Adipurush: ‘ಆಂಜನೇಯನಿಗೆ ಇಂಥ ಸೀನ್​ ತೋರಿಸಿಬಿಟ್ರಲ್ಲೋ’: ‘ಆದಿಪುರುಷ್​’ ಚಿತ್ರದ ಗ್ಲಾಮರ್​ ಬಗ್ಗೆ ಜನರ ಟೀಕೆ

Vibhishana Wife in Adipurush: ‘ಆದಿಪುರುಷ್​’ ಸಿನಿಮಾದಲ್ಲಿ ಅನವಶ್ಯಕವಾಗಿ ಗ್ಲಾಮರ್​ ತೋರಿಸುವ ಪ್ರಯತ್ನ ಆಗಿದೆ! ಅದನ್ನು ಗಮನಿಸಿದ ವೀಕ್ಷಕರು ಚಿತ್ರತಂಡವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

Adipurush: ‘ಆಂಜನೇಯನಿಗೆ ಇಂಥ ಸೀನ್​ ತೋರಿಸಿಬಿಟ್ರಲ್ಲೋ’: ‘ಆದಿಪುರುಷ್​’ ಚಿತ್ರದ ಗ್ಲಾಮರ್​ ಬಗ್ಗೆ ಜನರ ಟೀಕೆ
ತೃಪ್ತಿ ತೋರಡ್ಮಲ್​, ದೇವದತ್ತ ನಾಗೆ
Follow us
|

Updated on:Jun 19, 2023 | 8:31 PM

ಹತ್ತು ಹಲವು ಕಾರಣಗಳಿಂದಾಗಿ ‘ಆದಿಪುರುಷ್​’ ಸಿನಿಮಾ (Adipurush Movie) ಟ್ರೋಲ್​ ಆಗುತ್ತಿದೆ. ಪ್ರತಿ ಪಾತ್ರವನ್ನೂ ಇಟ್ಟುಕೊಂಡು ಟೀಕೆ ಮಾಡಲಾಗುತ್ತಿದೆ. ಯಾವುದೋ ಕಾಲ್ಪನಿಕ ಕಥೆಯುಳ್ಳ ಸಿನಿಮಾ ಆಗಿದ್ದರೆ ಇಷ್ಟು ಕಿರಿಕ್​ ಆಗುತ್ತಿರಲಿಲ್ಲ. ಆದರೆ ಇದು ರಾಮಾಯಣ ಆಧಾರಿತ ಸಿನಿಮಾ ಆದ್ದರಿಂದ ಜನರು ಎಲ್ಲವನ್ನೂ ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇನ್ನು, ಈ ಸಿನಿಮಾದವರು ಮಾಡಿದ ಪ್ರಚಾರ ತಂತ್ರಗಳ ಬಗ್ಗೆಯೂ ತಕರಾರು ತೆಗೆಯಲಾಗಿದೆ. ನಿರ್ದೇಶಕ ಓಂ ರಾವತ್​ (Om Raut) ಅವರು ‘ಆದಿಪುರುಷ್​’ ಸಿನಿಮಾದಲ್ಲಿ ಕೆಲವು ಅನಗತ್ಯವಾದ ಅಂಶಗಳನ್ನು ತುರುಕಿದ್ದಾರೆ. ಇಂಥ ಪೌರಾಣಿಕ ಕಥೆಯಲ್ಲಿ ಅನವಶ್ಯಕವಾಗಿ ಗ್ಲಾಮರ್​ ತೋರಿಸುವ ಪ್ರಯತ್ನ ಆಗಿದೆ. ಅದನ್ನು ಗಮನಿಸಿದ ವೀಕ್ಷಕರು ಚಿತ್ರತಂಡವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಮರಾಠಿ ನಟಿ ತೃಪ್ತಿ ತೋರಡ್ಮಲ್ (Trupti Toradmal) ಅವರು ಒಂದು ದೃಶ್ಯದಲ್ಲಿ ಗ್ಲಾಮರಸ್​ ಆಗಿ ಕಾಣಿಸಿಕೊಂಡಿದ್ದು, ಅದರ ಫೋಟೋ ವೈರಲ್​ ಆಗಿದೆ.

