AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆಟ್ಟೇರುವ ಮೊದಲೇ ನಿಂತೇ ಹೋಯಿತು ಸಲ್ಮಾನ್​ ಖಾನ್​ ಸಿನಿಮಾ; ‘ಟೈಗರ್​’ ಹೆದರಿದ್ದೇಕೆ?

ರವೀಂದ್ರ ಕೌಶಿಕ್​ ಭಾರತದ ಅತ್ಯುತ್ತಮ ಸ್ಪೈ ಎನ್ನುವ ಖ್ಯಾತಿ ಪಡೆದುಕೊಂಡಿದ್ದಾರೆ. ಬ್ಲ್ಯಾಕ್​ ಟೈಗರ್​ ಎಂದೇ ಖ್ಯಾತಿ ಪಡೆದುಕೊಂಡವರು. ಈ ಸಿನಿಮಾ ಸ್ಕ್ರಿಪ್ಟ್​ಗಾಗಿ ರಾಜ್ ​ಕುಮಾರ್ ಬರೋಬ್ಬರಿ 5 ವರ್ಷ ಕೆಲಸ ಮಾಡಿದ್ದರು.

ಸೆಟ್ಟೇರುವ ಮೊದಲೇ ನಿಂತೇ ಹೋಯಿತು ಸಲ್ಮಾನ್​ ಖಾನ್​ ಸಿನಿಮಾ; ‘ಟೈಗರ್​’ ಹೆದರಿದ್ದೇಕೆ?
ಸಲ್ಮಾನ್ ಖಾನ್
TV9 Web
| Edited By: |

Updated on: Mar 10, 2022 | 4:54 PM

Share

ಸಲ್ಮಾನ್​ ಖಾನ್​ (Salman Khan) ಕಾಲ್​ಶೀಟ್​ ಸಿಗೋದು ಸುಲಭದ ಮಾತಲ್ಲ. ಒಮ್ಮೆ ಕಾಲ್​ಶೀಟ್​ ಸಿಕ್ಕ ನಂತರದಲ್ಲಿ ನಿರ್ಮಾಪಕರು, ನಿರ್ದೇಶಕರು ಕೈ ಕಟ್ಟಿ ಕೂರುವುದಿಲ್ಲ. ಸಿನಿಮಾಗೆ ಏನೆಲ್ಲ ತಯಾರಿ ಬೇಕೋ ಅದೆಲ್ಲವನ್ನೂ ಮಾಡಿಕೊಳ್ಳುತ್ತಾರೆ. ನಿರ್ದೇಶಕ ರಾಜ್​ ಕುಮಾರ್​ ಗುಪ್ತಾ ಅವರಿಗೂ ಸಲ್ಲು ಕಾಲ್​ಶೀಟ್​ ಸಿಕ್ಕಿತ್ತು. ಖ್ಯಾತ ರಾ ಏಜೆಂಟ್ರವೀಂದ್ರ ಕೌಶಿಕ್ (Ravindra Kaushik)​ ಕುರಿತು ಬಯೋಪಿಕ್​ ಮಾಡಲು ರಾಜ್​ ಕುಮಾರ್​ ಗುಪ್ತಾ (Raj Kumar Gupta)  ರೆಡಿ ಆಗಿದ್ದರು. ಇದರಲ್ಲಿ ನಟಿಸೋಕೆ ಸಲ್ಲು ಕೂಡ ಒಪ್ಪಿದ್ದರು. ಆದರೆ, ಈಗ ಸಿನಿಮಾ ಸೆಟ್ಟೇರುವ ಮೊದಲೇ ನಿಂತೇ ಹೋಗಿದೆ.

