AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೇದಿಕೆ ಮೇಲೆ ಕಣ್ಣೀರು, ನಿಜಕ್ಕೂ ಅಂದು ನಡೆದಿದ್ದೇನು? ಉತ್ತರಿಸಿದ ಗಾಯಕಿ ನೇಹಾ

Neha Kakkar: ಖ್ಯಾತ ಬಾಲಿವುಡ್ ಗಾಯಕಿ ನೇಹಾ ಕಕ್ಕಡ್ ಮೆಲ್ಬೋರ್ನ್​ನಲ್ಲಿ ನಡೆದ ಲೈವ್ ಕಾನ್ಸರ್ಟ್ ವೇಳೆ ವೇದಿಕೆ ಮೇಲೆ ಕಣ್ಣೀರು ಹಾಕಿದ ವಿಡಿಯೋ ವೈರಲ್ ಆಗಿತ್ತು. ವೈರಲ್ ವಿಡಿಯೋನಲ್ಲಿ ಪ್ರೇಕ್ಷಕರು ಗಾಯಕಿ ನೇಹಾ ವಿರುದ್ಧ ಕೂಗಾಡುತ್ತಿದ್ದರು, ನಿಂದಿಸುತ್ತಿದ್ದರು. ಅಂದು ನಿಜವಾಗಿಯೂ ನಡೆದಿದ್ದು ಏನು ಎಂಬ ಬಗ್ಗೆ ನಟಿ ಸ್ಪಷ್ಟನೆ ನೀಡಿದ್ದಾರೆ.

ವೇದಿಕೆ ಮೇಲೆ ಕಣ್ಣೀರು, ನಿಜಕ್ಕೂ ಅಂದು ನಡೆದಿದ್ದೇನು? ಉತ್ತರಿಸಿದ ಗಾಯಕಿ ನೇಹಾ
Neha Kakkar
ಮಂಜುನಾಥ ಸಿ.
|

Updated on:Mar 28, 2025 | 1:39 PM

Share

ನೇಹಾ ಕಕ್ಕಡ್ ಬಾಲಿವುಡ್​ನ (Bollywood) ಜನಪ್ರಿಯ ಗಾಯಕಿಯರಲ್ಲಿ ಒಬ್ಬರು. ಸಿಂಗಿಂಗ್ ರಿಯಾಲಿಟಿ ಶೋನ ಜಡ್ಜ್ ಸಹ ಆಗಿರುವ ನೇಹಾ ಕಕ್ಕರ್ ಹಿಂದಿ ಮಾತ್ರವೇ ಅಲ್ಲದೆ ಹಲವಾರು ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ಜೊತೆಗೆ ದೇಶ ವಿದೇಶಗಳಲ್ಲಿ ಲೈವ್ ಶೋಗಳನ್ನು ಸಹ ನೇಹಾ ಕಕ್ಕಡ್ ನೀಡುತ್ತಿರುತ್ತಾರೆ. ಆದರೆ ಇತ್ತೀಚೆಗಷ್ಟೆ ನೇಹಾ ಕಕ್ಕಡ್ ಆಸ್ಟ್ರೇಲಿಯಾದ ಮೆಲ್ಬರ್ನ್​ಗೆ ಶೋ ನೀಡಲೆಂದು ತೆರಳಿದ್ದರು. ಆ ಶೋನ ಒಂದು ವಿಡಿಯೋ ವೈರಲ್ ಆಗಿದ್ದು, ನೆರೆದಿದ್ದ ಜನರೆಲ್ಲ ನೇಹಾಗೆ ಧಿಕ್ಕಾರ ಕೂಗುತ್ತಿದ್ದರೆ ನೇಹಾ, ವೇದಿಕೆ ಮೇಲೆ ನಿಂತು ಜೋರಾಗಿ ಅಳುತ್ತಾ, ಜನರ ಬಳಿ ಮನವಿ ಮಾಡಿಕೊಳ್ಳುತ್ತಿದ್ದರು. ನೇಹಾ ತಡವಾಗಿ ಬಂದಿದ್ದಕ್ಕೆ ಕಾಯುತ್ತಾ ಕೂತಿದ್ದ ಪ್ರೇಕ್ಷಕರು ಬೈದರು, ಹಾಗಾಗಿ ನೇಹಾ ಅಳುತ್ತಾ ಮನವಿ ಮಾಡಿದರು ಎನ್ನಲಾಗುತ್ತು. ಇದೀಗ ಆ ಘಟನೆ ಬಗ್ಗೆ ನೇಹಾ ಮಾತನಾಡಿದ್ದಾರೆ.

