AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದುಡ್ಡು ಕೊಟ್ಟರೆ ಮಾತ್ರ ಬಾಗಿಲು ತೆಗಿತೀನಿ’; ಸಲ್ಮಾನ್​ ಖಾನ್​ ತಮ್ಮನನ್ನೇ ಹೊರಗೆ ನಿಲ್ಲಿಸಿ, ವಾಪಸ್​​ ಕಳಿಸಿದ ಭೂಪ

ಶೂಟಿಂಗ್​ ಬಿಡುವಿನಲ್ಲಿ ವಿಶ್ರಾಂತಿ ಪಡೆಯಲು ವ್ಯಾನಿಟಿ ವ್ಯಾನ್ ಬಳಸಲಾಗುತ್ತದೆ. ಅರ್ಬಾಜ್​ ಖಾನ್​ ಅವರಿಗೂ ಈ ಐಷಾರಾಮಿ ವಾಹನವನ್ನು​ ನೀಡಲಾಗಿತ್ತು. ಆದರೆ ಅದರ ಬಾಗಿಲು ತೆರೆಯಲು ಕೆಲಸಗಾರರು ಸಿದ್ಧರಿರಲಿಲ್ಲ.

‘ದುಡ್ಡು ಕೊಟ್ಟರೆ ಮಾತ್ರ ಬಾಗಿಲು ತೆಗಿತೀನಿ’; ಸಲ್ಮಾನ್​ ಖಾನ್​ ತಮ್ಮನನ್ನೇ ಹೊರಗೆ ನಿಲ್ಲಿಸಿ, ವಾಪಸ್​​ ಕಳಿಸಿದ ಭೂಪ
‘ದುಡ್ಡು ಕೊಟ್ಟರೆ ಮಾತ್ರ ಬಾಗಿಲು ತೆಗಿತೀನಿ’; ಸಲ್ಮಾನ್​ ಖಾನ್​ ತಮ್ಮನನ್ನೇ ಹೊರಗೆ ನಿಲ್ಲಿಸಿ, ವಾಪಸ್​​ ಕಳಿಸಿದ ಭೂಪ
TV9 Web
| Edited By: |

Updated on: Aug 12, 2021 | 4:32 PM

Share

ಸ್ಟಾರ್​ ನಟರಿಗೆ ಹೋದಲ್ಲೆಲ್ಲ ಭರ್ಜರಿ ಆತಿಥ್ಯ ದೊರೆಯುತ್ತದೆ. ಶೂಟಿಂಗ್​ ಸೆಟ್​ನಲ್ಲಂತೂ ಅವರನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತದೆ. ಅವರು ಕೇಳುವುದಕ್ಕಿಂತಲೂ ಮುನ್ನವೇ ಎಲ್ಲವೂ ಸಿದ್ಧವಾಗಿರುತ್ತವೆ. ಆದರೆ ಸಲ್ಮಾನ್​ ಖಾನ್​ (Salman Khan) ಸಹೋದರ ಅರ್ಬಾಜ್​ ಖಾನ್​ (Arbaaz Khan) ವಿಚಾರದಲ್ಲಿ ಇದು ಸುಳ್ಳಾಗಿದೆ. ಸಿನಿಮಾ ಚಿತ್ರೀಕರಣದ ಸೆಟ್​ನಲ್ಲಿ ಅವರಿಗೆ ತೀವ್ರ ಅವಮಾನ ಆಗಿದೆ ಎಂಬ ಸುದ್ದಿ ಈಗ ಹರಿದಾಡುತ್ತಿದೆ. ದುಡ್ಡು ಕೊಡಲಿಲ್ಲ ಎಂಬ ಕಾರಣಕ್ಕೆ ವ್ಯಾನಿಟಿ ವ್ಯಾನ್​ನ (Vanity Van) ಬಾಗಿಲು ತೆಗೆಯದೇ ಅವರನ್ನು ಹೊರಗೆ ನಿಲ್ಲಿಸಲಾಗಿತ್ತು ಎಂಬ ಮಾಹಿತಿ ಕೇಳಿ ಅಭಿಮಾನಿಗಳು ಅಚ್ಚರಿಪಟ್ಟಿದ್ದಾರೆ. ಇದೆಲ್ಲ ಆಗಿದ್ದು ‘ರೋಜಿ’ ಸಿನಿಮಾದ ಸೆಟ್​ನಲ್ಲಿ. 

ನಟ, ನಿರ್ಮಾಪಕ ಹಾಗೂ ನಿರ್ದೇಶಕನಾಗಿ ಅರ್ಬಾಜ್​ ಖಾನ್​ ಅವರು ಗುರುತಿಸಿಕೊಂಡಿದ್ದಾರೆ. ಹಲವು ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಸಲ್ಮಾನ್​ ಖಾನ್​ ಸಹೋದರ ಎಂಬ ಕಾರಣಕ್ಕೆ ಅವರಿಗೆ ಹೋದಲ್ಲೆಲ್ಲ ವಿಶೇಷ ಗೌರವ ಸಿಗುತ್ತದೆ. ಆದರೆ ‘ರೋಜಿ: ದಿ ಸ್ಯಾಫ್ರಾನ್​ ಚಾಪ್ಟರ್​’ ಚಿತ್ರದ ಶೂಟಿಂಗ್​ ವೇಳೆ ಎಡವಟ್ಟು ಆಗಿದೆ. ಈ ಚಿತ್ರತಂಡ ತುಂಬ ಬೇಜವಾಬ್ದಾರಿಯಿಂದ ನಡೆದುಕೊಂಡಿದೆ ಎಂಬುದು ತಿಳಿದುಬಂದಿದೆ.

