AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBK8: ತಾಯಿ ಆತ್ಮಹತ್ಯೆ ಮಾಡಿಕೊಂಡಾಗ ರಘು ಮೇಲೆಯೇ ಅನುಮಾನ ಪಟ್ಟಿದ್ದ ಪೊಲೀಸರು! ಇದೆಂಥಾ ವಿಪರ್ಯಾಸ

Bigg Boss Kannada 8 Updates: ಎಲ್ಲರನ್ನೂ ನಗಿಸುವ ರಘು ಜೀವನದಲ್ಲಿ ಮರೆಯಲಾಗದ ನೋವುಗಳಿವೆ. ಅದನ್ನು ಅವರು ಬಿಗ್ ಬಾಸ್​ ಮನೆಯಲ್ಲಿ ಹೇಳಿಕೊಂಡಿದ್ದಾರೆ. ತಾಯಿಯ ದುರಂತ ಸಾವಿನ ಬಗ್ಗೆ ರಘು ಮಾತನಾಡಿದ್ದಾರೆ.

BBK8: ತಾಯಿ ಆತ್ಮಹತ್ಯೆ ಮಾಡಿಕೊಂಡಾಗ ರಘು ಮೇಲೆಯೇ ಅನುಮಾನ ಪಟ್ಟಿದ್ದ ಪೊಲೀಸರು! ಇದೆಂಥಾ ವಿಪರ್ಯಾಸ
ರಘು - ಬಿಗ್ ಬಾಸ್​ ಕನ್ನಡ ಸೀಸನ್​ 8
ಮದನ್​ ಕುಮಾರ್​
|

Updated on:Mar 19, 2021 | 11:52 AM

Share

ಲಾಕ್​ಡೌನ್ ಸಮಯದಲ್ಲಿ ಕಾಮಿಡಿ ವಿಡಿಯೋಗಳನ್ನು ಮಾಡಿ, ಎಲ್ಲರನ್ನೂ ನಗಿಸಿದವರು ರಘು. ಆದರೆ ಅವರ ಬದುಕಿನಲ್ಲಿ ನಡೆದ ಘಟನೆಗಳನ್ನು ನೋಡಿದರೆ ಎಂಥವರಿಗೂ ಕಣ್ಣೀರು ಬರುತ್ತದೆ. ಅಷ್ಟು ನೋವುಗಳನ್ನು ಅವರು ತಮ್ಮೊಳಗೆ ಇಟ್ಟುಕೊಂಡಿದ್ದಾರೆ. ಸದ್ಯ ಬಿಗ್​ ಬಾಸ್​ ಕನ್ನಡ ಸೀಸನ್​8ರಲ್ಲಿ ಸ್ಪರ್ಧಿಸುತ್ತಿರುವ ಅವರು ಆ ಕಷ್ಟಗಳನ್ನು ಹೇಳಿಕೊಂಡಿದ್ದಾರೆ.

