AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರಿಸ್ಥಿತಿಯ ಲಾಭ ಪಡೆಯಲು ಎಂದಿಗೂ ಮುಂದಾಗಿಲ್ಲ ಐಶ್ವರ್ಯಾ ರೈ

ಐಶ್ವರ್ಯಾ ರೈ, ಪತಿ ಅಭಿಷೇಕ್ ಬಚ್ಚನ್ ಜೊತೆ ಸಂಬಂಧ ಮುರಿದುಕೊಂಡಿದ್ದಾರೆ. ಇಬ್ಬರೂ ವಿಚ್ಛೇದನ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಖಾತ್ರಿ ಇಲ್ಲ. ಜನರ ಸೆಂಟಿಮೆಂಟ್ ಐಶ್ವರ್ಯಾ ಪರವಾಗಿದ್ದರೂ ಸಹ ಅದರ ಲಾಭ ಪಡೆಯುವ ಪ್ರಯತ್ನವನ್ನು ಐಶ್ವರ್ಯಾ ರೈ ಈವರೆಗೆ ಮಾಡಿಲ್ಲ.

ಪರಿಸ್ಥಿತಿಯ ಲಾಭ ಪಡೆಯಲು ಎಂದಿಗೂ ಮುಂದಾಗಿಲ್ಲ ಐಶ್ವರ್ಯಾ ರೈ
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 03, 2024 | 4:05 PM

Share

ಬಚ್ಚನ್ ಕುಟುಂಬದಲ್ಲಿ ಯವುದೂ ಸರಿ ಇಲ್ಲ ಎಂಬ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ. ದೀಪಾವಳಿ ಸಂದರ್ಭದಲ್ಲಿ ಐಶ್ವರ್ಯಾ ರೈ ತಮ್ಮ ಕುಟುಂಬದೊಂದಿಗೆ ಕಾಣಿಸಿಕೊಂಡಿರಲಿಲ್ಲ. ಅವರು ಕುಟುಂಬದಿಂದ ಅಂತರ ಕಾಯ್ದುಕೊಂಡಿದ್ದಾರೆ. ಇತ್ತ ಐಶ್ವರ್ಯಾ ಜನ್ಮದಿನಕ್ಕೆ ಅಭಿಷೇಕ್ ಕಡೆಯಿಂದ ವಿಶ್ ಬಂದಿಲ್ಲ. ಬಚ್ಚನ್ ಕುಟುಂಬದ ಸದಸ್ಯನಿಗೆ ಸಮಾಜದಲ್ಲಿ ದೊಡ್ಡ ಹೆಸರು ಇದೆ. ಅಂದಿನಿಂದ ಈ ಎಲ್ಲಾ ಸಂದರ್ಭಗಳಲ್ಲಿ ಜನರು ಐಶ್ವರ್ಯಾ ಅವರನ್ನು ಬೆಂಬಲಿಸಿದ್ದಾರೆ. ಜನರು ಐಶ್ವರ್ಯಾ ಅವರನ್ನು ಬೆಂಬಲಿಸಲು ಕಾರಣವೇನು? ಐಶ್ವರ್ಯಾ ಅವರಿಂದ ಕಲಿಯಬೇಕಾದ ವಿಷಯಗಳೇನು? ಆ ಬಗ್ಗೆ ಇಲ್ಲಿದೆ ಮಾಹಿತಿ.

ಐಶ್ವರ್ಯಾ ರೈ ಮತ್ತು ಬಚ್ಚನ್ ಕುಟುಂಬದ ಸದಸ್ಯರಾದ ಅಮಿತಾಭ್ ಬಚ್ಚನ್, ಜಯಾ ಬಚ್ಚನ್, ಶ್ವೇತಾ ಬಚ್ಚನ್ ನಂದಾ ಬಗ್ಗೆ ಹಲವು ವದಂತಿಗಳಿವೆ. ಐಶ್ವರ್ಯಾ ದೂರ ಆಗಲು ಅವರು ಕಾರಣ ಎನ್ನಲಾಗಿದೆ. ಆದರೆ ಅವರೆಲ್ಲರ ಬಗ್ಗೆ ಐಶ್ವರ್ಯಾ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಈ ಪರಿಸ್ಥಿತಿಯ ಲಾಭ ಪಡೆಯಲು ಅವರು ಪ್ರಯತ್ನಿಸಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಅವರು ನಡೆದುಕೊಂಡಿದ್ದಾರೆ, ಅವರು ಮೌನವಾಗಿದ್ದರು ಮತ್ತು ಗಾಸಿಪ್‌ಗಳಿಗೆ ಹೆದರುವುದಿಲ್ಲ ಎಂದು ಸ್ಪಷ್ಟವಾಗಿ ತೋರಿಸಿದರು. ಈ ಸಂದರ್ಭಗಳಲ್ಲಿ ಅನೇಕರು ಈ ರೀತಿಯ ಪರಿಸ್ಥಿತಿಯ ಲಾಭವನ್ನು ಪಡೆಯಲು ಪ್ರಯತ್ನಿಸುತ್ತಾರೆ. ಆದರೆ ಐಶ್ವರ್ಯಾ ಆ ರೀತಿ ಏನನ್ನೂ ಪ್ರಯತ್ನಿಸಲಿಲ್ಲ. ಇದರಿಂದ ಜನರ ಮನಸ್ಸಿನಲ್ಲಿ ಅವರ ಬಗ್ಗೆ ಗೌರವ ಹೆಚ್ಚಿದೆ.

