AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ಆಗದಿದ್ರೂ ಗಂಡ-ಹೆಂಡ್ತಿ ಥರ ಪವಿತ್ರವಾಗಿತ್ತು ಆ ಸಂಬಂಧ; ಸಿದ್ದಾರ್ಥ್​-ಶೆಹನಾಜ್​ ಬಗ್ಗೆ ಹೊರಬಿತ್ತು ಸುದ್ದಿ

‘ಶೆಹನಾಜ್ ಗಿಲ್​​ ಮತ್ತು ಸಿದ್ದಾರ್ಥ್​ ಶುಕ್ಲಾ ಸಂಬಂಧವು ಗಂಡ-ಹೆಂಡತಿ ಸಂಬಂಧಕ್ಕಿಂತ ಏನೂ ಕಡಿಮೆ ಆಗಿರಲಿಲ್ಲ. ಅದನ್ನು ಬರೀ ಸ್ನೇಹ ಎನ್ನಲು ಸಾಧ್ಯವಿಲ್ಲ’ ಎಂದು ಬಿಗ್​ ಬಾಸ್​ ಮಾಜಿ ಸ್ಪರ್ಧಿ ಪವಿತ್ರ ಪೂನಿಯಾ ಹೇಳಿದ್ದಾರೆ.

ಮದುವೆ ಆಗದಿದ್ರೂ ಗಂಡ-ಹೆಂಡ್ತಿ ಥರ ಪವಿತ್ರವಾಗಿತ್ತು ಆ ಸಂಬಂಧ; ಸಿದ್ದಾರ್ಥ್​-ಶೆಹನಾಜ್​ ಬಗ್ಗೆ ಹೊರಬಿತ್ತು ಸುದ್ದಿ
ಸಿದ್ದಾರ್ಥ್​ ಶುಕ್ಲಾ, ಶೆಹನಾಜ್​ ಗಿಲ್
Follow us
TV9 Web
| Updated By: ಮದನ್​ ಕುಮಾರ್​

Updated on: Sep 06, 2021 | 12:18 PM

ನಟ ಸಿದ್ದಾರ್ಥ್​ ಶುಕ್ಲಾ ಅವರು ಅಕಾಲಿಕ ಮರಣ ಹೊಂದಿರುವುದು ಅಭಿಮಾನಿಗಳಿಗೆ ನಂಬಲಾಗುತ್ತಿಲ್ಲ. ಸೆ.2ರಂದು ಅವರು ಹೃದಯಾಘಾತದಿಂದ ಮೃತಪಟ್ಟರು. ಸಿದ್ದಾರ್ಥ್​ ಜೊತೆ ಆಪ್ತವಾಗಿದ್ದ ಅವರ ಪ್ರೇಯಸಿ ಶೆಹನಾಜ್ ಗಿಲ್​ ಈಗ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತೆ ಅವರು ದುಃಖದಲ್ಲಿದ್ದಾರೆ. ಸಿದ್ದಾರ್ಥ್​ ಮತ್ತು ಶೆಹನಾಜ್​ ಗಿಲ್​ ಊಹಿಸಲಾಗದಷ್ಟು ತುಂಬ ಆಪ್ತವಾಗಿದ್ದರು ಎಂಬ ವಿಚಾರ ಈಗ ಬಹಿರಂಗ ಆಗಿದೆ. ಆ ಬಗ್ಗೆ ಬಿಗ್​ ಬಾಸ್​ ಮಾಜಿ ಸ್ಪರ್ಧಿ ಪವಿತ್ರ ಪೂನಿಯಾ ಅವರು ಬಾಯಿ ಬಿಟ್ಟಿದ್ದಾರೆ. ಸಿದ್ದಾರ್ಥ್​ ನಿಧನದ ಬಗ್ಗೆ ಮಾತನಾಡಿರುವ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಬಿಗ್​ ಬಾಸ್​ 14ನೇ ಸೀಸನ್​ನಲ್ಲಿ ಪವಿತ್ರ ಪೂನಿಯಾ ಭಾಗವಹಿಸಿದ್ದರು. ಆ ಸೀಸನ್​ನಲ್ಲಿ ಸಿದ್ದಾರ್ಥ್​ ಅವರು ಸೀನಿಯರ್​ ಆಗಿ ಪಾಲ್ಗೊಂಡಿದ್ದರು. ಸಿದ್ದಾರ್ಥ್​ ಮತ್ತು ಶೆಹನಾಜ್​ ನಡುವಿನ ಆಪ್ತತೆ ಹೇಗಿತ್ತು ಎಂಬುದನ್ನು ಪವಿತ್ರ ಅವರು ಹತ್ತಿರದಿಂದ ಕಂಡಿದ್ದಾರೆ. ‘ಇಂದು ಶೆಹನಾಜ್​ ಅವರನ್ನು ನೋಡಿದರೆ ಜೀವ ನಡುಗುತ್ತದೆ. ಸಿದ್ದಾರ್ಥ್​ ಮತ್ತು ಶೆಹನಾಜ್​ ರೀತಿ ಪ್ರೇಮಿಗಳಾಗಿರಬೇಕು ಅಂತ ಅನೇಕರು ಬಯಸುತ್ತಾರೆ. ಅವರ ಸಂಬಂಧ ಅಷ್ಟು ಚೆನ್ನಾಗಿತ್ತು’ ಎಂದು ಪವಿತ್ರ ಹೇಳಿದ್ದಾರೆ.