‘ನಾನು ಚಿಕ್ಕ ವಯಸ್ಸಿನಲ್ಲಿ ಜಾಸ್ತಿ ನೋಡಿದ್ದೇ ನನ್ನ ತಂದೆ ತಾಯಿ ಜಗಳ ಮಾಡೋದನ್ನ. ನನ್ನ ತಂದೆ ಒಳ್ಳೆಯವರಾಗಿದ್ದರೂ ಕೂಡ ಕುಡಿತದ ಚಟ ಜಾಸ್ತಿ. ಫ್ರೆಂಡ್ಸ್​ ಮೇಲೆ ಜಾಸ್ತಿ ಡಿಪೆಂಡ್​ ಆಗಿದ್ದರು. ಫೈನಾನ್ಸ್​ ಮಾಡುತ್ತಾರೆ. ಕಾರಣಾಂತರಗಳಿಂದ ಅದು ಲಾಸ್​ ಆಗುತ್ತೆ. ನಾನು 10ನೇ ವಯಸ್ಸಿನಲ್ಲಿ ಇರುವಾಗ ನನ್ನ ತಂದೆ ಸೂಸೈಡ್​ ಮಾಡಿಕೊಂಡು ಸಾಯುತ್ತಾರೆ. ನಂತರ ಭಯದಲ್ಲಿ ನಮ್ಮ ಅಮ್ಮ ಸಮಾಜದ ಜೊತೆ ಜಾಸ್ತಿ ಬರೆಯುತ್ತಿರಲಿಲ್ಲ. ಊರಿಂದ ಸ್ವಂತ ತಮ್ಮ ಬಂದರೂ ಕೂಡ ಬಾಗಿಲು​ ಓಪನ್​ ಮಾಡಿಕೊಂಡು ಮಾತನಾಡಿಸಿ ಕಳಿಸುತ್ತಿದ್ದರು. ಯಾಕೆಂದರೆ ಸಮಾಜ ಏನು ಅನ್ನುತ್ತೋ ಅನ್ನುವಂತಹ ಭಯ. ಅವರಿಗೆ ಹಾಸ್ಯಪ್ರಜ್ಞೆ ಚೆನ್ನಾಗಿತ್ತು. ಆದರೂ ಒಂಟಿತನ ಕಾಡುತ್ತಿತ್ತು. ಅಪ್ಪ ಮಾಡಿದ ಸಾಲವನ್ನು ನಾವು ಜೀವನ ಪರ್ಯಂತ ತೀರಿಸುತ್ತ ಬಂದ್ವಿ’ ಎಂದಿದ್ದಾರೆ ರಘು.

‘20ನೇ ವಯಸ್ಸಿನಲ್ಲಿ ನನಗೆ ಓದೋಕೆ, ಕೆಲಸ ಮಾಡೋಕೆ ಇಷ್ಟ ಇರಲಿಲ್ಲ. ಬೇರೆ ಪ್ರತಿಭೆ ಕೂಡ ಇರಲಿಲ್ಲ. ಎಲ್ಲರೂ ಆಡಿಕೊಳ್ಳುತ್ತಿದ್ದರು. ಆಗಲೇ ನನಗೆ ಡಿಪ್ರೆಷನ್​ ಶುರು ಆಯಿತು. ಸಾಯುತ್ತೇನೆ, ಓಡಿ ಹೋಗುತ್ತೇನೆ ಅಂತ ಹೇಳ್ತಿದ್ದೆ. ಒಂದಿನ ಅಮ್ಮ ನನ್ನನ್ನು ಕರೆದುಕೊಂಡು ಹೋಗಿ ಒಂದು ಸೇತುವೆ ಮೇಲೆ ನಿಲ್ಲಿಸಿದರು. ನಾನು ಎಲ್ಲವೂ ನೋಡಿದ್ದೇನೆ. ನಾನು ಸತ್ತರೂ ಚಿಂತೆ ಇಲ್ಲ. ನೀನು ಒಮ್ಮೆ ಯೋಚನೆ ಮಾಡು ಅಂದ್ರು. ಕೆಳಗೆ ನೀರು ನೋಡಿದಾಗ ಒಂದು ಕ್ಷಣ ನನ್ನ ಜೀವನ ಕಣ್ಣಮುಂದೆ ಬಂದು ಹೋಯ್ತು. ತಕ್ಷಣ ಅಮ್ಮನ ಕಾಲು ಹಿಡಿದುಕೊಂಡೆ’ ಎಂದು ಭಾವುಕರಾಗಿ ರಘು ವಿವರಿಸಿದ್ದಾರೆ.

