AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಕ್ರವರ್ತಿ-ಪ್ರಶಾಂತ್​ ಜಗಳದಲ್ಲಿ ಕೇಳಿದ್ದು ಕೇವಲ ಬೀಪ್​ ಶಬ್ದಗಳು

ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಉರುಡುಗ ಹಾಗೂ ಅರವಿಂದ್ ಕ್ಲೋಸ್​ ಆಗಿದ್ದಾರೆ. ಈಗ ಕ್ಯಾಪ್ಟನ್​ ಆಗಿರುವ ದಿವ್ಯಾ ಪ್ರತೀ ಟಾಸ್ಕ್​​ನಲ್ಲಿ ಅರವಿಂದ್ ಪರ ವಹಿಸಿಕೊಂಡು ಮಾತನಾಡುತ್ತಾರೆ ಎನ್ನುವ ಆರೋಪ ಇದೆ.

ಚಕ್ರವರ್ತಿ-ಪ್ರಶಾಂತ್​ ಜಗಳದಲ್ಲಿ ಕೇಳಿದ್ದು ಕೇವಲ ಬೀಪ್​ ಶಬ್ದಗಳು
ಚಕ್ರವರ್ತಿ ಚಂದ್ರಚೂಡ್​-ಪ್ರಶಾಂತ್​ ಸಂಬರಗಿ
TV9 Web
| Updated By: ಮದನ್​ ಕುಮಾರ್​|

Updated on: Jul 09, 2021 | 7:24 AM

Share

‘ಕನ್ನಡ ಬಿಗ್​ ಬಾಸ್​ ಸೀಸನ್​ 8’ರ ಎರಡನೇ ಇನ್ನಿಂಗ್ಸ್​ನಲ್ಲಿ ಮನೆ ಎರಡು ಭಾಗವಾಗಿದೆ. ಸದಾ ಗುಂಪುಗಾರಿಕೆ ಎನ್ನುವ ಆರೋಪ ಹೊರಿಸುತ್ತಿದ್ದ ಪ್ರಶಾಂತ್​ ಸಂಬರಗಿ ಅವರೇ ಗುಂಪೊಂದನ್ನು ಕಟ್ಟಿದ್ದಾರೆ. ಪ್ರಶಾಂತ್​, ಚಕ್ರರ್ತಿ ಚಂದ್ರಚೂಡ್​ ಹಾಗೂ ಶಮಂತ್​ ಈ ಗುಂಪಿನ ಸದಸ್ಯರು. ಇವರು ಮನೆಯ ಮೊದಲ ಮಹಿಳಾ ಕ್ಯಾಪ್ಟನ್​ ದಿವ್ಯಾ ಉರುಡುಗ ವಿರುದ್ಧ ತಿರುಗಿ ಬೀಳೋಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ಇವರ ನಡುವೆಯೇ ಈಗ ಬಿರುಕು ಕಾಣಿಸಿಕೊಂಡಿದೆ.

ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಉರುಡುಗ ಹಾಗೂ ಅರವಿಂದ್ ಕ್ಲೋಸ್​ ಆಗಿದ್ದಾರೆ. ಈಗ ಕ್ಯಾಪ್ಟನ್​ ಆಗಿರುವ ದಿವ್ಯಾ ಪ್ರತೀ ಟಾಸ್ಕ್​​ನಲ್ಲಿ ಅರವಿಂದ್ ಪರ ವಹಿಸಿಕೊಂಡು ಮಾತನಾಡುತ್ತಾರೆ ಎನ್ನುವ ಆರೋಪ ಇದೆ. ಜುಲೈ 8ರ ಎಪಿಸೋಡ್​ನಲ್ಲೂ ಹೀಗೆಯೇ ಆಗಿದೆ. ಟಂಕಶಾಲೆ ಹೆಸರಿನ ಟಾಸ್ಕ್​ನಲ್ಲಿ ಶಮಂತ್​ ತನಗೆ ಮೋಸ ಆಗಿದೆ ಎಂದು ಆರೋಪಿಸಿದರು. ಈ ವಿಚಾರಕ್ಕೆ ಸಂಬಂಧಿಸಿ ಏರು ಧ್ವನಿಯಲ್ಲೇ ಮಾತನಾಡಿದರು. ಆದರೆ, ಅರವಿಂದ್ ಪರ ಪ್ರಶಾಂತ್​​ ಮಾತನಾಡಿಲ್ಲ.

