AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಂಡತಿಯನ್ನು ಆಸ್ಪತ್ರೆಯಿಂದ ಕರೆತಂದ ನಿರ್ದೇಶಕನಿಗೆ ಶಾಕ್​; ಆಸ್ಪತ್ರೆ ಬಿಲ್​ ಬರೋಬ್ಬರಿ 30 ಲಕ್ಷ ರೂಪಾಯಿ

ಸುಭಾಷ್​ ಅವರು 1982ರಲ್ಲಿ ಕಂಪನಿ ಒಂದನ್ನು ಸ್ಥಾಪಿಸಿದ್ದರು. ಈ ಕಂಪನಿ ಒಳ್ಳೆಯ ಲಾಭದಲ್ಲಿತ್ತು. ಆದರೆ, ಕೊವಿಡ್​ ಕಾಣಿಸಿಕೊಂಡ ನಂತರ ಸಮಸ್ಯೆ ಬಿಗಡಾಯಿಸಿತ್ತು. ಕಂಪನಿ ನಷ್ಟ ಅನುಭವಿಸೋಕೆ ಶುರುವಾಗಿತ್ತು.

ಹೆಂಡತಿಯನ್ನು ಆಸ್ಪತ್ರೆಯಿಂದ ಕರೆತಂದ ನಿರ್ದೇಶಕನಿಗೆ ಶಾಕ್​; ಆಸ್ಪತ್ರೆ ಬಿಲ್​ ಬರೋಬ್ಬರಿ 30 ಲಕ್ಷ ರೂಪಾಯಿ
ಬಿ. ಸುಭಾಷ್
TV9 Web
| Edited By: |

Updated on: Nov 19, 2021 | 5:09 PM

Share

ಮಿಥುನ್​ ಚಕ್ರವರ್ತಿ ( Mithun Chakraborty) ನಟನೆಯ ‘ಡಿಸ್ಕೋ ಡ್ಯಾನ್ಸರ್​’ (Disco Dancer) ಸಿನಿಮಾ ಹಿಟ್​ ಆಗಿತ್ತು. 1982ರಲ್ಲಿ ತೆರೆಗೆ ಬಂದ ಈ ಸಿನಿಮಾ ಅವರ ವೃತ್ತಿ ಬದುಕಿನ ಪ್ರಮುಖ ಸಿನಿಮಾಗಳಲ್ಲಿ ಒಂದಾಗಿದೆ. ಈ ಚಿತ್ರವನ್ನು ಬಿ. ಸುಭಾಷ್ (Babbar Subhash)​ ನಿರ್ದೇಶನ ಮಾಡಿದ್ದರು. ಅವರಿಗೆ ಈಗ 77 ವರ್ಷ ವಯಸ್ಸು. ಅವರಿಗೆ ಈಗ ಸಂಕಷ್ಟ ಒಂದು ಎದುರಾಗಿದೆ. ಸುಭಾಷ್​ ಅವರು ಪತ್ನಿ ತಿಲೋತ್ತಮಾ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಅವರನ್ನು ಮನೆಗೆ ಕರೆತರಲಾಗಿದೆ. ಶಾಕಿಂಗ್​ ವಿಚಾರ ಎಂದರೆ ಆಸ್ಪತ್ರೆಯವರು 30 ಲಕ್ಷ ರೂಪಾಯಿ ಬಿಲ್​ ವಿಧಿಸಿದ್ದಾರೆ. ಇದಕ್ಕೆ ಸಹಾಯ ಮಾಡುವಂತೆ ಅವರು ಬಾಲಿವುಡ್​ ಮಂದಿಯ ಸಹಾಯ ಕೇಳಿದ್ದಾರೆ. ಕೆಲವರು ಸಹಾಯಕ್ಕೆ ಮುಂದೆ ಬಂದಿದ್ದಾರೆ.

ಸುಭಾಷ್​ ಅವರು 1982ರಲ್ಲಿ ಕಂಪನಿ ಒಂದನ್ನು ಸ್ಥಾಪಿಸಿದ್ದರು. ಈ ಕಂಪನಿ ಒಳ್ಳೆಯ ಲಾಭದಲ್ಲಿತ್ತು. ಆದರೆ, ಕೊವಿಡ್​ ಕಾಣಿಸಿಕೊಂಡ ನಂತರ ಸಮಸ್ಯೆ ಬಿಗಡಾಯಿಸಿತ್ತು. ಕಂಪನಿ ನಷ್ಟ ಅನುಭವಿಸೋಕೆ ಶುರುವಾಗಿತ್ತು. ಇದರ ಜತೆಗೆ ಅವರ ಪತ್ನಿಗೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಡೋಕೆ ಶುರುವಾದವು. ಮುಂಬೈನ ಪ್ರತಿಷ್ಠಿತ ಆಸ್ಪತ್ರೆ ಕೋಕಿಲಬೇನ್​ ಧಿರೂಬಾಯ್​ ಅಂಬಾನಿ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿತ್ತು.

