ಮಂಜುನ ಪ್ರೀತಿಸ್ತೀನಿ ಎನ್ನುತ್ತ ಸುದೀಪ್​ ಎದುರಲ್ಲೇ ಟ್ವಿಸ್ಟ್​ ಕೊಟ್ಟ ದಿವ್ಯಾ! ಅಬ್ಬಬ್ಬಾ ಸಖತ್​ ಚಾಲಾಕಿ

| Updated By: ರಾಜೇಶ್ ದುಗ್ಗುಮನೆ

Updated on: Apr 05, 2021 | 4:05 PM

ಮಂಜು ಮತ್ತು ದಿವ್ಯಾ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದಾರೆ ಎಂಬುದು ನಿಜವಾದರೂ ಟಾಸ್ಕ್​ ವಿಚಾರದಲ್ಲಿ ಪಕ್ಕಾ ಪ್ರಾಕ್ಟಿಕಲ್​ ಆಗಿದ್ದಾರೆ. ಹಾಗಿದ್ದರೂ ಕೂಡ ಅವರ ನಡುವಿನ ಆಪ್ತತೆಯೇ ಯಾಕೋ ಹೆಚ್ಚು ಹೈಲೈಟ್​ ಆಗುತ್ತಿದೆ.

ಮಂಜುನ ಪ್ರೀತಿಸ್ತೀನಿ ಎನ್ನುತ್ತ ಸುದೀಪ್​ ಎದುರಲ್ಲೇ ಟ್ವಿಸ್ಟ್​ ಕೊಟ್ಟ ದಿವ್ಯಾ! ಅಬ್ಬಬ್ಬಾ ಸಖತ್​ ಚಾಲಾಕಿ
ಮಂಜು ಪಾವಗಡ - ದಿವ್ಯಾ ಸುರೇಶ್​
Follow us on

ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​ ಹೆಚ್ಚು ಆಪ್ತರಾಗಿದ್ದಾರೆ. ಅವರಿಬ್ಬರ ನಡುವೆ ಏನು ನಡೆಯುತ್ತಿದೆ ಎಂಬ ಅನುಮಾನ ಎಲ್ಲರಿಗೂ ಇದೆ. ಟಾಸ್ಕ್​ ಇಲ್ಲದೆ ಇರುವಾಗ ಅವರಿಬ್ಬರು ಜೊತೆಯಾಗಿ ಹೆಚ್ಚಿನ ಸಮಯ ಕಳೆಯುತ್ತಾರೆ. ಆ ಬಗ್ಗೆ ಪದೇಪದೇ ಚರ್ಚೆ ಆಗುತ್ತಿದೆ ಕೂಡ. ಕೆಲವೇ ದಿನಗಳ ಹಿಂದೆ ತಾವಿಬ್ಬರೂ ಗಂಡ-ಹೆಂಡತಿ ಎಂದು ಭಾವಿಸಿಕೊಂಡು ಅವರಿಬ್ಬರು ವೈಷ್ಣವಿ ಬಳಿ ಹೋಗಿ ಆಪ್ತ ಸಮಾಲೋಚನೆ ಪಡೆದುಕೊಂಡಿದ್ದರು. ಆದರೆ ಈಗ ದಿವ್ಯಾ ಸುರೇಶ್​ ಇನ್ನೊಂದು ಟ್ವಿಸ್ಟ್​ ನೀಡಿದ್ದಾರೆ.

ಐದನೇ ವಾರದ ವೀಕೆಂಡ್​ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್​ ಎದುರಿನಲ್ಲೇ ಮಂಜು ಮತ್ತು ದಿವ್ಯಾ ಸುರೇಶ್​ ಒಡನಾಟದ ಬಗ್ಗೆ ಚರ್ಚೆ ಆಗಿದೆ. ಮನೆಯ ಎಲ್ಲ ಸದಸ್ಯರಿಗೂ ಸುದೀಪ್​ ಒಂದು ಪ್ರಶ್ನೆ ಕೇಳಿದರು. ಮಂಜು ಇಲ್ಲದೇ ಇದ್ದಿದ್ದರೆ ಇಷ್ಟು ದಿನಗಳ ಕಾಲ ದಿವ್ಯಾ ಸುರೇಶ್​ ಅವರು ಬಿಗ್​ ಬಾಸ್​ ಮನೆಯಲ್ಲಿ ಉಳಿಯುತ್ತಿರಲಿಲ್ಲ- ಹೌದೋ ಅಲ್ಲವೋ ಎಂದು ಕಿಚ್ಚ ಕೇಳಿದ್ದಕ್ಕೆ ಎಲ್ಲರೂ ಬೇರೆ ಬೇರೆ ರೀತಿ ಉತ್ತರ ನೀಡಿದರು.

