AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮಂತಾ ಜತೆ ಕೆಲಸ ಮಾಡೋಕೆ ಖ್ಯಾತ ನಿರ್ದೇಶಕರು ನೋ ಅಂದ್ರು; ಇದರ ಹಿಂದಿರೋ ಷಡ್ಯಂತ್ರ ಯಾರದ್ದು?

ತೆಲುಗು ನಿರ್ದೇಶಕರ ಜತೆ ಸಿನಿಮಾ ಮಾಡೋಕೆ ಸಮಂತಾಗೆ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಕೆಲ ಟಾಲಿವುಡ್​ ನಿರ್ದೇಶಕರು ಸಮಂತಾಗೆ ಕಥೆ ಹೇಳಿದ್ದಾರೆ. ಆದರೆ, ಅದು ಸಮಂತಾಗೆ ಇಷ್ಟವಾಗಿಲ್ಲ.

ಸಮಂತಾ ಜತೆ ಕೆಲಸ ಮಾಡೋಕೆ ಖ್ಯಾತ ನಿರ್ದೇಶಕರು ನೋ ಅಂದ್ರು; ಇದರ ಹಿಂದಿರೋ ಷಡ್ಯಂತ್ರ ಯಾರದ್ದು?
ಸಮಂತಾ
TV9 Web
| Edited By: |

Updated on:Oct 17, 2021 | 9:27 PM

Share

ಸಮಂತಾ ಅಕ್ಕಿನೇನಿ ಅವರು ವಿಚ್ಛೇದನದ ನಂತರ ಮತ್ತೆ ನಟನೆಗೆ ಮರಳಿದ್ದಾರೆ. ಶ್ವಾನಗಳನ್ನು ಸಾಕಿ, ಅದರ ಆರೈಕೆಯಲ್ಲಿ ಸಮಯ ಕಳೆಯುತ್ತಾ ನೋವನ್ನು ಮರೆಯುತ್ತಿದ್ದಾರೆ. ಈ ಮಧ್ಯೆ ಸಮಂತಾ ಬಗ್ಗೆ ಹೊಸ ಗಾಸಿಪ್​ ಒಂದು ಹುಟ್ಟಿಕೊಂಡಿದೆ. ಕೆಲ ಖ್ಯಾತ ನಿರ್ದೇಶಕರು ಸಮಂತಾ ಜತೆ ಕೆಲಸ ಮಾಡೋಕೆ  ನೋ ಎಂದಿದ್ದಾರೆ ಎಂಬ ಮಾತು ಟಾಲಿವುಡ್​ ಅಂಗಳದಲ್ಲಿ ಜೋರಾಗಿದೆ. ಇದರ ಹಿಂದೆ ಯಾರ ಷಡ್ಯಂತರ ಇದೆ ಎನ್ನುವ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಜೋರಾಗಿ ಚರ್ಚೆಗಳು ಆಗುತ್ತಿವೆ.

ಸಮಂತಾ ಅವರು ದಸರಾಗೆ ದೊಡ್ಡ ಘೋಷಣೆ ಒಂದನ್ನು ಮಾಡಿದ್ದರು. ‘ಖಿಲಾಡಿ’ ಸಿನಿಮಾ ನಿರ್ಮಾಪಕರು ಸಮಂತಾ ಜತೆ ಸಿನಿಮಾ ಘೋಷಣೆ ಮಾಡಿದರೆ, ತೆಲುಗಿನ ಶಿವಲೆಂಕಾ ಕೃಷ್ಣ ಪ್ರಸಾದ್​ ಅವರು ಸಮಂತಾ ಜತೆ ಸಿನಿಮಾ ಮಾಡುವುದಾಗಿ ಅನೌನ್ಸ್​ ಮಾಡಿದ್ದಾರೆ. ಈ ಎರಡೂ ಸಿನಿಮಾ ತೆಲುಗು ಹಾಗೂ ತಮಿಳಲ್ಲಿ ಮೂಡಿ ಬರುತ್ತಿದೆ. ಅಚ್ಚರಿ ಎಂದರೆ, ಎರಡೂ ಸಿನಿಮಾ ನಿರ್ದೇಶಕರು ತಮಿಳಿನವರು.