ಇದಾದ ಬೆನ್ನಲ್ಲೇ ಅರವಿಂದ್​ ಅವರಿಂದ ರಘುಗೆ ಮೋಸ ಆಗಿದೆ ಎನ್ನುವ ವಿಚಾರವನ್ನು ಪ್ರಶಾಂತ್​ ಪ್ರಸ್ತಾಪಪಡಿಸಿದರು. ಈ ವಿಚಾರ ಅಷ್ಟು ಪ್ರಭಾವ ಬೀರಿಲ್ಲ. ಈ ಬಗ್ಗೆ ಚಕ್ರವರ್ತಿ ಅವರು ಪ್ರಶಾಂತ್​ಗೆ ಬುದ್ಧಿವಾದ ಹೇಳಿದರು. ‘ಬಿಗ್​ ಬಾಸ್​ ಮನೆಯಲ್ಲಿ ಉಳಿದವರೆಲ್ಲರೂ ಒಂದು. ನಾವಿಬ್ಬರೇ ಬೇರೆ. ನಿನ್ನ ಅಡ್ವೈಸ್​ಗಳನ್ನು ಎಲ್ಲರೂ ಹೇಳಿಕೊಂಡು ನಗುತ್ತಾರೆ. ಇಡೀ ಮನೆಯಲ್ಲಿ ನಾನು-ನೀನು ಹೋದರೆ ಸಾಕು ಎಂಬಂತಾಗಿದೆ’ ಎಂದು ಬಣ್ಣಿಸೋಕೆ ಹೋದರು.

ಇದಾದ ಬೆನ್ನಲ್ಲೇ ಚಕ್ರವರ್ತಿ ಹಾಗೂ ಪ್ರಶಾಂತ್​ ನಡುವೆ ಕಿತ್ತಾಟ ಆರಂಭವಾಯಿತು. ಪ್ರಶಾಂತ್ ಸಂಬರಗಿ ಮುಂದೊಂದು ಹಿಂದೊಂದು ಮಾಡುತ್ತಾರೆ ಎಂದು ಚಕ್ರವರ್ತಿ ಆರೋಪಿಸಿದರು. ಇಬ್ಬರ ಜಗಳ ತಾರಕಕ್ಕೇರಿತ್ತು. ಕೆಲ ಸಮಯಗಳ ಕಾಲ ಇಬ್ಬರು ನಡುವೆ ಬಳಕೆ ಆದ ಶಬ್ದಗಳಿಗೆ ಬಿಗ್​ ಬಾಸ್​ ಬೀಪ್​ ಹಾಕಿದ್ದರು.

‘ಪ್ರಶಾಂತ್ ಸರ್​ ನಾನು ನಿಮ್ಮೊಂದಿಗೆ ಇನ್ನು ಮಾತನ್ನೇ ಆಡುವುದಿಲ್ಲ. ನೀನು ಮಾಡಿರೋದು ತಪ್ಪಾದ ಕೆಲಸ. ಗೆಳೆಯರ ನಡುವೆ ನಡೆದ ಮಾತನ್ನು ಮೂರನೇಯವನಿಗೆ ಹೇಳೋದು ದ್ರೋಹದ ಕೆಲಸ’ ಎಂದು ಹೇಳುವ ಮೂಲಕ ಪ್ರಶಾಂತ್​ ಜತೆ ಮಾತನಾಡುವುದಿಲ್ಲ ಎಂದರು ಚಕ್ರವರ್ತಿ.

ಇದನ್ನೂ ಓದಿ:

ಅರವಿಂದ್ ಗೆಲ್ಲಿಸೋಕೆ ಚಕ್ರವರ್ತಿಗೆ ಅನ್ಯಾಯ ಮಾಡಿದ್ರಾ ದಿವ್ಯಾ ಉರುಡುಗ? ಬಿಗ್​ ಬಾಸ್​ ಮನೆಯಲ್ಲಿ ಹೀಗೊಂದು ಪ್ರಶ್ನೆ

‘ನಾನು ಒಬ್ಬ ಅಪ್ಪ-ಅಮ್ಮನಿಗೆ ಹುಟ್ಟಿದೀನಿ, ಸರಿಯಾಗಿ ನಡ್ಕೋತೀನಿ’; ಪ್ರಶಾಂತ್​-ಚಕ್ರವರ್ತಿ ಮಧ್ಯೆ ಮತ್ತೆ ಹತ್ತಿತು ದ್ವೇಷದ ಬೆಂಕಿ

ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!