ಹೌದು ಎಂದು ಪ್ರಶಾಂತ್​ ಸಂಬರಗಿ ಉತ್ತರಿಸಿದರು. ದಿವ್ಯಾ ಮಂಜುನ ಬಾಲದ ರೀತಿ ಇದ್ದಾಳೆ ಎಂಬ ಮಾತನ್ನು ಅವರು ಒತ್ತಿ ಹೇಳಿದರು. ಆದರೆ ಈ ಮಾತನ್ನು ಸ್ವತಃ ಮಂಜು ಒಪ್ಪಲಿಲ್ಲ. ದಿವ್ಯಾ ಸುರೇಶ್​ಗೆ ಅವಳದ್ದೇ ಆದ ವ್ಯಕ್ತಿತ್ವ ಇದೆ. ನಾನು ಇಲ್ಲದೇ ಇದ್ದರೂ ಅವಳು ಬಿಗ್​ ಬಾಸ್​ ಮನೆಯಲ್ಲಿ ಇಷ್ಟು ದಿನ ಖಂಡಿತವಾಗಿ ಇರುತ್ತಿದ್ದಳು ಎಂದು ಮಂಜು ಹೇಳಿದರು.

ನಂತರ ಮಂಜು ಬಗ್ಗೆ ದಿವ್ಯಾ ಸುರೇಶ್​ ಮಾತನಾಡಿದರು. ‘ಮಂಜು ನನ್ನ ಜೀವನದಲ್ಲಿ ಬೇರೆ ಸ್ಥಾನ ಪಡೆದುಕೊಂಡಿದ್ದಾನೆ. ಯಾವ ಥರ ಹೇಳಬೇಕು ಅಂತ ಗೊತ್ತಾಗ್ತಾ ಇಲ್ಲ. ಐ ಲವ್​ ಹಿಮ್​ ಸೋ ಮಚ್​’ ಎಂದು ಅವರು ಹೇಳಿದರು. ಮರುಕ್ಷಣವೇ ‘ಆ್ಯಸ್​ ಎ ಫ್ರೆಂಡ್​. ಅದು ಹಾಗೇ ಇರುತ್ತೆ ಎಂದು ಭಾವಿಸುತ್ತೇನೆ’ ಎನ್ನುವ ಮೂಲಕ ಟ್ವಿಸ್ಟ್​ ನೀಡಿದರು!

ಮಂಜು ಮತ್ತು ದಿವ್ಯಾ ಪರಸ್ಪರ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದಾರೆ ಎಂಬುದು ನಿಜವಾದರೂ ಟಾಸ್ಕ್​ ವಿಚಾರದಲ್ಲಿ ಪಕ್ಕಾ ಪ್ರಾಕ್ಟಿಕಲ್​ ಆಗಿದ್ದಾರೆ. ಹಾಗಿದ್ದರೂ ಕೂಡ ಅವರ ನಡುವಿನ ಆಪ್ತತೆಯೇ ಯಾಕೋ ಹೆಚ್ಚು ಹೈಲೈಟ್​ ಆಗುತ್ತಿದೆ. ಏ.4ರಂದು ಶಂಕರ್​ ಅಶ್ವತ್ಥ್​ ಎಲಿಮಿನೇಟ್​ ಆದರು. ಎಲ್ಲರಿಗೂ ವಿದಾಯ ಹೇಳುವ ಸಂದರ್ಭದಲ್ಲಿ ಮಂಜು ಮತ್ತು ದಿವ್ಯಾರನ್ನು ಉದ್ದೇಶಿಸಿ, ‘ಹೊರಗೆ ಬಂದಮೇಲೆ ಸಿಹಿ ಸುದ್ದಿ ನೀಡಿ’ ಎಂದು ಶಂಕರ್​ ಅಶ್ವತ್ಥ್​ ಆಶೀರ್ವಾದ ಮಾಡಿದರು!

ಇದನ್ನೂ ಓದಿ: ಬಿಗ್​ ಬಾಸ್​ ವೇದಿಕೆ ಮೇಲೆ ಆರ್​ಸಿಬಿಗೆ ಆಲ್​ ದಿ ಬೆಸ್ಟ್​ ಅಂದ್ರು ಸುದೀಪ್​!

ಬಿಗ್​ ಬಾಸ್​ ಮನೆಗೆ ಮತ್ತೊಂದಷ್ಟು ವೈಲ್ಡ್​ ಕಾರ್ಡ್​ ಎಂಟ್ರಿ; ಸುದೀಪ್​ ಕೊಟ್ರು ಸೂಚನೆ

 

 

(Bigg Boss Kannada updates: Divya Suresh says I love Manju Pavagada but as a friend)