AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ಪ್ರಶಾಂತ್ ಸಂಬರಗಿ ಮಹಾ ಸುಳ್ಳುಗಾರ ಎಂಬುದನ್ನು ಸಾಕ್ಷಿ ಸಮೇತ ಸಾಬೀತು ಮಾಡಿದ ಬಿಗ್ ಬಾಸ್

Prashanth Sambargi: ಅರವಿಂದ್​ಗೆ ಬಿಗ್​ ಬಾಸ್​ ತೋರಿಸಿರುವ ರಹಸ್ಯ ವಿಡಿಯೋ ಮೂಲಕ ಪ್ರಶಾಂತ್​ ಸಂಬರಗಿಯ ಸುಳ್ಳು ಹೇಳುವ ಚಾಳಿಗೆ ಬಲವಾದ ಪುರಾವೆ ಸಿಕ್ಕಂತಾಗಿದೆ. ಇದರಿಂದ ಅವರಿಗೆ ವೀಕ್ಷಕರ ವೋಟ್​ ಕಡಿಮೆ ಆಗುವ ಸಾಧ್ಯತೆ ದಟ್ಟವಾಗಿದೆ.

Bigg Boss Kannada: ಪ್ರಶಾಂತ್ ಸಂಬರಗಿ ಮಹಾ ಸುಳ್ಳುಗಾರ ಎಂಬುದನ್ನು ಸಾಕ್ಷಿ ಸಮೇತ ಸಾಬೀತು ಮಾಡಿದ ಬಿಗ್ ಬಾಸ್
ಪ್ರಶಾಂತ್ ಸಂಬರಗಿ
ಮದನ್​ ಕುಮಾರ್​
|

Updated on: Apr 20, 2021 | 9:57 PM

Share

ಬಿಗ್​ ಬಾಸ್​ ಮನೆಯಲ್ಲಿ ದಿನ ಕಳೆದಂತೆಲ್ಲ ಎಲ್ಲರ ಬಣ್ಣ ಬಯಲಾಗುತ್ತಿದೆ. ಈಗ 8ನೇ ವಾರದಲ್ಲಿ ಆಟ ಮುಂದುವರಿದಿದೆ. ಯಾವ ಸ್ಪರ್ಧಿಯ ಗುಣ ಏನು ಎಂಬುದು ಎಲ್ಲರಿಗೂ ಗೊತ್ತಾಗುತ್ತಿದೆ. ಅದರಲ್ಲೂ ಪ್ರಶಾಂತ್​ ಸಂಬರಗಿ ಸಿಕ್ಕಾಪಟ್ಟೆ ಸುಳ್ಳು ಹೇಳುತ್ತಾರೆ ಎಂಬ ಸತ್ಯ ಕ್ಷಣಕ್ಷಣಕ್ಕೂ ಬಯಲಾಗುತ್ತಿದೆ. ಎಲ್ಲರನ್ನೂ ಯಾಮಾರಿಸಲು ಪ್ರಶಾಂತ್​ ಸಂಬರಗಿ ಹೇಳಿದ ಒಂದು ಸುಳ್ಳನ್ನು ಈಗ ಬಿಗ್​ ಬಾಸ್​ ಬಯಲು ಮಾಡಿದ್ದಾರೆ.

ಇತ್ತೀಚೆಗೆ ಬಿಗ್​ ಬಾಸ್​ ಸ್ಪರ್ಧಿಗಳಿಗೆ ಗರ್ಲ್ಸ್​ ಹಾಸ್ಟೆಲ್​ ವರ್ಸಸ್​ ಬಾಯ್ಸ್​ ಹಾಸ್ಟೆಲ್​ ಎಂಬ ಟಾಸ್ಕ್​ ನೀಡಲಾಗಿತ್ತು. ಅದರಲ್ಲಿ ಯಾರು ವಿನ್ನರ್​ ಎಂಬುದನ್ನು ನಿಧಿ ಸುಬ್ಬಯ್ಯ ಮತ್ತು ಪ್ರಶಾಂತ್​ ಸಂಬರಗಿ ಸೇರಿ ನಿರ್ಣಯ ಮಾಡಬೇಕಿತ್ತು. ಅವರಿಬ್ಬರೂ ಹಾಸ್ಟೆಲ್​ ವಾರ್ಡನ್​ಗಳಾಗಿದ್ದರು. ಅಂತಿಮವಾಗಿ ದಿವ್ಯಾ ಸುರೇಶ್​ ವಿನ್ನರ್​ ಎಂದು ಘೋಷಣೆ ಮಾಡಿದರು. ಈ ಬಗ್ಗೆ ಬಾಯ್ಸ್​ ಹಾಸ್ಟೆಲ್​ ಸದಸ್ಯರು ತಕರಾರು ತೆಗೆದರು. ಹುಡುಗರ ಪರವಾಗಿ ನಿಲ್ಲಬೇಕಿದ್ದ ಪ್ರಶಾಂತ್​ ಸರಿಯಾಗಿ ವಾದ ಮಾಡಿಲ್ಲ ಎಂಬ ಆರೋಪ ಕೇಳಿಬಂತು. ಅದರಿಂದ ತಪ್ಪಿಸಿಕೊಳ್ಳಲು ಪ್ರಶಾಂತ್​ ಒಂದು ಸುಳ್ಳು ಹೇಳಿದರು.

