AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಷ್ಟೇ ಬ್ಯುಸಿ ಇದ್ದರೂ ಫ್ಯಾನ್ಸ್ ಜೊತೆ ಪ್ರೀತಿಯಿಂದ ನಡೆದುಕೊಂಡ ಐಶ್ವರ್ಯಾ ರೈ

ತಮ್ಮ ಸರಳತೆ ಮತ್ತು ಅಭಿಮಾನಿಗಳ ಮೇಲಿನ ಪ್ರೀತಿಯಿಂದ ಐಶ್ವರ್ಯಾ ರೈ ಮತ್ತೊಮ್ಮೆ ಎಲ್ಲರ ಮನ ಗೆದ್ದಿದ್ದಾರೆ. ಕಾನ್ ಚಿತ್ರೋತ್ಸವದ ಬಳಿಕ ಅವರ ನಡೆದುಕೊಂಡ ರೀತಿಯನ್ನು ಕಂಡು ಫ್ಯಾನ್ಸ್ ಹೊಗಳುತ್ತಿದ್ದಾರೆ. ಐಶ್ವರ್ಯಾ ರೈ ಅವರು ಜಾಗತಿಕ ಮಟ್ಟದ ಸ್ಟಾರ್ ಆಗಿದ್ದರೂ ಕೂಡ ಅಭಿಮಾನಿಗಳನ್ನು ಕಡೆಗಣಿಸಿಲ್ಲ.

ಎಷ್ಟೇ ಬ್ಯುಸಿ ಇದ್ದರೂ ಫ್ಯಾನ್ಸ್ ಜೊತೆ ಪ್ರೀತಿಯಿಂದ ನಡೆದುಕೊಂಡ ಐಶ್ವರ್ಯಾ ರೈ
Aishwarya Rai Bachchan
ಮದನ್​ ಕುಮಾರ್​
|

Updated on: May 24, 2026 | 8:05 AM

Share

ವಿಶ್ವದ ಅತ್ಯಂತ ಪ್ರತಿಷ್ಠಿತ ‘ಕಾನ್ ಚಲನಚಿತ್ರೋತ್ಸವ’ದಲ್ಲಿ (Cannes Film Festival) ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಅವರು ಎಂದಿನಂತೆ ಸೌಂದರ್ಯದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈ ವರ್ಷದ ಫಿಲ್ಮ್ ಫೆಸ್ಟಿವಲ್​ನ ಕೊನೆಯ ದಿನಗಳಲ್ಲಿ ಭರ್ಜರಿಯಾಗಿ ಎಂಟ್ರಿ ಕೊಟ್ಟ ಐಶ್ವರ್ಯಾ (Aishwarya Rai Bachchan) ಅವರು ಪ್ರಸಿದ್ಧ ಡಿಸೈನರ್ ಅಮಿತ್ ಅಗರ್ವಾಲ್ ವಿನ್ಯಾಸಗೊಳಿಸಿದ ನೀಲಿ ಬಣ್ಣದ ಗೌನ್ ಧರಿಸಿ ರೆಡ್ ಕಾರ್ಪೆಟ್ ಮೇಲೆ ರಾಜಕುಮಾರಿಯಂತೆ ಹೆಜ್ಜೆ ಹಾಕಿದ್ದರು. ಇದು ದೊಡ್ಡ ಸಂಗತಿ ಅಲ್ಲ. ಆದರೆ ಆ ಬಳಿಕ ಅವರು ಅಭಿಮಾನಿಗಳ ಜೊತೆ ಪ್ರೀತಿಯಿಂದ ನಡೆದುಕೊಂಡ ರೀತಿಯನ್ನು ಕಂಡು ಎಲ್ಲರೂ ಮೆಚ್ಚಿಕೊಂಡಿದ್ದಾರೆ.

2003ರಿಂದ ಲೊರಿಯಲ್ ಪ್ಯಾರಿಸ್ ಬ್ರ್ಯಾಂಡ್‌ನ ಜಾಗತಿಕ ರಾಯಭಾರಿಯಾಗಿ ಕಾನ್ ಚಿತ್ರೋತ್ಸವದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಐಶ್ವರ್ಯಾ ರೈ, ರೆಡ್ ಕಾರ್ಪೆಟ್ ಮೇಲೆ ನೆರೆದಿದ್ದ ಛಾಯಾಗ್ರಾಹಕರಿಗೆ ಭಾರತೀಯ ಸಂಪ್ರದಾಯದಂತೆ ನಮಸ್ತೆ ಎಂದು ಕೈಮುಗಿದು ಪೋಸ್ ನೀಡಿದರು. ಆದರೆ, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸುತ್ತಿರುವುದು ಅವರ ರೆಡ್ ಕಾರ್ಪೆಟ್ ಲುಕ್ ಮಾತ್ರವಲ್ಲ, ಬದಲಾಗಿ ಅಭಿಮಾನಿಗಳ ಕಡೆಗೆ ಅವರು ತೋರಿರುವ ಅಪಾರ ಪ್ರೀತಿ ಮತ್ತು ಗೌರವ ಕೂಡ.