ಮೆಲ್ಬೋರ್ನ್​ ಶೋಗೆ ಬರೋಬ್ಬರಿ ಮೂರು ಗಂಟೆ ತಡವಾಗಿ ಬಂದರಂತೆ ನೇಹಾ, ಕಾಯುತ್ತಾ ಕೂತಿದ್ದ ಪ್ರೇಕ್ಷಕರು ನೇಹಾರನ್ನು ಮೂದಲಿಸಿದ್ದು ಮಾತ್ರವೇ ಅಲ್ಲದೆ ಹಣ ವಾಪಸ್ ನೀಡುವಂತೆ ಒತ್ತಾಯಿಸಿದ್ದಾರೆ. ಆಗ ನೇಹಾ ಅಳುತ್ತಾ ಎಲ್ಲರ ಬಳಿ ಮನವಿ ಮಾಡಿ, ಹಾಡು ಹಾಡಲು ಆರಂಭಿಸಿದ್ದಾರೆ. ಆದರೆ ಅಂದು ತಡವಾಗಿದ್ದು ಏಕೆ? ತಾವು ಅತ್ತಿದ್ದು ಏಕೆ ಎಂದು ಗಾಯಕಿ ನೇಹಾ ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿವರಗಳನ್ನು ಹಂಚಿಕೊಂಡಿದ್ದಾರೆ.

‘ನೇಹಾ ಮೂರು ಗಂಟೆ ತಡವಾಗಿ ಬಂದಳು ಎಂದಿದ್ದಾರೆ ಆದರೆ ಅಂದು ನಾನು ಏಕೆ ಅಷ್ಟು ತಡವಾಗಿ ಬಂದೆ ಎಂದು ಯಾರೂ ಸಹ ಕೇಳಿಲ್ಲ. ನನಗೆ, ನನ್ನ ಜೊತೆ ಬಂದ ಸಂಗೀತಗಾರರಿಗೆ ಏನಾಯ್ತು ಎಂದು ಯಾರೂ ಕೇಳಲಿಲ್ಲ. ಅಂದು ಸಹ ನಾನು ವೇದಿಕೆ ಮೇಲೆ ಮಾತನಾಡಿದಾಗ ಅಂದು ನನಗೆ, ನನ್ನ ಸಂಗೀತ ತಂಡಕ್ಕೆ ಏನಾಯಿತು ಎಂದು ನಾನು ಹೇಳಲಿಲ್ಲ. ನನ್ನ ಉದ್ದೇಶ ಇದ್ದಿದ್ದು ಹೇಗಾದರೂ ಮಾಡಿ ಕಾಯುತ್ತಿರುವ ಜನರಿಗೆ ಮನರಂಜನೆ ಒದಗಿಸಬೇಕು, ಹಾಗೂ ನನ್ನಿಂದ ಯಾರಿಗೂ ತೊಂದರೆ ಆಗಬಾರದು ಎಂಬುದಷ್ಟೆ ಆಗಿತ್ತು’ ಎಂದಿದ್ದಾರೆ.

