Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕ್ರಿಶ್ 4’ ನಿರ್ದೇಶನ ಮಾಡಲು ಒಪ್ಪಿ ತಪ್ಪು ಮಾಡಿದ್ರಾ ಹೃತಿಕ್ ರೋಷನ್? ಕಾಡುತ್ತಿದೆ ಭಯ

Hritik Roshan: ಸ್ಟಾರ್ ನಟ ಹೃತಿಕ್ ರೋಷನ್ ಇದೀಗ ಮೊದಲ ಬಾರಿಗೆ ನಿರ್ದೇಶಕ ಆಗಲಿದ್ದಾರೆ. ಅವರೇ ನಟಿಸುತ್ತಾ ಬಂದಿರುವ ಸೂಪರ್ ಹೀರೋ ಸರಣಿ ‘ಕ್ರಿಶ್​’ನ 4ನೇ ಭಾಗವನ್ನು ಹೃತಿಕ್ ರೋಷನ್ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾಕ್ಕೆ ಅವರ ತಂದೆ ಮತ್ತು ಆದಿತ್ಯ ಚೋಪ್ರಾ ಬಂಡವಾಳ ಹೂಡಲಿದ್ದಾರಂತೆ.

‘ಕ್ರಿಶ್ 4’ ನಿರ್ದೇಶನ ಮಾಡಲು ಒಪ್ಪಿ ತಪ್ಪು ಮಾಡಿದ್ರಾ ಹೃತಿಕ್ ರೋಷನ್? ಕಾಡುತ್ತಿದೆ ಭಯ
Hritik Roshan
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Apr 11, 2025 | 3:56 PM

ಹೃತಿಕ್ ರೋಷನ್ (Hritik Roshan) ಅವರು ‘ಕ್ರಿಶ್’ (Krish) ಸರಣಿಯಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಹೃತಿಕ್ ನಟನೆಯ, ರಾಕೇಶ್ ರೋಷನ್ (Rakesh Roshan) ನಿರ್ಮಾಣದ ಈ ಫ್ರ್ಯಾಂಚೈಸಿಯಲ್ಲಿ ಮೂರು ಸಿನಿಮಾಗಳು ಬಂದಿವೆ. ‘ಕ್ರಿಶ್ 4’ ಸಿನಿಮಾ ಬರೋ ಬಗ್ಗೆ ಮೊದಲಿನಿಂದಲೂ ಸಾಕಷ್ಟು ಚರ್ಚೆಗಳು ಇತ್ತಾದರೂ ಅದಕ್ಕೆ ಸ್ಪಷ್ಟನೆ ಸಿಕ್ಕಿರಲಿಲ್ಲ. ಸಿನಿಮಾ ಯಾವಾಗ ಸೆಟ್ಟೇರುತ್ತದೆ ಎಂಬ ಬಗ್ಗೆ ಮಾಹಿತಿ ಇರಲಿಲ್ಲ. ಕೊನೆಗೂ ಇದಕ್ಕೆ ಉತ್ತರ ಸಿಕ್ಕಿದೆ. ಈ ಚಿತ್ರವನ್ನು ಹೃತಿಕ್ ರೋಷನ್ ಅವರೇ ನಿರ್ದೇಶನ ಮಾಡುತ್ತಾ ಇದ್ದಾರೆ. ಈ ಮಧ್ಯೆ ಹೃತಿಕ್ ಅವರು ಈ ಸಿನಿಮಾ ನಿರ್ದೇಶನ ಮಾಡೋದು ತಾವು ತೆಗೆದುಕೊಂಡ ದೊಡ್ಡ ತಪ್ಪು ನಿರ್ಧಾರ ಎಂದು ಅನಿಸಿದೆ ಎಂಬುದಾಗಿ ಹೇಳಿದ್ದಾರೆ.

ಅಮೆರಿಕದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಹೃತಿಕ್ ರೋಷನ್ ಮಾತನಾಡಿದ್ದಾರೆ. ಈ ವೇಳೆ ಅವರು ಈ ವಿಚಾರ ಹೇಳಿದ್ದಾರೆ. ‘ನನಗೆ ಭಯ ಹಾಗೂ ನರ್ವಸ್ ಎರಡೂ ಆಗುತ್ತಿದೆ. ನಾನು ಶಿಶುವಿಹಾರಕ್ಕೆ ಹೋದಂತೆ ಭಾಸವಾಗುತ್ತಿದೆ. ನಾನು ಮತ್ತೆ ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿ ಬೆಳೆಯಬೇಕಿದೆ. ಇದು ಹೊಸ ಚಾಲೆಂಜ್. ಕ್ರಿಶ್ 4 ಸಿನಿಮಾ ನಿರ್ದೇಶನ ಮಾಡೋದು ನಾನು ತೆಗೆದುಕೊಂಡು ದೊಡ್ಡ ತಪ್ಪು ನಿರ್ಧಾರ ಎನಿಸುತ್ತದೆ. ಆದರೆ, ನಿಮ್ಮ ನಗು, ಖುಷಿ ನೋಡಿದಾಗ ಚಾಲೆಂಜ್​ನ ಸ್ವೀಕರಿಸಬೇಕು ಎನಿಸುತ್ತದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ:ಹೃತಿಕ್ ರೋಷನ್ ಮೆಚ್ಚಿನ ಸಹನಟ ದಕ್ಷಿಣದ ಈ ಸ್ಟಾರ್ ನಟ