ಪ್ರೇರಣಾ ಅರೋರಾ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನಟ ವಿವೇಕ್​ ಒಬೆರಾಯ್​ ಅವರು ನಟಿಸುವುದರ ಜೊತೆಗೆ ಸಹ-ನಿರ್ಮಾಪಕನಾಗಿದ್ದರು. ಆದರೆ ಇತ್ತೀಚೆಗೆ ಅವರು ಈ ಸಿನಿಮಾದ ನಿರ್ಮಾಣದಿಂದ ಹಿಂದೆ ಸರಿದಿದ್ದಾರೆ. ಚಿತ್ರತಂಡದವರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದು ವಿವೇಕ್​ಗೆ ಗೊತ್ತಾದ ಬಳಿಕ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ನಿರ್ಮಾಪಕಿ ಪ್ರೇರಣಾ ಅರೋರ ಅವರು ಕೆಲಸಗಾರರಿಗೆ ಸೂಕ್ತವಾಗಿ ಸಂಬಳ ನೀಡದೇ ಇರುವುದರಿಂದ ಎಲ್ಲ ವಿಭಾಗದ ಕೆಲವೂ ವಿಳಂಬ ಆಗುತ್ತಿವೆ.

ಚಿತ್ರೀಕರಣದ ಸ್ಥಳದಲ್ಲಿ ಸ್ಟಾರ್​ ನಟರಿಗೆ ವ್ಯಾನಿಟಿ ವ್ಯಾನ್​ ಅಥವಾ ಕ್ಯಾರವ್ಯಾನ್​ಗಳನ್ನು ನೀಡಲಾಗಿರುತ್ತದೆ. ಮೇಕಪ್​ ಮಾಡಿಕೊಳ್ಳಲು, ಶೂಟಿಂಗ್​ ಬಿಡುವಿನಲ್ಲಿ ವಿಶ್ರಾಂತಿ ಪಡೆಯಲು ಈ ಐಷಾರಾಮಿ ವಾಹನವನ್ನು ಬಳಸಲಾಗುತ್ತದೆ. ಅರ್ಬಾಜ್​ ಖಾನ್​ ಅವರಿಗೂ ವ್ಯಾನಿಟಿ ವ್ಯಾನ್​ ನೀಡಲಾಗಿತ್ತು. ಆದರೆ ಅದರ ಕೆಲಸಗಾರರಿಗೆ ನಿರ್ಮಾಪಕರು ಪೇಮೆಂಟ್​ ಮಾಡಿರಲಿಲ್ಲ. ಇದರಿಂದ ಬೇಸತ್ತ ಕೆಲಸಗಾರರು ಅರ್ಬಾಜ್​ ಖಾನ್​ ಮೇಲೆ ಕೋಪ ತೋರಿಸಿದ್ದಾರೆ.

ಶೂಟಿಂಗ್​ ಸೆಟ್​ಗೆ ಬಂದ ಅರ್ಬಾಜ್​ ಖಾನ್​ ಅವರು ವ್ಯಾನಿಟಿ ವ್ಯಾನ್​ ಬಳಿ ತೆರಳಿದ್ದರು. ಆದರೆ ಅದರ ಬಾಗಿಲು ತೆರೆಯಲು ಕೆಲಸಗಾರರು ಸಿದ್ಧರಿರಲಿಲ್ಲ. ತಮ್ಮ ಪಾಲಿನ ದುಡ್ಡು ಬರುವವರೆಗೂ ವ್ಯಾನಿಟಿ ವ್ಯಾನ್​ ಬಾಗಿಲು ತೆರೆಯುವುದಿಲ್ಲ ಎಂದು ಅವರು ಪಟ್ಟು ಹಿಡಿದರು ಎನ್ನಲಾಗಿದೆ. ಕಡೆಗೆ ವಿಧಿ ಇಲ್ಲದೇ ಅರ್ಜಾನ್​ ಖಾನ್​ ಅವರು ಶೂಟಿಂಗ್​ ಬಿಟ್ಟು ಮನೆ ಹಾದಿ ಹಿಡಿದರು ಎಂಬ ಗುಸುಗುಸು ಬಾಲಿವುಡ್​ ಅಂಗಳದಿಂದ ಕೇಳಿಬರುತ್ತಿದೆ.

ಇದನ್ನೂ ಓದಿ:

‘ಅಶ್ಲೀಲ ಸಿನಿಮಾದಲ್ಲಿ ನಟಿಸೋದು ತಪ್ಪು ಎಂದಿದ್ದು ಯಾರು?’ ಸಲ್ಮಾನ್​ ಖಾನ್​ ಮಾಜಿ ಪ್ರೇಯಸಿಯ ಖಡಕ್​ ಪ್ರಶ್ನೆ  

ವಿದೇಶದಲ್ಲಿದ್ದಾರಾ ಸಲ್ಮಾನ್​ ಖಾನ್​ ಪತ್ನಿ ನೂರ್​ ಮತ್ತು 17 ವರ್ಷದ ಮಗಳು? ಹೊಸ ರಹಸ್ಯ

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?