AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏರ್​ಪೋರ್ಟ್​​ನಲ್ಲಿ ಸಲ್ಮಾನ್​ ಖಾನ್ ಅವರನ್ನು ತಡೆದಿದ್ದ ಸಿಐ​ಎಸ್ಎಫ್​ ಅಧಿಕಾರಿಗೆ ಈಗ ಸಂಕಷ್ಟ; ಕಾರಣ ಏನು?

Salman Khan: ಸಲ್ಮಾನ್​ ಖಾನ್​ ಅವರ ವೈರಲ್​ ವಿಡಿಯೋಗೆ ಸಂಬಂಧಿಸಿದಂತೆ ಮಾಧ್ಯಮವೊಂದಕ್ಕೆ ಸಿಐ​ಎಸ್ಎಫ್​ ಅಧಿಕಾರಿ ಸೋಮನಾಥ್​ ಮೊಹಂತಿ ಅವರು ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದೆ. ಅದರಿಂದ ಅವರಿಗೆ ತೊಂದರೆ ಆಗಿದೆ.

ಏರ್​ಪೋರ್ಟ್​​ನಲ್ಲಿ ಸಲ್ಮಾನ್​ ಖಾನ್ ಅವರನ್ನು ತಡೆದಿದ್ದ ಸಿಐ​ಎಸ್ಎಫ್​ ಅಧಿಕಾರಿಗೆ ಈಗ ಸಂಕಷ್ಟ; ಕಾರಣ ಏನು?
ಏರ್​ಪೋರ್ಟ್​​ನಲ್ಲಿ ಸಲ್ಮಾನ್​ ಖಾನ್ ಅವರನ್ನು ತಡೆದಿದ್ದ ಸಿಐ​ಎಸ್ಎಫ್​ ಅಧಿಕಾರಿಗೆ ಈಗ ಸಂಕಷ್ಟ
TV9 Web
| Edited By: |

Updated on:Aug 24, 2021 | 8:59 AM

Share

ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ವಿಚಾರ ಬೇಕಿದ್ದರೂ ಕೆಲವೇ ನಿಮಿಷಗಳಲ್ಲಿ ವೈರಲ್​ ಆಗಿಬಿಡುತ್ತದೆ. ಇತ್ತೀಚೆಗೆ ಸಲ್ಮಾನ್​ ಖಾನ್​ (Salman Khan) ಅವರಿಗೆ ಸಂಬಂಧಿಸಿದ ಒಂದು ವಿಡಿಯೋ ವೈರಲ್​ ಆಗಿತ್ತು. ಮುಂಬೈ ವಿಮಾನ ನಿಲ್ದಾಣವನ್ನು (Mumbai Airport) ಪ್ರವೇಶಿಸುವಾಗ ಅಲ್ಲಿನ ಸಿಐಎಸ್​ಎಫ್​ (CISF) ಅಧಿಕಾರಿಯೊಬ್ಬರು ಸಲ್ಲು ಅವರನ್ನು ತಡೆದು ನಿಲ್ಲಿಸಿ ದಾಖಲೆಗಳನ್ನು ಪರಿಶೀಲಿಸಿದ್ದರು. ಆ ವಿಡಿಯೋ ವೈರಲ್ (Viral Video)​ ಆದ ಬಳಿಕ ಸೋಮನಾಥ್​ ಮೊಹಂತಿ ಎಂಬ ಆ ಅಧಿಕಾರಿ ಸೋಶಿಯಲ್​ ಮೀಡಿಯಾದಲ್ಲಿ ಹೀರೋ ಆಗಿದ್ದರು. ಆದರೆ ಅವರಿಗೆ ಈಗ ಸಂಕಷ್ಟ ಎದುರಾಗಿದೆ.

ಅಷ್ಟಕ್ಕೂ ಸೋಮನಾಥ್​ ಮೊಹಂತಿ ಅವರು ಮಾಡಿದ ತಪ್ಪೇನು? ಈ ವಿಡಿಯೋ ವೈರಲ್​ ಆದ ಬಳಿಕ ಕೆಲವು ಮಾಧ್ಯಮ ಸಂಸ್ಥೆಗಳಿಂದ ಅವರಿಗೆ ಫೋನ್​ ಕರೆಗಳು ಬರಲು ಆರಂಭಿಸಿದವು. ಘಟನೆಗೆ ಸಂಬಂಧಿಸಿದಂತೆ ಅವರಿಂದ ಪ್ರತಿಕ್ರಿಯೆ ಪಡೆಯುವುದು ಮಾಧ್ಯಮ ಪ್ರತಿನಿಧಿಗಳ ಉದ್ದೇಶ ಆಗಿತ್ತು. ಆದರೆ ಅದೇ ಈಗ ಸೋಮನಾಥ್​ ಮೊಹಂತಿ ಪಾಲಿಗೆ ಸಂಕಷ್ಟ ತಂದೊಡ್ಡಿದೆ.

