AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಮ್ಮೆ ಮಹಿಳೆಯ ವೇಷದಲ್ಲಿ ಬಂದ ಆಯುಷ್ಮಾನ್ ಖುರಾನಾ; ಸೀಕ್ವೆಲ್​​ನಲ್ಲಿ ಮನರಂಜನೆ ಡಬಲ್?

ಆಗಸ್ಟ್​ 25ರಂದು ಕನ್ನಡದಲ್ಲಿ ‘ಟೋಬಿ’ ರಿಲೀಸ್ ಆಗುತ್ತಿದೆ. ‘ಟೋಬಿ’ ಅಲ್ಲದೆ ಆಗಸ್ಟ್ ತಿಂಗಳಲ್ಲಿ ‘ಜೈಲರ್’, ‘ಒಎಂಜಿ 2’ ಸೇರಿ ಹಲವು ಸಿನಿಮಾಗಳು ರಿಲೀಸ್ ಆಗುತ್ತಿವೆ. ಇವುಗಳ ಜೊತೆ ‘ಡ್ರೀಮ್ ಗರ್ಲ್ 2’ ಸ್ಪರ್ಧಿಸಬೇಕಿದೆ.

ಮತ್ತೊಮ್ಮೆ ಮಹಿಳೆಯ ವೇಷದಲ್ಲಿ ಬಂದ ಆಯುಷ್ಮಾನ್ ಖುರಾನಾ; ಸೀಕ್ವೆಲ್​​ನಲ್ಲಿ ಮನರಂಜನೆ ಡಬಲ್?
ಆಯುಷ್ಮಾನ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 02, 2023 | 8:17 AM

2018ರಲ್ಲಿ ರಿಲೀಸ್ ಆದ ‘ಡ್ರೀಮ್ ಗರ್ಲ್​’ ಸಿನಿಮಾ (Dream Girl Movie) ಸೂಪರ್ ಹಿಟ್ ಆಯಿತು. ಕಡಿಮೆ ಬಜೆಟ್​ನಲ್ಲಿ ಸಿದ್ಧವಾದ ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿತು. ನಿರ್ಮಾಪಕಿ ಏಕ್ತಾ ಕಪೂರ್ ಅವರು ಈ ಚಿತ್ರದಿಂದ ಲಾಭ ಕಂಡರು. ಚೊಚ್ಚಲ ನಿರ್ದೇಶನದಲ್ಲೇ ರಾಜ್ ಶಾಂಡಿಲ್ಯ (Raaj Shaandilyaa) ಅವರು ಗೆದ್ದು ಬೀಗಿದರು. ಈಗ ‘ಡ್ರೀಮ್ ಗರ್ಲ್​ 2’ ಚಿತ್ರ ಸಿದ್ಧವಾಗಿದೆ. ಆಗಸ್ಟ್​ 25ರಂದು ರಿಲೀಸ್ ಆಗಲಿರುವ ಈ ಚಿತ್ರದ ಟ್ರೇಲರ್ ರಿಲೀಸ್ ಆಗಿ ಗಮನ ಸೆಳೆದಿದೆ.

ಆಯುಷ್ಮಾನ್ ಖುರಾನಾ ಅವರು ಹಾಸ್ಯಪ್ರಧಾನ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ‘ಡ್ರೀಮ್ ಗರ್ಲ್’ ಚಿತ್ರದಲ್ಲಿ ಅವರ ಪಾತ್ರ ಗಮನ ಸೆಳೆದಿತ್ತು. ಹುಡುಗಿಯಂತೆ ಮಾತನಾಡುವ ಕಲೆ ಕಥಾನಾಯಕನಿಗೆ ಪ್ರಾಪ್ತವಾಗಿರುತ್ತದೆ. ಆತ ದುಡ್ಡಿಗಾಗಿ ಒಂದು ಕಾಲ್​ ಸೆಂಟರ್ ಸೇರಿಕೊಳ್ಳುತ್ತಾನೆ. ಹುಡುಗಿಯ ಜೊತೆ ಮಾತನಾಡಬೇಕು ಎಂದು ಕಾದು ಕುಳಿತ ಪುರುಷರಿಗಾಗಿ ಮಾಡಲಾದ ಕಾಲ್​ ಸೆಂಟರ್ ಇದು. ಎಲ್ಲರ ಜೊತೆಗೂ ಯುವತಿಯಂತೆ ಮಾತನಾಡುತ್ತಾನೆ ಕಥಾ ನಾಯಕ. ನಂತರ ಏನಾಗುತ್ತದೆ ಎಂಬುದು ಸಿನಿಮಾದ ಕಥೆ. ಈಗ ಅದೇ ಥೀಮ್​ ಇಟ್ಟುಕೊಂಡು ರಾಜ್ ಅವರು ಸೀಕ್ವೆಲ್ ಮಾಡಿದ್ದಾರೆ.

ಆಯುಷ್ಮಾನ್ ಖುರಾನಾ ಅವರಿಗೆ ಜೊತೆಯಾಗಿ ಅನನ್ಯಾ ಪಾಂಡೆ ನಟಿಸಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟಾಗಿನಿಂದ ಇಲ್ಲಿಯವರೆಗೆ ಅನನ್ಯಾಗೆ ಯಾವುದೇ ಹಿಟ್ ಸಿಕ್ಕಿಲ್ಲ. ‘ಡ್ರೀಮ್ ಗರ್ಲ್ 2’ ಚಿತ್ರದಿಂದಾದರೂ ಅವರಿಗೆ ಗೆಲುವು ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಹೀರೋಯಿನ್ ಹೊರತುಪಡಿಸಿ ಉಳಿದ ಪಾತ್ರವರ್ಗ ಸೀಕ್ವೆಲ್​ನಲ್ಲೂ ಮುಂದುವರಿದಿದೆ.

ಇದನ್ನೂ ಓದಿ: ಆಯುಷ್ಮಾನ್ ಖುರಾನಾ ಪತ್ನಿ ತಾಹಿರಾ ಕಶ್ಯಪ್ ದಿಟ್ಟೆ ಅಂತ ಕರೆಸಿಕೊಳ್ಳವುದಕ್ಕೆ ಹಲವಾರು ಕಾರಣಗಳಿವೆ!

ಆಗಸ್ಟ್​ 25ರಂದು ಕನ್ನಡದಲ್ಲಿ ‘ಟೋಬಿ’ ರಿಲೀಸ್ ಆಗುತ್ತಿದೆ. ಈ ಸಿನಿಮಾ ಬಗ್ಗೆ ಕರ್ನಾಟಕದ ಮಂದಿಗೆ ಹೆಚ್ಚು ನಿರೀಕ್ಷೆ ಇದೆ. ‘ಟೋಬಿ’ ಅಲ್ಲದೆ ಆಗಸ್ಟ್ ತಿಂಗಳಲ್ಲಿ ‘ಜೈಲರ್’, ‘ಒಎಂಜಿ 2’ ಸೇರಿ ಹಲವು ಸಿನಿಮಾಗಳು ರಿಲೀಸ್ ಆಗುತ್ತಿವೆ. ಇವುಗಳ ಜೊತೆ ‘ಡ್ರೀಮ್ ಗರ್ಲ್ 2’ ಸ್ಪರ್ಧಿಸಿ ಗೆಲ್ಲಬೇಕಿದೆ. ಟ್ರೇಲರ್ ನೋಡಿದವರಿಗೆ ಸಿನಿಮಾದ ಮೇಲೆ ಭರವಸೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