.

ರಿಯಾಲಿಟಿ ಶೋನಲ್ಲೇ ನಟಿಗೆ ಪ್ರಪೋಸ್​ ಮಾಡಿದ್ದ ಕಿರುತೆರೆ ನಟ; ಲಾಕ್​ಡೌನ್​ನಿಂದ ಮುರಿದು ಬಿತ್ತು ಸಂಬಂಧ
ರಿಯಾಲಿಟಿ ಶೋನಲ್ಲೇ ನಟಿಗೆ ಪ್ರಪೋಸ್​ ಮಾಡಿದ್ದ ಕಿರುತೆರೆ ನಟ; ಲಾಕ್​ಡೌನ್​ನಿಂದ ಮುರಿದು ಬಿತ್ತು ಸಂಬಂಧ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jul 15, 2021 | 7:02 PM

ಲಾಕ್​ಡೌನ್​ನಿಂದ ಸಾಕಷ್ಟು ಸಂಬಂಧಗಳು ಮುರಿದು ಬಿದ್ದಿವೆ. ಒಬ್ಬರನ್ನೊಬ್ಬರು ಭೇಟಿ ಮಾಡಲು ಸಾಧ್ಯವಾಗದೆ ರಿಲೇಶನ್​ಶಿಪ್​ ಕೊನೆಗೊಂಡ ಉದಾಹರಣೆ ಸಾಕಷ್ಟಿದೆ. ಈಗ ಸೆಲೆಬ್ರಿಟಿ ಜೋಡಿಯೊಂದು ಲಾಕ್​ಡೌನ್​ ಕಾರಣ ನೀಡಿ ದೂರವಾಗುತ್ತಿದೆ. ಈ ವಿಚಾರವನ್ನು ಕಿರುತೆರೆ ನಟ ಖಚಿತಪಡಿಸಿದ್ದಾರೆ.

ಹಿಂದಿ ಕಿರುತೆರೆ ನಟ ಅವಿನಾಶ್​ ಸಚ್​ದೇವ್​ ಅವರು ನಟಿ ಪಲಕಾ​ ಪುರ್​ಸ್ವಾಮಿ ಜತೆ ಪ್ರೀತಿಯಲ್ಲಿದ್ದರು. 2018ರಲ್ಲಿ ಕಾರ್ಯಕ್ರಮವೊಂದರಲ್ಲಿ ಮೊದಲ ಬಾರಿಗೆ ಭೇಟಿ ಆಗಿದ್ದ ಇಬ್ಬರೂ ನಂತರ ಗೆಳೆಯರಾಗಿದ್ದರು. ಇವರ ಗೆಳೆತನ ಪ್ರೀತಿಗೆ ತಿರುಗಿತ್ತು.  ‘ನಚ್​ ಬಲಿಯೇ ಸೀಸನ್​ 9’ರಲ್ಲಿ ರಿಯಾಲಿಟಿಶೋನಲ್ಲಿ ಅವಿನಾಶ್ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದರು​ . ಆ ಬಳಿಕ ಇಬ್ಬರೂ ರೋಕಾ ಕಾರ್ಯಕ್ರಮವನ್ನೂ ಮಾಡಿಕೊಂಡಿದ್ದರು. ಈಗ ಇವರ ಸಂಬಂಧ ಮುರಿದು ಬಿದ್ದಿದೆ ಎನ್ನುವ ಮಾತು ಕೇಳಿ ಬಂದಿತ್ತು. ಇದು ನಿಜ ಎಂದು ವಿಶಾಲ್​ ಒಪ್ಪಿಕೊಂಡಿದ್ದಾರೆ.

