AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮದುವೆ ಹಾಲ್​ನಲ್ಲಿ ಬ್ಯಾಡ್ಮಿಂಟನ್​ ತರಬೇತಿ ನೀಡಿದ್ರು’; ತಂದೆ ಕುರಿತು ಬಯೋಪಿಕ್ ಮಾಡಲು ಮುಂದಾದ ದೀಪಿಕಾ

ದೀಪಿಕಾ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಾರಾ ಎನ್ನುವ ಬಗ್ಗೆ ಸ್ಪಷ್ಟನೆ ಇಲ್ಲ. ಪ್ರಕಾಶ್ ಪಡುಕೋಣೆಯನ್ನು ತುಂಬಾನೇ ಹತ್ತಿರದಿಂದ ನೋಡಿರುವುದಕ್ಕೆ ಸಿನಿಮಾದ ಕಥೆಯನ್ನು ದೀಪಿಕಾ ಅವರೇ ಬರೆಯಬಹುದು ಎನ್ನಲಾಗುತ್ತಿದೆ.

‘ಮದುವೆ ಹಾಲ್​ನಲ್ಲಿ ಬ್ಯಾಡ್ಮಿಂಟನ್​ ತರಬೇತಿ ನೀಡಿದ್ರು’; ತಂದೆ ಕುರಿತು ಬಯೋಪಿಕ್ ಮಾಡಲು ಮುಂದಾದ ದೀಪಿಕಾ
ಪ್ತಕಾಶ್​-ದೀಪಿಕಾ
TV9 Web
| Edited By: |

Updated on: Feb 18, 2022 | 6:05 PM

Share

ಹಿಂದಿ ಸೇರಿದಂತೆ ಬಹುತೇಕ ಚಿತ್ರರಂಗದಲ್ಲಿ ಬಯೋಪಿಕ್​ (Biopic) ಮಾಡುವ ಟ್ರೆಂಡ್​ ಆರಂಭವಾಗಿದೆ. ಕ್ರೀಡಾ ಪಟುಗಳು, ರಾಜಕಾರಣಿಗಳು, ಸಿನಿಮಾ ಮಂದಿ ಸೇರಿ ದೊಡ್ಡ ಸಾಧನೆ ಮಾಡಿದವರ ಕುರಿತು ಬಯೋಪಿಕ್​ ಮಾಡಲಾಗುತ್ತಿದೆ. ತಮಿಳುನಾಡು ಮುಖ್ಯಮಂತ್ರಿ ಆಗಿದ್ದ ಜಯಲಲಿತಾ ಕುರಿತ ‘ಥಲೈವಿ’ ಸೇರಿ ಸಾಕಷ್ಟು ಬಯೋಪಿಕ್​ಗಳು ಬಿಡುಗಡೆ ಆಗಿವೆ. ಇದಕ್ಕೆ ಈಗ ಹೊಸ ಸೇರ್ಪಡೆಯೊಂದು ಆಗುವುದರಲ್ಲಿದೆ. ದೀಪಿಕಾ ಪಡುಕೋಣೆ (Deepika Padukone) ಅವರು ತಂದೆ ಪ್ರಕಾಶ್​ ಪಡುಕೋಣೆ ಕುರಿತು ಸಿನಿಮಾ ಮಾಡೋಕೆ ಮುಂದಾಗಿದ್ದಾರೆ. ಇದಕ್ಕೆ ಅವರು ಕಾರಣವನ್ನೂ ನೀಡಿದ್ದಾರೆ. ಪ್ರಕಾಶ್​ ಪಡುಕೋಣೆ (Prakash Padukone) ಬ್ಯಾಡ್ಮಿಂಟನ್​ ಆಟಗಾರನಾಗಿದ್ದರು. ವಿಶ್ವಮಟ್ಟದಲ್ಲಿ ಅವರು ಭಾರತವನ್ನು ಪ್ರತಿನಿಧಿಸಿದ್ದರು. ಈ ಬಗ್ಗೆ ದೀಪಿಕಾಗೆ ಹೆಮ್ಮೆ ಇದೆ. ಅವರು ಮಾಡಿದ ಸಾಧನೆ, ಅವರು ಕ್ರೀಡಾ ಜಗತ್ತಿಗೆ ನೀಡಿದ ಕೊಡುಗೆ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ಇದನ್ನು ಜಗತ್ತಿನ ಮುಂದೆ ತೆರೆದಿಡಬೇಕು ಎಂಬುದು ದೀಪಿಕಾ ಆಸೆ. ಹೀಗಾಗಿ, ಅವರು ತಂದೆ ಕುರಿತು ಸಿನಿಮಾ ಮಾಡೋಕೆ ಮುಂದಾಗಿದ್ದಾರೆ.

‘1983ರಲ್ಲಿ ಟೀಂ ಇಂಡಿಯಾ ಕ್ರಿಕೆಟ್​ ವಿಶ್ವಕಪ್​ ಗೆದ್ದಿತ್ತು. ಇದರಿಂದ ಭಾರತದ ಕೀರ್ತಿ ಹೆಚ್ಚಿತ್ತು. ಅದಕ್ಕೂ ಮೊದಲು ಕ್ರೀಡೆಯ ವಿಚಾರದಲ್ಲಿ ವಿಶ್ವದ ಮ್ಯಾಪ್​ನಲ್ಲಿ ಭಾರತವನ್ನು ಗುರುತಿಸುವಂತೆ ಮಾಡಿದ್ದು ನನ್ನ ತಂದೆ. ಪ್ರಕಾಶ್​ ಪಡುಕೋಣೆ 1981ರಲ್ಲಿ ಬ್ಯಾಡ್ಮಿಂಟನ್​ನಲ್ಲಿ ವರ್ಡ್​ ಚಾಂಪಿಯನ್​ಶಿಪ್​ ಗೆದ್ದಿದ್ದರು’ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ ದೀಪಿಕಾ ಪಡುಕೋಣೆ.

