AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ತೆರೆಮೇಲೆ ನಿಂದನೀಯ ಶಬ್ದ ಬಳಕೆ ಮಾಡಲ್ಲ’ ಎಂದ ಪಂಕಜ್ ತ್ರಿಪಾಠಿ; ‘ಮಿರ್ಜಾಪುರ್ 3’ ಕಥೆ ಏನು?

‘ಕೆಲವು ಪಾತ್ರಗಳ ಕಾರಣದಿಂದ ನಾನು ನಾಲ್ಕೈದು ಬಾರಿ ನಿಂದನೀಯ ಶಬ್ದಗಳ ಬಳಕೆ ಮಾಡಬೇಕಾಯಿತು. ಪಾತ್ರ ಆ ರೀತಿಯದ್ದನ್ನು ಕೇಳಿದಾಗ ನಾವು ಹಾಗೆ ಹೇಳಬೇಕಾಗುತ್ತದೆ’ ಎಂದು ಸಂದರ್ಶನವೊಂದರಲ್ಲಿ ಪಂಕಜ್ ತ್ರಿಪಾಠಿ ಹೇಳಿದ್ದಾರೆ. ಆದರೆ, ಇನ್ಮುಂದೆ ಅವರು ಈ ರೀತಿಯ ಶಬ್ದ ಬಳಕೆ ಮಾಡದಿರಲು ನಿರ್ಧರಿಸಿದ್ದಾರೆ.

‘ತೆರೆಮೇಲೆ ನಿಂದನೀಯ ಶಬ್ದ ಬಳಕೆ ಮಾಡಲ್ಲ’ ಎಂದ ಪಂಕಜ್ ತ್ರಿಪಾಠಿ; ‘ಮಿರ್ಜಾಪುರ್ 3’ ಕಥೆ ಏನು?
ಪಂಕಜ್​ ತ್ರಿಪಾಠಿ
 ಶ್ರೀಲಕ್ಷ್ಮೀ ಎಚ್
| Edited By: |

Updated on: Sep 23, 2023 | 5:26 PM

Share

ಪಂಕಜ್ ತ್ರಿಪಾಠಿ ಅವರು ‘ಒಎಂಜಿ 2’ (OMG 2) ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಕೂಡ ಪ್ರಮುಖ ಪಾತ್ರ ಒಂದರಲ್ಲಿ ನಟಿಸಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಈಗ ಪಂಕಜ್ ತ್ರಿಪಾಠಿ (Pankaj Tripathi) ಅವರು ಒಂದು ಹೊಸ ನಿರ್ಧಾರಕ್ಕೆ ಬಂದಿದ್ದಾರೆ. ಅವರು ಇನ್ನುಮುಂದೆ ತೆರೆಮೇಲೆ ಯಾವುದೇ ನಿಂದನೀಯ ಶಬ್ದ ಬಳಕೆ ಮಾಡುವುದಿಲ್ಲವಂತೆ. ಕೆಟ್ಟ ಶಬ್ದಗಳನ್ನು ಬಳಕೆ ಮಾಡದೇ ಬೇರೆ ರೀತಿಯಲ್ಲಿ ದೃಶ್ಯವನ್ನು ಜನರ ಮುಂದಿಡುವ ನಿರ್ಧಾರಕ್ಕೆ ಪಂಕಜ್ ತ್ರಿಪಾಠಿ ಬಂದಿದ್ದಾರೆ. ಅವರ ಈ ನಿರ್ಧಾರದಿಂದ ಅನೇಕರಿಗೆ ಬೇಸರ ಆಗಿದೆ.

‘ಮಿರ್ಜಾಪುರ್’ ಹಾಗೂ ‘ಮಿರ್ಜಾಪುರ್ 2’ ವೆಬ್ ಸೀರಿಸ್​ಗಳಲ್ಲಿ ಪಂಕಜ್ ತ್ರಿಪಾಠಿ ನಟಿಸಿದ್ದಾರೆ. ಈ ಸರಣಿಯಲ್ಲಿ ಪಂಕಜ್ ಅವರು ಅಖಂಡಾನಂದ್ ತ್ರಿಪಾಠಿ (ಖಾಲೀಂ ಭಯ್ಯಾ) ಹೆಸರಿನ ಪಾತ್ರ ಮಾಡಿದ್ದಾರೆ. ಒಟಿಟಿಗೆ ಯಾವುದೇ ಸೆನ್ಸಾರ್ ಇಲ್ಲ. ಈ ಕಾರಣದಿಂದ ಈ ಸೀರಿಸ್​ನಲ್ಲಿ ಅನೇಕ ನಿಂದನೀಯ, ಕೆಟ್ಟ ಶಬ್ದಗಳ ಬಳಕೆ ಆಗಿತ್ತು. ಆದರೆ, ಇನ್ನುಮುಂದೆ ಈ ರೀತಿಯ ಶಬ್ದ ಬಳಕೆ ಮಾಡದಿರಲು ಪಂಕಜ್ ನಿರ್ಧರಿಸಿದ್ದಾರೆ.

ಇದನ್ನೂ ಓದಿ: 99ನೇ ವಯಸ್ಸಿಗೆ ಪಂಕಜ್​ ತ್ರಿಪಾಠಿ ತಂದೆ ನಿಧನ; ‘ಒಎಂಜಿ 2’ ಗೆಲುವಿನ ನಡುವೆ ಆವರಿಸಿತು ಶೋಕ

ಇತ್ತೀಚೆಗೆ ಅವರು ಸಂದರ್ಶನ ಒಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ‘ಕೆಲವು ಪಾತ್ರಗಳ ಕಾರಣದಿಂದ ನಾನು ನಾಲ್ಕೈದು ಬಾರಿ ಆ ರೀತಿಯ (ನಿಂದನೀಯ) ಶಬ್ದಗಳ ಬಳಕೆ ಮಾಡಬೇಕಾಯಿತು. ಪಾತ್ರ ಆ ರೀತಿಯದ್ದನ್ನು ಕೇಳಿದಾಗ ನಾವು ಹಾಗೆ ಹೇಳಬೇಕಾಗುತ್ತದೆ’ ಎಂದಿದ್ದಾರೆ ಅವರು. ಆದರೆ, ಇನ್ನುಮುಂದೆ ಅವರು ಈ ರೀತಿಯ ಶಬ್ದ ಬಳಕೆ ಮಾಡದಿರಲು ನಿರ್ಧರಿಸಿದ್ದಾರೆ. ‘ಪಾತ್ರಕ್ಕೆ ಆ ರೀತಿಯ ಶಬ್ದಗಳು ಅಗತ್ಯವಾಗಿದ್ದರೂ ನಾನು ಅಂಥ ಪದ ಬಳಕೆ ಮಾಡದಿರಲು ನಿರ್ಧರಿಸಿದ್ದೇನೆ. ಈ ರೀತಿಯದ್ದನ್ನು ಹೇಳಲು ನಿರ್ದೇಶಕರು ಬೇರೆ ಮಾರ್ಗವನ್ನು ಕಂಡುಕೊಳ್ಳಬೇಕು. ಚಲನಚಿತ್ರ ನಿರ್ಮಾಣ ಸೃಜನಾತ್ಮಕ ಪ್ರಕ್ರಿಯೆ. ಹೀಗಾಗಿ ಬೇರೆ ಏನನ್ನು ಮಾಡಬಹುದು ಎಂಬುದನ್ನು ಹುಡುಕಬೇಕು’ ಎಂದಿದ್ದಾರೆ ಅವರು.

ಇದನ್ನೂ ಓದಿ: ಅಕ್ಷಯ್​ ಕುಮಾರ್​ಗಿಂತ ಪಂಕಜ್​ ತ್ರಿಪಾಠಿಗೆ ಹೆಚ್ಚು ಸಂಭಾವನೆ; ‘ಒಎಂಜಿ 2’ ಚಿತ್ರದ ಒಟ್ಟು ಬಜೆಟ್​ ಎಷ್ಟು?

‘ಮಿರ್ಜಾಪುರ್’ ಹಾಗೂ ‘ಮಿರ್ಜಾಪುರ್ 2’ ಸೀರಿಸ್​ಗಳು ಬಂದಿವೆ. ಈ ಸೀರಿಸ್​ನಲ್ಲಿ ಅಖಂಡಾನಂದ್ ತ್ರಿಪಾಠಿ ಹೆಸರಿನ ಪಾತ್ರವನ್ನು ಅವರು ಮಾಡಿದ್ದಾರೆ. ಅವರಿಗೆ ಎಲ್ಲರೂ ಖಾಲೀಂ ಭಯ್ಯಾ ಎಂದೇ ಕರೆಯುತ್ತಾರೆ. ಈ ಖಾಲೀಂ ನಡೆಸುವ ಅಕ್ರಮ ದಂಧೆಗಳಿಗೆ ಲೆಕ್ಕವೇ ಇಲ್ಲ. ಆತ ಬಳಕೆ ಮಾಡುವ ಶಬ್ದಗಳು ಕೂಡ ಗಮನ ಸೆಳೆದಿದ್ದವು. ‘ಮಿರ್ಜಾಪುರ್ 3’ ಕೂಡ ಬರಲಿದೆ. ಅಲ್ಲಿ ಈ ರೀತಿಯ ಶಬ್ದಗಳ ಬಳಕೆಯೇ ಆಗದಿದ್ದರೆ ಸೀರಿಸ್ ಹೇಗೆ ಹಿಟ್ ಆಗುತ್ತದೆ ಎಂಬುದು ಅನೇಕರ ಪ್ರಶ್ನೆ. ‘ಮಿಮಿ’ ಸಿನಿಮಾದ ನಟನೆಗೆ ಪಂಕಜ್ ಅವರಿಗೆ ‘ಅತ್ಯುತ್ತಮ ಪೋಷಕ ನಟ’ ರಾಷ್ಟ್ರಪ್ರಶಸ್ತಿ ಸಿಕ್ಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ದೆಹಲಿ: ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ
ದೆಹಲಿ: ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ
ವಾಣಿಜ್ಯ LPG ಸಿಲಿಂಡರ್ ಬೆಲೆ ಏರಿಕೆ: ಹೋಟೆಲ್ ಊಟ-ತಿಂಡಿ ದರ ಹೆಚ್ಚಾಗುತ್ತಾ?
ವಾಣಿಜ್ಯ LPG ಸಿಲಿಂಡರ್ ಬೆಲೆ ಏರಿಕೆ: ಹೋಟೆಲ್ ಊಟ-ತಿಂಡಿ ದರ ಹೆಚ್ಚಾಗುತ್ತಾ?