‘ನಮ್ಮಿಬ್ಬರ ನಡುವೆ ನಂಬಿಕೆ ವಿಚಾರದಲ್ಲಿ ಸಮಸ್ಯೆ ಆಗಿದೆ. ಹೀಗಾಗಿ ತಾತ್ಕಾಲಿಕವಾಗಿ ನಮ್ಮ ಸಂಬಂಧಕ್ಕೆ ವಿರಾಮ ಹಾಕುತ್ತಿದ್ದೇವೆ. ಹಾಗಂತ ಇದು ಪೂರ್ಣ ವಿರಾಮ ಅಲ್ಲ. ನಮ್ಮಿಬ್ಬರ ನಡುವೆ ವೈಮನಸ್ಸು ಬೆಳೆಯೋಕೆ ಕಾರಣ ಲಾಕ್​ಡೌನ್​. ಇಬ್ಬರೂ ಒಟ್ಟಾಗಿ ಸಮಯ ಕಳೆಯೋಕೆ ಆಗುತ್ತಿಲ್ಲ. ಹೀಗಾಗಿ, ನಮ್ಮ ಸಂಬಂಧದಲ್ಲಿ ಸಮಸ್ಯೆ ಉಂಟಾಗಿದೆ. ಆದರೆ, ನಮ್ಮ ಸಂಬಂಧ ಕೊನೆಯಾಗಿಲ್ಲ’ ಎಂದಿದ್ದಾರೆ ಅವಿನಾಶ್​. ಇನ್ನು, ಕಮ್ಯುನಿಕೇಷನ್​ ಗ್ಯಾಪ್​ನಿಂದ ಇಬ್ಬರ ನಡುವೆ ಅಂತರ ಬೆಳೆದಿದೆ ಎಂದು ಪಲಕಾ​ ಹೇಳಿದ್ದಾರೆ.

ಅವಿನಾಶ್​ ಹಾಗೂ ಪಲಕಾ​ ಇಬ್ಬರೂ ಹೋಟೆಲ್​ ನಡೆಸುತ್ತಿದ್ದಾರೆ. ಒಂದೊಮ್ಮೆ ಇಬ್ಬರೂ ಬೇರೆ ಆದರೆ, ಅವರ ಈ​ ಉದ್ಯಮದ ಮೇಲೆ ತೊಂದರೆ ಉಂಟಾಗಲಿದೆ. ಈ ಕಾರಣಕ್ಕೂ ಇಬ್ಬರೂ ಬೇರೆ ಆಗುತ್ತಿಲ್ಲ ಎನ್ನುವ ಮಾತು ಕೇಳಿ ಬಂದಿದೆ.

ಇನ್​ಸ್ಟಾಗ್ರಾಮ್​ನಲ್ಲಿ ಅವಿನಾಶ್​ ಪಲಕಾ​ ಅವರು ಪರಸ್ಪರ ಅನ್​ ಫಾಲೋ ಮಾಡಿಕೊಂಡಿದ್ದಾರೆ. ಇದಾದ ಬೆನ್ನಲ್ಲೇ ಇಬ್ಬರ ನಡುವೆ ಬ್ರೇಕಪ್​ ಆಗಿದೆ ಎನ್ನುವ ಮಾತು ಕೇಳಿ ಬಂದಿತ್ತು. ಈಗ ಇವರಿಂದಲೇ ಸ್ಪಷ್ಟನೆ ಸಿಕ್ಕಂತಾಗಿದೆ.

ರುಬಿನಾ ದಿಲೈಕ್​-ಅವಿನಾಶ್​ ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಬ್ರೇಕಪ್​ ಆಗಿತ್ತು. ಶಾಲ್ಮಲೀ ದೇಸಾಯಿ ಅವರನ್ನು ಅವಿನಾಶ್​ ಮದುವೆ ಆಗಿದ್ದರು. ಇಬ್ಬರೂ 2017ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು.

ಇದನ್ನೂ ಓದಿ: ಕಾಟನ್​ಪೇಟೆಯಲ್ಲಿ ಸನ್ನಿ ಲಿಯೋನ್ ಡಾನ್ಸ್​; ಮತ್ತೆ ಕರ್ನಾಟಕಕ್ಕೆ ಬಂದ ಬಾಲಿವುಡ್​ ನಟಿ  

ಖ್ಯಾತ ಧಾರಾವಾಹಿ ನಟಿ ಬಗ್ಗೆ ಮಂಜು ಪಾವಗಡ ಹೇಳಿದ ಒಗಟನ್ನು ನಿಮ್ಮಿಂದ ಬಿಡಿಸೋಕೆ ಸಾಧ್ಯವಾ?

Published On - 6:18 pm, Thu, 15 July 21

ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್