AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hrithik Roshan: ಪ್ರೇಯಸಿ ತುಟಿಗೆ ಹೃತಿಕ್​​ ರೋಷನ್​ ಕಿಸ್;​ ಜೂಮ್​ ಹಾಕಿ ವಿಡಿಯೋ ಮಾಡಿದ ಪಾಪರಾಜಿಗಳಿಗೆ ನೆಟ್ಟಿಗರ ಛೀಮಾರಿ

Hrithik Roshan | Saba Azad: ಹೃತಿಕ್​ ರೋಷನ್​ ಅವರನ್ನು ವಿಮಾನ ನಿಲ್ದಾಣದ ತನಕ ಬಿಡಲು ಸಬಾ ಆಜಾದ್ ಬಂದಿದ್ದರು. ಹೃತಿಕ್​ ಕಾರು ಇಳಿದು ಹೋಗುವುದಕ್ಕೂ ಮುನ್ನ ಸಬಾ ಆಜಾದ್​ ತುಟಿಗೆ ಕಿಸ್​ ಮಾಡಿದರು.

Hrithik Roshan: ಪ್ರೇಯಸಿ ತುಟಿಗೆ ಹೃತಿಕ್​​ ರೋಷನ್​ ಕಿಸ್;​ ಜೂಮ್​ ಹಾಕಿ ವಿಡಿಯೋ ಮಾಡಿದ ಪಾಪರಾಜಿಗಳಿಗೆ ನೆಟ್ಟಿಗರ ಛೀಮಾರಿ
ಹೃತಿಕ್ ರೋಷನ್, ಸಬಾ ಆಜಾದ್
ಮದನ್​ ಕುಮಾರ್​
|

Updated on: Feb 28, 2023 | 7:00 AM

Share

ಬಾಲಿವುಡ್​ ನಟ ಹೃತಿಕ್​ ರೋಷನ್​ (Hrithik Roshan) ಅವರು ಸಿನಿಮಾಗಳ ಜೊತೆಗೆ ಖಾಸಗಿ ಜೀವನದ ಕಾರಣದಿಂದಲೂ ಸಾಕಷ್ಟು ಸುದ್ದಿ ಆಗುತ್ತಾರೆ. ಮಾಜಿ ಪತ್ನಿ ಸುಸಾನೆ ಖಾನ್​ಗೆ ಅವರು 2014ರಲ್ಲಿ ವಿಚ್ಛೇದನ ನೀಡಿದರು. ಈಗ ಅವರು ನಟಿ ಸಬಾ ಆಜಾದ್ (Saba Azad) ಜೊತೆ ಡೇಟಿಂಗ್​ ಮಾಡುತ್ತಿದ್ದಾರೆ. ಈ ವಿಚಾರ ಗುಟ್ಟಾಗಿ ಉಳಿದಿಲ್ಲ. ಅನೇಕ ಸಂದರ್ಭಗಳಲ್ಲಿ ಹೃತಿಕ್​ ರೋಷನ್​ ಮತ್ತು ಸಬಾ ಆಜಾದ್ ಅವರು ಒಟ್ಟಾಗಿ ಕಾಣಿಸಿಕೊಂಡಿದ್ದುಂಟು. ಇತ್ತೀಚೆಗೆ ವಿಮಾನ ನಿಲ್ದಾಣಕ್ಕೆ ಒಟ್ಟಿಗೆ ಬಂದಿದ್ದ ಅವರು ಕಾರಿನಲ್ಲಿ ಪರಸ್ಪರ ತುಟಿಗೆ ಕಿಸ್​ ಮಾಡಿಕೊಂಡರು. ಅದನ್ನು ಪಾಪರಾಜಿಗಳು (Paparazzi) ಜೂಮ್​ ಹಾಕಿ ಸೆರೆ ಹಿಡಿದಿದ್ದಾರೆ. ಆ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ.

ಸೆಲೆಬ್ರಿಟಿಗಳು ಎಲ್ಲಿಯೇ ಹೋದರೂ ಪಾಪರಾಜಿಗಳು ಹಿಂಬಾಲಿಸುತ್ತಾರೆ. ಸ್ಟಾರ್​ ಕಲಾವಿದರ ಫೋಟೋ ಕ್ಲಿಕ್ಕಿಸಲು ಅವರು ಕಾಯುತ್ತಿರುತ್ತಾರೆ. ಆದರೆ ಅವರಿಗೂ ಕೆಲವು ಜವಾಬ್ದಾರಿಗಳು ಇರಬೇಕಾಗುತ್ತದೆ. ನಟ-ನಟಿಯರ ಖಾಸಗಿ ಬದುಕಿನ ಮೇಲೆ ದಾಳಿ ಮಾಡಬಾರದು. ತುಂಬ ಪರ್ಸನಲ್​ ಆದಂತಹ ಸಂಗತಿಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯದಿದ್ದರೆ ಒಳಿತು. ಆದರೆ ಕೆಲವೊಮ್ಮೆ ಪಾಪರಾಜಿಗಳು ಮಿತಿ ಮೀರಿ ವರ್ತಿಸುತ್ತಾರೆ. ಹೃತಿಕ್​ ರೋಷನ್​ ಮತ್ತು ಸಬಾ ಆಜಾದ್ ವಿಚಾರದಲ್ಲಿ ಹಾಗೆಯೇ ಆಗಿದೆ.

ಇದನ್ನೂ ಓದಿ
Image
‘ಕೆಜಿಎಫ್​ 3’ ಚಿತ್ರದಲ್ಲಿ ಹೃತಿಕ್​ ರೋಷನ್​ ಇರ್ತಾರಾ? ಊರ ತುಂಬ ಹಬ್ಬಿದೆ ಹೊಸ ಗಾಸಿಪ್​
Image
ಹೃತಿಕ್​ ರೋಷನ್​ಗೂ ಅಚ್ಚರಿ ಮೂಡಿಸಿತು 67 ವರ್ಷದ ನಟ ಅನುಪಮ್​ ಖೇರ್​ ಫಿಟ್ನೆಸ್​; ಇಲ್ಲಿದೆ ಫೋಟೋ
Image
‘ಹೃತಿಕ್​ ರೋಷನ್​ ಜತೆ ನೀವು ಡೇಟಿಂಗ್​ ಮಾಡ್ತಾ ಇದ್ದೀರಾ?’; ನೇರ ಪ್ರಶ್ನೆಗೆ ಸಬಾ ಉತ್ತರ ಏನಿತ್ತು?
Image
‘ಪ್ರೀತಿಯ ಆರ್ಯನ್​ ಖಾನ್​..’: ಶಾರುಖ್​ ಪುತ್ರನಿಗೆ ಹೃತಿಕ್​ ರೋಷನ್​ ಬಹಿರಂಗ ಪತ್ರ

ಇದನ್ನೂ ಓದಿ: ಅಭಿಮಾನಿಯ ಕಾಲು ಮುಟ್ಟಿ ನಮಸ್ಕಾರ ಮಾಡಿದ ಹೃತಿಕ್​ ರೋಷನ್​; ಇಲ್ಲಿದೆ ವೈರಲ್​ ವಿಡಿಯೋ

ಹೃತಿಕ್​ ರೋಷನ್​ ಅವರನ್ನು ವಿಮಾನ ನಿಲ್ದಾಣದ ತನಕ ಬಿಡಲು ಸಬಾ ಆಜಾದ್ ಬಂದಿದ್ದರು. ಹೃತಿಕ್​ ಕಾರು ಇಳಿದು ಹೋಗುವುದಕ್ಕೂ ಮುನ್ನ ಸಬಾ ಆಜಾದ್ ತುಟಿಗೆ ಕಿಸ್​ ಮಾಡಿದರು. ಕಾರಿನ ಒಳಗೆ ನಡೆದ ಈ ಚುಂಬನದ ಪ್ರಸಂಗವನ್ನು ಪಾಪರಾಜಿಗಳು ತಮ್ಮ ಕ್ಯಾಮೆರಾದಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಆ ವಿಡಿಯೋ ವೈರಲ್​ ಆಗಿದೆ.

View this post on Instagram

A post shared by Koimoi.com (@koimoi)

ಪಾಪರಾಜಿಗಳು ಈ ರೀತಿ ಮಾಡಿದ್ದು ಸರಿಯಲ್ಲ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ. ಸೆಲೆಬ್ರಿಟಿಗಳು ನೀಡಿದ ಅವಕಾಶವನ್ನು ಪಾಪರಾಜಿಗಳು ದುರುಪಯೋಗ ಮಾಡಿಕೊಳ್ಳಬಾರದು ಎಂದು ನೆಟ್ಟಿಗರು ಕಿವಿ ಹಿಂಡುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ನಟಿ ಆಲಿಯಾ ಭಟ್​ ಕೂಡ ಪಾಪರಾಜಿಗಳಿಂದ ತಮ್ಮ ಖಾಸಗಿತನಕ್ಕೆ ಧಕ್ಕೆ ಆಗಿದೆ ಎಂದು ಗರಂ ಆಗಿದ್ದರು.

ಇದನ್ನೂ ಓದಿ: Kangana Ranaut: ಹೃತಿಕ್​ ರೋಷನ್​ಗೆ ನಟನೆ ಬರಲ್ಲ ಎಂದು ನೇರವಾಗಿ ಹೇಳಿದ ಕಂಗನಾ​; ತಿರುಗೇಟು ನೀಡಿದ ಫ್ಯಾನ್ಸ್​

ಸಿನಿಮಾ ವಿಚಾರಕ್ಕೆ ಬರೋದಾದರೆ ಹೃತಿಕ್​ ರೋಷನ್​ ನಟಿಸಿದ ‘ವಿಕ್ರಂ ವೇದ’ ಸಿನಿಮಾ 2022ರ ಸೆಪ್ಟೆಂಬರ್​ನಲ್ಲಿ ತೆರೆಕಂಡಿತು. ಸೈಫ್​ ಅಲಿ ಖಾನ್​ ಕೂಡ ಆ ಚಿತ್ರದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದರು. ಬಾಕ್ಸ್​ ಆಫೀಸ್​ನಲ್ಲಿ ‘ವಿಕ್ರಂ ವೇದ’ ಹೀನಾಯವಾಗಿ ಸೋತಿತು. ಈಗ ‘ಫೈಟರ್​’ ಸಿನಿಮಾದ ಕೆಲಸಗಳಲ್ಲಿ ಹೃತಿಕ್​ ರೋಷನ್​​ ಬ್ಯುಸಿ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ
ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ
ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು
ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು
ಶಾಸಕರ ಆಹ್ವಾನ ಬೇಕಿಲ್ಲ, ಮಂಡ್ಯ ಜನ ಜವಾಬ್ದಾರಿ ನೀಡಿದ್ದಾರೆ: ಹೆಚ್​ಡಿಕೆ
ಶಾಸಕರ ಆಹ್ವಾನ ಬೇಕಿಲ್ಲ, ಮಂಡ್ಯ ಜನ ಜವಾಬ್ದಾರಿ ನೀಡಿದ್ದಾರೆ: ಹೆಚ್​ಡಿಕೆ