AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

​Mukesh Khanna: ‘ಶಕ್ತಿಮಾನ್​’ ಸಿನಿಮಾ ಬಜೆಟ್​ 300 ಕೋಟಿ ರೂಪಾಯಿ; ಕೆಲಸ ತಡ ಆಗಿದ್ದಕ್ಕೆ ಕಾರಣ ತಿಳಿಸಿದ ಮುಕೇಶ್​ ಖನ್ನಾ

Shaktimaan Movie: ‘ಇದು ದೊಡ್ಡ ಸಿನಿಮಾ ಆದ್ದರಿಂದ ಸಮಯ ಹಿಡಿಯುತ್ತದೆ. ತುಂಬಾ ಬೆಳವಣಿಗೆಗಳು ನಡೆಯುತ್ತಿವೆ’ ಎಂದು ಮುಕೇಶ್​ ಖನ್ನಾ ಹೇಳಿದ್ದಾರೆ.

​Mukesh Khanna: ‘ಶಕ್ತಿಮಾನ್​’ ಸಿನಿಮಾ ಬಜೆಟ್​ 300 ಕೋಟಿ ರೂಪಾಯಿ; ಕೆಲಸ ತಡ ಆಗಿದ್ದಕ್ಕೆ ಕಾರಣ ತಿಳಿಸಿದ ಮುಕೇಶ್​ ಖನ್ನಾ
ಮುಕೇಶ್​ ಖನ್ನಾ
ಮದನ್​ ಕುಮಾರ್​
| Edited By: |

Updated on:Jun 06, 2023 | 6:27 AM

Share

ಕಿರುತೆರೆಯಲ್ಲಿ ಪ್ರಸಾರವಾದ ‘ಶಕ್ತಿಮಾನ್​’ ಧಾರಾವಾಹಿಯನ್ನು(​Shaktimaan Serial) ಮರೆಯಲು ಸಾಧ್ಯವಿಲ್ಲ. ಈ ಸೀರಿಯಲ್​ನಲ್ಲಿ ಮುಕೇಶ್​ ಖನ್ನಾ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದರು. ಇಂಡಿಯನ್​ ಸೂಪರ್​ ಹೀರೋ ಆಗಿ ಅವರು ಮಿಂಚಿದ್ದರು. ಮಕ್ಕಳಿಗಂತೂ ‘ಶಕ್ತಿಮಾನ್​’ ಎಂದರೆ ಅಚ್ಚುಮೆಚ್ಚು. ಆತನ ಸಾಹಸಗಳು ಒಂದೆರಡಲ್ಲ. ಇಷ್ಟೆಲ್ಲ ಛಾಪು ಮೂಡಿಸಿರುವ ಈ ದೇಸಿ ಸೂಪರ್​ ಹೀರೋ ಪಾತ್ರವನ್ನೇ ಮುಖ್ಯವಾಗಿ ಇಟ್ಟುಕೊಂಡು ಸಿನಿಮಾ (Shaktimaan Movie) ಸಿದ್ಧವಾಗುತ್ತಿದೆ. ಆ ಕುರಿತು ಬಹಳ ಹಿಂದೆಯೇ ಮಾಹಿತಿ ಹಂಚಿಕೊಳ್ಳಲಾಗಿತ್ತು. ಆದರೂ ಕೂಡ ‘ಶಕ್ತಿಮಾನ್​’ ಸಿನಿಮಾ ಸೆಟ್ಟೇರಲು ವಿಳಂಬ ಆಗುತ್ತಿವೆ. ಅದಕ್ಕೆ ಕಾರಣ ಏನು ಎಂಬುದನ್ನು ಮುಕೇಶ್​ ಖನ್ನಾ (​Mukesh Khanna) ತಿಳಿಸಿದ್ದಾರೆ. ಯೂಟ್ಯೂಬ್​ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.

‘ಒಪ್ಪಂದಕ್ಕೆ ಸಹಿ ಮಾಡಲಾಗಿದೆ. ಇದು ತುಂಬ ದೊಡ್ಡ ಸಿನಿಮಾ ಆಗಲಿದೆ. ಇದರ ಬಜೆಟ್​ 200-300 ಕೋಟಿ ರೂಪಾಯಿ. ‘ಸ್ಪೈಡರ್​ ಮ್ಯಾನ್​’ ಸಿನಿಮಾ ಮಾಡಿದ್ದ ಸೋನಿ ಪಿಕ್ಚರ್ಸ್​ ಸಂಸ್ಥೆಯವರು ‘ಶಕ್ತಿಮಾನ್​’ ಸಿನಿಮಾ ಮಾಡಲಿದ್ದಾರೆ. ಆದರೆ ಸೆಟ್ಟೇರುವುದು ತಡವಾಗುತ್ತಿದೆ. ಮೊದಲು ಕೊರೊನಾ ಬಂತು. ಅದರಿಂದ ವಿಳಂಬ ಆಯಿತು’ ಎಂದು ಮುಕೇಶ್​ ಖನ್ನಾ ಹೇಳಿದ್ದಾರೆ.

ಇದನ್ನೂ ಓದಿ: ‘ಲೈಂಗಿಕ ಸಂಪರ್ಕ ಹೊಂದಬೇಕು ಎಂದು ಬರುವ ಹುಡುಗಿಯರ ನಂಬಬೇಡಿ’; ಹುಡುಗರಿಗೆ ಶಕ್ತಿಮಾನ್ ಕೊಟ್ರು ಟಿಪ್ಸ್

‘ಇದು ದೊಡ್ಡ ಸಿನಿಮಾ ಆದ್ದರಿಂದ ಸಮಯ ಹಿಡಿಯುತ್ತದೆ. ತುಂಬಾ ವಿಚಾರಗಳು ನಡೆಯುತ್ತಿವೆ. ಆದರೆ ಆ ಬಗ್ಗೆ ನಾನು ಮಾತನಾಡುವಂತಿಲ್ಲ. ನಾನು ಶಕ್ತಿಮಾನ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತೇನಾ ಎಂಬುದು ದೊಡ್ಡ ಪ್ರಶ್ನೆ. ಬೇರೆ ಯಾರಾದರೂ ಶಕ್ತಿಮಾನ್​ ಪಾತ್ರ ಮಾಡುತ್ತಾರಾ? ಆ ಬಗ್ಗೆ ನಾನು ಬಾಯಿ ಬಿಡುವಂತಿಲ್ಲ. ಇದೊಂದು ಕಮರ್ಷಿಯಲ್​ ಸಿನಿಮಾ. ದುಡ್ಡಿನ ಮಾತುಕತೆ ಸಾಕಷ್ಟು ಇರುತ್ತದೆ. ಈ ಸಿನಿಮಾದಲ್ಲಿ ನಾನು ಇರುತ್ತೇನೆ. ನನ್ನನ್ನು ಬಿಟ್ಟು ಈ ಸಿನಿಮಾ ಮಾಡೋಕೆ ಆಗಲ್ಲ ಎಂಬುದು ಎಲ್ಲರಿಗೂ ಗೊತ್ತು’ ಎಂದಿದ್ದಾರೆ ಮುಕೇಶ್​ ಖನ್ನಾ.

ಇದನ್ನೂ ಓದಿ: ಬೆಳ್ಳಿತೆರೆ ಮೇಲೆ ಬರಲಿದೆ ‘ಶಕ್ತಿಮಾನ್​’ ಧಾರಾವಾಹಿ; ಹೀರೋ ಬಗ್ಗೆ ಗುಟ್ಟು ಕಾಯ್ದುಕೊಂಡ ಸೋನಿ ಪಿಕ್ಚರ್ಸ್​

ಈ ಚಿತ್ರದಲ್ಲಿ ಮುಕೇಶ್​ ಖನ್ನಾ ಇರುತ್ತಾರೆ ಎಂಬುದು ಹೌದಾದರೂ ಅವರು ಶಕ್ತಿಮಾನ್​ ವೇಷದಲ್ಲಿ ಕಾಣಿಸಿಕೊಳ್ಳುವುದಿಲ್ಲವಂತೆ. ಯಾಕೆಂದರೆ ನಿರ್ಮಾಪಕರ ನಿರ್ಧಾರವೇ ಹಾಗಿದೆ. ಪಾತ್ರವರ್ಗ ಮತ್ತು ತಾಂತ್ರಿಕ ಬಳಗದ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡಲಾಗುವುದು ಎಂದು ಮುಕೇಶ್​ ಖನ್ನಾ ಹೇಳಿದ್ದಾರೆ. ರಣವೀರ್​ ಸಿಂಗ್​ ಅವರು ಶಕ್ತಿಮಾನ್​ ಆಗಿ ಕಾಣಿಸಿಕೊಳ್ಳಬಹುದು ಎಂಬ ಗಾಸಿಪ್​ ಹರಿದಾಡುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:49 pm, Mon, 5 June 23

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