ರಾವಣನ ಸಹೋದರ ವಿಭೀಷಣನ ಹೆಂಡತಿಯಾದ ಸರಮಾ ಪಾತ್ರದಲ್ಲಿ ತೃಪ್ತಿ ತೋರಡ್ಮಲ್​ ನಟಿಸಿದ್ದಾರೆ. ಸರಮಾ ಪಾತ್ರವನ್ನು ನಿರ್ದೇಶಕ ಓಂ ರಾವತ್ ಅವರು ಗ್ಲಾಮರಸ್​ ಆಗಿ ತೋರಿಸಿದ್ದಾರೆ. ಒಂದು ದೃಶ್ಯದಲ್ಲಿ ಆಕೆ ತನ್ನ ಸೀರೆಯ ಸೆರಗನ್ನು ಸರಿ ಮಾಡಿಕೊಳ್ಳುವ ದೃಶ್ಯ ಇದೆ. ಅದರ ಅವಶ್ಯಕತೆ ಏನಿತ್ತು ಎಂದು ಪ್ರೇಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೇ, ‘ಆದಿಪುರುಷ್​’ ಸಿನಿಮಾ ಪ್ರದರ್ಶನ ಆಗುವ ಬಹುತೇಕ ಚಿತ್ರಮಂದಿರಗಳಲ್ಲಿ ಒಂದು ಸೀಟನ್ನು ಆಂಜನೇಯನಿಗೆ ಮೀಸಲಾಗಿ ಇಡಲಾಗುತ್ತಿದೆ. ಅದರಲ್ಲಿ ಹನುಮಂತನ ಫೋಟೋ ಇಟ್ಟು, ಪುಷ್ಪಾರ್ಚನೆ ಮಾಡಲಾಗುತ್ತಿದೆ. ‘ಚಿತ್ರಮಂದಿರದಲ್ಲಿ ಆಂಜನೇಯನನ್ನು ಕೂರಿಸಿ, ಇಂಥ ಸೀನ್​ ತೋರಿಸಿಬಿಟ್ರಲ್ಲೋ’ ಎಂದು ಟ್ವಿಟರ್​ನಲ್ಲಿ ಟ್ರೋಲ್​ ಮಡಲಾಗುತ್ತಿದೆ.

ಪ್ರಚಾರಕ್ಕಾಗಿ ‘ಆದಿಪುರುಷ್​’ ತಂಡದವರು ಮಾಡಿದ ಸರ್ಕಸ್​ಗಳು ಹಲವು. ಸಿನಿಮಾ ಪ್ರದರ್ಶನ ಆಗುವ ಎಲ್ಲ ಚಿತ್ರಮಂದಿರಗಳಲ್ಲಿ ಆಂಜನೇಯನಿಗಾಗಿ ಒಂದು ಸೀಟು ಮೀಸಲಿರಿಸಲು ಚಿತ್ರತಂಡ ಕರೆ ನೀಡಿತ್ತು. ಅದಕ್ಕೆ ಹಲವು ಮಲ್ಟಿಪ್ಲೆಕ್ಸ್​ ಮತ್ತು ಚಿತ್ರಮಂದಿರದವರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಆದರೆ ಸಿನಿಮಾದಲ್ಲಿ ಇಂಥ ದೃಶ್ಯಗಳು ಇರುವುದರಿಂದ ಆಂಜನೇಯನಿಗೆ ಅವಮಾನ ಮಾಡಿದಂತೆ ಆಗಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: Om Raut: ‘ಆದಿಪುರುಷ್​’ ಚಿತ್ರಕ್ಕೆ ಕೆಟ್ಟ ವಿಮರ್ಶೆ ಸಿಕ್ಕ ಬಳಿಕ ನಿರ್ದೇಶಕ ಓಂ ರಾವತ್​ ಪ್ರತಿಕ್ರಿಯೆ ಏನು?

ದೇವದತ್ತ ನಾಗೆ ಅವರು ಈ ಸಿನಿಮಾದಲ್ಲಿ ಆಂಜನೇಯನ ಪಾತ್ರ ಮಾಡಿದ್ದಾರೆ. ಅವರ ಅಭಿನಯವನ್ನು ಜನರು ಮೆಚ್ಚಿಕೊಂಡಿದ್ದಾರೆ. ಆದರೆ ಆ ಪಾತ್ರದ ಸಂಭಾಷಣೆ ಕಳಪೆ ಆಗಿದೆ ಎಂದು ಅನೇಕರು ಆಕ್ಷೇಪಿಸಿದ್ದಾರೆ. ಭಾರಿ ವಿರೋಧ ವ್ಯಕ್ತವಾದ ಬಳಿಕ ಆ ಡೈಲಾಗ್​ಗಳನ್ನು ಬದಲಾಯಿಸಲು ಚಿತ್ರತಂಡ ಒಪ್ಪಿಕೊಂಡಿದೆ. ರಾವಣನ ಪಾತ್ರವನ್ನು ತೋರಿಸಿದ ರೀತಿಯೂ ಸರಿಯಿಲ್ಲ ಎಂದು ಬಹುತೇಕರು ತಕರಾರು ತೆಗೆದಿದ್ದಾರೆ. ಬ್ರಾಹ್ಮಣನಾದ ರಾವಣನು ಮಾಂಸ ಮುಟ್ಟುವ ದೃಶ್ಯ ಈ ಚಿತ್ರದಲ್ಲಿ ಇದೆ. ಅದನ್ನು ನೆಟ್ಟಿಗರು ವಿರೋಧಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:32 pm, Mon, 19 June 23

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್