AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುರುಷರ ಟಾಯ್ಲೆಟ್​ಗೆ ನುಗ್ಗಿದ್ದ ದೀಪಿಕಾ ಪಡುಕೋಣೆ-ಆಲಿಯಾ ಭಟ್​; ಇದರ ಹಿಂದಿದೆ ಅಚ್ಚರಿಯ ಕಥೆ

ಕೋಲ್ಡ್ ಪ್ಲೇ ಕನ್ಸರ್ಟ್​ಗಾಗಿ ಬರ್ಲಿನ್​ಗೆ ತೆರಳಿದಾಗ ನಡೆದ ಘಟನೆ ಇದಾಗಿದೆ. ದೀಪಿಕಾ ಜತೆ ಆಲಿಯಾ ಕೂಡ ಇದ್ದರು. ಮಹಿಳೆಯರು ಬಳಕೆ ಮಾಡುತ್ತಿದ್ದ ವಾಷ್​ರೂಂನಲ್ಲಿ ಉದ್ದನೆಯ ಸಾಲಿತ್ತು. ಆಗ ದೀಪಿಕಾ ಹಾಗೂ ಆಲಿಯಾ ಇಬ್ಬರೂ ತೆರಳಿದ್ದು ಬಾಯ್ಸ್​ ಟಾಯ್ಲೆಟ್​ಗೆ.

ಪುರುಷರ ಟಾಯ್ಲೆಟ್​ಗೆ ನುಗ್ಗಿದ್ದ ದೀಪಿಕಾ ಪಡುಕೋಣೆ-ಆಲಿಯಾ ಭಟ್​; ಇದರ ಹಿಂದಿದೆ ಅಚ್ಚರಿಯ ಕಥೆ
ಆಲಿಯಾ-ದೀಪಿಕಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 30, 2022 | 6:01 PM

ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ (Deepika Padukone) ಸದ್ಯ ‘ಗೆಹರಾಯಿಯಾ’ (Gehraiyaan) ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ದೀಪಿಕಾ ಪಡುಕೋಣೆ, ಸಿದ್ಧಾಂತ್​ ಚತುರ್ವೇದಿ, ಅನನ್ಯಾ ಪಾಂಡೆ​ ಮೊದಲಾದವರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ಪ್ರಚಾರಕ್ಕಾಗಿ ನಾನಾ ಮಾಧ್ಯಮಗಳಿಗೆ ದೀಪಿಕಾ ಪಡುಕೋಣೆ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಸಾಕಷ್ಟು ಅಚ್ಚರಿಯ ವಿಚಾರಗಳನ್ನು ಅವರು ಬಿಚ್ಚಿಡುತ್ತಿದ್ದಾರೆ. ಬರ್ಲಿನ್​​ನಲ್ಲಿ ನಡೆದ ವಿಚಿತ್ರ ಘಟನೆ ಬಗ್ಗೆ ದೀಪಿಕಾ ಈಗ ಹೇಳಿಕೊಂಡಿದ್ದಾರೆ. ಇದನ್ನು ಕೇಳಿ ಅನೇಕರು ಅಚ್ಚರಿ ಹೊರಹಾಕಿದ್ದಾರೆ. ಏಕೆಂದರೆ ದೀಪಿಕಾ ಹಾಗೂ ಆಲಿಯಾ ಭಟ್​ (Alia Bhatt) ಅಂದು ಪುರುಷರ ಟಾಯ್ಲೆಟ್​ಗೆ ನುಗ್ಗಿದ್ದರು! ಇದಕ್ಕೆ ಒಂದು ಮಹತ್ವ ಕಾರಣವಿದೆ.