‘ಹುಡುಗರ ಹೆಸರು ಹೇಳಲು ನಿಧಿ ಬಿಡಲಿಲ್ಲ. ಅವರು ನನ್ನ ಬಾಯಿ ಮುಚ್ಚಿಸಿದರು. ವಾದ ಮಾಡಲು ಅವಕಾಶ ನೀಡಲಿಲ್ಲ. ನಿಧಿ ಫೋರ್ಸ್​ ಮಾಡಿದರು. ದಿವ್ಯಾ ಸುರೇಶ್​ ಅತ್ಯುತ್ತಮ ಎಂದು ಒತ್ತಾಯ ಹೇರಿದರು’ ಎಂದ ಪ್ರಶಾಂತ್​ ಅವರು ಹುಡುಗರ ಎದುರು ಹೇಳಿದರು. ಆದರೆ ಅಲ್ಲಿ ನಿಧಿ ಜೊತೆ ನಡೆದ ಮಾತುಕತೆಯೇ ಬೇರೆ ಇತ್ತು! ಅದನ್ನು ಬಿಗ್​ ಬಾಸ್​ ಮನೆಯ ಕ್ಯಾಮರಾಗಳು ನಿಖರವಾಗಿ ಸೆರೆ ಹಿಡಿದಿವೆ.

ಕ್ಯಾಮರಾಗಳಲ್ಲಿ ಸೆರೆ ಆಗಿರುವ ಆ ವಿಡಿಯೋವನ್ನು ಈ ವಾರದ ಕ್ಯಾಪ್ಟನ್​ ಆಗಿರುವ ಅರವಿಂದ್​ ಕೆ.ಪಿ. ಅವರಿಗೆ ಬಿಗ್​ ಬಾಸ್​ ರಹಸ್ಯವಾಗಿ ತೋರಿಸಿದ್ದಾರೆ. ಕನ್ಫೆಷನ್​ ರೂಮ್​ಗೆ ಕರೆದು ಅರವಿಂದ್​ಗೆ ಮಾತ್ರ ಆ ವಿಡಿಯೋವನ್ನು ತೋರಿಸಲಾಗಿದೆ. ಅದರಿಂದ ಅರವಿಂದ್​ಗೆ ಎಲ್ಲಾ ಸತ್ಯ ತಿಳಿದಂತಾಗಿದೆ. ಪ್ರಶಾಂತ್​ ಸಂಬರಗಿ ಮಹಾ ಸುಳ್ಳುಗಾರ ಎಂಬುದನ್ನು ಬಿಗ್​ ಬಾಸ್​ ವಿಡಿಯೋ ಸಮೇತ ಸಾಬೀತು ಮಾಡಿದ್ದಾರೆ. ಆ ಮೂಲಕ ವೀಕ್ಷಕರಿಗೂ ಎಲ್ಲ ಸತ್ಯ ಗೊತ್ತಾದಂತಾಗಿದೆ.

ಈ ಹಿಂದೆ ಕೂಡ ಪ್ರಶಾಂತ್​ ಈ ರೀತಿಯ ಸುಳ್ಳುಗಳನ್ನು ಹೇಳಿದ್ದುಂಟು. ಮೊದಲು ತುಪ್ಪ ಖಾಲಿ ಮಾಡಿ, ಆಮೇಲೆ ನಾನು ತುಪ್ಪವನ್ನೇ ತಿಂದಿಲ್ಲ ಎಂದು ಎಲ್ಲರ ಮುಂದೆ ಸುಳ್ಳು ಹೇಳಿದ್ದರು. ಅವರ ಆಪ್ತ ಸ್ನೇಹಿತರಾಗಿರುವ ಚಕ್ರವರ್ತಿ ಚಂದ್ರಚೂಡ್​ ಕೂಡ ಅನೇಕ ಬಾರಿ ಸಂಬರಗಿಯ ಸುಳ್ಳು ಹೇಳುವ ಗುಣದ ಬಗ್ಗೆ ಮಾತನಾಡಿದ್ದುಂಟು. ಈಗ ಅರವಿಂದ್​ಗೆ ಬಿಗ್​ ಬಾಸ್​ ತೋರಿಸಿರುವ ವಿಡಿಯೋ ಮೂಲಕ ಪ್ರಶಾಂತ್​ ಸಂಬರಗಿಯ ಈ ಚಾಳಿಗೆ ಬಲವಾದ ಪುರಾವೆ ಸಿಕ್ಕಂತಾಗಿದೆ. ಇದರಿಂದ ಅವರಿಗೆ ವೀಕ್ಷಕರ ವೋಟ್​ ಕಡಿಮೆ ಆಗುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿಗೆ ಆದ ಅವಮಾನವನ್ನು ಅವರು ಸಹಿಸಿಕೊಳ್ತಾರಾ?

