AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋವಿಂದ ಜಾತಕದಲ್ಲಿ ಬರೆದಿದೆ ಎರಡನೇ ಮದುವೆ; ಆ ದಿನ ಹತ್ತಿರ ಬಂದೇ ಬಿಡ್ತಾ?

ಗೋವಿಂದ ಮತ್ತು ಸುನಿತಾ ಅವರ 37 ವರ್ಷಗಳ ಸಂಸಾರದಲ್ಲಿ ಬಿರುಗಾಳಿ ಬೀಸಿದೆ. ಸಹ ನಟಿಯೊಂದಿಗಿನ ಸಂಬಂಧದ ವದಂತಿಗಳಿಂದ ವಿಚ್ಛೇದನದ ಸುದ್ದಿ ಹಬ್ಬಿದೆ. ಸುನಿತಾ ಅವರು ಆರು ತಿಂಗಳ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಗೋವಿಂದ ಅವರ ಹಳೆಯ ಸಂದರ್ಶನದಲ್ಲಿ ತಮ್ಮ ಜಾತಕದಲ್ಲಿ ಎರಡನೇ ಮದುವೆಯ ಭವಿಷ್ಯವಿದೆ ಎಂದು ಹೇಳಿಕೊಂಡಿದ್ದರು.

ಗೋವಿಂದ ಜಾತಕದಲ್ಲಿ ಬರೆದಿದೆ ಎರಡನೇ ಮದುವೆ; ಆ ದಿನ ಹತ್ತಿರ ಬಂದೇ ಬಿಡ್ತಾ?
ಗೋವಿಂದ-ಸುನಿತಾ
ರಾಜೇಶ್ ದುಗ್ಗುಮನೆ
|

Updated on:Feb 27, 2025 | 10:55 AM

Share

ನಟ ಗೋವಿಂದ ಸಂಸಾರದಲ್ಲಿ ಬಿರುಗಾಳಿ ಬೀಸಿದೆ ಎಂಬ ವದಂತಿ ಜೋರಾಗಿದೆ. ಸಹ ನಟಿ ಜೊತೆಗಿನ ಸಂಬಂಧವೇ ಈ ವಿಚ್ಛೇದನಕ್ಕೆ ಕಾರಣ ಎಂದು ಕೂಡ ಹೇಳಲಾಗುತ್ತಿದೆ. ಪತ್ನಿ ಸುನಿತಾ ಅಹುಜಾ ಅವರಿಗೆ ಗೋವಿಂದ ವಿಚ್ಛೇದನ ನೀಡುವ ದಿನ ಹತ್ತಿರ ಬಂದೇ ಬಿಟ್ಟಿದೆಯೇ ಎನ್ನುವ ಪ್ರಶ್ನೆ ಈಗ ಎಲ್ಲರಲ್ಲೂ ಮೂಡಿದೆ. ಈ ಮಧ್ಯೆ ಅವರ ಹಳೆಯ ಸಂದರ್ಶನ ವೈರಲ್ ಆಗಿದೆ. ಇದರಲ್ಲಿ ಅವರು ತಮ್ಮ ಜಾತಕದಲ್ಲಿ ಎರಡನೇ ಮದುವೆ ಬಗ್ಗೆ ಬರೆದಿದ್ದಾಗಿ ಹೇಳಿಕೊಂಡಿದ್ದರು.