‘ಶೆಹನಾಜ್​ ಮತ್ತು ಸಿದ್ದಾರ್ಥ್​ ಸಂಬಂಧವು ಗಂಡ-ಹೆಂಡತಿ ಸಂಬಂಧಕ್ಕಿಂತ ಏನೂ ಕಡಿಮೆ ಆಗಿರಲಿಲ್ಲ. ಅದನ್ನು ಬರೀ ಸ್ನೇಹ ಎನ್ನಲು ಸಾಧ್ಯವಿಲ್ಲ. ಗರ್ಲ್​ಫ್ರೆಂಡ್​-ಭಾಯ್​ಫ್ರೆಂಡ್​ ಸಂಬಂಧ ಎನ್ನಲೂ ಆಗುವುದಿಲ್ಲ. ರೋಮಿಯೋ-ಜೂಲಿಯಟ್​ ರೀತಿ ಶೆಹನಾಜ್​-ಸಿದ್ದಾರ್ಥ್​ ಸಂಬಂಧವನ್ನು ಕೂಡ ಜನರು ಕೊನೆಯವರೆಗೆ ನೆನಪಿಟ್ಟುಕೊಳ್ಳುತ್ತಾರೆ’ ಎಂದು ಪವಿತ್ರ ಹೇಳಿದ್ದಾರೆ.

ಸಿದ್ದಾರ್ಥ್​ ನಿಧನದ ಬಳಿಕ ಅವರ ಕುಟುಂಬದವರಿಗೆ ಸಾಂತ್ವನ ಹೇಳಲು ಕೆಲವರು ಸೆಲೆಬ್ರಿಟಿಗಳು ಅವರ ಮನೆಗೆ ತೆರಳಿದ್ದಾರೆ. ಈ ವೇಳೆ ಒಂದಷ್ಟು ವಿವರಗಳು ಹೊರಬಂದಿವೆ. ಮೂಲಗಳ ಪ್ರಕಾರ, ಬುಧವಾರ (ಸೆ.1) ರಾತ್ರಿ 9.30ಕ್ಕೆ ಸಿದ್ದಾರ್ಥ್​ ಶುಕ್ಲಾ ಅವರು ಮನೆಗೆ ಬಂದಿದ್ದರು. ಆಗ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ತಾಯಿ ಮತ್ತು ಗೆಳತಿ ಶೆಹನಾಜ್​ ಗಿಲ್​ ಅವರು ನಿಂಬು ಪಾನಿ ಮತ್ತು ಐಸ್​ ಕ್ರೀಮ್ ನೀಡಿದರು. ಬಳಿಕ ವಿಶ್ರಾಂತಿ ಪಡೆದುಕೊಳ್ಳುವಂತೆ ಹೇಳಿದರು ಎಂಬ ಮಾಹಿತಿ ಕೇಳಿಬಂದಿದೆ.

ಎಷ್ಟು ಸಮಯ ಕಳೆದರೂ ಸಿದ್ದಾರ್ಥ್​ಗೆ ನಿದ್ದೆ ಬರಲಿಲ್ಲ. ಹಾಗಾಗಿ ತಮ್ಮ ಜೊತೆಯೇ ಇರುವಂತೆ ಗೆಳತಿ ಶೆಹನಾಜ್​ಗೆ ಅವರು ಕೇಳಿಕೊಂಡರು. ಮಧ್ಯ ರಾತ್ರಿ 1.30ರ ಸುಮಾರಿಗೆ ಶೆಹನಾಜ್​ ಅವರ ಮಡಿಲ ಮೇಲೆ ಸಿದ್ದಾರ್ಥ್​ ನಿದ್ರಿಸಿದರು. ಬಳಿಕ ಅವರನ್ನು ಪಕ್ಕಕ್ಕೆ ಸರಿಸಿ ಶೆಹನಾಜ್​ ಕೂಡ ಮಲಗಲು ತೆರಳಿದರು. ಬೆಳಗ್ಗೆ 7.30ರ ಸುಮಾರಿಗೆ ಶೆಹನಾಜ್​ಗೆ ಎಚ್ಚರವಾಗಿ ನೋಡಿದಾಗ ಸಿದ್ದಾರ್ಥ್​ ರಾತ್ರಿ ನಿದ್ರಿಸುತ್ತಿದ್ದ ಭಂಗಿಯಲ್ಲೇ ಮಲಗಿದ್ದರು. ಯಾವುದೇ ರೀತಿ ಚಲನೆ ಇಲ್ಲದಿರುವುದು ಗಮನಿಸಿದಾಗ ಅವರು ಮೃತರಾಗಿರುವುದು ತಿಳಿಯಿತು ಎನ್ನಲಾಗಿದೆ. ಆದರೆ ಈ ಬಗ್ಗೆ ಶೆಹನಾಜ್​ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ:

Sidharth Shukla: ಸಿದ್ದಾರ್ಥ್​ ಶುಕ್ಲಾ ಸಾವಿನ ಸಮಯದ ಬಗ್ಗೆ ಮೂಡಿದೆ ಶಂಕೆ; ಹಿಂದೂಸ್ತಾನಿ ಭಾವು ಹೇಳಿದ ಇನ್ನೊಂದು ಕಥೆ

‘ಆ ಸಿದ್ದಾರ್ಥ್​ ಬದಲು ಈ ಸಿದ್ದಾರ್ಥ್​ ಸಾಯಬೇಕಿತ್ತು’ ಎಂದು ದ್ವೇಷಕಾರಿದ ನೆಟ್ಟಿಗರು; ನಟನ ಪ್ರತಿಕ್ರಿಯೆ ಏನು?

ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ
ಕಿರಣ್ ರಾಜ್ ಜೀವನದ ‘ಕರ್ಣ’ ಯಾರು? ಅವರೇ ಕೊಟ್ಟಿದ್ದಾರೆ ಉತ್ತರ
ಕಿರಣ್ ರಾಜ್ ಜೀವನದ ‘ಕರ್ಣ’ ಯಾರು? ಅವರೇ ಕೊಟ್ಟಿದ್ದಾರೆ ಉತ್ತರ
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್
ದುರಂತದಲ್ಲಿ ಮಡಿದವರು ಭಾರತೀಯರು; ಕನ್ನಡ, ತೆಲುಗು ತಾರತಮ್ಯ ಬೇಡ: ಶಿವಕುಮಾರ್
ದುರಂತದಲ್ಲಿ ಮಡಿದವರು ಭಾರತೀಯರು; ಕನ್ನಡ, ತೆಲುಗು ತಾರತಮ್ಯ ಬೇಡ: ಶಿವಕುಮಾರ್
ಏರ್ ಇಂಡಿಯಾ ವಿಮಾನ ಪತನವಾದ ಜಾಗದಲ್ಲಿ ಬಿದ್ದ ಪ್ರಯಾಣಿಕರ ಲಗೇಜ್ ರಾಶಿ
ಏರ್ ಇಂಡಿಯಾ ವಿಮಾನ ಪತನವಾದ ಜಾಗದಲ್ಲಿ ಬಿದ್ದ ಪ್ರಯಾಣಿಕರ ಲಗೇಜ್ ರಾಶಿ