ರೈತರು ಸ್ವಯಂಪ್ರೇರಿತರಾಗಿ ಮುಂದಾದರೆ ಮಾತ್ರ ಜಮೀನು ಖರೀದಿ: ಸಿಎಂ
ರೈತರು ಸ್ವಯಂಪ್ರೇರಿತರಾಗಿ ಮುಂದಾದರೆ ಮಾತ್ರ ಜಮೀನು ಖರೀದಿ: ಸಿಎಂ
ಸುರ್ಜೇವಾಲಾ ಕರೆದು ಮಾತಾಡಿದರೆ ಅದರಲ್ಲಿ ತಪ್ಪೇನಿಲ್ಲ: ಜಾರಕಿಹೊಳಿ
ಸುರ್ಜೇವಾಲಾ ಕರೆದು ಮಾತಾಡಿದರೆ ಅದರಲ್ಲಿ ತಪ್ಪೇನಿಲ್ಲ: ಜಾರಕಿಹೊಳಿ
W,W,W: ಟೆಸ್ಟ್​ನಲ್ಲಿ ಹ್ಯಾಟ್ರಿಕ್... ಹೊಸ ಇತಿಹಾಸ ಬರೆದ ಬೋಲ್ಯಾಂಡ್
W,W,W: ಟೆಸ್ಟ್​ನಲ್ಲಿ ಹ್ಯಾಟ್ರಿಕ್... ಹೊಸ ಇತಿಹಾಸ ಬರೆದ ಬೋಲ್ಯಾಂಡ್
ತಾಯಿಯ ಸಮಾಧಿ ಪಕ್ಕದಲ್ಲೇ ಸರೋಜಾದೇವಿ ಪಾರ್ಥೀವ ಶರೀರ ದಫನ
ತಾಯಿಯ ಸಮಾಧಿ ಪಕ್ಕದಲ್ಲೇ ಸರೋಜಾದೇವಿ ಪಾರ್ಥೀವ ಶರೀರ ದಫನ
‘ಲವ್ ಮಾಕ್ಟೇಲ್ 3’ ಚಿತ್ರಕ್ಕೆ ಶೂಟಿಂಗ್ ಶುರು ಮಾಡಿದ ಡಾರ್ಲಿಂಗ್​ ಕೃಷ್ಣ
‘ಲವ್ ಮಾಕ್ಟೇಲ್ 3’ ಚಿತ್ರಕ್ಕೆ ಶೂಟಿಂಗ್ ಶುರು ಮಾಡಿದ ಡಾರ್ಲಿಂಗ್​ ಕೃಷ್ಣ
ಬಿಬಿಎಂಪಿ ಕಚೇರಿ ಎದುರೇ ನಾಯಿಗಳಿಗೆ ಶಾಲು ಹೊದೆಸಿ ಸನ್ಮಾನಿಸಿದ ವಾಟಾಳ್!
ಬಿಬಿಎಂಪಿ ಕಚೇರಿ ಎದುರೇ ನಾಯಿಗಳಿಗೆ ಶಾಲು ಹೊದೆಸಿ ಸನ್ಮಾನಿಸಿದ ವಾಟಾಳ್!
ಧರ್ಮಶಾಲಾ: ಪ್ಯಾರಾಗ್ಲೈಡಿಂಗ್ ವೇಳೆ ಅಪಘಾತ, ವ್ಯಕ್ತಿ ಸಾವು
ಧರ್ಮಶಾಲಾ: ಪ್ಯಾರಾಗ್ಲೈಡಿಂಗ್ ವೇಳೆ ಅಪಘಾತ, ವ್ಯಕ್ತಿ ಸಾವು
ಚಂದ್ರ ಕುಂಭ ರಾಶಿಯಲ್ಲಿ ಸಂಚಾರ: ಇಂದಿನ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕುಂಭ ರಾಶಿಯಲ್ಲಿ ಸಂಚಾರ: ಇಂದಿನ ದಿನ ಭವಿಷ್ಯ ಇಲ್ಲಿದೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