AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vakeel saab Box Office Collection : ವಕೀಲ್​ ಸಾಬ್​ ಹಿಟ್​ ಅಥವಾ ಫ್ಲಾಪ್​? ಕಳಚಿತು ಪವನ್​ ಕಲ್ಯಾಣ್​ ಅಭಿಮಾನಿಗಳ ಭ್ರಮೆ

Pawan Kalyan: ಆರಂಭದಲ್ಲಿ ವಕೀಲ್​ ಸಾಬ್​ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್​ ಸಿಕ್ಕಿತ್ತು. ಅಭಿಮಾನಿಗಳು ಜೈಕಾರ ಹಾಕಿದ್ದರು. ಸಿನಿಮಾ ಗೆದ್ದೇಬಿಡ್ತು ಎಂದುಕೊಂಡರು. ಆದರೆ ಈಗ ಏನಾಗಿದೆ?

Vakeel saab Box Office Collection : ವಕೀಲ್​ ಸಾಬ್​ ಹಿಟ್​ ಅಥವಾ ಫ್ಲಾಪ್​? ಕಳಚಿತು ಪವನ್​ ಕಲ್ಯಾಣ್​ ಅಭಿಮಾನಿಗಳ ಭ್ರಮೆ
ಪವನ್​ ಕಲ್ಯಾಣ್​
ಮದನ್​ ಕುಮಾರ್​
|

Updated on: Apr 19, 2021 | 10:02 AM

Share

ನಟ ಪವನ್​ ಕಲ್ಯಾಣ್​ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರ ಸಿನಿಮಾ ರಿಲೀಸ್​ ಆದಾಗ ಜನರು ಮೊದಲ ದಿನವೇ ಮುಗಿಬಿದ್ದು ನೋಡುತ್ತಾರೆ. ವಕೀಲ್​ ಸಾಬ್​ ಸಿನಿಮಾ ವಿಚಾರದಲ್ಲೂ ಹಾಗೆಯೇ ಆಯಿತು. ಏ.9ರಂದು ಬಿಡುಗಡೆಯಾದ ಈ ಸಿನಿಮಾ ಮೊದಲ ದಿನವೇ ಅಂದಾಜು 40 ಕೋಟಿ ರೂ. ಕಮಾಯಿ ಮಾಡಿತ್ತು. ಆದರೆ 10 ದಿನ ಕಳೆಯುವುದರೊಳಗೆ ‘ವಕೀಲ್​ ಸಾಬ್​’ ಹಿಟ್​ ಅಥವಾ ಫ್ಲಾಪ್​ ಎಂಬ ಪ್ರಶ್ನೆ ಮೂಡಿದೆ.

ಪವನ್​ ಕಲ್ಯಾಣ್​ ಅವರಿಗೆ ಇದು ಕಮ್​ಬ್ಯಾಕ್​ ಸಿನಿಮಾ. ಹಾಗಾಗಿ ಅಭಿಮಾನಿಗಳು ಇದರ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದರು. ಟ್ರೇಲರ್​ ರಿಲೀಸ್​ ಆದಾಗಲೇ ದೊಡ್ಡಮಟ್ಟದ ಕ್ರೇಜ್​ ಸೃಷ್ಟಿ ಆಗಿತ್ತು. ಏ.9ರಂದು ಬಹುತೇಕ ಕಡೆಗಳಲ್ಲಿ ಹೌಸ್​ಫುಲ್​ ಆಯಿತು. ಇನ್ನೇನು ಪವನ್ ಕಲ್ಯಾಣ್​​ ಗೆದ್ದೇಬಿಟ್ಟರು ಎಂಬ ಮಾತುಗಳು ಕೇಳಿಬಂದವು. ಆದರೆ ನಂತರದ ದಿನಗಳಲ್ಲಿ ವಕೀಲ್​ ಸಾಬ್​ ಚಿತ್ರಕ್ಕೆ ಆತಂಕ ಶುರು ಆಯಿತು. ಚಿತ್ರಮಂದಿರದಲ್ಲಿ ಜನರ ಸಂಖ್ಯೆ ಕುಸಿಯತೊಡಗಿತು.

ಮೊದಲ ದಿನ ಎಲ್ಲಡೆ ವಕೀಲ್​ ಸಾಬ್​ ಹೌಸ್​ಫುಲ್​ ಆಗಿದ್ದು ಅಭಿಮಾನಿಗಳ ಬಲದಿಂದ ಮಾತ್ರ! ಅಂದು ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇನ್ನೊಂದು ವರ್ಗದ ಪ್ರೇಕ್ಷಕರು ಈ ಚಿತ್ರವನ್ನು ತೆಗಳಿದರು. ಒಂದು ವಾರ ಕಳೆಯುವುದರೊಳಗೆ ವಕೀಲ್​ ಸಾಬ್​ಗೆ ಹೀನಾಯ ಪರಿಸ್ಥಿತಿ ಬಂದಿದೆ. ಹಾಕಿದ ಬಂಡವಾಳವೇ ತಿರುಗಿ ಬಂದಿಲ್ಲ ಎನ್ನುತ್ತಿವೆ ಬಾಕ್ಸ್​ ಆಫೀಸ್​ ಮೂಲಗಳು. ಹಾಗಾಗಿ ಈ ಚಿತ್ರ ಬಹುತೇಕ ಸೋಲಿನ ಹಾದಿ ಹಿಡಿದಂತಾಗಿದೆ.

