AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mohit Kamboj: ಆರ್ಯನ್​ ಖಾನ್​ ಕೇಸ್​ಗೆ ಹೊಸ ಟ್ವಿಸ್ಟ್​; ಬಿಜೆಪಿ ಮುಖಂಡ ಮೋಹಿತ್​ ಕಡೆಯಿಂದ ಗಂಭೀರ ಆರೋಪ

Aryan Khan Case: ‘ಮಹಾರಾಷ್ಟ್ರದ ಕೆಲವು ಸಚಿವರು ಶಾರುಖ್​ ಖಾನ್​ ಅವರಿಂದ ಹಣ ದೋಚಲು ಪ್ರಯತ್ನಿಸಿರಬಹುದು. ಈ ಹೈ ಪ್ರೊಫೈಲ್​ ಡ್ರಗ್​ ಕೇಸ್​ನಲ್ಲಿ ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಾರ್ಟಿಗೆ ಲಿಂಕ್​ ಇದೆ’ ಎಂದು ಬಿಜೆಪಿ ಮುಖಂಡ ಮೋಹಿತ್​ ಕಂಬೋಜ್​ ಆರೋಪಿಸಿದ್ದಾರೆ.

Mohit Kamboj: ಆರ್ಯನ್​ ಖಾನ್​ ಕೇಸ್​ಗೆ ಹೊಸ ಟ್ವಿಸ್ಟ್​; ಬಿಜೆಪಿ ಮುಖಂಡ ಮೋಹಿತ್​ ಕಡೆಯಿಂದ ಗಂಭೀರ ಆರೋಪ
ಮೋಹಿತ್​, ಆರ್ಯನ್​ ಖಾನ್​
TV9 Web
| Edited By: |

Updated on: Nov 06, 2021 | 7:25 PM

Share

ಡ್ರಗ್ಸ್​ ಪಾರ್ಟಿ ಮಾಡಿದ ಆರೋಪ ಎದುರಿಸುತ್ತಿರುವ ಆರ್ಯುನ್​ ಖಾನ್​ ಸದ್ಯ ಜಾಮೀನು ಪಡೆದು ಮನೆಯಲ್ಲಿದ್ದಾರೆ. ಆದರೆ ಅವರ ಕೇಸ್​ ಕುರಿತಂತೆ ಅನೇಕ ಚರ್ಚೆಗಳು ನಡೆಯುತ್ತಿವೆ. ಒಟ್ಟಾರೆ ಈ ಪ್ರಕರಣದ ಹಿಂದೆ ಪ್ರಮುಖ ವ್ಯಕ್ತಿಗಳ ಕೈವಾಡ ಇದೆ ಎನ್ನಲಾಗುತ್ತಿದೆ. ಶಾರುಖ್​ ಖಾನ್​ ಅವರಿಂದ ಹಣ ಕೀಳಲು ಕೆಲವು ರಾಜಕೀಯ ವ್ಯಕ್ತಿಗಳು ಹುನ್ನಾರ ನಡೆಸಿದ್ದರಿಂದಲೇ ಆರ್ಯನ್​ ಖಾನ್​ ಮೇಲೆ ದಾಳಿ ನಡೆಯಿತು ಎಂದು ಬಿಜೆಪಿ ಮುಖಂಡ ಮೋಹಿತ್​ ಕಂಬೋಜ್​ ಆರೋಪಿಸಿದ್ದಾರೆ. ಈಗ ತಮ್ಮ ಜೀವಕ್ಕೆ ಅಪಾಯ ಇದೆ ಎಂದು ಕೂಡ ಅವರು ಹೇಳಿದ್ದಾರೆ.

