ಆ ಒಂದು ವಿಚಾರ ಸಹಿಸಲಾಗದೆ ಶಾರುಖ್​ರನ್ನು​ ಬಿಟ್ಟು ಹೋಗಲು ರೆಡಿ ಆಗಿದ್ದ ಗೌರಿ ಖಾನ್​

ಹೃತಿಕ್​ ರೋಷನ್​​ ಮಾಜಿ ಪತ್ನಿ ಸುಸ್ಸಾನೆ ಖಾನ್​ ಜತೆ ‘ಕಾಫಿ ವಿತ್​ ಕರಣ್​’ ಶೋನಲ್ಲಿ ಗೌರಿ ಪಾಲ್ಗೊಂಡಿದ್ದರು. ಈ ಎಪಿಸೋಡ್​ನಲ್ಲಿ ಅವರು ಶಾರುಖ್​ ಖಾನ್​ ಬಗ್ಗೆ ಮಾತನಾಡಿದ್ದರು. ಅಲ್ಲದೆ, ತಮ್ಮ ಆರಂಭದ ದಿನಗಳ ಬಗ್ಗೆ ಹೇಳಿಕೊಂಡಿದ್ದರು.

ಆ ಒಂದು ವಿಚಾರ ಸಹಿಸಲಾಗದೆ ಶಾರುಖ್​ರನ್ನು​ ಬಿಟ್ಟು ಹೋಗಲು ರೆಡಿ ಆಗಿದ್ದ ಗೌರಿ ಖಾನ್​
Follow us
| Updated By: ರಾಜೇಶ್ ದುಗ್ಗುಮನೆ

Updated on:Mar 11, 2022 | 1:56 PM

ನಟ ಶಾರುಖ್​ ಖಾನ್​ (Shah Rukh Khan) ಹಾಗೂ ಗೌರಿ ಖಾನ್ (Gouri Khan)​ ಬಾಲಿವುಡ್​ನ ಕ್ಯೂಟ್ ಕಪಲ್​ಗಳಾಗಿದ್ದಾರೆ. ಇಬ್ಬರೂ ಸುಖ ಸಂಸಾರ ನಡೆಸುತ್ತಿದ್ದಾರೆ. ಈ ದಂಪತಿಗೆ ಮೂರು ಮಕ್ಕಳು. ಮಕ್ಕಳನ್ನು ಕಂಡರೆ ಇವರಿಗೆ ಎಲ್ಲಿಲ್ಲದ ಪ್ರೀತಿ. ಅಚ್ಚರಿ ಎಂದರೆ, ಶಾರುಖ್​ ಖಾನ್​ ಅವರನ್ನು ಬಿಟ್ಟುಹೋಗಲು ಗೌರಿ ಖಾನ್​ ನಿರ್ಧಾರ ಮಾಡಿದ್ದರು. ಏಕೆಂದರೆ, ಶಾರುಖ್​ ಖಾನ್​ ಅವರು ತುಂಬಾನೇ ಪೊಸೆಸಿವ್​ ಆಗಿದ್ದರು. ಇದರಿಂದ ಗೌರಿ ​ ಬೇಸತ್ತು ಹೋಗಿದ್ದರು. ಈ ಬಗ್ಗೆ ‘ಕಾಫಿ ವಿತ್ ಕರಣ್​ ಶೋ’ನಲ್ಲಿ ಗೌರಿ ಖಾನ್ ಹೇಳಿಕೊಂಡಿದ್ದರು ​. ಹೃತಿಕ್​ ರೋಷನ್​​ ಮಾಜಿ ಪತ್ನಿ ಸುಸ್ಸಾನೆ ಖಾನ್​ ಜತೆ ‘ಕಾಫಿ ವಿತ್​ ಕರಣ್​’ (Coffee With Karan)ಶೋನಲ್ಲಿ ಗೌರಿ ಪಾಲ್ಗೊಂಡಿದ್ದರು. ಈ ಎಪಿಸೋಡ್​ನಲ್ಲಿ ಅವರು ಶಾರುಖ್​ ಖಾನ್​ ಬಗ್ಗೆ ಮಾತನಾಡಿದ್ದರು. ಅಲ್ಲದೆ, ತಮ್ಮ ಆರಂಭದ ದಿನಗಳ ಬಗ್ಗೆ ಹೇಳಿಕೊಂಡಿದ್ದರು. ‘ನನಗೆ ಆಗಿನ್ನೂ ಹದಿನಾಲ್ಕುವರೆ ವರ್ಷ. ನನಗೆ ಬೇರೆ ಯಾವುದೇ ರಿಲೇಶನ್​ಶಿಪ್​ ಇರಲಿಲ್ಲ. ಆದರೆ, ಮದುವೆ ಬಗ್ಗೆ ಒಂದು ನಿರ್ಧಾರ ತೆಗೆದುಕೊಳ್ಳುವಷ್ಟು ವಯಸ್ಸು ನನಗೆ ಆಗಿರಲ್ಲ’ ಎಂದಿದ್ದರು ಗೌರಿ.

