ಶೂಟ್ಗೆ ಬರದ ಪವನ್ ಕಲ್ಯಾಣ್; ಆ ಸಿನಿಮಾ ಬಿಟ್ಟು ಸಲ್ಮಾನ್ ಖಾನ್ ಮೊರೆ ಹೋದ ನಿರ್ದೇಶಕ
ಪವನ್ ಕಲ್ಯಾಣ್ ಅವರ ‘ಉಸ್ತಾದ್ ಭಗತ್ ಸಿಂಗ್’ ಚಿತ್ರದ ವಿಳಂಬದಿಂದಾಗಿ ನಿರ್ದೇಶಕ ಹರೀಶ್ ಶಂಕರ್ ಅವರು ಸಲ್ಮಾನ್ ಖಾನ್ ಅವರ ಮುಂದಿನ ಚಿತ್ರವನ್ನು ನಿರ್ದೇಶಿಸಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಪವನ್ ಕಲ್ಯಾಣ್ ಅವರ ಚಿತ್ರದಲ್ಲಿನ ತೊಂದರೆಗಳಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ಸಲ್ಮಾನ್ ಖಾನ್ ಅವರ ಹೊಸ ಚಿತ್ರಕ್ಕೆ ‘ಮೈತ್ರಿ ಮೂವೀ ಮೇಕರ್ಸ್’ ಬಂಡವಾಳ ಹೂಡುತ್ತಿದೆ.

ತೆಲುಗು ನಿರ್ದೇಶಕ ಹರೀಶ್ ಶಂಕರ್ (Harish Shankar) ಅವರು ಪವನ್ ಕಲ್ಯಾಣ್ ಜೊತೆ ‘ಉಸ್ತಾದ್ ಭಗತ್ ಸಿಂಗ್’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಆದರೆ, ರಾಜಕೀಯದಲ್ಲಿ ಬ್ಯುಸಿ ಇರುವುದರಿಂದ ಈ ಚಿತ್ರದ ಶೂಟ್ಗೆ ಪವನ್ ಕಲ್ಯಾಣ್ ಪದೇ ಪದೇ ಗೈರಾಗುತ್ತಿದ್ದಾರೆ. ಹೀಗಾಗಿ, ಈ ಸಿನಿಮಾ ಮುಂದುವರಿಯೋದು ಅನುಮಾನ ಎನ್ನಲಾಗುತ್ತಿದೆ. ಈ ಕಾರಣಕ್ಕೆ ಹರೀಶ್ ಶಂಕರ್ ಅವರು ಸಲ್ಮಾನ್ ಖಾನ್ ಮುಂದಿನ ಚಿತ್ರಕ್ಕೆ ನಿರ್ದೇಶನ ಮಾಡಲು ಮುಂದಾಗಿದ್ದಾರೆ ಎಂದು ವರದಿ ಆಗಿದೆ.
ಸಲ್ಮಾನ್ ಖಾನ್ ಅವರು ದಕ್ಷಿಣದ ನಿರ್ದೇಶಕ ಎಆರ್ ಮುರುಗದಾಸ್ ಅವರನ್ನು ಅತಿಯಾಗಿ ನಂಬಿದ್ದರು. ಈ ನಂಬಿಕೆ ಮೇರೆಗೆ ‘ಸಿಕಂದರ್’ ಸಿನಿಮಾ ಮಾಡಿದರು. ಈ ಸಿನಿಮಾ ಹಿಟ್ ಆಗಿಲ್ಲ. ಆದಾಗ್ಯೂ ಸಲ್ಲುಗೆ ದಕ್ಷಿಣದ ನಿರ್ದೇಶಕರ ಮೇಲಿನ ನಂಬಿಕೆ ಕಳೆದು ಹೋಗಿಲ್ಲ. ಹೀಗಾಗಿ, ಸಲ್ಮಾನ್ ಖಾನ್ ಹಾಗೂ ಹರೀಶ್ ಶಂಕರ್ ಅವರು ಇತ್ತೀಚೆಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಹರೀಶ್ ಹೇಳಿದ ಸಿನಿಮಾದ ಒಂದೆಳೆ ಸಲ್ಲು ಭಾಯ್ಗೆ ಇಷ್ಟ ಆಗಿದೆ ಎನ್ನಲಾಗಿದೆ.
