ನೀರಜ್​ ಚೋಪ್ರಾಗೆ ಸಿನಿಮಾ ಆಫರ್​; ಅಕ್ಷಯ್​ ಕುಮಾರ್ ಬಯೋಪಿಕ್​ ಬಗ್ಗೆ ಏನಿದು ಅಪ್​ಡೇಟ್​?

ಇತ್ತೀಚಿನ ವರ್ಷಗಳಲ್ಲಿ ಅಕ್ಷಯ್​ ಕುಮಾರ್ ಆಯ್ದುಕೊಳ್ಳುವ ಸಿನಿಮಾಗಳಲ್ಲಿ ಮನರಂಜನೆ ಜತೆ ಒಂದೊಳ್ಳೆಯ ಸಂದೇಶ ಇರುತ್ತದೆ. ಅಕ್ಷಯ್​ ಕುಮಾರ್​ ಹಲವು ಬಯೋಪಿಕ್​ನಲ್ಲಿ ನಟಿಸಿದ್ದಾರೆ ಕೂಡ.

ನೀರಜ್​ ಚೋಪ್ರಾಗೆ ಸಿನಿಮಾ ಆಫರ್​; ಅಕ್ಷಯ್​ ಕುಮಾರ್ ಬಯೋಪಿಕ್​ ಬಗ್ಗೆ ಏನಿದು ಅಪ್​ಡೇಟ್​?
ನೀರಜ್​ ಚೋಪ್ರಾಗೆ ಸಿನಿಮಾ ಆಫರ್​; ಅಕ್ಷಯ್​ ಕುಮಾರ್ ಬಯೋಪಿಕ್​ ಬಗ್ಗೆ ಏನಿದು ಅಪ್​ಡೇಟ್​?
Follow us
| Updated By: ರಾಜೇಶ್ ದುಗ್ಗುಮನೆ

Updated on: Aug 09, 2021 | 5:19 PM

ಟೋಕಿಯೋ ಒಲಿಂಪಿಕ್ಸ್ -2020ರಲ್ಲಿ ನೀರಜ್ ಚೋಪ್ರಾ ಅವರು ಭಾರತವನ್ನು ಪ್ರತಿನಿಧಿಸಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ಅವರಿಗೆ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ. ನೀರಜ್​ ಚೋಪ್ರಾ ಬಯೋಪಿಕ್​ಗೆ ನಟ ಅಕ್ಷಯ ಕುಮಾರ್​ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮೀಮ್​ಗಳು ಹರಿದಾಡಿದ್ದವು. ಆದರೆ, ಈ ವಿಚಾರದಲ್ಲಿ ಅಕ್ಷಯ್​ ಕುಮಾರ್​ ನೀಡಿದ ಹೇಳಿಕೆ ಭಿನ್ನವಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಅಕ್ಷಯ್​ ಕುಮಾರ್ ಆಯ್ದುಕೊಳ್ಳುವ ಸಿನಿಮಾಗಳಲ್ಲಿ ಮನರಂಜನೆ ಜತೆ ಒಂದೊಳ್ಳೆಯ ಸಂದೇಶ ಇರುತ್ತದೆ. ಅಕ್ಷಯ್​ ಕುಮಾರ್​ ಹಲವು ಬಯೋಪಿಕ್​ನಲ್ಲಿ ನಟಿಸಿದ್ದಾರೆ ಕೂಡ. ಈ ಎಲ್ಲಾ ಕಾರಣಕ್ಕೆ ಯಾವುದೇ ವ್ಯಕ್ತಿ ಕ್ರೀಡೆಯಲ್ಲಿ ಸಾಧನೆ ಮಾಡಿದರೆ, ಆ ವ್ಯಕ್ತಿಯ ಬಯೋಪಿಕ್​ನಲ್ಲಿ ಅಕ್ಷಯ್​ ನಟಿಸುತ್ತಾರೆ ಎನ್ನುವ ವಿಚಾರ ಮುನ್ನೆಲೆಗೆ ಬರುತ್ತದೆ.

ಈ ಬಾರಿ ನೀರಜ್​ ಒಲಂಪಿಕ್ಸ್​ನಲ್ಲಿ ಪದಕ ಗೆದ್ದಾಗ ಅಕ್ಷಯ್​ ಕುಮಾರ್​ ಅವರು ಜಾವೆಲಿನ್​ ಹಿಡಿದುಕೊಂಡಿದ್ದ ಹಳೆಯ ಫೋಟೋ ವೈರಲ್​ ಆಗಿತ್ತು. ನೀರಜ್​ ಬಯೋಪಿಕ್​ನಲ್ಲಿ ಅಕ್ಷಯ್​ ಕುಮಾರ್​ ನಟಿಸುತ್ತಿದ್ದಾರೆ ಎಂದು ಕೆಲವರು ಟ್ರೋಲ್​ ಮಾಡಿದ್ದರು. ಈ ಬಗ್ಗೆ ಅಕ್ಷಯ್​ ಪ್ರತಿಕ್ರಿಯೆ ನೀಡಿದ್ದಾರೆ.

‘ನೀರಜ್​ ಚೋಪ್ರಾ ಬಯೋಪಿಕ್​ಗೆ ಅಕ್ಷಯ್​ ತರಬೇತಿ ಆರಂಭಿಸಿದರು ಎಂದು ಕೆಲವರು ಹೇಳುತ್ತಿದ್ದಾರೆ. ಇದು ಸಾಕಷ್ಟು ಫನ್ನಿ ಎಂದು ನನಗನ್ನಿಸುತ್ತದೆ. ವೈರಲ್​ ಆದ ಫೋಟೋ ನನ್ನ ಮೊದಲ ಚಿತ್ರ ‘ಸೌಗಂಧ್​’ ಹಾಡೊಂದರಲ್ಲಿ ಬರುವ ದೃಶ್ಯ ಅದು. ನೀರಜ್​ ಸುಂದರವಾಗಿದ್ದಾರೆ. ನನ್ನ ಬಯೋಪಿಕ್​ನಲ್ಲಿ ಯಾರಾದರೂ ನಟಿಸಬೇಕು ಎಂದರೆ ಅದು ನೀರಜ್​’ ಎಂದು ನಕ್ಕಿದ್ದಾರೆ ಅಕ್ಷಯ್​ ಕುಮಾರ್.

ಅಕ್ಷಯ್ ಕುಮಾರ್​ ನಟನೆಯ ‘ಬೆಲ್​ ಬಾಟಂ’ ಚಿತ್ರ ಕೂಡ ಬಿಡುಗಡೆಗೆ ಸಜ್ಜಾಗಿದೆ. ಅತರಂಗಿ ರೇ, ರಾಮ್​ ಸೇತು, ರಕ್ಷಾ ಬಂದನ್​, ಬಚ್ಚನ್​ ಪಾಂಡೆ ಸೇರಿದಂತೆ ಹಲವಾರು ಸಿನಿಮಾಗಳು ಅಕ್ಷಯ್​ ಕುಮಾರ್​ ಕೈಯಲ್ಲಿವೆ.

ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಗೆ ಅಕ್ಷಯ್​ ಕುಮಾರ್​ ಕಡೆಯಿಂದ ಸಿಗಲಿದೆ ಗಿಫ್ಟ್​; ಲೀಕ್​ ಆಯ್ತು ಬಿಗ್​ ನ್ಯೂಸ್​

ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