ರೆಡ್ ಕಾರ್ಪೆಟ್ ಮುಗಿಸಿ ಐಶ್ವರ್ಯಾ ರೈ ಅವರು ಬಿಗಿ ಭದ್ರತೆಯ ನಡುವೆ ಹೋಟೆಲ್ ಒಳಗೆ ಹೋಗುತ್ತಿದ್ದಾಗ, ಅವರ ನೂರಾರು ಅಭಿಮಾನಿಗಳು ಒಂದು ಫೋಟೋಗಾಗಿ ಸಾಲಾಗಿ ನಿಂತಿದ್ದರು. ಇದನ್ನು ಗಮನಿಸಿದ ನಟಿ, ಎಷ್ಟೇ ಅವಸರವಿದ್ದರೂ ಭದ್ರತಾ ಸಿಬ್ಬಂದಿಯನ್ನು ಬದಿಗೊತ್ತಿ ಅಭಿಮಾನಿಗಳಿಗಾಗಿ ಸಮಯ ಮೀಸಲಿಟ್ಟರು. ಮೊದಲು ಬಾಲಕಿಯೊಬ್ಬಳು ಅವರ ಬಳಿ ಬಂದಾಗ, ಐಶ್ವರ್ಯಾ ಪ್ರೀತಿಯಿಂದ ಅವಳ ಹೆಗಲ ಮೇಲೆ ಕೈಹಾಕಿ ಫೋಟೋಗೆ ಫೋಸ್ ನೀಡಿದ್ದಲ್ಲದೆ, ಹೋಗುವಾಗ ‘ಗಾಡ್ ಬ್ಲೆಸ್ ಯು, ಟೇಕ್ ಕೇರ್’ ಎಂದು ಹಾರೈಸಿದರು.

ವೈರಲ್ ವಿಡಿಯೋ:

ಅಷ್ಟರಲ್ಲೇ ಅಲ್ಲೇ ಇದ್ದ ಒಬ್ಬ ವಯೋವೃದ್ಧ ಮಹಿಳಾ ಅಭಿಮಾನಿ ಫೋಟೋಗಾಗಿ ವಿನಂತಿಸಿದಾಗ, ಐಶ್ವರ್ಯಾ ಅವರು ಸೆಕ್ಯೂರಿಟಿ ಸಿಬ್ಬಂದಿ ಕಡೆ ತಿರುಗಿ, ‘ನಾನು ಅವರಿಗೆ ಮೊದಲೇ ಪ್ರಾಮಿಸ್ ಮಾಡಿದ್ದೆ. ಕೊಟ್ಟ ಮಾತು ಉಳಿಸಿಕೊಳ್ಳಬೇಕು’ ಎನ್ನುತ್ತಾ ಆ ವೃದ್ಧೆಯ ಕೈ ಹಿಡಿದು ಫೋಟೋಗೆ ಫೋಸ್ ನೀಡಿದರು. ಆ ವೃದ್ಧೆ ಭಾವುಕರಾಗಿ ‘ನೀವು ಈ ಪ್ರಪಂಚದಲ್ಲೇ ಅತ್ಯುತ್ತಮ ವ್ಯಕ್ತಿ’ ಎಂದು ಹೊಗಳಿದಾಗ ಐಶ್ವರ್ಯಾ ವಿನಯದಿಂದ ಧನ್ಯವಾದ ತಿಳಿಸಿದರು.