ಇದನ್ನೂ ಓದಿ:ಐಶ್ವರ್ಯಾ ರೈ ಹುಟ್ಟುಹಬ್ಬಕ್ಕೆ ವಿಶ್ ಮಾಡಲೇ ಇಲ್ಲ ಅಭಿಷೇಕ್, ಅಮಿತಾಭ್ ಬಚ್ಚನ್

ಇನ್ನು ಸೊಸೆ ಐಶ್ವರ್ಯಾಗೆ ತಮ್ಮ ಕುಟುಂಬದಲ್ಲಿ ಸ್ಥಾನವಿಲ್ಲ ಎಂದು ಬಚ್ಚನ್ ಕುಟುಂಬ ಸುಳಿವು ನೀಡಿದೆ. ಆಗ ಕೆಬಿಸಿಯಲ್ಲಿ ಅಮಿತಾಭ್ ಹುಟ್ಟುಹಬ್ಬದ ವಿಶೇಷ ವಿಡಿಯೋದಲ್ಲಿ ಐಶ್ವರ್ಯಾ ಇರಲಿಲ್ಲ. ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಲ್ಲಿ ಅವರ ಬಗ್ಗೆ ಏನೂ ಬರೆದಿಲ್ಲ. ಮತ್ತೊಂದೆಡೆ ಐಶ್ವರ್ಯಾ ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ. ಮಾವ ಅಮಿತಾಭ್ ಬಚ್ಚನ್ ಜನ್ಮದಿನದಂದು ಐಶ್ವರ್ಯಾ ಅವರು ಶುಭ ಹಾರೈಸಿದರು. ಎಂತಹ ಪರಿಸ್ಥಿತಿ ಬಂದರೂ ಯಾರನ್ನೂ ಗೌರವಿಸುವುದನ್ನು ನಿಲ್ಲಿಸುವುದಿಲ್ಲ ಎಂಬ ಸಂದೇಶವನ್ನು ಸಾರಿದ್ದಾರೆ. ಆದರೆ, ಅಮಿತಾಭ್ ಅವರು ಐಶ್ವರ್ಯಾಗೆ ವಿಶ್ ಮಾಡಿಲ್ಲ.

ಐಶ್ವರ್ಯಾ ಮಾಧ್ಯಮದ ಮುಂದೆ ಒಮ್ಮೆಯೂ ಕಾಣಿಸಿಕೊಂಡಿಲ್ಲ. ಮಾಧ್ಯಮಗಳು ಎದುರಾದರೂ ಅವರು ಮುಖ ತಿರಿಗಿಸಿಕೊಂಡು ಹೋಗುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಮಗಳು ಆರಾಧ್ಯಾ ತನ್ನ ತಾಯಿ ಐಶ್ವರ್ಯ ರೈ ಜೊತೆ ಗಟ್ಟಿಯಾಗಿ ನಿಂತಿದ್ದಾರೆ. ಇದು ಐಶ್ವರ್ಯಾ ಅವರ ಖುಷಿ ಹೆಚ್ಚಿಸಿದೆ.. ತಂದೆ ತಾಯಿಯರ ಪ್ರೀತಿಯನ್ನು ಮಕ್ಕಳು ಪಡೆಯುವುದು ಅಸಾಧ್ಯ. ಆದರೆ ಐಶ್ವರ್ಯಾ ಹಾಗೆ ಏನನ್ನೂ ಮಾಡಲಿಲ್ಲ. ಆರಾಧ್ಯಾ ತಮ್ಮ ತಂದೆಯೊಂದಿಗೆ ಕ್ಷಣಗಳನ್ನು ಹಂಚಿಕೊಳ್ಳಲು ಮತ್ತು ಆನಂದಿಸಲು ಹಲವಾರು ಸಂದರ್ಭಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿಯೇ ಐಶ್ವರ್ಯಾಗೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