AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈಗತಾನೇ ಮದುವೆ ನಟಿಯ ಮೇಲೆ ವಿವಾಹೇತರ ಸಂಬಂಧ ಆರೋಪ: ಕೊನೆಗೂ ಮೌನ ಮುರಿದ ನಟಿ

Aditi Sharma: ಅದಿತಿ ಶರ್ಮಾ ಅವರು ತಮ್ಮ ನಾಲ್ಕು ತಿಂಗಳ ಮದುವೆಯ ನಂತರ ವಿಚ್ಛೇದನ ಪಡೆಯುತ್ತಿದ್ದಾರೆ. ಅವರ ಪತಿ ಅಭಿನೀತ್ ಕೌಶಿಕ್ ಅವರ ಮೇಲೆ ವಿವಾಹೇತರ ಸಂಬಂಧದ ಆರೋಪ ಹೊರಿಸಿದ್ದಾರೆ. ಅದಿತಿ ಅವರು ಈ ಆರೋಪಗಳನ್ನು ನಿರಾಕರಿಸಿ, ಅಭಿನೀತ್ ಅವರ ಅಸೂಯೆ ಮತ್ತು ಅವರ ಕುಟುಂಬದ ಮೇಲಿನ ಅವಮಾನದ ಬಗ್ಗೆ ಮಾತನಾಡಿದ್ದಾರೆ.

ಈಗತಾನೇ ಮದುವೆ ನಟಿಯ ಮೇಲೆ ವಿವಾಹೇತರ ಸಂಬಂಧ ಆರೋಪ: ಕೊನೆಗೂ ಮೌನ ಮುರಿದ ನಟಿ
Aditi Sharma
 ಶ್ರೀಲಕ್ಷ್ಮೀ ಎಚ್
| Edited By: |

Updated on: Mar 14, 2025 | 10:27 PM

Share

‘ರಬ್ ಸೆ ಹೈ ದುವಾ’, ‘ಯೇ ಜಾದು ಹೈ ಜಿನ್ ಕಾ’ ಮತ್ತು ‘ಅಪೋಲೆನಾ’ ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದ ನಟಿ ಅದಿತಿ ಶರ್ಮಾ, ಪ್ರಸ್ತುತ ವಿಚ್ಛೇದನದಿಂದಾಗಿ ಸುದ್ದಿಯಲ್ಲಿದ್ದಾರೆ. ಮದುವೆಯಾದ ಕೇವಲ ನಾಲ್ಕು ತಿಂಗಳ ನಂತರ ಅವರು ಅಭಿನೀತ್ ಕೌಶಿಕ್​ನಿಂದ ಬೇರ್ಪಡಲು ನಿರ್ಧರಿಸಿದ್ದಾರೆ. ಮದುವೆಗೆ ಮೊದಲು, ಅದಿತಿ ಮತ್ತು ಅಭಿನೀತ್ ಲಿವ್-ಇನ್​ನಲ್ಲಿ ಇದ್ದರು. ಈಗ ಪತ್ನಿಮೇಲೆ ವಿವಾಹೇತರ ಸಂಬಂಧವನ್ನು ಹೊರಿಸಿದ್ದಾರೆ ಅಭಿನೀತ್. ಈ ಎಲ್ಲಾ ಆರೋಪಗಳಿಗೆ ಅದಿತಿ ಈಗ ಪ್ರತಿಕ್ರಿಯಿಸಿದ್ದಾರೆ.

‘ನಮ್ಮ ವಿವಾಹವು ಒಂದು ಖಾಸಗಿ ಕಾರ್ಯಕ್ರಮವಾಗಿತ್ತು. ಆದರೆ ಅದರಲ್ಲಿ ಯಾವುದೇ ರಹಸ್ಯವಿರಲಿಲ್ಲ. ನನ್ನ ಕುಟುಂಬ, ನನ್ನ ಆಪ್ತ ಸ್ನೇಹಿತರು, ನನ್ನ ಗೆಳೆಯರಿಗೆ ಮದುವೆಯ ಬಗ್ಗೆ ತಿಳಿದಿತ್ತು. ಹಾಗಾಗಿ ಅದು ರಹಸ್ಯ ವಿವಾಹವಾಗಿರಲಿಲ್ಲ. ನಾವು ಕೆಲವು ಅತಿಥಿಗಳ ಸಮ್ಮುಖದಲ್ಲಿ ಮದುವೆಯಾದೆವು’ ಎಂದಿದ್ದಾರೆ ಅದಿತಿ.