ರವೀಂದ್ರ ಕೌಶಿಕ್​ ಭಾರತದ ಅತ್ಯುತ್ತಮ ಸ್ಪೈ ಎನ್ನುವ ಖ್ಯಾತಿ ಪಡೆದುಕೊಂಡಿದ್ದಾರೆ. ಬ್ಲ್ಯಾಕ್​ ಟೈಗರ್​ ಎಂದೇ ಖ್ಯಾತಿ ಪಡೆದುಕೊಂಡವರು. ಈ ಸಿನಿಮಾ ಸ್ಕ್ರಿಪ್ಟ್​ಗಾಗಿ ರಾಜ್ ​ಕುಮಾರ್ ಬರೋಬ್ಬರಿ 5 ವರ್ಷ ಕೆಲಸ ಮಾಡಿದ್ದರು. ಈ ಚಿತ್ರ ಸಂಪೂರ್ಣವಾಗಿ ರೆಟ್ರೋ ಶೈಲಿಯಲ್ಲಿ ಇರಲಿದೆ ಎನ್ನಲಾಗಿತ್ತು. ಇನ್ನು, ಸಿನಿಮಾಗೆ ‘ಬ್ಲ್ಯಾಕ್​ ಟೈಗರ್’​ ಎಂದೇ  ಹೆಸರಿಡಲು ನಿರ್ಧರಿಸಲಾಗಿತ್ತು. ಆದರೆ, ಈಗ ಸಿನಿಮಾ ಸೆಟ್ಟೇರುತ್ತಿಲ್ಲ.

ರವೀಂದ್ರ ಕೌಶಿಕ್​ ಸಹೋದರಿ ಅಲ್ವಿರಾ ಅಗ್ನಿಹೋತ್ರಿ ಮತ್ತು ಅವರ ಭಾವ ಅತುಲ್​ ಅಗ್ನಿಹೋತ್ರಿ ಈ ಚಿತ್ರವನ್ನು ನಿರ್ಮಾಣ ಮಾಡಬೇಕಿತ್ತು. ‘ಕಭಿ ಈದ್​ ಕಭಿ ದಿವಾಲಿ’ ಚಿತ್ರದ ಶೂಟಿಂಗ್​ ಬಳಿಕ ಸಲ್ಮಾನ್​ ಈ ಸಿನಿಮಾದಲ್ಲಿ ಬ್ಯುಸಿ ಆಗಬೇಕಿತ್ತು. ಆದರೆ, ಈ ಪ್ರಾಜೆಕ್ಟ್​ ನಿಂತಿದೆ. ಈಗಾಗಲೇ ಸಲ್ಮಾನ್​ ಖಾನ್ ‘ಏಕ್​ ಥಾ ಟೈಗರ್’​, ‘ಟೈಗರ್​ ಜಿಂದಾ ಹೈ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಟೈಗರ್​ 3’ ಚಿತ್ರದ ಶೂಟಿಂಗ್​ ಪ್ರಗತಿಯಲ್ಲಿದೆ. ಶೀರ್ಷಿಕೆ ವಿಚಾರದಲ್ಲಿ, ಕಾನ್ಸೆಪ್ಟ್​ ವಿಚಾರದಲ್ಲಿ ‘ಟೈಗರ್​ 3’ ಹಾಗೂ ‘ಬ್ಲ್ಯಾಕ್​ ಟೈಗರ್​’ ನಡುವೆ ಕ್ಲ್ಯಾಶ್​ ಏರ್ಪಡಬಹುದು. ಹೀಗಾಗಿ, ನಿರ್ದೇಶಕ ರಾಜ್​ ಕುಮಾರ್ ಹಾಗೂ ಸಲ್ಮಾನ್​ ಇಬ್ಬರೂ ಸೇರಿ ಸಿನಿಮಾ ಕೈಬಿಡುವ ನಿರ್ಧಾರಕ್ಕೆ ಬಂದಿದ್ದಾರೆ.

‘ಟೈಗರ್​ 3’ ರಿಲೀಸ್​ ದಿನಾಂಕ ಘೋಷಣೆ

ಸಲ್ಮಾನ್​ ಖಾನ್​ ಅವರು ‘ಈದ್​’ ಹಬ್ಬದಂದು ತಮ್ಮ ನಟನೆಯ ಸಿನಿಮಾ ತೆರೆಗೆ ತರೋಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಅವರ ಹಲವು ಸಿನಿಮಾಗಳು ಈ ವಿಶೇಷ ದಿನದಂದು ತೆರೆಗೆ ಬಂದಿದೆ. ಈಗ ‘ಟೈಗರ್​ 3’ ಕೂಡ ಈದ್ ಹಬ್ಬದ ಪ್ರಯುಕ್ತ 2023ರ ಏಪ್ರಿಲ್​ 21ರಂದು ರಿಲೀಸ್​ ಆಗುತ್ತಿದೆ. ಅಂದರೆ, ಈ ಸಿನಿಮಾ ತೆರೆಕಾಣೋಕೆ ಇನ್ನೂ ಒಂದು ವರ್ಷಕ್ಕೂ ಹೆಚ್ಚು ಸಮಯವಿದೆ. ವಿಶೇಷ ವಿಡಿಯೋ ಮೂಲಕ ತಂಡ ಈ ಘೋಷಣೆ ಮಾಡಿದೆ.