ಆರಂಭದಲ್ಲಿ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್​ ನೋಡಿದ ಅಭಿಮಾನಿಗಳು ಭಾರೀ ಜೈಕಾರ ಹಾಕಿದ್ದರು. ವಕೀಲ್​ ಸಾಬ್​ ಗೆದ್ದೇಬಿಡ್ತು ಎಂದುಕೊಂಡರು. ಆದರೆ ಅದು ಭ್ರಮೆ ಎಂಬುದು ಈಗ ಗೊತ್ತಾಗುತ್ತಿದೆ. ಚಿತ್ರದ ಸೋಲಿಗೆ ಕಾರಣ ಏನು ಎಂಬ ಪ್ರಶ್ನೆ ಈಗ ಎದುರಾಗಿದೆ. ಕೊರೊನಾ ಕಡೆಗೆ ನೇರವಾಗಿ ಕೈ ತೋರಿಸಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಕೊರೊನಾ ವೈರಸ್​ ಎರಡನೇ ಅಲೆ ಜೋರಾಗಿದೆ. ಹಾಗಾಗಿ ಹೆಚ್ಚಿನ ಜನರು ಚಿತ್ರಮಂದಿರದತ್ತ ಬರಲು ಹಿಂದೇಟು ಹಾಕುತ್ತಿದ್ದಾರೆ. ಜೊತೆಗೆ ಶೇ.50ರಷ್ಟು ಆಸನ ಮಿತಿ ನಿಯಮ ಹೇರಲಾಗಿದೆ. ಅತ್ತ ಪವನ್​ ಕಲ್ಯಾಣ್​ ಅವರಿಗೂ ಕೊರೊನಾ ವೈರಸ್​ ತಗುಲಿದೆ. ಹಾಗಾಗಿ ಅವರು ಚಿತ್ರದ ಪ್ರಚಾರದ ಕಡೆಗೆ ಗಮನ ಕೊಡಲು ಸಾಧ್ಯವಾಗಲಿಲ್ಲ. ಅವರಿಗೇ ಕೊವಿಡ್​ ಕಾಟ ಕೊಡುತ್ತಿರುವಾಗ ಅವರ ಅಭಿಮಾನಿಗಳು ಚಿತ್ರಮಂದಿರಕ್ಕೆ ಬರುವ ಧೈರ್ಯ ತೋರಿಸುವುದು ಕಷ್ಟ.

ಈ ಎಲ್ಲ ಕಾರಣದಿಂದಾಗಿ ವಕೀಲ್​ ಸಾಬ್​ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಸೋತಿದೆ. ಈವರೆಗೂ ಎಷ್ಟು ಕೆಲಕ್ಷನ್​ ಆಗಿದೆ ಎಂಬುದನ್ನು ನಿರ್ಮಾಪಕರು ಅಧಿಕೃತವಾಗಿ ಹೇಳಿಲ್ಲ. ಹಿಂದಿಯ ‘ಪಿಂಕ್​’ ಚಿತ್ರದ ತೆಲುಗು ರಿಮೇಕ್​ ಆಗಿ ಈ ಸಿನಿಮಾ ಮೂಡಿಬಂದಿದೆ. ಬಾಲಿವುಡ್​ನಲ್ಲಿ ಅಮಿತಾಭ್​ ಬಚ್ಚನ್​ ಮಾಡಿದ್ದ ಪಾತ್ರವನ್ನು ಟಾಲಿವುಡ್​ನಲ್ಲಿ ಪವನ್​ ಕಲ್ಯಾಣ್​ ಮಾಡಿದ್ದಾರೆ. ಇನ್ನೂ ಅನೇಕ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಆದರೆ ಪರಿಸ್ಥಿತಿ ನೀರಸವಾಗಿದೆ. ಕಲೆಕ್ಷನ್​ ಚೇತರಿಸಿಕೊಳ್ಳುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ.

ಇದನ್ನೂ ಓದಿ: ವಕೀಲ್​ ಸಾಬ್​ ಸಿನಿಮಾಗೆ ಮಹೇಶ್​ ಬಾಬು ವಿಮರ್ಶೆ! ಪವನ್​ ಕಲ್ಯಾಣ್​ ಚಿತ್ರದಲ್ಲಿ ಪ್ರಿನ್ಸ್​ ಮೆಚ್ಚಿದ್ದೇನು?

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