AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕ್ರಿಶ್ 4’ ಮಹತ್ವದ ಅಪ್​ಡೇಟ್, ನಿರ್ದೇಶಕನಾಗಿ ಬದಲಾದ ಸೂಪರ್ ಸ್ಟಾರ್ ನಟ

Hritik Roshan: ‘ಕ್ರಿಶ್’, ಭಾರತದ ಅತ್ಯಂತ ಯಶಸ್ವಿ ಮತ್ತು ಜನಪ್ರಿಯ ಸೂಪರ್ ಹೀರೋ ಸಿನಿಮಾ ಸರಣಿ. ಇದೀಗ ‘ಕ್ರಿಶ್ 4’ ಸಿನಿಮಾದ ನಿರ್ಮಾಣದ ಬಗ್ಗೆ ಚರ್ಚೆ ಚಾಲ್ತಿಯಲ್ಲಿದ್ದು, ಇದೀಗ ಮಹತ್ವದ ಅಪ್​ಡೇಟ್ ಒಂದು ಹೊರಬಿದ್ದಿದೆ. ಸೂಪರ್ ಸ್ಟಾರ್ ನಟರೊಬ್ಬರು ಈ ಸಿನಿಮಾದ ನಿರ್ದೇಶನ ಮಾಡಲಿದ್ದಾರೆ. ಇದು ಅವರ ಮೊದಲ ನಿರ್ದೇಶನದ ಸಿನಿಮಾ ಆಗಲಿದೆ.

‘ಕ್ರಿಶ್ 4’ ಮಹತ್ವದ ಅಪ್​ಡೇಟ್, ನಿರ್ದೇಶಕನಾಗಿ ಬದಲಾದ ಸೂಪರ್ ಸ್ಟಾರ್ ನಟ
Krrish
ಮಂಜುನಾಥ ಸಿ.
|

Updated on: Mar 28, 2025 | 5:44 PM

Share

ಭಾರತೀಯ ಚಿತ್ರರಂಗದ (Indian Cinema) ಮೊಟ್ಟ ಮೊದಲ ಸೂಪರ್ ಹೀರೋ ಸಿನಿಮಾ ‘ಕ್ರಿಶ್ 4’. ಅದಕ್ಕೆ ಮುಂಚೆ ಕೆಲವು ಸಿನಿಮಾಗಳು ಬಂದಿದ್ದವಾದರೂ ವಿಶೇಷ ಶಕ್ತಿಯ, ಆಧುನಿಕ ವಿಎಫ್​ಎಕ್ಸ್ ಬಳಸಿಕೊಂಡು ನಿರ್ಮಿಸಲಾದ ಮೊದಲ ಸಿನಿಮಾ ‘ಕ್ರಿಶ್’ ಆಗಿತ್ತು. ಹೃತಿಕ್ ರೋಷನ್ ಕ್ರಿಶ್ ಪಾತ್ರದಲ್ಲಿ ನಟಿಸಿದ್ದರು. ಅವರ ತಂದೆ ರಾಕೇಶ್ ರೋಷನ್ ಸಿನಿಮಾದ ನಿರ್ದೇಶನ ಮಾಡಿದ್ದರು. ‘ಕೋಯಿ ಮಿಲ್ ಗಯಾ’ ಸಿನಿಮಾದ ಕತೆಯನ್ನೇ ಮುಂದುವರೆಸಿ ‘ಕ್ರಿಶ್’ ಕತೆ ಹೆಣೆಯಲಾಗಿತ್ತು. ‘ಕ್ರಿಶ್ 3’ ಸಿನಿಮಾ, 2013 ರಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆಯ್ತು, ಇದೀಗ ‘ಕ್ರಿಶ್ 4’ ಸಿನಿಮಾದ ಬಗ್ಗೆ ಮಹತ್ವದ ಅಪ್​ಡೇಟ್ ಹೊರಬಿದ್ದಿದೆ.

‘ಕ್ರಿಶ್ 3’ ಸಿನಿಮಾ ಹಿಟ್ ಆದ ಬಳಿಕ 12 ವರ್ಷಗಳ ಬಳಿಕ ‘ಕ್ರಿಶ್ 4’ ಸಿನಿಮಾ ನಿರ್ಮಿಸುವ ಬಗ್ಗೆ ಆಸಕ್ತಿಯನ್ನು ರಾಕೇಶ್ ರೋಷನ್ ವ್ಯಕ್ತಪಡಿಸಿದ್ದು, ಈ ಬಗ್ಗೆ ಕಳೆದ ಒಂದು ವರ್ಷದಿಂದಲೂ ಚರ್ಚೆ ಜಾರಿಯಲ್ಲಿದೆ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಸ್ವತಃ ರಾಕೇಶ್ ರೋಷನ್ ಹೇಳಿಕೊಂಡಿರುವಂತೆ, ಸಿನಿಮಾದ ಕತೆ ಬಹುತೇಕ ರೆಡಿಯಿದೆ. ಆದರೆ ನಿರ್ದೇಶಕರು ಅಂತಿಮವಾಗುವುದು ತುಸು ತಡವಾಗಿತ್ತು. ಇದೀಗ ಸಿನಿಮಾಕ್ಕೆ ನಿರ್ದೇಶಕರು ಸಿಕ್ಕಿದ್ದಾರೆ. ವಿಶೇಷವೆಂದರೆ ಇಂಥಹಾ ಜನಪ್ರಿಯ ಸಿನಿಮಾ ಸರಣಿಯ ಸಿನಿಮಾ ನಿರ್ದೇಶಿಸುತ್ತಿರುವುದು ಈ ವರೆಗೆ ಒಂದೂ ಸಿನಿಮಾ ನಿರ್ದೇಶನ ಮಾಡದ ಆದರೆ ಚಿತ್ರರಂಗಕ್ಕೆ ಹಳಬರಾಗಿರುವ ಒಬ್ಬ ಸೂಪರ್ ಸ್ಟಾರ್ ನಟ! ಅವರೇ ಹೃತಿಕ್ ರೋಷನ್.