2012ರಲ್ಲಿ ‘ಏಕ್ ಥಾ ಟೈಗರ್​’ ತೆರೆಗೆ ಬಂತು. ಈ ಸಿನಿಮಾ ಸೂಪರ್​ ಹಿಟ್​ ಆಯಿತು. ಕಬೀರ್​ ಖಾನ್​ ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಇದರ ಮುಂದಿನ ಭಾಗವಾಗಿ 2017ರಲ್ಲಿ ‘ಟೈಗರ್​ ಜಿಂದಾ ಹೈ’ ಚಿತ್ರ ರಿಲೀಸ್​ ಆಯಿತು. ಈ ಚಿತ್ರಕ್ಕೆ ಅಲಿ ಅಬ್ಬಾಸ್​ ಜಫರ್​ ಆ್ಯಕ್ಷನ್​ ಕಟ್​ ಹೇಳಿದ್ದರು. ಈಗ ‘ಟೈಗರ್​ 3’ಗೆ ಮನೀಶ್​ ಶರ್ಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲಿನ ಎರಡು ಪಾರ್ಟ್​​ಗಳನ್ನು ನಿರ್ಮಾಣ ಮಾಡಿದ್ದ ಆದಿತ್ಯ ಚೋಪ್ರಾ ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

ಇದನ್ನೂ ಓದಿ: ಶಿಲ್ಪಾ ಶೆಟ್ಟಿ ತಂಗಿಗೆ ಸಲ್ಮಾನ್​ ಖಾನ್ ಖಡಕ್​ ವಾರ್ನಿಂಗ್​​​; ಎಲ್ಲರ ಎದುರು ಕಣ್ಣೀರು ಹಾಕಿದ ಶಮಿತಾ

ಸಲ್ಮಾನ್​ ಖಾನ್ ಫಾರ್ಮ್​ಹೌಸ್​ ಬೆಲೆ 80 ಕೋಟಿ ರೂ.! ಸಲ್ಲು ಮೆಚ್ಚಿನ ಈ ಸ್ಥಳದಲ್ಲಿ ಏನೆಲ್ಲ ಇದೆ?

