AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ಒಂದು ವಿಚಾರ ಸಹಿಸಲಾಗದೆ ಶಾರುಖ್​ರನ್ನು​ ಬಿಟ್ಟು ಹೋಗಲು ರೆಡಿ ಆಗಿದ್ದ ಗೌರಿ ಖಾನ್​

ಹೃತಿಕ್​ ರೋಷನ್​​ ಮಾಜಿ ಪತ್ನಿ ಸುಸ್ಸಾನೆ ಖಾನ್​ ಜತೆ ‘ಕಾಫಿ ವಿತ್​ ಕರಣ್​’ ಶೋನಲ್ಲಿ ಗೌರಿ ಪಾಲ್ಗೊಂಡಿದ್ದರು. ಈ ಎಪಿಸೋಡ್​ನಲ್ಲಿ ಅವರು ಶಾರುಖ್​ ಖಾನ್​ ಬಗ್ಗೆ ಮಾತನಾಡಿದ್ದರು. ಅಲ್ಲದೆ, ತಮ್ಮ ಆರಂಭದ ದಿನಗಳ ಬಗ್ಗೆ ಹೇಳಿಕೊಂಡಿದ್ದರು.

ಆ ಒಂದು ವಿಚಾರ ಸಹಿಸಲಾಗದೆ ಶಾರುಖ್​ರನ್ನು​ ಬಿಟ್ಟು ಹೋಗಲು ರೆಡಿ ಆಗಿದ್ದ ಗೌರಿ ಖಾನ್​
TV9 Web
| Edited By: |

Updated on:Mar 11, 2022 | 1:56 PM

Share

ನಟ ಶಾರುಖ್​ ಖಾನ್​ (Shah Rukh Khan) ಹಾಗೂ ಗೌರಿ ಖಾನ್ (Gouri Khan)​ ಬಾಲಿವುಡ್​ನ ಕ್ಯೂಟ್ ಕಪಲ್​ಗಳಾಗಿದ್ದಾರೆ. ಇಬ್ಬರೂ ಸುಖ ಸಂಸಾರ ನಡೆಸುತ್ತಿದ್ದಾರೆ. ಈ ದಂಪತಿಗೆ ಮೂರು ಮಕ್ಕಳು. ಮಕ್ಕಳನ್ನು ಕಂಡರೆ ಇವರಿಗೆ ಎಲ್ಲಿಲ್ಲದ ಪ್ರೀತಿ. ಅಚ್ಚರಿ ಎಂದರೆ, ಶಾರುಖ್​ ಖಾನ್​ ಅವರನ್ನು ಬಿಟ್ಟುಹೋಗಲು ಗೌರಿ ಖಾನ್​ ನಿರ್ಧಾರ ಮಾಡಿದ್ದರು. ಏಕೆಂದರೆ, ಶಾರುಖ್​ ಖಾನ್​ ಅವರು ತುಂಬಾನೇ ಪೊಸೆಸಿವ್​ ಆಗಿದ್ದರು. ಇದರಿಂದ ಗೌರಿ ​ ಬೇಸತ್ತು ಹೋಗಿದ್ದರು. ಈ ಬಗ್ಗೆ ‘ಕಾಫಿ ವಿತ್ ಕರಣ್​ ಶೋ’ನಲ್ಲಿ ಗೌರಿ ಖಾನ್ ಹೇಳಿಕೊಂಡಿದ್ದರು ​. ಹೃತಿಕ್​ ರೋಷನ್​​ ಮಾಜಿ ಪತ್ನಿ ಸುಸ್ಸಾನೆ ಖಾನ್​ ಜತೆ ‘ಕಾಫಿ ವಿತ್​ ಕರಣ್​’ (Coffee With Karan)ಶೋನಲ್ಲಿ ಗೌರಿ ಪಾಲ್ಗೊಂಡಿದ್ದರು. ಈ ಎಪಿಸೋಡ್​ನಲ್ಲಿ ಅವರು ಶಾರುಖ್​ ಖಾನ್​ ಬಗ್ಗೆ ಮಾತನಾಡಿದ್ದರು. ಅಲ್ಲದೆ, ತಮ್ಮ ಆರಂಭದ ದಿನಗಳ ಬಗ್ಗೆ ಹೇಳಿಕೊಂಡಿದ್ದರು. ‘ನನಗೆ ಆಗಿನ್ನೂ ಹದಿನಾಲ್ಕುವರೆ ವರ್ಷ. ನನಗೆ ಬೇರೆ ಯಾವುದೇ ರಿಲೇಶನ್​ಶಿಪ್​ ಇರಲಿಲ್ಲ. ಆದರೆ, ಮದುವೆ ಬಗ್ಗೆ ಒಂದು ನಿರ್ಧಾರ ತೆಗೆದುಕೊಳ್ಳುವಷ್ಟು ವಯಸ್ಸು ನನಗೆ ಆಗಿರಲ್ಲ’ ಎಂದಿದ್ದರು ಗೌರಿ.