ತೆಲುಗು ನಿರ್ದೇಶಕರ ಜತೆ ಸಿನಿಮಾ ಮಾಡೋಕೆ ಸಮಂತಾಗೆ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಕೆಲ ಟಾಲಿವುಡ್​ ನಿರ್ದೇಶಕರು ಸಮಂತಾಗೆ ಕಥೆ ಹೇಳಿದ್ದಾರೆ. ಆದರೆ, ಅದು ಸಮಂತಾಗೆ ಇಷ್ಟವಾಗಿಲ್ಲ. ಇದಕ್ಕೆ ಕಾರಣ, ಅದೇ ಹಳೆಯ ಲವ್​​ಸ್ಟೋರಿಗಳು ಹಾಗೂ ಕಮರ್ಷಿಯಲ್​ ಮಸಾಲೆಗಳು. ಇನ್ನು ಕೆಲ ಸ್ಟಾರ್​ ನಿರ್ದೇಶಕರು ಸಮಂತಾ ಜತೆ ನಟಿಸೋಕೆ ಹಿಂದೇಟು ಹಾಕಿದ್ದಾರಂತೆ. ಇದಕ್ಕೂ ಕಾರಣವಿದೆ.

ಸಮಂತಾ ಅವರು ಈಗತಾನೇ ವಿಚ್ಛೇದನ ಪಡೆದಿದ್ದಾರೆ. ಅವರ ಬಗ್ಗೆ ಈಗ ಜನರಿಗೆ ನಾನಾ ಅಭಿಪ್ರಾಯಗಳು ಹುಟ್ಟಿಕೊಂಡಿರುತ್ತವೆ. ಇಂಥ ಸಂದರ್ಭದಲ್ಲಿ ಅವರ ಜತೆ ಸಿನಿಮಾ ಮಾಡಿದರೆ ಪ್ರೇಕ್ಷಕರು ಅದನ್ನು ನೋಡದೇ ಇರಬಹುದು ಎನ್ನುವ ನಂಬಿಕೆಯಲ್ಲಿ ಕೆಲ ದೊಡ್ಡ ನಿರ್ದೇಶಕರು ಇದ್ದಾರೆ ಎನ್ನುವ ಟಾಕ್​ ಇದೆ. ಆದರೆ, ಕೆಲ ಫ್ಯಾನ್ಸ್​ ಇದರ ಹಿಂದೆ ಕೆಲವರ ಷಡ್ಯಂತರವಿದೆ ಎಂದು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಪರವಿರೋಧ ಚರ್ಚೆಗಳು ನಡೆಯುತ್ತಲೇ ಇವೆ.

ಇದನ್ನೂ ಓದಿ: ‘ಇಲ್ಲಿ ಕೂರಲು ಭಯವಾಗುತ್ತಿದೆ’; ಡಿವೋರ್ಸ್ ಬಳಿಕ ಮೊದಲ ಬಾರಿಗೆ ಸ್ಕ್ರೀನ್ ಮೇಲೆ ಕಾಣಿಸಿಕೊಂಡ ಸಮಂತಾ ಮಾತು

ನಾಗ ಚೈತನ್ಯ ಮೇಲೆ ನಂಬಿಕೆ ಇಟ್ಟ ಸಮಂತಾಗೆ ಮಗುವೂ ಸಿಗಲಿಲ್ಲ; ಶಾರುಖ್​ ಜತೆ ಸಿನಿಮಾವೂ ಕೈ ಹಿಡಿಯಲಿಲ್ಲ

Published On - 8:50 pm, Sun, 17 October 21

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