ಪವನ್ ಕಲ್ಯಾಣ್ ಅವರ ‘ಉಸ್ತಾದ್ ಭಗತ್ ಸಿಂಗ್’ ಸೆಟ್ಟೇರಿ ಬಹಳ ಸಮಯ ಕಳೆದಿದೆ. ಆದರೆ, ಎಷ್ಟೇ ಪ್ರಯತ್ನಿಸಿದರೂ ಸಿನಿಮಾ ಮಾತ್ರ ನಿಂತಲ್ಲೆ ನಿಂತಿದೆ. ಪವನ್ ಕಲ್ಯಾಣ್ ಕೂಡ ಸಿನಿಮಾಗೆ ಡೇಟ್ ಕೊಡುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ, ಈ ಚಿತ್ರವನ್ನಿ ಬಿಟ್ಟು ಹರೀಶ್ ಶಂಕರ್ ಮುಂದುವರಿಯುವ ನಿರ್ಧಾರಕ್ಕೆ ಬಂದಿದ್ದಾರೆ.
ಈ ಮೊದಲು ಸನ್ ಪಿಕ್ಚರ್ಸ್ ಅವರು ಸಲ್ಮಾನ್ ಸಿನಿಮಾಗೆ ಬಂಡವಾಳ ಹೂಡಲು ಬಂದಿದ್ದರು. ಈ ಚಿತ್ರಕ್ಕೆ ಅಟ್ಲಿ ನಿರ್ದೇಶನ ಮಾಡಬೇಕಿತ್ತು. ಆದರೆ, ಇದು ಸೆಟ್ಟೇರಿಲ್ಲ. ಈಗ ಸಲ್ಮಾನ್ ಹಾಗೂ ಹರೀಶ್ ಶಂಕರ್ ಚಿತ್ರಕ್ಕೆ ‘ಪುಷ್ಪ 2’ ಖ್ಯಾತಿಯ ‘ಮೈತ್ರಿ ಮೂವೀ ಮೇಕರ್ಸ್’ ಬಂಡವಾಳ ಹೂಡುತ್ತಿದೆ.
ಇದನ್ನೂ ಓದಿ: ಪಾತಾಳ ಕಾಣುತ್ತಿದೆ ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಕಲೆಕ್ಷನ್; ಮೂರು ದಿನದ ಗಳಿಕೆ ಇಷ್ಟೇನಾ?
ಸಲ್ಮಾನ್ ಖಾನ್ ಅವರು ಇತ್ತೀಚೆಗೆ ದೊಡ್ಡ ಗೆಲುವು ಕಂಡಿಲ್ಲ. ಹೀಗಾಗಿ, ಸಲ್ಲುಗೆ ಒಂದು ದೊಡ್ಡ ಗೆಲುವು ಕೊಡಿಸೋ ಜವಾಬ್ದಾರಿ ಅವರ ಹೆಗಲು ಏರಿದೆ. ಆದರೆ, ಅಚ್ಚರಿಯ ವಿಚಾರ ಎಂದರೆ ಹರೀಶ್ ಶಂಕರ್ ಅವರು ಇತ್ತೀಚೆಗೆ ದೊಡ್ಡ ಗೆಲುವು ಕಂಡಿಲ್ಲ. ಹೀಗಿರುವಾಗ ಅವರು ಸಲ್ಲುಗೆ ಗೆಲುವು ಕೊಡಿಸೋದು ಹೇಗೆ ಎಂಬ ಪ್ರಶ್ನೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:47 am, Wed, 2 April 25