ಹೌದು, ನಟ ಹೃತಿಕ್ ರೋಷನ್, ಇದೇ ಮೊದಲ ಬಾರಿಗೆ ನಿರ್ದೇಶಕ ಆಗುತ್ತಿದ್ದಾರೆ. ‘ಕ್ರಿಶ್’ ಪಾತ್ರದಲ್ಲಿ ನಟಿಸುವುದರ ಜೊತೆಗೆ ‘ಕ್ರಿಶ್ 4’ ಸಿನಿಮಾದ ನಿರ್ದೇಶನವನ್ನೂ ಅವರೇ ಮಾಡಲಿದ್ದಾರೆ. ಈ ಹಿಂದಿನ ಎಲ್ಲ ಕ್ರಿಶ್ ಸರಣಿಯ ಸಿನಿಮಾಗಳನ್ನು ಹೃತಿಕ್ ರೋಷನ್ ಅವರ ತಂದೆ ರಾಕೇಶ್ ರೋಷನ್ ನಿರ್ದೇಶನ ಮಾಡಿದ್ದರು. ಆದರೆ ಈಗ ಅವರಿಗೆ ವಯಸ್ಸಾಗಿದ್ದು, ತಾವು ಇನ್ನುಮುಂದೆ ಸಿನಿಮಾ ನಿರ್ದೇಶನ ಮಾಡುವುದಿಲ್ಲ ಎಂದು ಅವರು ಘೋಷಿಸಿದ್ದಾರೆ. ಹಾಗಾಗಿ ಜವಾಬ್ದಾರಿಯನ್ನು ಸ್ವತಃ ಹೃತಿಕ್ ರೋಷನ್ ಕೈಗೆತ್ತಿಕೊಂಡಿದ್ದಾರೆ.

ಇದನ್ನೂ ಓದಿ:ದಕ್ಷಿಣದ ನಿರ್ಮಾಪಕರ ನೋಡಿ ಕಲಿಯಿರಿ: ಬಾಲಿವುಡ್ ನಿರ್ಮಾಪಕರಿಗೆ ಬುದ್ಧಿ ಹೇಳಿದ ಸನ್ನಿ ಡಿಯೋಲ್

ಅಂದಹಾಗೆ ‘ಕ್ರಿಶ್ 4’ ಸಿನಿಮಾವನ್ನು ಹೃತಿಕ್ ರೋಷನ್​ರ ಆಪ್ತ ನಿರ್ದೇಶಕ ಸಿದ್ಧಾರ್ಥ್ ಆನಂದ್ ನಿರ್ದೇಶಿಸಲಿದ್ದಾರೆ ಎನ್ನಲಾಗಿತ್ತು. ನಿರ್ದೇಶನ ಮಾಡುವ ಜೊತೆಗೆ ಸಹ ನಿರ್ಮಾಣವನ್ನೂ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಸಿನಿಮಾದ ಬಜೆಟ್ ಹೆಚ್ಚಾಯ್ತು ಎಂದು ಹೇಳಿ, ‘ಕ್ರಿಶ್ 4’ ಸಿನಿಮಾದಿಂದ ಅವರು ಹೊರನಡೆದಿದ್ದಾರೆ. ಇದೇ ಕಾರಣಕ್ಕೆ ಈಗ ಅನಿವಾರ್ಯವಾಗಿ ಸ್ವತಃ ಹೃತಿಕ್ ರೋಷನ್ ಅವರು ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದಾರೆ.

ಹೃತಿಕ್ ರೋಷನ್ ಅವರು ತಮ್ಮ ಜೀವನದ ಬಹುಸಮಯವನ್ನು ಸಿನಿಮಾ ಸೆಟ್​ಗಳಲ್ಲಿ ಕಳೆದಿದ್ದಾರೆ. ನಟ ಆಗುವ ಮುಂಚೆ ಸಹ ಅವರ ತಂದೆ ರಾಕೇಶ್ ರೋಷನ್ ಅವರಿಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ವಿಶ್ವ ಸಿನಿಮಾಗಳನ್ನು ನೋಡುವ, ವಿಶ್ಲೇಷಿಸುವ ಹೃತಿಕ್ ರೋಷನ್ ಒಳ್ಳೆಯ ನಿರ್ದೇಶಕರಾಗಬಹುದು ಎಂಬ ಭರವಸೆ ಅವರ ಅಭಿಮಾನಿಗಳದ್ದು. ಹೃತಿಕ್ ನಿರ್ದೇಶನ ಮಾಡಲಿರುವ ‘ಕ್ರಿಶ್ 4’ ಸಿನಿಮಾವನ್ನು ರಾಕೇಶ್ ರೋಷನ್ ಮತ್ತು ಆದಿತ್ಯ ಚೋಪ್ರಾ ಅವರುಗಳು ನಿರ್ಮಾಣ ಮಾಡಲಿದ್ದಾರೆ. ಇದೇ ವರ್ಷದ ಅಂತ್ಯದ ವೇಳೆಗೆ ಸಿನಿಮಾದ ಚಿತ್ರೀಕರಣ ಪ್ರಾರಂಭ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