‘ನಮ್ಮ ತಂದೆಗೆ ಬ್ಯಾಂಡ್ಮಿಟನ್​ಅನ್ನು ಕಲ್ಯಾಣ ಮಂಟಪದ ಹಾಲ್​ನಲ್ಲಿ ಹೇಳಿಕೊಡಲಾಗಿತ್ತು. ಅದುವೇ ನಮ್ಮ ತಂದೆಯ ಬ್ಯಾಡ್ಮಿಂಟನ್​ ಕೋರ್ಟ್​. ತಮ್ಮ ಅನಾನುಕೂಲತೆಗಳನ್ನೇ ಅನುಕೂಲತೆಯನ್ನಾಗಿ ಮಾಡಿಕೊಂಡರು ನನ್ನ ತಂದೆ. ಇಂದಿನ ಭಾರತದ ಕ್ರೀಡಾಪಟುಗಳು ಹೊಂದಿರುವ ಸೌಕರ್ಯಗಳು ಅಂದು ನನ್ನ ಅಪ್ಪನಿಗೆ ಸಿಕ್ಕಿದ್ದರೆ ಅವರು ಇನ್ನೂ ಯಶಸ್ಸು ಕಾಣುತ್ತಿದ್ದರು’ ಎಂದಿದ್ದಾರೆ ದೀಪಿಕಾ.

ದೀಪಿಕಾ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಾರಾ ಎನ್ನುವ ಬಗ್ಗೆ ಸ್ಪಷ್ಟನೆ ಇಲ್ಲ. ಪ್ರಕಾಶ್ ಪಡುಕೋಣೆಯನ್ನು ತುಂಬಾನೇ ಹತ್ತಿರದಿಂದ ನೋಡಿರುವುದಕ್ಕೆ ಸಿನಿಮಾದ ಕಥೆಯನ್ನು ದೀಪಿಕಾ ಅವರೇ ಬರೆಯಬಹುದು ಎನ್ನಲಾಗುತ್ತಿದೆ. ಇತ್ತೀಚೆಗೆ ತೆರೆಗೆ ಬಂದ ‘83’ ಸಿನಿಮಾಗೆ ದೀಪಿಕಾ ಕೂಡ ಬಂಡವಾಳ ಹೂಡಿದ್ದರು. ಪ್ರಕಾಶ್​ ಪಡುಕೋಣೆ ಕುರಿತ ಬಯೋಪಿಕ್​ಅನ್ನು ದೀಪಿಕಾ ಅವರೇ ನಿರ್ಮಾಣ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರದಲ್ಲಿ ಯಾರು ನಟಿಸುತ್ತಾರೆ ಎನ್ನುವ ವಿಚಾರ ಇನ್ನಷ್ಟೇ ಅಧಿಕೃತವಾಗಬೇಕಿದೆ.

ಶಾರುಖ್​​ ಖಾನ್​ ನಟನೆಯ ‘ಪಠಾಣ್​’ ಚಿತ್ರದಲ್ಲಿ ದೀಪಿಕಾ ನಟಿಸುತ್ತಿದ್ದಾರೆ. ಹೃತಿಕ್​ ರೋಷನ್​ ನಟನೆಯ ಸಿನಿಮಾದಲ್ಲಿ ಅವರು ಅಭಿನಯಿಸುತ್ತಿದ್ದಾರೆ. ಪ್ರಭಾಸ್-ಅಮಿತಾಭ್​ ಬಚ್ಚನ್​ ಅಭಿನಯದ ‘ಪ್ರಾಜೆಕ್ಟ್​ ಕೆ’ ಚಿತ್ರಕ್ಕೂ ದೀಪಿಕಾ ಹೀರೋಯಿನ್​.  ಇತ್ತೀಚೆಗೆ ತೆರೆಗೆ ಬಂದ ಅವರ ನಟನೆಯ ‘ಗೆಹರಾಯಿಯಾ’ ಸಿನಿಮಾದಲ್ಲಿ ದೀಪಿಕಾ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ದೀಪಿಕಾ ಸಿನಿಮಾವನ್ನು ಅನೇಕರು ಕೊಂಡಾಡಿದ್ದಾರೆ. ಇನ್ನೂ ಕೆಲವರು ಈ ಚಿತ್ರಕ್ಕೆ ನೆಗೆಟಿವ್​ ವಿಮರ್ಶೆ ಕೊಟ್ಟಿದ್ದಾರೆ.

ಇದನ್ನೂ ಓದಿ: Gehraiyaan Movie Review: ‘ಗೆಹರಾಯಿಯಾ’ ಇದು ಕೇವಲ ಹಸಿಬಿಸಿ ದೃಶ್ಯಗಳ ಕಥೆಯಲ್ಲ..

‘ಸಿನಿಮಾ ರಿಲೀಸ್​ ಡೇಟ್​ ಹತ್ತಿರ ಆದಾಗ ನಟಿಯರ ಬಟ್ಟೆ ಚಿಕ್ಕದಾಗತ್ತೆ’: ಈ ಟೀಕೆಗೆ ದೀಪಿಕಾ ತಿರುಗೇಟು ಏನು?

Follow Us
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಸಲೂನ್‌ನಲ್ಲಿ ಶಿಸ್ತಿನಿಂದ ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ!
ಸಲೂನ್‌ನಲ್ಲಿ ಶಿಸ್ತಿನಿಂದ ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ!
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!
ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ
ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