‘ನಾನು ಅಭಿನೀತ್​ನ ತುಂಬಾ ಪ್ರೀತಿಸುತ್ತೇನೆ ಮತ್ತು ಅವನನ್ನು ಕಳೆದುಕೊಳ್ಳಲು ನಾನು ಬಯಸಲಿಲ್ಲ, ಆದ್ದರಿಂದ ನಾವು ಮದುವೆಯಾದೆವು. ನಾನು ಸಹನಟ ಅಥವಾ ಪುರುಷನೊಂದಿಗೆ ಏನು ಮಾತನಾಡಿದರೂ, ಅವನು ನನ್ನ ಮಾತನ್ನು ಕೇಳಲು ಬಯಸುವುದಿಲ್ಲ. ವನಿಗೆ ಸಾಕಷ್ಟು ಅಸೂಯೆ ಇದೆ’ ಎಂದಿದ್ದಾರೆ ಅವರು.

‘ಅಪೋಲೆನಾ’ ಸರಣಿಯಲ್ಲಿ ಅದಿತಿ 18 ವರ್ಷದ ಹುಡುಗಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ . ಆದ್ದರಿಂದ, ಮದುವೆಯ ಸುದ್ದಿ ತನ್ನ ತೆರೆಯ ಮೇಲಿನ ಇಮೇಜ್ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದನ್ನು ತಪ್ಪಿಸಲು ವಿವಾಹ ವಿಚಾರ ಮುಚ್ಚಿಟ್ಟೆ ಎಂದಿದ್ದಾರೆ ಅವರು.

ಇದನ್ನೂ ಓದಿ:ಬಾಲಿವುಡ್​ ಹಿರಿಯ ನಟ ದೇಬ್ ಮುಖರ್ಜಿ ನಿಧನ, ಜೂ ಎನ್​ಟಿಆರ್ ಸಿನಿಮಾ ಮೇಲೆ ಪ್ರಭಾವ?

‘ವಿಚ್ಛೇದನಕ್ಕೆ ಹಲವು ಕಾರಣಗಳಿವೆ. ನಾನು ನ್ಯಾಯಾಲಯದಲ್ಲಿ ಅದರ ಬಗ್ಗೆ ವಿವರವಾಗಿ ಮಾತನಾಡುತ್ತೇನೆ. ಅಭಿನೀತ್ ನನ್ನ ಹೆತ್ತವರನ್ನು ಹಲವು ಬಾರಿ ಅವಮಾನಿಸಿದ್ದಾನೆ. ನಾನು ಅವನ ದುರಾಚಾರವನ್ನು ಸಹಿಸಿಕೊಂಡೆ. ಕೆಲವು ಕಾರಣಗಳಿಂದ ನಾನು ಮನೆ ಬಿಟ್ಟು ಹೋಗಬೇಕಾಯಿತು ಮತ್ತು ನನಗೆ ತುಂಬಾ ಭಯವಾಯಿತು’ ಎಂದಿದ್ದಾರೆ ಅವರು.

ಸಹ ನಟ ಸಮರ್ಥ್ಯ ಜೊತೆ ಅವರು ಸಂಬಂಧ ಹೊಂದಿರೋ ಆರೋಪ ಇದೆ. ಈ ಬಗ್ಗೆ ಮಾತನಾಡಿರೋ ಅವರು, ‘ಸಮರ್ಥ್ಯ ಮತ್ತು ನಾನು ತುಂಬಾ ಒಳ್ಳೆಯ ಸ್ನೇಹಿತರು. ನಿಜ ಹೇಳಬೇಕೆಂದರೆ, ಪಾರ್ಟಿಯಲ್ಲಿ ನಾನು ನೋಡಿದ, ಮಾತನಾಡಿದ ಅಥವಾ ಚಾಟ್ ಮಾಡಿದ ಯಾವುದೇ ಪುರುಷನೊಂದಿಗೆ ಅವನಿಗೆ ಸಮಸ್ಯೆ ಕಾಣುತ್ತಿತ್ತು. ಅದು ನಾಲ್ಕು ಜನರಾರಿದ್ದರೂ ಸಹ. ನಾನು ಸಾಮಾಜಿಕ ಮಾಧ್ಯಮದಲ್ಲಿ ಹೃದಯದ ಎಮೋಜಿಯನ್ನು ಪೋಸ್ಟ್ ಮಾಡಿದರೂ, ಅದು ದೊಡ್ಡ ವಿವಾದವನ್ನು ಸೃಷ್ಟಿಸುತ್ತದೆ. ಈ ಕಾರಣಗಳಿಂದಾಗಿ, ನಾನು ಕ್ರಮೇಣ ನನ್ನ ಸ್ನೇಹಿತರು ಮತ್ತು ಕುಟುಂಬದಿಂದ ದೂರವಾದೆ’ ಎಂದು ಅದಿತಿ ತನ್ನ ಕಥೆಯ ಭಾಗವನ್ನು ವಿವರಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