ಗೋವಿಂದ ಹಾಗೂ ಸುನಿತಾ ವಿವಾಹ ನಡೆದಿದ್ದೇ ಒಂದು ಅಚ್ಚರಿಯಲ್ಲಿ. ಏಕೆಂದರೆ ಸುನಿತಾನ ಗೋವಿಂದ ಪ್ರೀತಿ ಮಾಡಿರಲಿಲ್ಲ. ಆದರೆ, ಅವರಿಗೆ ಮದುವೆ ಆಗುವ ಪ್ರಾಮಿಸ್ ಮಾಡಿದ್ದರು. ಈ ಕಾರಣದಿಂದ ವಿವಾಹ ಆದರು. ಇದನ್ನು ಅವರು ಹೇಳಿದ್ದರು. ‘ನಾಳೆ ಏನಾಗುತ್ತದೆ ಎಂಬುದು ಯಾರಿಗೆ ಗೊತ್ತು? ನಾನು ಆಪ್ತತೆ ಹೊಂದಿದ ಹುಡುಗಿ ಜೊತೆ ಮತ್ತೆ ವಿವಾಹ ಆಗಬಹುದು. ಸುನಿತಾ ಇದಕ್ಕೆ ಸಿದ್ಧರಾಗಿ ಇರಬೇಕು. ಅಂದಾಗ ಮಾತ್ರ ನಾನು ಸ್ವತಂತ್ರ ಎನಿಸಿಕೊಳ್ಳುತ್ತೇನೆ. ನನ್ನ ಜಾತಕದಲ್ಲಿ ಎರಡನೇ ಮದುವೆ ಬಗ್ಗೆ ಬರೆದುಕೊಂಡಿದೆ’ ಎಂದಿದ್ದರು ಗೋವಿಂದ.

ಅಂದಿನ ಕಾಲದ ಹೀರೋಯಿನ್​ಗಳ ಬಗ್ಗೆ ಅವರು ಓಪನ್ ಆಗಿ ಮಾತನಾಡಿದ್ದರು. ‘ನಾನು ವಿಧಿಯನ್ನು ಬಲವಾಗಿ ನಂಬುತ್ತೇನೆ. ಏನಾಗಬೇಕೋ ಅದು ಆಗಿಯೇ ಆಗುತ್ತದೆ. ನನಗೆ ಜೂಹಿ ಅಂದರೆ ಇಷ್ಟ. ದಿವ್ಯಾ ಭಾರತಿ ಕೂಡ. ದಿವ್ಯಾ ಅವರು ಸೂಕ್ಷ್ಮ ಹುಡುಗಿ. ಪುರಷನಾಗಿ ಅವಳನ್ನು ವಿರೋಧಿಸುವುದು ಕಷ್ಟ. ಸುನಿತಾ ಈ ವಿಚಾರದಿಂದ ಅಪ್ಸೆಟ್ ಆಗಬಹುದು’ ಎಂದಿದ್ದರು ಗೋವಿಂದ. ದಿವ್ಯಾ ಭಾರತಿ ಬಾಲಿವುಡ್​ನಲ್ಲಿ ಸಾಕಷ್ಟು ಜನಪ್ರಿಯತೆ ಪಡೆದರು. ಸಣ್ಣ ವಯಸ್ಸಿಗೆ ಅವರು ಆತ್ಮಹತ್ಯೆಗೆ ಶರಣಾದರು.

ಇದನ್ನೂ ಓದಿ: ಮೂಢನಂಬಿಕೆಯಿಂದ ಬಾಲಿವುಡ್​ನಲ್ಲಿ ಬೇಡಿಕೆ ಕಳೆದುಕೊಂಡ ನಟ ಗೋವಿಂದ?

ಸುನಿತಾ ಹಾಗೂ ಗೋವಿಂದ 37 ವರ್ಷಗಳಿಂದ ಸುಖ ಸಂಸಾರ ನಡೆಸಿದ್ದಾರೆ. ಇವರಿಗೆ ಟೀನಾ ಹೆಸರಿನ ಮಗಳು ಹಾಗೂ ಯಶ್​ವರ್ಧನ್ ಹೆಸರಿನ ಮಗಳು ಇದ್ದಾರೆ. ಸುನಿತಾ ಅವರು ಆರು ತಿಂಗಳ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಆದರೆ, ಗೋವಿಂದ ಇದಕ್ಕೆ ಉತ್ತರಿಸಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:53 am, Thu, 27 February 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