ಕೋಲ್ಡ್ ಪ್ಲೇ ಕನ್ಸರ್ಟ್​ಗಾಗಿ ಬರ್ಲಿನ್​ಗೆ ತೆರಳಿದಾಗ ನಡೆದ ಘಟನೆ ಇದಾಗಿದೆ. ದೀಪಿಕಾ ಜತೆ ಆಲಿಯಾ ಕೂಡ ಇದ್ದರು. ಮಹಿಳೆಯರು ಬಳಕೆ ಮಾಡುತ್ತಿದ್ದ ವಾಷ್​ರೂಂನಲ್ಲಿ ಉದ್ದನೆಯ ಸಾಲಿತ್ತು. ಆಗ ದೀಪಿಕಾ ಹಾಗೂ ಆಲಿಯಾ ಇಬ್ಬರೂ ತೆರಳಿದ್ದು ಬಾಯ್ಸ್​ ಟಾಯ್ಲೆಟ್​ಗೆ. ಸಂದರ್ಶನದ ವೇಳೆ ಈ ವಿಚಾರ ಹೇಳುತ್ತಿದ್ದಂತೆ ಅವರ ಜತೆ ಇದ್ದ ಅನನ್ಯಾ ಪಾಂಡೆ ಹಾಗೂ ಸಿದ್ಧಾಂತ್​ ಅಚ್ಚರಿ ಹೊರಹಾಕಿದ್ದಾರೆ.

ಸಂದರ್ಶನದ ವೇಳೆ ದೀಪಿಕಾಗೆ ಪ್ರಶ್ನೆ ಒಂದು ಎದುರಾಯಿತು. ‘ಗರ್ಲ್ಸ್​​ ಟಾಯ್ಲೆಟ್​ ಕ್ಲೋಸ್​ ಆಗಿರುತ್ತದೆ. ಆಗ ಬಾಯ್ಸ್​ ಟಾಯ್ಲೆಟ್​ ಬಳಸುತ್ತೀರಾ?’ ಎಂದು ಕೇಳಲಾಯಿತು. ಇದಕ್ಕೆ ಮೊದಲು ಉತ್ತರಿಸಿದ್ದು ಅನನ್ಯಾ ಪಾಂಡೆ. ‘ಸ್ವಚ್ಛವಾಗಿದ್ದರೆ ನಾನು ಹುಡುಗರ ಶೌಚಾಲಯ​ ಬಳಕೆ ಮಾಡುತ್ತೇನೆ’ ಎಂದರು.  ಈ ವೇಳೆ ಮಾತನಾಡಿದ ಸಿದ್ಧಾಂತ್​, ‘ನೂರಕ್ಕೆ ನೂರು ಹೇಳುತ್ತೇನೆ, ದೀಪಿಕಾ ಆ ಕೆಲಸ ಮಾಡುವುದಿಲ್ಲ’ ಎಂದರು. ಇದಕ್ಕೆ ದೀಪಿಕಾ ನಗುತ್ತಲೇ ಉತ್ತರಿಸಿದರು.

‘ನಾನು ಬಾಯ್ಸ್​ ಟಾಯ್ಲೆಟ್​ ಬಳಸುತ್ತೇನೆ. ಈ ಮೊದಲು ಕೂಡ ಆ ರೀತಿ ಮಾಡಿದ್ದೇನೆ. ನಾನು ಮತ್ತು ಆಲಿಯಾ ಗರ್ಲ್ಸ್​ ಟಾಯ್ಲೆಟ್​ಗೆ ಹೋದೆವು. ಆದರೆ, ಉದ್ದನೆಯ ಸಾಲು ಇತ್ತು. ಹೀಗಾಗಿ ಪುರುಷರ ಶೌಚಾಲಯಕ್ಕೆ ಲಗ್ಗೆ ಇಟ್ಟೆವು. ನನಗೆ ಶೌಚಾಲಯ ಬಳಸುವ ಸಂದರ್ಭ ಬಂದರೆ, ಎಲ್ಲಾದರೂ ಸರಿ ನಾನು ಅದನ್ನು ಬಳಸುತ್ತೇನೆ. ಸ್ವಚ್ಛತೆ ಅಲ್ಲಿ ಮುಖ್ಯವಾಗುವುದೇ ಇಲ್ಲ’ ಎಂದಿದ್ದಾರೆ ದೀಪಿಕಾ.