‘ನಾನು ಒಂದು ಬ್ರೇಕ್​ ಪಡೆದುಕೊಂಡೆ. ಗೆಳೆಯರ ಜತೆ ಹೆಚ್ಚು ಸಮಯ ಕಳೆದೆ. ಶಾರುಖ್​ ತುಂಬಾನೇ ಪೊಸೆಸಿವ್​ ಆಗಿದ್ದರು. ನನ್ನ ಬಳಿ ಇದನ್ನು ಹ್ಯಾಂಡಲ್​ ಮಾಡೋಕೆ ಆಗುವುದಿಲ್ಲ ಎಂದುಕೊಂಡಿದ್ದೆ. ನನಗೆ ನನ್ನದೇ ಸ್ಪೇಸ್​ ಬೇಕು ಅನಿಸಿತು. ಆದರೆ, ಮತ್ತೆ ಅವರ ಬಳಿಯೇ ತೆರಳಿದೆ’ ಎಂದು ಗೌರಿ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಶಾರುಖ್​ ಖಾನ್​ ಕೂಡ ಈ ಬಗ್ಗೆ ಹೇಳಿಕೊಂಡಿದ್ದರು. ಪತ್ನಿ ಗೌರಿ ಖಾನ್​ ಬಗ್ಗೆ ತಾವು ತುಂಬಾನೇ ಪೊಸೆಸಿವ್​ ಆಗಿರುವ ಬಗ್ಗೆ ಹೇಳಿದ್ದರು. ‘ಗೌರಿ ಪಾಲಕರಿಗೆ ನಾನು ಇಷ್ಟವಾಗಿರಲಿಲ್ಲ. ಹೀಗಾಗಿ ಅವರು ನನ್ನ ಪ್ರಪೋಸಲ್​ ರಿಜೆಕ್ಟ್​ ಮಾಡಿದ್ದರು’ ಎಂದು ಶಾರುಖ್​ ಹೇಳಿರುವುದಾಗಿ ದಿ ಇಂಡಿಯನ್​ ಎಕ್ಸ್​ಪ್ರೆಸ್ ಈ ಮೊದಲು ವರದಿ ಮಾಡಿತ್ತು.

ಬ್ರೇಕ್​ ಪಡೆದ ನಂತರದಲ್ಲಿ ಗೌರಿ ಖಾನ್​ಗೆ ಶಾರುಖ್​ ಮತ್ತೆ ಪ್ರಪೋಸ್​ ಮಾಡಿದ್ದರು. ಆಗಲೂ ಅವರು ಇದನ್ನು ರಿಜೆಕ್ಟ್​ ಮಾಡಿದ್ದರು. ಆದರೆ, ಶಾರುಖ್​ ಖಾನ್​ ತಾಯಿ ಮೃತಪಟ್ಟಾಗ ಗೌರಿ ಮರಳಿ ಬಂದರು ಮತ್ತು ಶಾರುಖ್​ ಅವರನ್ನು ಮದುವೆ ಆಗೋಕೆ ಒಪ್ಪಿದರು.  1991ರಲ್ಲಿ ಅಕ್ಟೋಬರ್​ನಲ್ಲಿ ಇಬ್ಬರೂ ಮದುವೆ ಆದರು. ಈ ದಂಪತಿಗೆ ಸುಹಾನಾ, ಆರ್ಯನ್​ ಹಾಗೂ ಅಬ್ರಾಮ್​ ಹೆಸರಿನ ಮಕ್ಕಳಿದ್ದಾರೆ.

ಶಾರುಖ್​ ಖಾನ್​ ಅವರು ಇತ್ತೀಚಿನ ವರ್ಷಗಳಲ್ಲಿ ಹಲವು ಸೋಲುಗಳನ್ನು ಕಂಡಿದ್ದಾರೆ. ಹಾಗಾಗಿ ಸಿನಿಮಾಗಳ ಆಯ್ಕೆಯಲ್ಲಿ ಈಗ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಸದ್ಯ ಅವರು ‘ಪಠಾಣ್​’ ಸಿನಿಮಾದಲ್ಲಿ ನಟಿಸುತ್ತಿದ್ದು, ಆ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಕೆಲವೇ ದಿನಗಳ ಹಿಂದೆ ‘ಪಠಾಣ್​’ ಸಿನಿಮಾದ ಟೀಸರ್​ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ದೀಪಿಕಾ ಪಡುಕೋಣೆ ಮತ್ತು ಜಾನ್​ ಅಬ್ರಾಹಂ ಕೂಡ ಕಾಣಿಸಿಕೊಂಡಿದ್ದಾರೆ. ಶಾರುಖ್​ ಖಾನ್​ ಅವರ ಹಿನ್ನೆಲೆ ಧ್ವನಿ ಕೇಳಿಸಿದೆ. ಆದರೆ ಲುಕ್​ ಬಹಿರಂಗ ಆಗಿಲ್ಲ. 2023ರ ಜ.25ರಂದು ಈ ಸಿನಿಮಾ ರಿಲೀಸ್​ ಆಗಲಿದೆ.

ಇದನ್ನೂ ಓದಿ: ದುಬೈ ಬಗ್ಗೆ ಶಾರುಖ್​ ಪ್ರೀತಿಯ ಮಾತು; ವೈರಲ್​ ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದು ಏನು?

80 ಕೋಟಿ ರೂಪಾಯಿಗೆ ಸೇಲ್​ ಆದ ಶಾರುಖ್​ ಖಾನ್ ಮತ್ತು ಆಲಿಯಾ ಭಟ್ ಹೊಸ​ ಚಿತ್ರ​

Published On - 1:31 pm, Fri, 11 March 22

ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