AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಣವೀರ್​ ಸಿಂಗ್​ಗೆ ಮನೆಯಲ್ಲೇ ಬಿರಿಯಾನಿ ಮಾಡಿ ಬಡಿಸಿದ ರಾಮ್​ ಚರಣ್​; ಕಾರಣ ಏನು?

ರಣವೀರ್​ ಅವರು ಭಾನುವಾರ (ಡಿಸೆಂಬರ್​ 12) ಹೈದರಾಬಾದ್​ಗೆ ಬಂದಿದ್ದರು. ಜಾಹೀರಾತು ಶೂಟ್​ ಮುಗಿದ ಬಳಿಕ ರಾಮ್​ ಚರಣ್​ಗೆ ಸಿಕ್ಕಿದ್ದಾರೆ. ಈ ವೇಳೆ ದೀಪಿಕಾ ಪತಿಗೆ ವಿಶೇಷ ಹೈದರಾಬಾದಿ ಬಿರಿಯಾನಿ ಬಡಿಸಿದ್ದಾರೆ.

ರಣವೀರ್​ ಸಿಂಗ್​ಗೆ ಮನೆಯಲ್ಲೇ ಬಿರಿಯಾನಿ ಮಾಡಿ ಬಡಿಸಿದ ರಾಮ್​ ಚರಣ್​; ಕಾರಣ ಏನು?
ರಾಮ್ ಚರಣ್​-ರಣವೀರ್​
TV9 Web
| Edited By: |

Updated on:Dec 13, 2021 | 11:15 AM

Share

ಬಾಲಿವುಡ್​ ನಟ ರಣವೀರ್​ ಸಿಂಗ್​ ಹಾಗೂ ಟಾಲಿವುಡ್​ ನಟ ರಾಮ್​ ಚರಣ್​ ನಡುವೆ ಒಳ್ಳೆಯ ಗೆಳೆತನವಿದೆ. ಮುಂಬೈಗೆ ತೆರಳಿದಾಗ ರಣವೀರ್​ ಸಿಂಗ್​ ಅವರನ್ನು ರಾಮ್​ ಚರಣ್​ ಭೇಟಿ ಆಗುತ್ತಾರೆ. ಅದೇ ರೀತಿ ರಣವೀರ್​ ಸಿಂಗ್​ ಹೈದರಾಬಾದ್​ಗೆ ಬಂದಾಗ ರಾಮ್​ ಚರಣ್​ ಅವರನ್ನು ಮೀಟ್​ ಮಾಡುತ್ತಾರೆ. ಈಗ ರಣವೀರ್​ ಸಿಂಗ್​ ಅವರು ಜಾಹೀರಾತು ಶೂಟ್​ಗಾಗಿ ಹೈದರಾಬಾದ್​ಗೆ ಆಗಮಿಸಿದ್ದರು. ವಿಶೇಷ ಎಂದರೆ ರಾಮ್​ ಚರಣ್​ ಅವರು ಬಾಲಿವುಡ್​ನ ಈ ಹೀರೋಗೆ ವಿಶೇಷ ಆತಿಥ್ಯ ಮಾಡಿದ್ದಾರೆ. ಇದನ್ನು ನೋಡಿ ರಣವೀರ್​ ಸಖತ್ ಖುಷಿ ಪಟ್ಟಿದ್ದಾರೆ.

ರಣವೀರ್​ ಅವರು ಭಾನುವಾರ (ಡಿಸೆಂಬರ್​ 12) ಹೈದರಾಬಾದ್​ಗೆ ಬಂದಿದ್ದರು. ಜಾಹೀರಾತು ಶೂಟ್​ ಮುಗಿದ ಬಳಿಕ ರಾಮ್​ ಚರಣ್​ಗೆ ಸಿಕ್ಕಿದ್ದಾರೆ. ಈ ವೇಳೆ ದೀಪಿಕಾ ಪತಿಗೆ ವಿಶೇಷ ಹೈದರಾಬಾದಿ ಬಿರಿಯಾನಿ ಬಡಿಸಿದ್ದಾರೆ. ಇದು ರಾಮ್​ ಚರಣ್​ ಮನೆಯಲ್ಲೇ ಮಾಡಿದ ಬಿರಿಯಾನಿ ಆಗಿತ್ತು ಅನ್ನೋದು ವಿಶೇಷ. ಇದನ್ನು ಸವಿದು ರಣವೀರ್​ ಸಖತ್​ ಖುಷಿಯಾಗಿದ್ದಾರೆ.