‘ಗೆಹರಾಯಿಯಾ’ ಚಿತ್ರದಲ್ಲಿ ಸಂಬಂಧಗಳ ಬಗ್ಗೆ ಹೇಳಲಾಗಿದೆ ಎಂಬುದನ್ನು ಟ್ರೇಲರ್​ನಲ್ಲಿ ತೋರಿಸಲಾಗಿದೆ. ಆಲಿಶಾ (ದೀಪಿಕಾ ಪಡುಕೋಣೆ) ಹಾಗೂ ಕರಣ್​ (ಧೈರ್ಯ ಕರ್ವ) ಪ್ರೇಮಿಗಳು. ಆದರೆ, ಇವರ ನಡುವೆ ಯಾವುದೂ ಸರಿ ಇಲ್ಲ. ಇವರ ಸಂಬಂಧ ಸಂಪೂರ್ಣವಾಗಿ ಕೆಟ್ಟು ಹೋಗಿದೆ. ಆಗ ಆಲಿಶಾಗೆ ಪರಿಚಯ ಆಗೋದು, ಝೈನ್​ (ಸಿದ್ಧಾಂತ್​​ ಚತುರ್ವೇದಿ). ಆಲಿಶಾ ಕಸಿನ್​ ಟಿಯಾ (ಅನನ್ಯಾ ಪಾಂಡೆ) ಹಾಗೂ ಝೈನ್ ಮದುವೆ ನಿಗದಿ ಆಗಿದೆ. ಆದರೆ, ಝೈನ್​ ಹಾಗೂ ಆಲಿಶಾ ನಡುವೆ ಅಫೇರ್ ಬೆಳೆಯುತ್ತದೆ. ಇದಿಷ್ಟು ವಿಚಾರವನ್ನು ಟ್ರೇಲರ್​ನಲ್ಲಿ ಹೇಳಲಾಗಿದೆ. ಈ ಸಿನಿಮಾದ ಕಥೆ ಹೇಗೆ ಸಾಗುತ್ತದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ಇದನ್ನೂ ಓದಿ: Deepika Padukone: ‘ಗೆಹರಾಯಿಯಾ’ ಚಿತ್ರದ ಪ್ರಚಾರದಲ್ಲಿ ಮಿಂಚಿದ ದೀಪಿಕಾ; ಫೋಟೋಗಳು ಇಲ್ಲಿವೆ

ಕಿಸ್ಸಿಂಗ್​ ದೃಶ್ಯಗಳಲ್ಲಿ ಮಿಂಚಿದ ದೀಪಿಕಾ ಪಡುಕೋಣೆ; ‘ಗೆಹರಾಯಿಯಾ’ ಟ್ರೇಲರ್​ನಲ್ಲಿ ಹೈಲೈಟ್​ ಆಯ್ತು ಸಂಬಂಧಗಳ​ ವಿಚಾರ

ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್!
ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್!
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಏಕೆ ಎಫ್‌ಐಆರ್ ಹಾಕಿಲ್ಲ?; ನ್ಯಾ. ವರ್ಮಾ ವಿವಾದದ ಬಗ್ಗೆ ಉಪರಾಷ್ಟ್ರಪತಿ ಟೀಕೆ
ಏಕೆ ಎಫ್‌ಐಆರ್ ಹಾಕಿಲ್ಲ?; ನ್ಯಾ. ವರ್ಮಾ ವಿವಾದದ ಬಗ್ಗೆ ಉಪರಾಷ್ಟ್ರಪತಿ ಟೀಕೆ
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP
ಇವತ್ತೂ ನಗರದಲ್ಲಿ ಮಳೆ, ಮುಂದಿನ ಎರಡು ದಿನಗಳಲ್ಲೂ ಮಳೆ; ಬವಣೆ ತಪ್ಪಿದ್ದಲ್ಲ
ಇವತ್ತೂ ನಗರದಲ್ಲಿ ಮಳೆ, ಮುಂದಿನ ಎರಡು ದಿನಗಳಲ್ಲೂ ಮಳೆ; ಬವಣೆ ತಪ್ಪಿದ್ದಲ್ಲ
ಹಬ್ಬಕ್ಕೆಂದು ಬೆಂಗಳೂರಿನಿಂದ ಬಂದವರು ಮಸಣಕ್ಕೆ: ಇಲ್ಲಿದೆ ಕೊನೆಯ ಕ್ಷಣ
ಹಬ್ಬಕ್ಕೆಂದು ಬೆಂಗಳೂರಿನಿಂದ ಬಂದವರು ಮಸಣಕ್ಕೆ: ಇಲ್ಲಿದೆ ಕೊನೆಯ ಕ್ಷಣ