ಇದನ್ನೂ ಓದಿ: ಮಲಗುವ ಮುನ್ನ ಐಶ್ವರ್ಯಾಗೆ ಮೂರು ಬಾರಿ ಕ್ಷಮೆ ಕೇಳುತ್ತಾರೆ ಅಭಿಷೇಕ್ ಬಚ್ಚನ್

ಐಶ್ವರ್ಯಾ ರೈ ಅವರ ಈ ಹೃದಯವಂತಿಕೆಯ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಕಮೆಂಟ್ ಬಾಕ್ಸ್‌ನಲ್ಲಿ ಪ್ರೀತಿಯ ಮಳೆ ಹರಿಸುತ್ತಿದ್ದಾರೆ. ‘ವರ್ಷಗಳು ಉರುಳಬಹುದು, ಕ್ಯಾನ್ ಚಿತ್ರೋತ್ಸವಕ್ಕೆ ಸಾವಿರಾರು ತಾರೆಗಳು ಬರಬಹುದು. ಆದರೆ ಐಶ್ವರ್ಯಾ ಕೇವಲ ಒಂದು ಲುಕ್‌ನಿಂದ ನೆನಪಿನಲ್ಲಿ ಉಳಿಯುವವರಲ್ಲ, ಅವರು ಕಾನ್ ಇತಿಹಾಸದ ಒಂದು ಭಾಗ. ಅವರು ನಿಜವಾದ ರಾಣಿ’ ಎಂದು ಅಭಿಮಾನಿಯೊಬ್ಬರು ಕೆಮೆಂಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಪುರುಷರ ಹಕ್ಕುಗಳ ರಕ್ಷಣೆಗೆ ಹೊಸ ವೇದಿಕೆ
ಪುರುಷರ ಹಕ್ಕುಗಳ ರಕ್ಷಣೆಗೆ ಹೊಸ ವೇದಿಕೆ
ಬೆಳಗಾವಿ: ಧಾರಾಕಾರ ಮಳೆಗೆ ಕುಸಿದ ಮನೆ ಗೋಡೆ; 7 ಜನರು ಜಸ್ಟ್ ಮಿಸ್​!
ಬೆಳಗಾವಿ: ಧಾರಾಕಾರ ಮಳೆಗೆ ಕುಸಿದ ಮನೆ ಗೋಡೆ; 7 ಜನರು ಜಸ್ಟ್ ಮಿಸ್​!
ಮಳೆಯಿಂದಾಗಿ ಭೂಕುಸಿತದ ಭೀತಿ: ಆಗುಂಬೆ ಘಾಟಿಯಲ್ಲಿ ಘನ ವಾಹನಗಳ ಸಂಚಾರ ಬಂದ್!
ಮಳೆಯಿಂದಾಗಿ ಭೂಕುಸಿತದ ಭೀತಿ: ಆಗುಂಬೆ ಘಾಟಿಯಲ್ಲಿ ಘನ ವಾಹನಗಳ ಸಂಚಾರ ಬಂದ್!
ದಾವಣಗೆರೆ: ಹಳ್ಳ ಹಿಡಿದ 'ಎಸ್ಐಆರ್' ಪ್ರಕ್ರಿಯೆ
ದಾವಣಗೆರೆ: ಹಳ್ಳ ಹಿಡಿದ 'ಎಸ್ಐಆರ್' ಪ್ರಕ್ರಿಯೆ
ರಾಮಮಂದಿರ ದೇಣಿಗೆ ಕಳ್ಳತನ; RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?
ರಾಮಮಂದಿರ ದೇಣಿಗೆ ಕಳ್ಳತನ; RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?
ಪ್ರಧಾನಿ ಮೋದಿಯಿಂದ ಜೋಧ್‌ಪುರ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಉದ್ಘಾಟನೆ
ಪ್ರಧಾನಿ ಮೋದಿಯಿಂದ ಜೋಧ್‌ಪುರ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಉದ್ಘಾಟನೆ
ರಾಜ್ಯದಲ್ಲಿ SIR ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ: ಪ್ರಹ್ಲಾದ್​ ಜೋಶಿ
ರಾಜ್ಯದಲ್ಲಿ SIR ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ: ಪ್ರಹ್ಲಾದ್​ ಜೋಶಿ
ನೆಲಮಂಗಲ: ಮನೆ ಮನೆಗೆ ಹೋಗುವ ಬದಲು ಮಸೀದಿಯಲ್ಲೇ ಕುಳಿತು SIR ಪತ್ರ ವಿತರಣೆ
ನೆಲಮಂಗಲ: ಮನೆ ಮನೆಗೆ ಹೋಗುವ ಬದಲು ಮಸೀದಿಯಲ್ಲೇ ಕುಳಿತು SIR ಪತ್ರ ವಿತರಣೆ
ಬತ್ತಿದ್ದ ಕೃಷ್ಣಾ ನದಿಗೆ ಜೀವ ಕಳೆ, 15 ಸಾವಿರ ಕ್ಯೂಸೆಕ್ ಒಳ ಹರಿವು
ಬತ್ತಿದ್ದ ಕೃಷ್ಣಾ ನದಿಗೆ ಜೀವ ಕಳೆ, 15 ಸಾವಿರ ಕ್ಯೂಸೆಕ್ ಒಳ ಹರಿವು
SIR ವಿವಾದ: ಸರ್ಕಾರದ ವಿರುದ್ಧ ಜಂಟಿ ಸಮರಕ್ಕೆ ಬಿಜೆಪಿ, ಜೆಡಿಎಸ್‌ ಸಿದ್ಧತೆ
SIR ವಿವಾದ: ಸರ್ಕಾರದ ವಿರುದ್ಧ ಜಂಟಿ ಸಮರಕ್ಕೆ ಬಿಜೆಪಿ, ಜೆಡಿಎಸ್‌ ಸಿದ್ಧತೆ