ಈ ಇಬ್ಬರು ಹೀರೋಗಳ ನಡುವೆ ಒಳ್ಳೆಯ ಬಾಂಡಿಗ್​ ಇದೆ. ರಾಮ್​ ಚರಣ್​ 15ನೇ ಚಿತ್ರಕ್ಕೆ ಶಂಕರ್​ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಕ್ಕೆ ಕ್ಲ್ಯಾಪ್​ ಮಾಡೋಕೆ ರಣವೀರ್​ ಸಿಂಗ್​ ಅವರು ಮುಂಬೈನಿಂದ ಹೈದರಾಬಾದ್​ಗೆ ಆಗಮಿಸಿದ್ದರು. ಇದು ರಾಮ್​ಗೆ ಖುಷಿ ನೀಡಿತ್ತು. ಇದನ್ನು ನೆನಪಿನಲ್ಲಿ ಇಟ್ಟುಕೊಂಡು ರಾಮ್​ ಚರಣ್​ ಅವರು ರಣವೀರ್​ಗೆ ಬಿರ್ಯಾನಿ ಬಡಿಸಿದ್ದಾರೆ.

ರಾಮ್​ ಚರಣ್​ ಹಾಗೂ ಸಲ್ಮಾನ್​ ಖಾನ್​ ನಡುವೆಯೂ ಒಳ್ಳೆಯ ಬಾಂಧವ್ಯ ಇದೆ. ಸಲ್ಲು ಹೈದರಾಬಾದ್​ಗೆ ಬಂದಾಗ ರಾಮ್​ ಚರಣ್​ ಬಿರ್ಯಾನಿ ಕಳುಹಿಸಿದ್ದರು. ರಾಮ್​ ಚರಣ್​ ನಟನೆಯ ‘ಜಂಜೀರ್​’ ಸಿನಿಮಾ ರಿಲೀಸ್​ ಆಗುವಾಗ ರಾಮ್​ ಚರಣ್​ ಬಗ್ಗೆ ಸಲ್ಮಾನ್​ ಖಾನ್​ ಹೆಚ್ಚಿನ ಕಾಳಜಿ ತೋರಿದ್ದರು. ‘ಜಂಜೀರ್​’ ಇದು ರಾಮ್​ ಚರಣ್​ ನಟನೆಯ ಮೊದಲ ಹಿಂದಿ ಸಿನಿಮಾ.

ಇದನ್ನೂ ಓದಿ: ಪ್ಯಾನ್ ಇಂಡಿಯಾ ಚಿತ್ರಗಳಿಂದ ಏರುತ್ತಲೇ ಇದೆ ಟಾಲಿವುಡ್ ನಟರ ಸಂಭಾವನೆ; ಪ್ರಭಾಸ್, ರಾಮ್ ಚರಣ್ ಪಡೆಯೋದು ಇಷ್ಟೊಂದಾ?

ಆಲಿಯಾಗೆ ಲಿಪ್​ ಲಾಕ್​ ಮಾಡಲ್ಲ ಎಂದು ದೀಪಿಕಾಗೆ ಪ್ರಾಮಿಸ್​ ಮಾಡಿದ ರಣವೀರ್​ ಸಿಂಗ್? ಏನಿದು ಕಥೆ?

Published On - 7:00 am, Mon, 13 December 21

Follow Us
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು
ಕೊಚ್ಚಿಹೋದ ದುಧಿಯಾ ಸೇತುವೆ; ಡಾರ್ಜಿಲಿಂಗ್-ಸಿಲಿಗುರಿ ಸಂಪರ್ಕ ಸಂಪೂರ್ಣ ಕಡಿತ
ಕೊಚ್ಚಿಹೋದ ದುಧಿಯಾ ಸೇತುವೆ; ಡಾರ್ಜಿಲಿಂಗ್-ಸಿಲಿಗುರಿ ಸಂಪರ್ಕ ಸಂಪೂರ್ಣ ಕಡಿತ
ಪರಿಷತ್​​ ಚುನಾವಣೆ: ಜೆಡಿಎಸ್​​ ಶಾಸಕರ ಅಡ್ಡ ಮತದಾನದ ಹಿಂದಿದೆ ಹಲವು ಕಾರಣ
ಪರಿಷತ್​​ ಚುನಾವಣೆ: ಜೆಡಿಎಸ್​​ ಶಾಸಕರ ಅಡ್ಡ ಮತದಾನದ ಹಿಂದಿದೆ ಹಲವು ಕಾರಣ
ಮೈತ್ರಿ ಕುಸ್ತಿ? ರೇವಣ್ಣಗೆ ಮಾತಾಡೋ ಅಧಿಕಾರವಿಲ್ಲ: ಅಶೋಕ್ ತಿರುಗೇಟು
ಮೈತ್ರಿ ಕುಸ್ತಿ? ರೇವಣ್ಣಗೆ ಮಾತಾಡೋ ಅಧಿಕಾರವಿಲ್ಲ: ಅಶೋಕ್ ತಿರುಗೇಟು