‘ನಾನು ಒಂದು ಬ್ರೇಕ್​ ಪಡೆದುಕೊಂಡೆ. ಗೆಳೆಯರ ಜತೆ ಹೆಚ್ಚು ಸಮಯ ಕಳೆದೆ. ಶಾರುಖ್​ ತುಂಬಾನೇ ಪೊಸೆಸಿವ್​ ಆಗಿದ್ದರು. ನನ್ನ ಬಳಿ ಇದನ್ನು ಹ್ಯಾಂಡಲ್​ ಮಾಡೋಕೆ ಆಗುವುದಿಲ್ಲ ಎಂದುಕೊಂಡಿದ್ದೆ. ನನಗೆ ನನ್ನದೇ ಸ್ಪೇಸ್​ ಬೇಕು ಅನಿಸಿತು. ಆದರೆ, ಮತ್ತೆ ಅವರ ಬಳಿಯೇ ತೆರಳಿದೆ’ ಎಂದು ಗೌರಿ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಶಾರುಖ್​ ಖಾನ್​ ಕೂಡ ಈ ಬಗ್ಗೆ ಹೇಳಿಕೊಂಡಿದ್ದರು. ಪತ್ನಿ ಗೌರಿ ಖಾನ್​ ಬಗ್ಗೆ ತಾವು ತುಂಬಾನೇ ಪೊಸೆಸಿವ್​ ಆಗಿರುವ ಬಗ್ಗೆ ಹೇಳಿದ್ದರು. ‘ಗೌರಿ ಪಾಲಕರಿಗೆ ನಾನು ಇಷ್ಟವಾಗಿರಲಿಲ್ಲ. ಹೀಗಾಗಿ ಅವರು ನನ್ನ ಪ್ರಪೋಸಲ್​ ರಿಜೆಕ್ಟ್​ ಮಾಡಿದ್ದರು’ ಎಂದು ಶಾರುಖ್​ ಹೇಳಿರುವುದಾಗಿ ದಿ ಇಂಡಿಯನ್​ ಎಕ್ಸ್​ಪ್ರೆಸ್ ಈ ಮೊದಲು ವರದಿ ಮಾಡಿತ್ತು.

ಬ್ರೇಕ್​ ಪಡೆದ ನಂತರದಲ್ಲಿ ಗೌರಿ ಖಾನ್​ಗೆ ಶಾರುಖ್​ ಮತ್ತೆ ಪ್ರಪೋಸ್​ ಮಾಡಿದ್ದರು. ಆಗಲೂ ಅವರು ಇದನ್ನು ರಿಜೆಕ್ಟ್​ ಮಾಡಿದ್ದರು. ಆದರೆ, ಶಾರುಖ್​ ಖಾನ್​ ತಾಯಿ ಮೃತಪಟ್ಟಾಗ ಗೌರಿ ಮರಳಿ ಬಂದರು ಮತ್ತು ಶಾರುಖ್​ ಅವರನ್ನು ಮದುವೆ ಆಗೋಕೆ ಒಪ್ಪಿದರು.  1991ರಲ್ಲಿ ಅಕ್ಟೋಬರ್​ನಲ್ಲಿ ಇಬ್ಬರೂ ಮದುವೆ ಆದರು. ಈ ದಂಪತಿಗೆ ಸುಹಾನಾ, ಆರ್ಯನ್​ ಹಾಗೂ ಅಬ್ರಾಮ್​ ಹೆಸರಿನ ಮಕ್ಕಳಿದ್ದಾರೆ.

ಶಾರುಖ್​ ಖಾನ್​ ಅವರು ಇತ್ತೀಚಿನ ವರ್ಷಗಳಲ್ಲಿ ಹಲವು ಸೋಲುಗಳನ್ನು ಕಂಡಿದ್ದಾರೆ. ಹಾಗಾಗಿ ಸಿನಿಮಾಗಳ ಆಯ್ಕೆಯಲ್ಲಿ ಈಗ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಸದ್ಯ ಅವರು ‘ಪಠಾಣ್​’ ಸಿನಿಮಾದಲ್ಲಿ ನಟಿಸುತ್ತಿದ್ದು, ಆ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಕೆಲವೇ ದಿನಗಳ ಹಿಂದೆ ‘ಪಠಾಣ್​’ ಸಿನಿಮಾದ ಟೀಸರ್​ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ದೀಪಿಕಾ ಪಡುಕೋಣೆ ಮತ್ತು ಜಾನ್​ ಅಬ್ರಾಹಂ ಕೂಡ ಕಾಣಿಸಿಕೊಂಡಿದ್ದಾರೆ. ಶಾರುಖ್​ ಖಾನ್​ ಅವರ ಹಿನ್ನೆಲೆ ಧ್ವನಿ ಕೇಳಿಸಿದೆ. ಆದರೆ ಲುಕ್​ ಬಹಿರಂಗ ಆಗಿಲ್ಲ. 2023ರ ಜ.25ರಂದು ಈ ಸಿನಿಮಾ ರಿಲೀಸ್​ ಆಗಲಿದೆ.

ಇದನ್ನೂ ಓದಿ: ದುಬೈ ಬಗ್ಗೆ ಶಾರುಖ್​ ಪ್ರೀತಿಯ ಮಾತು; ವೈರಲ್​ ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದು ಏನು?

80 ಕೋಟಿ ರೂಪಾಯಿಗೆ ಸೇಲ್​ ಆದ ಶಾರುಖ್​ ಖಾನ್ ಮತ್ತು ಆಲಿಯಾ ಭಟ್ ಹೊಸ​ ಚಿತ್ರ​

Published On - 1:31 pm, Fri, 11 March 22

300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ
ಫೆ.17 ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ; ಮಿಥುನ ರಾಶಿಯ ಫಲಾಫಲ ತಿಳಿಯಿರಿ
ಫೆ.17 ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ; ಮಿಥುನ ರಾಶಿಯ ಫಲಾಫಲ ತಿಳಿಯಿರಿ