AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಜುಗೆ ನೇರವಾಗಿಯೇ ದ್ರೋಹ ಬಗೆದ ದಿವ್ಯಾ ಸುರೇಶ್​; ಈ ತಪ್ಪನ್ನು ಅವರು ಕ್ಷಮಿಸ್ತಾರಾ?

ಮನೆಯಲ್ಲಿ ಹೆಣ್ಣುಮಕ್ಕಳ ಹಾಸ್ಟೆಲ್​ ವಾರ್ಡನ್​ ಆಗಿ ನಿಧಿ ಸುಬ್ಬಯ್ಯ ಇದ್ದರು. ಹೆಣ್ಣುಮಕ್ಕಳು ಪತ್ರವನ್ನು ಅಡಗಿಸಿಡಬೇಕು. ಈ ರೀತಿ ಅಡಗಿಸಿಟ್ಟ ಪತ್ರವನ್ನು ವಾರ್ಡನ್​ ಹುಡುಕಿ ತೆಗೆಯಬೇಕು.

ಮಂಜುಗೆ ನೇರವಾಗಿಯೇ ದ್ರೋಹ ಬಗೆದ ದಿವ್ಯಾ ಸುರೇಶ್​; ಈ ತಪ್ಪನ್ನು ಅವರು ಕ್ಷಮಿಸ್ತಾರಾ?
ಮಂಜು-ದಿವ್ಯಾ ಸುರೇಶ್​
ರಾಜೇಶ್ ದುಗ್ಗುಮನೆ
| Edited By: |

Updated on: Apr 19, 2021 | 8:27 AM

Share

ಬಿಗ್​ ಬಾಸ್​ ಮನೆಯಲ್ಲಿ ಭಾವನೆಗಳಿಗೆ ಪ್ರಾಮುಖ್ಯತೆ ನೀಡಲೇಬಾರದು. ಈ ಅಭಿಪ್ರಾಯ ಅಲ್ಲಿ ಪದೇಪದೇ ಕೇಳಿಬರುತ್ತಲೇ ಇರುತ್ತದೆ. ಹಾಗಾಗಿ ಮನೆ ಸೇರಿರುವ ಪ್ರತಿ ಸ್ಪರ್ಧಿ ಕೂಡ ಬಹಳ ಎಚ್ಚರಿಕೆಯಿಂದ ಆಡುತ್ತಾರೆ. ಇಂದು ಫ್ರೆಂಡ್​ ಆಗಿದ್ದವರು ನಾಳೆ ಬದಲಾಗಬಹುದು. ಇದಕ್ಕೆ ದಿವ್ಯಾ ಸುರೇಶ್​ ಉತ್ತಮ ಉದಾಹರಣೆ. ಮಂಜು ಪಾವಗಡ ಮಾಡಿದ ಸಹಾಯವನ್ನು ದಿವ್ಯಾ ಮರೆತುಬಿಟ್ಟಿದ್ದಾರೆ! ಪ್ರತಿ ವಾರ ಕ್ಯಾಪ್ಟನ್​ ಆಗೋಕೆ ಟಾಸ್ಕ್​ ಒಂದನ್ನು ನೀಡಲಾಗುತ್ತದೆ. ಈ ಟಾಸ್ಕ್​ನಲ್ಲಿ ಗೆದ್ದವರು ಕ್ಯಾಪ್ಟನ್​ ಆಗುತ್ತಾರೆ. ಏಳನೇ ವಾರದ ಟಾಸ್ಕ್​ನಲ್ಲಿ ಬಾಯ್ಸ್​ ಹಾಸ್ಟೆಲ್​​, ಗರ್ಲ್ಸ್​ ಹಾಸ್ಟೆಲ್​ ಎಂದು ಬೇರ್ಪಡಿಸಲಾಗಿತ್ತು. ಈ ವೇಳೆ ಹುಡುಗರು ಹುಡುಗಿಯರಿಗೆ ಪತ್ರ ಬರೆಯಬೇಕು. ಹಾಸ್ಟೆಲ್​ ವಾರ್ಡನ್​ಗೆ ಆ ಪತ್ರಗಳು ಸಿಗದಂತೆ ಹೆಣ್ಣುಮಕ್ಕಳು ಕಾಪಾಡಿಕೊಳ್ಳಬೇಕು.

ಮನೆಯಲ್ಲಿ ಹೆಣ್ಣುಮಕ್ಕಳ ಹಾಸ್ಟೆಲ್​ ವಾರ್ಡನ್​ ಆಗಿ ನಿಧಿ ಸುಬ್ಬಯ್ಯ ಇದ್ದರು. ಹೆಣ್ಣುಮಕ್ಕಳು ಪತ್ರವನ್ನು ಅಡಗಿಸಿಡಬೇಕು. ಈ ರೀತಿ ಅಡಗಿಸಿಟ್ಟ ಪತ್ರವನ್ನು ವಾರ್ಡನ್​ ಹುಡುಕಿ ತೆಗೆಯಬೇಕು. ಅಚ್ಚರಿ ಎಂದರೆ, ದಿವ್ಯಾ ಸುರೇಶ್​ ಜತೆ ನಿಧಿ ಒಪ್ಪಂದ ಒಂದನ್ನು ಮಾಡಿಕೊಂಡಿದ್ದರಂತೆ. ವೀಕೆಂಡ್​ನಲ್ಲಿ ಈ ವಿಚಾರ ಬಯಲಾಗಿದೆ.