‘ತಿಲೋತ್ತಮಾಳ ಎರಡೂ ಕಿಡ್ನಿ ಕೆಲಸ ಮಾಡುವುದನ್ನು ನಿಲ್ಲಿಸಿತ್ತು. ಕೋಕಿಲಾಬೇನ್​ ಆಸ್ಪತ್ರೆಗೆ ಕಿಡ್ನಿ ಟ್ರಾನ್ಸ್​ಪ್ಲಾಂಟ್​ ಮಾಡೋಕೆ ತೆರಳಿದ್ದೆವು. ನನ್ನ ಒಂದು ಕಿಡ್ನಿಯನ್ನು ಆಕೆಗೆ ನೀಡಬೇಕು ಎಂದುಕೊಂಡಿದ್ದೆ. ಆದರೆ, ಆಕೆಗೆ ಶ್ವಾಸಕೋಶದ ಸಮಸ್ಯೆ ಕೂಡ ಇರುವುದು ಗೊತ್ತಾಗಿತ್ತು. ಈ ಸಂದರ್ಭದಲ್ಲಿ ಕಿಡ್ನಿ ಟ್ರಾನ್ಸ್​ಪ್ಲಾಂಟ್​ ಮಾಡಿದರೆ ಸಮಸ್ಯೆ ಆಗುತ್ತದೆ ಎಂದು ವೈದ್ಯರು ಹೇಳಿದ್ದರು’ ಎಂದಿದ್ದಾರೆ ಸುಭಾಷ್​.

‘ಸೆಪ್ಟೆಂಬರ್​ ತಿಂಗಳಲ್ಲಿ ತಿಲೋತ್ತಮಾಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮತ್ತೆ ಅವರು ಮರಳಿ ಮನೆಗೆ ಬಂದರು. ಆದರೆ ಆರೋಗ್ಯ ಸುಧಾರಿಸದ ಕಾರಣಕ್ಕೆ ಮತ್ತೆ ಆಸ್ಪತ್ರೆಯಲ್ಲಿ ಅಡ್ಮಿಟ್​ ಆದರು. ಮೂರು ದಿನಗಳ ಹಿಂದೆ ಆಕೆ ಮನೆಗೆ ಬಂದಿದ್ದಾಳೆ. ಈ ಅವಧಿಯಲ್ಲಿ ಚಿಕಿತ್ಸೆಗೆ 30 ಲಕ್ಷ ರೂಪಾಯಿ ಬಿಲ್​ ಆಗಿದೆ. ನಾವು ಹಣ ಹೊಂದಿಸೋಕೆ ಕಷ್ಟಪಡುತ್ತಿದ್ದಾರೆ’ ಎಂದಿದ್ದಾರೆ ಅವರು.

ಐದು ವರ್ಷದ ಹಿಂದೆ ತಿಲೋತ್ತಮಾ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಸಲ್ಮಾನ್​ ಖಾನ್​ ಆಸ್ಪತ್ರೆಯ ಖರ್ಚನ್ನು ನೋಡಿಕೊಂಡಿದ್ದರು. ಈಗ ಅವರ ಬಳಿ ಮತ್ತೆ ಹಣ ಕೇಳೋಕೆ ಅವರಿಗೆ ಮುಜುಗರ ಆಗುತ್ತಿದೆ.   ಈಗ ಸುಭಾಷ್​ ಸಹಾಯಕ್ಕೆ ಬಾಲಿವುಡ್​ ಮಂದಿ ಮುಂದೆ ಬಂದಿದ್ದಾರೆ. ಜೂಹಿ ಚಾವ್ಲಾ, ರತನ್​ ಜೈನ್​, ಅನಿಲ್​ ಕಪೂರ್​, ಮಿತುನ್​ ಚಕ್ರವರ್ತಿ ಸಹಾಯಕ್ಕೆ ಬಂದಿದ್ದಾರೆ.

ಇದನ್ನೂ ಓದಿ: ಅನುಷ್ಕಾ ಶರ್ಮಾಗೆ ಮೈಸೂರು ಜೋಡಿಯಿಂದ ಕನ್ನಡದಲ್ಲೇ ಮದುವೆ ಕರೆಯೋಲೆ; ಸಂತಸ ಪಟ್ಟ ನಟಿ

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