ಸಲ್ಮಾನ್​ ಖಾನ್​ ಅವರ ವೈರಲ್​ ವಿಡಿಯೋಗೆ ಸಂಬಂಧಿಸಿದಂತೆ ಮಾಧ್ಯಮವೊಂದಕ್ಕೆ ಸೋಮನಾಥ್​ ಮೊಹಂತಿ ಅವರು ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದೆ. ಸಿಐಎಸ್​ಎಫ್​ ಪ್ರೋಟೋಕಾಲ್​ ಪ್ರಕಾರ ಅವರು ಮಾಧ್ಯಮಗಳ ಜೊತೆ ಈ ರೀತಿ ಮಾತುಕತೆ ನಡೆಸುವಂತಿರಲಿಲ್ಲ. ನಿಯಮ ಮೀರಿದ್ದರಿಂದ ಅವರ ಮೊಬೈಲ್​ ಫೋನ್​ ಅನ್ನು ಹಿರಿಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.

ಸಲ್ಮಾನ್​ ಖಾನ್​ ಅವರು ‘ಟೈಗರ್​ 3’ ಸಿನಿಮಾದ ಶೂಟಿಂಗ್​ಗಾಗಿ ವಿದೇಶಕ್ಕೆ ತೆರಳುತ್ತಿದ್ದರು. ಈ ವೇಳೆ ಅವರು ಮುಂಬೈ ವಿಮಾನ ನಿಲ್ದಾಣವನ್ನು ಪ್ರವೇಶಿಸಿದಾಗ ಅಭಿಮಾನಿಗಳು ಅಲ್ಲಿ ಕಿಕ್ಕಿರಿದು ಜಮಾಯಿಸಿದ್ದರು. ಅವಸರದಲ್ಲಿ ಏರ್​ಪೋರ್ಟ್​ ಪ್ರವೇಶಿಸುತ್ತಿರುವ ಸಲ್ಲು ಅವರನ್ನು ಸೋಮನಾಥ್​ ಮೊಹಂತಿ ಅವರು ತಡೆದು ನಿಲ್ಲಿಸಿದ್ದರು. ಹೈಪ್ರೊಫೈಲ್​ ಸೆಲೆಬ್ರಿಟಿ ಎಂಬುದನ್ನೂ ಲೆಕ್ಕಿಸದೇ ಅವರ ಗುರುತಿನ ಚೀಟಿ ಮುಂತಾದ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ, ನಂತರ ಒಳಗೆ ಹೋಗಲು ಅನುಮತಿ ನೀಡಿದರು.

ಈ ವಿಡಿಯೋ ಸೋಶಿಯಲ್​ ಮೀಡಿಯದಲ್ಲಿ ವೈರಲ್​ ಆದ ಬಳಿಕ ಅವರನ್ನು ರಿಯಲ್​ ಹೀರೋ ಎಂದು ಜನರು ಹಾಡಿ ಕೊಂಡಾಡುತ್ತಿದ್ದಾರೆ. ಸೋಮನಾಥ್​ ಮೊಹಂತಿ ಅವರ ಕರ್ತವ್ಯ ನಿಷ್ಠೆಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದರ ನಡುವೆ ಸೋಮನಾಥ್​ ಮೊಹಂತಿ ಅವರು ಪ್ರೋಟೋಕಾಲ್​ ಉಲ್ಲಂಘಿಸಿದ್ದರಿಂದ ಹಿರಿಯ ಅಧಿಕಾರಿಗಳಿಗೆ ತಮ್ಮ ಮೊಬೈಲ್​ ಒಪ್ಪಿಸಬೇಕಾದ ಸಂದರ್ಭ ಎದುರಾಗಿದೆ ಎಂಬ ಸುದ್ದಿ ಕೇಳಿಬಂದಿದೆ.

ಇದನ್ನೂ ಓದಿ:

‘ದುಡ್ಡು ಕೊಟ್ಟರೆ ಮಾತ್ರ ಬಾಗಿಲು ತೆಗಿತೀನಿ’; ಸಲ್ಮಾನ್​ ಖಾನ್​ ತಮ್ಮನನ್ನೇ ಹೊರಗೆ ನಿಲ್ಲಿಸಿ, ವಾಪಸ್​​ ಕಳಿಸಿದ ಭೂಪ

ಅಫ್ಘಾನಿಸ್ತಾನದ ಜೊತೆ ನಟ ಸಲ್ಮಾನ್ ಖಾನ್​ಗೆ ಇದೆ ಒಂದು ಸಂಬಂಧ; ಏನದು?

Published On - 11:57 pm, Mon, 23 August 21

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು