AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಂಗನಾ ತಾಯಿ ಈಗೇನು ಮಾಡುತ್ತಿದ್ದಾರೆ? ಮಗಳ ಯಶಸ್ಸಿನಿಂದ ಬೀಗದ ಆಶಾ ಇನ್ನೂ ಹಳ್ಳಿಯಲ್ಲೇ ಇದ್ದಾರೆ

ಆಶಾ ಅವರು ಕಳೆದ 25 ವರ್ಷಗಳಿಂದ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಮಗಳ ಯಶಸ್ಸನ್ನು ಕಂಡು ಅವರು ಎಂದಿಗೂ ಬೀಗಿಲ್ಲ.

ಕಂಗನಾ ತಾಯಿ ಈಗೇನು ಮಾಡುತ್ತಿದ್ದಾರೆ? ಮಗಳ ಯಶಸ್ಸಿನಿಂದ ಬೀಗದ ಆಶಾ ಇನ್ನೂ ಹಳ್ಳಿಯಲ್ಲೇ ಇದ್ದಾರೆ
ರಾಜೇಶ್ ದುಗ್ಗುಮನೆ
|

Updated on:Feb 28, 2023 | 9:36 AM

Share

ನಟಿ ಕಂಗನಾ ರಣಾವತ್ (Kangana Ranaut) ಅವರು ಬಾಲಿವುಡ್​ನಲ್ಲಿ ಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ಅವರು ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ನಿರ್ದೇಶನ, ನಿರ್ಮಾಣಕ್ಕೂ ಇಳಿದಿದ್ದಾರೆ. ಮರ ಸುತ್ತುವ ಪಾತ್ರದಿಂದ ದೂರವೇ ಇರುವ ಕಂಗನಾ, ಹಲವು ಪ್ರಯೋಗಾತ್ಮಕ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಬಯೋಪಿಕ್, ಆ್ಯಕ್ಷನ್ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಇಷ್ಟೆಲ್ಲ ಯಶಸ್ಸು ಪಡೆದರೂ ಅವರ ತಾಯಿ ಮಾತ್ರ ಹಳ್ಳಿಯಲ್ಲೇ ಇದ್ದಾರೆ. ಈ ಬಗ್ಗೆ ಕಂಗನಾ ಅವರು ಸರಣಿ ಟ್ವೀಟ್ ಮಾಡಿದ್ದಾರೆ. ಅವರ ತಾಯಿ ಆಶಾಗೆ (Kangana Ranaut Asha) ಈಗಲೂ ಹಳ್ಳಿಯ ಜೀವನ, ಕೃಷಿಯೇ ಇಷ್ಟವಂತೆ.

ಆಶಾ ಅವರು ಕಳೆದ 25 ವರ್ಷಗಳಿಂದ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಮಗಳ ಯಶಸ್ಸನ್ನು ಕಂಡು ಅವರು ಎಂದಿಗೂ ಬೀಗಿಲ್ಲ. ‘ನನ್ನ ತಾಯಿ ಶ್ರೀಮಂತೆ ಅಲ್ಲ. ನಾನು ರಾಜಕೀಯ, ಬಿಸ್ನೆಸ್ ಹಿನ್ನೆಲೆ ಇಂದ ಬಂದವನು. ನನ್ನ ತಾಯಿ ಕಳೆದ 25 ವರ್ಷಗಳಿಂದ ಶಿಕ್ಷಕಿ ಆಗಿದ್ದಾರೆ. ನನಗೆ ಇಷ್ಟೊಂದು ಆ್ಯಟಿಟ್ಯೂಡ್ ಎಲ್ಲಿಂದ ಬಂದಿದೆ, ನಾನೇಕೆ ಮದುವೆಗಳಲ್ಲಿ ಡ್ಯಾನ್ಸ್ ಮಾಡುವುದಿಲ್ಲ ಎಂಬುದನ್ನು ಫಿಲ್ಮ್ ಮಾಫಿಯಾ ಅರಿತುಕೊಳ್ಳಬೇಕು’ ಎಂದು ಕಂಗನಾ ಹೇಳಿದ್ದಾರೆ.