Follow Us
TV9 Web
TV9 Web

TV9 Kannada

Read More
ವೆನೆಜುವೆಲಾ ದರೋಡೆಕೋರನ ಮೇಲಿನ ವೈಮಾನಿಕ ದಾಳಿಯ ವಿಡಿಯೋ ಹಂಚಿಕೊಂಡ ಟ್ರಂಪ್
ವೆನೆಜುವೆಲಾ ದರೋಡೆಕೋರನ ಮೇಲಿನ ವೈಮಾನಿಕ ದಾಳಿಯ ವಿಡಿಯೋ ಹಂಚಿಕೊಂಡ ಟ್ರಂಪ್
ಬೆಳಗ್ಗೆ 10 ಗಂಟೆಗೆ ಕಚೇರಿಯಲ್ಲಿ ಹಾಜರಿರಬೇಕು: ಅಧಿಕಾರಿಗಳಿಗೆ ಸಿಎಂ ಸೂಚನೆ
ಬೆಳಗ್ಗೆ 10 ಗಂಟೆಗೆ ಕಚೇರಿಯಲ್ಲಿ ಹಾಜರಿರಬೇಕು: ಅಧಿಕಾರಿಗಳಿಗೆ ಸಿಎಂ ಸೂಚನೆ
ಮತ್ತೆ ವಿದೇಶಕ್ಕೆ ತೆರಳಿದ ಪ್ರಧಾನಿ ಮೋದಿ; ಫ್ರಾನ್ಸ್​, ಸ್ಲೋವಾಕಿಯಾಗೆ ಭೇಟಿ
ಮತ್ತೆ ವಿದೇಶಕ್ಕೆ ತೆರಳಿದ ಪ್ರಧಾನಿ ಮೋದಿ; ಫ್ರಾನ್ಸ್​, ಸ್ಲೋವಾಕಿಯಾಗೆ ಭೇಟಿ
ಮನಾಲಿಗೆ ಹೊರಟ ಪ್ರವಾಸಿಗರಿಂದ ಕುಲು-ಮಂಡಿ ಮಾರ್ಗದಲ್ಲಿ ಟ್ರಾಫಿಕ್ ಜಾಮ್
ಮನಾಲಿಗೆ ಹೊರಟ ಪ್ರವಾಸಿಗರಿಂದ ಕುಲು-ಮಂಡಿ ಮಾರ್ಗದಲ್ಲಿ ಟ್ರಾಫಿಕ್ ಜಾಮ್
ಪ್ರಥಮ ದರ್ಜೆ ನೌಕರನಿಗೆ ಚಪ್ಪಲಿ ಏಟು ಕೊಟ್ಟ ರೈತ! ಯಾಕೆ ಗೊತ್ತಾ?
ಪ್ರಥಮ ದರ್ಜೆ ನೌಕರನಿಗೆ ಚಪ್ಪಲಿ ಏಟು ಕೊಟ್ಟ ರೈತ! ಯಾಕೆ ಗೊತ್ತಾ?
ಬಿಡದಿ ಟೌನ್​ಶಿಪ್​ ಯೋಜನೆ ವಿರೋಧಿಸಿ ಜೂನ್ 22ರಂದು ಬೃಹತ್ ಪ್ರತಿಭಟನೆ!
ಬಿಡದಿ ಟೌನ್​ಶಿಪ್​ ಯೋಜನೆ ವಿರೋಧಿಸಿ ಜೂನ್ 22ರಂದು ಬೃಹತ್ ಪ್ರತಿಭಟನೆ!
ಕಲಬುರಗಿಯಲ್ಲಿ ನಕಲಿ ಡಿಎಪಿ ರಸಗೊಬ್ಬರ ಮಾರಾಟ: ರೈತರ ತೀವ್ರ ಆಕ್ರೋಶ
ಕಲಬುರಗಿಯಲ್ಲಿ ನಕಲಿ ಡಿಎಪಿ ರಸಗೊಬ್ಬರ ಮಾರಾಟ: ರೈತರ ತೀವ್ರ ಆಕ್ರೋಶ
ಬಿಡದಿ ಟೌನ್​ಶಿಪ್​​ ಯೋಜನೆ ಲೂಟಿ ಸ್ಕೀಮ್​​​ ಡೌಟೇ ಬೇಡ: ಕುಮಾರಸ್ವಾಮಿ
ಬಿಡದಿ ಟೌನ್​ಶಿಪ್​​ ಯೋಜನೆ ಲೂಟಿ ಸ್ಕೀಮ್​​​ ಡೌಟೇ ಬೇಡ: ಕುಮಾರಸ್ವಾಮಿ
ಕೊಲೆ ಆರೋಪಿಗಳಿಂದ ಜೈಲಿನಲ್ಲಿ ಪುಂಡಾಟ: ವಾರ್ಡನ್ ಮೇಲೆ ಹಲ್ಲೆ!
ಕೊಲೆ ಆರೋಪಿಗಳಿಂದ ಜೈಲಿನಲ್ಲಿ ಪುಂಡಾಟ: ವಾರ್ಡನ್ ಮೇಲೆ ಹಲ್ಲೆ!
‘ಯತ್ನಾಳ್ ಯಾವುದೋ ಒಂದು ಕೋತಿಯ ಬ್ರೀಡ್’: ಪ್ರದೀಪ್ ಈಶ್ವರ್ ವಾಗ್ದಾಳಿ
‘ಯತ್ನಾಳ್ ಯಾವುದೋ ಒಂದು ಕೋತಿಯ ಬ್ರೀಡ್’: ಪ್ರದೀಪ್ ಈಶ್ವರ್ ವಾಗ್ದಾಳಿ