‘ಮಹಾರಾಷ್ಟ್ರದ ಕೆಲವು ಸಚಿವರು ಶಾರುಖ್​ ಖಾನ್​ ಅವರಿಂದ ಹಣ ದೋಚಲು ಪ್ರಯತ್ನಿಸಿರಬಹುದು. ಈ ಹೈ ಪ್ರೊಫೈಲ್​ ಡ್ರಗ್​ ಕೇಸ್​ನಲ್ಲಿ ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಾರ್ಟಿಗೆ ಲಿಂಕ್​ ಇದೆ. ಮಾಜಿ ಗೃಹ ಸಚಿವ ಅನಿಲ್​ ದೇಖಮುಖ್​ ಅವರಿಗೆ ಆಪ್ತನಾಗಿರುವ ಸುನೀಲ್​ ಪಾಟೀಲ್​ ಎಂಬ ವ್ಯಕ್ತಿಯೇ ಈ ಡ್ರಗ್ಸ್​ ಕೇಸ್​ ಹಿಂದಿನ ಮಾಸ್ಟರ್​ ಮೈಂಡ್​’ ಎಂದು ಮೋಹಿತ್​ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿರುವ ಮೋಹಿತ್​ ಅವರು ಸುನೀಲ್​ ಪಾಟೀಲ್​ರದ್ದು ಎನ್ನಲಾದ ಆಡಿಯೋ ಕ್ಲಿಪ್​ ಒಂದನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ತಾವು ಹೋಮ್​ ಮಿನಿಸ್ಟರ್​ಗೆ ಆಪ್ತ ಎಂದು ಸುನೀಲ್​ ಪಾಟೀಲ್​ ಹೇಳಿಕೊಂಡಿದ್ದಾರೆ. ಆ ಆಡಿಯೋ ಕ್ಲಿಪ್​ನ ಸತ್ಯಾಸತ್ಯತೆ ಬಗ್ಗೆ ಇನ್ನೂ ತನಿಖೆ ಆಗಬೇಕಿದೆ. ಸುದ್ದಿಗೋಷ್ಠಿ ನಡೆಸಿದ ಬಳಿಕ ತಮ್ಮ ಜೀವಕ್ಕೆ ಅಪಾಯ ಇದೆ ಎಂದು ಮೋಹಿತ್​ ಹೇಳಿದ್ದಾರೆ.

ಮೋಹಿತ್​ ಅವರ ಎಲ್ಲ ಆರೋಪಗಳನ್ನು ಎನ್​ಸಿಪಿ ಮುಖಂಡ ನವಾಬ್​ ಮಲಿಕ್​ ತಳ್ಳಿ ಹಾಕಿದ್ದಾರೆ. ‘ಸಮೀರ್​ ದಾವೂದ್​ ವಾಂಖೆಡೆಯ ಖಾಸಗಿ ಸೈನ್ಯ ಈಗ ಒಂದು ಸುದ್ದಿಗೋಷ್ಠಿ ನಡೆಸಿದೆ’ ಎಂದು ವ್ಯಂಗ್ಯವಾಗಿ ಅವರು ಟ್ವೀಟ್​ ಮಾಡಿದ್ದಾರೆ. ‘ಗಮನ ಬೇರೆಡೆಗೆ ಸೆಳೆದು ಸತ್ಯದ ದಾರಿ ತಪ್ಪಿಸಲು ಈ ವಿಫಲ ಪ್ರಯತ್ನ ಮಾಡಲಾಗಿದೆ’ ಎಂದು ನವಾಬ್​ ಮಲಿಕ್​ ಹೇಳಿದ್ದಾರೆ.

ಆರ್ಯನ್​ ಖಾನ್​ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಶಾರುಖ್​ ಪುತ್ರನನ್ನು ಬಂಧಿಸಿದ್ದ ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೆಡೆ ಮೇಲೆ ಹಲವು ಆರೋಪಗಳು ಕೇಳಿಬಂದಿವೆ. ಅದರ ಬೆನ್ನಲ್ಲೇ ಸಮೀರ್​ ವಾಂಖೆಡೆಗೆ ತನಿಖೆಯಿಂದ ಹೊರಗೆ ಉಳಿಯುವಂತೆ ಸೂಚಿಸಲಾಗಿದೆ. ಸದ್ಯ ಈ ಪ್ರಕರಣವನ್ನು ಕೇಂದ್ರದ ಉನ್ನತ ತಂಡ ವಹಿಸಿಕೊಂಡಿದೆ.

ಇದನ್ನೂ ಓದಿ:

Aryan Khan: 22 ದಿನ ಜೈಲಿನಲ್ಲಿದ್ದ ಆರ್ಯನ್​ ಖಾನ್​ಗೆ ಈಗ ಮನೆಯವರಿಂದಲೇ ಬ್ಲಡ್​ ಟೆಸ್ಟ್​; ಕಾರಣ ಏನು?

‘ಅಪ್ಪ-ಅಮ್ಮನ ವೆಡ್ಡಿಂಗ್​ ಆ್ಯನಿವರ್ಸರಿಗೆ ವಿಶ್​ ಮಾಡ್ಬೇಕು, ವಿಡಿಯೋ ಕಾಲ್​ ಮಾಡಿಕೊಡಿ ಪ್ಲೀಸ್​’; ಆರ್ಯನ್​ ಅಳಲು?

Follow Us
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