‘ನನ್ನ ತಾಯಿ ಏಳು ಗಂಟೆ ಕೃಷಿ ಮಾಡುತ್ತಾರೆ. ಯಾರಾದರೂ ಕಂಗನಾ ತಾಯಿ ಎಂದು ಭೇಟಿ ಮಾಡಲು ಬಂದರೆ ಅವರಿಗೆ ಚಹ ಹಾಗೂ ಸ್ನಾಕ್ಸ್ ಕೊಡುತ್ತಾರೆ. ‘ಕಂಗನಾ ತಾಯಿ ಇವರೇನಾ?’ ಎಂದು ಬಂದವರಿಗೆ ಶಾಕ್ ಆಗುತ್ತದೆ. ನೀವು ಏಕೆ ಚಹ ಮಾಡಿ ಕೊಡಬೇಕು ಎಂದು ನನ್ನ ತಾಯಿಗೆ ಒಮ್ಮೆ ಕೇಳಿದ್ದೆ. ನಿನ್ನನ್ನು ಪ್ರೀತಿ ಮಾಡುವವರ ಸೇವೆ ಮಾಡುವುದು ನನಗೆ ಸಿಕ್ಕ ಅದೃಷ್ಟ ಎಂದು ಹೇಳಿದ್ದರು’ ಎಂಬುದಾಗಿ ಕಂಗನಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ
Image
Kangana Ranaut: ಉಗ್ರರಿಂದ ಹತ್ಯೆಯಾದ ಕಾಶ್ಮೀರಿ ಹುಡುಗಿ ಪಾತ್ರದಲ್ಲಿ ಕಂಗನಾ? ಸೆನ್ಸೇಷನ್​ ಸೃಷ್ಟಿಸಿದೆ ಹೊಸ ಸಿನಿಮಾ ಸುದ್ದಿ
Image
Emergency: ‘ಇಂದಿರಾ ಗಾಂಧಿ ಈ ವಿಡಿಯೋದಲ್ಲಿ ಕಂಗನಾ ರೀತಿ ಮಾಡ್ತಿದ್ದಾರೆ’: ರಾಮ್​ ಗೋಪಾಲ್​ ವರ್ಮಾ
Image
Emergency: ಇದು ಇಂದಿರಾ ಗಾಂಧಿ ಅಲ್ಲ, ಕಂಗನಾ ರಣಾವತ್! ಗಮನ ಸೆಳೆದ ‘ಎಮರ್ಜೆನ್ಸಿ’ ಫಸ್ಟ್​ ಲುಕ್​
Image
Kangana Ranaut: ‘ಶಿವಸೇನೆ ಹನುಮಾನ್​ ಚಾಲೀಸ ಬ್ಯಾನ್​ ಮಾಡಿದ್ರೆ ಅವರನ್ನು ಶಿವ ಕೂಡ ಕಾಪಾಡಲ್ಲ’: ಕಂಗನಾ ರಣಾವತ್​

‘ನನ್ನ ತಾಯಿಗೆ ಮುಂಬೈ ಎಂದರೆ ಇಷ್ಟವಿಲ್ಲ. ವಿದೇಶಕ್ಕೆ ಹೋಗೋಕೆ ಅವರಿಗೆ ಮನಸ್ಸಿಲ್ಲ. ನಾವು ಒತ್ತಾಯ ಮಾಡಿದರೆ ಬೈಗುಳ ಪಡೆಯಬೇಕು. ಅವರಿಗೆ ಮನೆ ಊಟ ಎಂದರೆ ಇಷ್ಟ’ ಎಂದು ಕಂಗನಾ ಟ್ವಿಟರ್​ನಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ: Javed Akhtar: ‘ಕಂಗನಾ ರಣಾವತ್​ ಮುಖ್ಯವೇ ಅಲ್ಲ’: ನೇರವಾಗಿ ಟೀಕೆ ಮಾಡಿದ ಜಾವೇದ್​ ಅಖ್ತರ್​

ಕಂಗನಾ ಅವರು ‘ಎಮರ್ಜೆನ್ಸಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರ ನಿರ್ಮಾಣಕ್ಕಾಗಿ ಕಂಗನಾ ಇಷ್ಟು ವರ್ಷ ದುಡಿದ ಹಣವನ್ನೆಲ್ಲ ಹೂಡಿಕೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:23 am, Tue, 28 February 23

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