ಇದನ್ನೂ ಓದಿ:ಕಡಲ ತೀರದಲ್ಲಿ ನೇಹಾ ಕಕ್ಕರ್​ ಸ್ನಾನ; ಫೇಮಸ್​ ಗಾಯಕಿಯ ಹಾಟ್​ ಅವತಾರ

‘ಅಂದು ನಾನು ಮತ್ತು ನಮ್ಮ ತಂಡ ಸಂಪೂರ್ಣ ಉಚಿತವಾಗಿ ಪ್ರದರ್ಶನ ನೀಡಿದೆವು ಎಂಬುದು ನಿಮಗೆ ಗೊತ್ತೆ? ಅಂದು ಕಾರ್ಯಕ್ರಮ ಆಯೋಜಿಸಿದ್ದ ವ್ಯಕ್ತಿಗಳು ಎಲ್ಲ ಟಿಕೆಟ್ ಹಣವನ್ನು ತೆಗೆದುಕೊಂಡು ಪರಾರಿಯಾದರು. ನಮ್ಮ ಫೋನ್ ಕರೆಗಳನ್ನು ಅವರು ಸ್ವೀಕರಿಸಲಿಲ್ಲ. ನಮ್ಮ ಬ್ಯಾಂಡ್​ನವರಿಗೆ ಊಟ, ವಸತಿ ಕನಿಷ್ಟ ನೀರಿನ ವ್ಯವಸ್ಥೆ ಸಹ ಇರಲಿಲ್ಲ. ಕೊನೆಗೆ ನನ್ನ ಪತಿಯೇ ಎಲ್ಲರಿಗೂ ಊಟ, ವಸತಿ ಇನ್ನಿತರೆಗಳ ವ್ಯವಸ್ಥೆ ಮಾಡಿದರು. ಇಷ್ಟೆಲ್ಲ ಆದರೂ ನಾವು ವೇದಿಕೆ ಮೇಲೆ ಬಂದು ನಮಗಾಗಿ ಕಾಯುತ್ತಿದ್ದವರಿಗಾಗಿ ಪ್ರದರ್ಶನ ನೀಡಿದೆವು’ ಎಂದಿದ್ದಾರೆ ನೇಹಾ.

‘ಅಂದು ಸೌಂಡ್ ಚೆಕ್ ಸಹ ಆಗಿರಲಿಲ್ಲ. ಸೌಂಡ್ ಆಪರೇಟ್ ಮಾಡುವ ವ್ಯಕ್ತಿಗೆ ಹಣ ನೀಡಿರಲಿಲ್ಲವೆಂಬ ಕಾರಣಕ್ಕೆ ಆ ವ್ಯಕ್ತಿ ಸೌಂಡ್ ಆನ್ ಮಾಡುವುದೇ ಇಲ್ಲ ಎಂದಿದ್ದ. ಆತನ ಮನವೊಲಿಸಿ, ಕೈಯಿಂದ ಹಣ ಕೊಟ್ಟು ಆನ್ ಮಾಡಿಸಿದೆವು. ಅಂದು ಸೌಂಡ್ ಚೆಕ್ ಇಲ್ಲದೆ ನಾನು ಹಾಡು ಹಾಡಿದೆ. ಕೊನೆಯ ಕ್ಷಣದ ವರೆಗೆ ಕಾನ್ಸರ್ಟ್​ ಇದೆಯೋ ಇಲ್ಲವೋ, ನಡೆಯುತ್ತದೆಯೋ ಇಲ್ಲವೊ ಎಂಬುದು ಸಹ ಗೊತ್ತಿರಲಿಲ್ಲ. ಆ ಶೋನ ಆಯೋಜಕರು, ಸ್ಪಾನ್ಸರ್​ಗಳು ಎಲ್ಲರೂ ಪಲಾಯನ ಮಾಡಿದರು. ಹೇಳುತ್ತಾ ಹೋದರೆ ಇನ್ನೂ ಸಾಕಷ್ಟಿದೆ ಆದರೆ ಇಷ್ಟು ಸಾಕು ಅನಿಸುತ್ತದೆ’ ಎಂದಿದ್ದಾರೆ ನೇಹಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:10 pm, Fri, 28 March 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