ಯಾರ್ಯಾರು ಪತ್ರವನ್ನು ಎಲ್ಲಿಟ್ಟಿದ್ದಾರೆ ಎಂಬುದನ್ನು ನೀನು ಹೇಳಿದರೆ ನಿನ್ನ ಪತ್ರವನ್ನು ತೆಗೆದುಕೊಳ್ಳುವುದಿಲ್ಲ ಡೀಲ್​ ಅನ್ನು ದಿವ್ಯಾ ಸುರೇಶ್​ ಮುಂದಿಟ್ಟಿದ್ದರು ನಿಧಿ. ಇದಕ್ಕೆ ದಿವ್ಯಾ ಸುರೇಶ್​ ಒಪ್ಪಿಗೆ ಸೂಚಿಸಿದ್ದರು. ಈ ಒಪ್ಪಂದದಿಂದ ದಿವ್ಯಾ ಬಳಿಯೇ ಹೆಚ್ಚು ಪತ್ರಗಳು ಉಳಿದುಕೊಂಡಿದ್ದವು. ಅವರು ಕ್ಯಾಪ್ಟನ್ಸಿ ಟಾಸ್ಕ್​ಗೆ ಕೂಡ ಆಯ್ಕೆ ಆಗಿದ್ದರು.

ಈ ವಿಚಾರ ಹೊರ ಬರುತ್ತಿದ್ದಂತೆ ಮನೆಯವರಿಗೆ ಶಾಕ್​ ಆಗಿದೆ. ಆಗ, ದಿವ್ಯಾ ನಾನು ಈ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಮೊದಲು ಮಂಜು ಬಳಿ ಈ ಬಗ್ಗೆ ಚರ್ಚೆ ಮಾಡಿದ್ದೆ ಎಂದು ಹೇಳಿದ್ದಾರೆ. ಈ ಮೂಲಕ ಮಂಜು ಅವರನ್ನೂ ಸಿಕ್ಕಿಸಿದ್ದಾರೆ. ಮಂಜು ಸಹಾಯ ಮಾಡಿದ್ದನ್ನು ಎಲ್ಲರ ಎದುರು ಹೇಳಿದ್ದು ಎಷ್ಟು ಸರಿ ಎಂದು ಮನೆಯವರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: Bigg Boss Kannada: ಮಂಜು ಪಾವಗಡ ಅಲ್ಲ, ಬಿಗ್​ ಬಾಸ್​ ಗೆಲ್ಲೋದು ಇವರು!

ದಿವ್ಯಾ ಸುರೇಶ್​ಗೆ ಮಗಳು ಎಂದಿದ್ದು ಫೇಕ್​! ಚಕ್ರವರ್ತಿ ಚಂದ್ರಚೂಡ್​ ಅಸಲಿ ಮುಖ ಬಯಲು

ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ಸೋಮನಾಥ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಸೋಮನಾಥ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಕನ್ನಡಪರ ಮಾತನಾಡಿ ‘ಕೋಗಿಲು’ ಆಗು, ಇಲ್ಲದಿದ್ರೆ ಕಾಗೆ ಆಗ್ತೀಯಾ: ಅಶೋಕ್
ಕನ್ನಡಪರ ಮಾತನಾಡಿ ‘ಕೋಗಿಲು’ ಆಗು, ಇಲ್ಲದಿದ್ರೆ ಕಾಗೆ ಆಗ್ತೀಯಾ: ಅಶೋಕ್
ಹೆಚ್​​​ಡಿಕೆ VS ಡಿಕೆಶಿ ಸವಾಲು: ಓಪನ್ ಡಿಬೇಟ್ ಮಾಡೋಣ ಬನ್ನಿ
ಹೆಚ್​​​ಡಿಕೆ VS ಡಿಕೆಶಿ ಸವಾಲು: ಓಪನ್ ಡಿಬೇಟ್ ಮಾಡೋಣ ಬನ್ನಿ
ಶ್ವಾನ ದಾಳಿಯಿಂದ ಶ್ರೇಯಸ್ ಅಯ್ಯರ್ ಜಸ್ಟ್ ಮಿಸ್; ವಿಡಿಯೋ ನೋಡಿ
ಶ್ವಾನ ದಾಳಿಯಿಂದ ಶ್ರೇಯಸ್ ಅಯ್ಯರ್ ಜಸ್ಟ್ ಮಿಸ್; ವಿಡಿಯೋ ನೋಡಿ
ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​
ರೂರ್ಕೆಲಾ ವಾಯುನೆಲೆಯಲ್ಲಿ ವಿಮಾನ ಅಪಘಾತ; ಪೈಲಟ್ ಸೇರಿದಂತೆ 6 ಜನರಿಗೆ ಗಾಯ
ರೂರ್ಕೆಲಾ ವಾಯುನೆಲೆಯಲ್ಲಿ ವಿಮಾನ ಅಪಘಾತ; ಪೈಲಟ್ ಸೇರಿದಂತೆ 6 ಜನರಿಗೆ ಗಾಯ