ರಾಕೇಶ್ ರೋಷನ್ ಅವರು ಇತ್ತೀಚೆಗೆ ಮಗನ ನಿರ್ದೇಶಕನಾಗಿ ಲಾಂಚ್ ಮಾಡುತ್ತಿರೋ ಬಗ್ಗೆ ಖುಷಿ ಹೊರಹಾಕಿದ್ದಾರೆ. ’25 ವರ್ಷಗಳ ಹಿಂದೆ ಕಹೋ ನಾ ಪ್ಯಾರ್ ಹೈ ಮೂಲಕ ಮಗನ ಹೀರೋ ಆಗಿ ಲಾಂಚ್ ಮಾಡಿದ್ದೆ. ಈಗ 25 ವರ್ಷಗಳ ಬಳಿಕ ಮಗನನ್ನು ನಿರ್ದೇಶಕನನ್ನಾಗಿ ಮಾಡುತ್ತಿದ್ದೇನೆ. ಆದಿತ್ಯ ಚೋಪ್ರಾ ಹಾಗೂ ನಾನು ಕ್ರಿಶ್ 4 ಚಿತ್ರವನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದೇವೆ’ ಎಂದಿದ್ದರು.

‘ಕ್ರಿಶ್ 4’ ಚಿತ್ರಕ್ಕೆ ಈ ಸಾಕಷ್ಟು ಅಡೆತಡೆಗಳು ಇವೆ. ಇದಕ್ಕೆ ಕಾರಣವೂ ಇದೆ. ಇಂಗ್ಲಿಷ್​​ನಲ್ಲಿ ಹಲವು ಸೂಪರ್ ಹೀರೋ ಚಿತ್ರಗಳು ಬಂದಿವೆ. ಅಲ್ಲಿನ ಗ್ರಾಫಿಕ್ಸ್​​ಗಳ ಗುಣಮಟ್ಟ ಹೆಚ್ಚಿದೆ. ಇಂಥ ಸಂದರ್ಭದಲ್ಲಿ ಅವುಗಳಿಗೆ ಕಾಂಪಿಟೇಷನ್ ಕೊಡುವ ರೀತಿಯಲ್ಲಿ ಸಿನಿಮಾ ಮಾಡಬೇಕಾದ ಅನಿವಾರ್ಯತೆ ‘ಕ್ರಿಶ್ 4’ ಚಿತ್ರಕ್ಕೆ ಇದೆ. ಇದನ್ನು ಅವರು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ
ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ
ಎಲ್ಲ ಧರ್ಮಗಳಲ್ಲೂ ಶೋಷಿತರು ಮತ್ತು ಬಡವರಿದ್ದಾರೆ: ಡಿಕೆ ಸುರೇಶ್
ಎಲ್ಲ ಧರ್ಮಗಳಲ್ಲೂ ಶೋಷಿತರು ಮತ್ತು ಬಡವರಿದ್ದಾರೆ: ಡಿಕೆ ಸುರೇಶ್
ಅಡುಗೆ ಅನಿಲ ಸಿಲಿಂಡರ್ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ನಾಯಕರ ಪ್ರತಿಭಟನೆ
ಅಡುಗೆ ಅನಿಲ ಸಿಲಿಂಡರ್ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ನಾಯಕರ ಪ್ರತಿಭಟನೆ
ಅಧಿಕಾರದಲ್ಲಿ ಉಳಿಯಲು ಸಿದ್ದರಾಮಯ್ಯ ವ್ಯರ್ಥ ಪ್ರಯತ್ನ ನಡೆಸಿದ್ದಾರೆ: ಕೃಷ್ಣ
ಅಧಿಕಾರದಲ್ಲಿ ಉಳಿಯಲು ಸಿದ್ದರಾಮಯ್ಯ ವ್ಯರ್ಥ ಪ್ರಯತ್ನ ನಡೆಸಿದ್ದಾರೆ: ಕೃಷ್ಣ
ವೇದಿಕೆ ಮೇಲಿದ್ದ ಸಿಲಿಂಡರ್​ಗೆ ಹಣೆಹಚ್ಚಿ ನಮಸ್ಕರಿಸಿದ ಶಿವಕುಮಾರ್
ವೇದಿಕೆ ಮೇಲಿದ್ದ ಸಿಲಿಂಡರ್​ಗೆ ಹಣೆಹಚ್ಚಿ ನಮಸ್ಕರಿಸಿದ ಶಿವಕುಮಾರ್
ನಗರದಲ್ಲೆಲ್ಲ ವಿಜಯೇಂದ್ರ ಹೋರ್ಡಿಂಗ್ ಮತ್ತು ಬ್ಯಾನರ್​ಗಳು
ನಗರದಲ್ಲೆಲ್ಲ ವಿಜಯೇಂದ್ರ ಹೋರ್ಡಿಂಗ್ ಮತ್ತು ಬ್ಯಾನರ್​ಗಳು
VIDEO: ನೋಡ್ಕೊ ಗುರು... ನಾವೇನು ಫಿಕ್ಸಿಂಗ್ ಮಾಡ್ಕೊಂಡಿಲ್ಲ..!
VIDEO: ನೋಡ್ಕೊ ಗುರು... ನಾವೇನು ಫಿಕ್ಸಿಂಗ್ ಮಾಡ್ಕೊಂಡಿಲ್ಲ..!