’ನಂತರ ಒಂದು ಕಡೆ ಕೆಲಸಕ್ಕೆ ಸೇರಿಕೊಂಡೆ. ಆದರೆ 2014ರ ಜನವರಿಯಿಂದ ನಮ್ಮ ಅಮ್ಮ ಡಿಪ್ರೆಷನ್​ಗೆ ಒಳಗಾದರು. ಹಲವು ಸಲ ಆತ್ಮಹತ್ಯೆ ಮಾಡಿಕೊಳ್ಳೋಕೆ ಪ್ರಯತ್ನಿಸಿದರು. ನಂತರ 3 ತಿಂಗಳು ನನ್ನ ಜೀವನದಲ್ಲಿ ನೋಡಿದ ಅತ್ಯಂತ ಕೆಟ್ಟ ದಿನಗಳು. ಆಫೀಸ್​ನಲ್ಲಿ ಇದ್ದಾಗ ಸಡನ್ನಾಗಿ ಅಮ್ಮ ಸಾಯುತ್ತೀನಿ ಅಂದಾಗ ಮನೆಗೆ ಓಡಿ ಹೋಗಬೇಕಿತ್ತು. ಫ್ಯಾಮಿಲಿಯವರು ಬಂದ್ರು. ಆದರೆ ದಿನ ಸಾಯೋರಿಗೆ ಅಳೋರು ಯಾರು ಅಂತ ಅವರೂ ಹೋದರು. ಮಾ.22ರಂದು ಅಮ್ಮ ಸೂಸೈಡ್​ ಮಾಡಿಕೊಂಡರು’ ಎಂದು ರಘು ಕಣ್ಣೀರು ಹಾಕಿದ್ದಾರೆ.

’ಎಫ್​ಐಆರ್​ ಫೈಲ್​ ಮಾಡಲು ಪೊಲೀಸ್​ ಸ್ಟೇಷನ್​ಗೆ ಹೋದಾಗ ಪೊಲೀಸರು ಕೆಟ್ಟದಾಗಿ ಬೈಯ್ದರು. ನಾಟಕ ಮಾಡಬೇಡ. ಏನ್​ ಮಾಡಿದೀಯ ಹೇಳು ಅಂದರು. ನನ್ನ ಕೈಯಲ್ಲಿ ಟ್ಯಾಟೂ, ಮುಖದಲ್ಲಿ ಗಡ್ಡ, ಕಿವಿಯಲ್ಲಿ ಓಲೆ ಇದೆ. ಜಗತ್ತು ಅಷ್ಟೇ ನನ್ನನ್ನು ನೋಡಿರೋದು. ಎಲ್ಲರ ಪಾಲಿಗೆ ನಾನು ಚಪ್ಪರ್​. ಇವನೇ ಏನೋ ಮಾಡಿದಾನೆ ಅಂದುಕೊಂಡರು. ಆದಾದ ಮೇಲೆ ತುಂಬ ಸಲ ನಾನು ಸಾಯಬೇಕು ಅಂದುಕೊಂಡೆ. ಆದರೆ ಧೈರ್ಯ ಇಲ್ಲ. ನಾನೂ ಸತ್ತರೆ ಇವರ ಇಡೀ ಫ್ಯಾಮಿಲಿ ಸೂಸೈಡ್​ ಮಾಡಿಕೊಳ್ತು ಅಂತಾರೆ. ಹಾಗೆ ಆಗುವುದು ನನಗೆ ಇಷ್ಟ ಇರಲಿಲ್ಲ. ಹೆಂಡತಿ ಬಂದ ಬಳಿಕ ಜೀವನ ಸರಿ ಆಯ್ತು’ ಎಂದು ಕಷ್ಟದ ದಿನಗಳನ್ನು ರಘು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: Bigg Boss Kannada: ರಘುಗೆ ವೋಟ್​ ಹಾಕಿ ಅಂತಿದ್ದಾರಾ ದ್ರಾವಿಡ್​, ಶಿವಣ್ಣ, ಪುನೀತ್​, ಡಾಲಿ? ಇದಪ್ಪಾ ಕ್ರಿಯೇಟಿವಿಟಿ ಅಂದ್ರೆ!

Bigg Boss Kannada: ಕರುನಾಡಿನ ಜನತೆ ಎದುರು ಬಹಿರಂಗ ಆಯ್ತು ಬಿಗ್​ ಬಾಸ್​ ರಘು ವೀಕ್​ನೆಸ್​! ಇನ್ಮುಂದೆ ಕಷ್ಟ ಇದೆ

Published On - 11:42 am, Fri, 19 March 21

ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್