AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಣವೀರ್​ ಸಿಂಗ್​ಗೆ ಮನೆಯಲ್ಲೇ ಬಿರಿಯಾನಿ ಮಾಡಿ ಬಡಿಸಿದ ರಾಮ್​ ಚರಣ್​; ಕಾರಣ ಏನು?

ರಣವೀರ್​ ಅವರು ಭಾನುವಾರ (ಡಿಸೆಂಬರ್​ 12) ಹೈದರಾಬಾದ್​ಗೆ ಬಂದಿದ್ದರು. ಜಾಹೀರಾತು ಶೂಟ್​ ಮುಗಿದ ಬಳಿಕ ರಾಮ್​ ಚರಣ್​ಗೆ ಸಿಕ್ಕಿದ್ದಾರೆ. ಈ ವೇಳೆ ದೀಪಿಕಾ ಪತಿಗೆ ವಿಶೇಷ ಹೈದರಾಬಾದಿ ಬಿರಿಯಾನಿ ಬಡಿಸಿದ್ದಾರೆ.

ರಣವೀರ್​ ಸಿಂಗ್​ಗೆ ಮನೆಯಲ್ಲೇ ಬಿರಿಯಾನಿ ಮಾಡಿ ಬಡಿಸಿದ ರಾಮ್​ ಚರಣ್​; ಕಾರಣ ಏನು?
ರಾಮ್ ಚರಣ್​-ರಣವೀರ್​
TV9 Web
| Edited By: |

Updated on:Dec 13, 2021 | 11:15 AM

Share

ಬಾಲಿವುಡ್​ ನಟ ರಣವೀರ್​ ಸಿಂಗ್​ ಹಾಗೂ ಟಾಲಿವುಡ್​ ನಟ ರಾಮ್​ ಚರಣ್​ ನಡುವೆ ಒಳ್ಳೆಯ ಗೆಳೆತನವಿದೆ. ಮುಂಬೈಗೆ ತೆರಳಿದಾಗ ರಣವೀರ್​ ಸಿಂಗ್​ ಅವರನ್ನು ರಾಮ್​ ಚರಣ್​ ಭೇಟಿ ಆಗುತ್ತಾರೆ. ಅದೇ ರೀತಿ ರಣವೀರ್​ ಸಿಂಗ್​ ಹೈದರಾಬಾದ್​ಗೆ ಬಂದಾಗ ರಾಮ್​ ಚರಣ್​ ಅವರನ್ನು ಮೀಟ್​ ಮಾಡುತ್ತಾರೆ. ಈಗ ರಣವೀರ್​ ಸಿಂಗ್​ ಅವರು ಜಾಹೀರಾತು ಶೂಟ್​ಗಾಗಿ ಹೈದರಾಬಾದ್​ಗೆ ಆಗಮಿಸಿದ್ದರು. ವಿಶೇಷ ಎಂದರೆ ರಾಮ್​ ಚರಣ್​ ಅವರು ಬಾಲಿವುಡ್​ನ ಈ ಹೀರೋಗೆ ವಿಶೇಷ ಆತಿಥ್ಯ ಮಾಡಿದ್ದಾರೆ. ಇದನ್ನು ನೋಡಿ ರಣವೀರ್​ ಸಖತ್ ಖುಷಿ ಪಟ್ಟಿದ್ದಾರೆ.

ರಣವೀರ್​ ಅವರು ಭಾನುವಾರ (ಡಿಸೆಂಬರ್​ 12) ಹೈದರಾಬಾದ್​ಗೆ ಬಂದಿದ್ದರು. ಜಾಹೀರಾತು ಶೂಟ್​ ಮುಗಿದ ಬಳಿಕ ರಾಮ್​ ಚರಣ್​ಗೆ ಸಿಕ್ಕಿದ್ದಾರೆ. ಈ ವೇಳೆ ದೀಪಿಕಾ ಪತಿಗೆ ವಿಶೇಷ ಹೈದರಾಬಾದಿ ಬಿರಿಯಾನಿ ಬಡಿಸಿದ್ದಾರೆ. ಇದು ರಾಮ್​ ಚರಣ್​ ಮನೆಯಲ್ಲೇ ಮಾಡಿದ ಬಿರಿಯಾನಿ ಆಗಿತ್ತು ಅನ್ನೋದು ವಿಶೇಷ. ಇದನ್ನು ಸವಿದು ರಣವೀರ್​ ಸಖತ್​ ಖುಷಿಯಾಗಿದ್ದಾರೆ.

ಈ ಇಬ್ಬರು ಹೀರೋಗಳ ನಡುವೆ ಒಳ್ಳೆಯ ಬಾಂಡಿಗ್​ ಇದೆ. ರಾಮ್​ ಚರಣ್​ 15ನೇ ಚಿತ್ರಕ್ಕೆ ಶಂಕರ್​ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಕ್ಕೆ ಕ್ಲ್ಯಾಪ್​ ಮಾಡೋಕೆ ರಣವೀರ್​ ಸಿಂಗ್​ ಅವರು ಮುಂಬೈನಿಂದ ಹೈದರಾಬಾದ್​ಗೆ ಆಗಮಿಸಿದ್ದರು. ಇದು ರಾಮ್​ಗೆ ಖುಷಿ ನೀಡಿತ್ತು. ಇದನ್ನು ನೆನಪಿನಲ್ಲಿ ಇಟ್ಟುಕೊಂಡು ರಾಮ್​ ಚರಣ್​ ಅವರು ರಣವೀರ್​ಗೆ ಬಿರ್ಯಾನಿ ಬಡಿಸಿದ್ದಾರೆ.

ರಾಮ್​ ಚರಣ್​ ಹಾಗೂ ಸಲ್ಮಾನ್​ ಖಾನ್​ ನಡುವೆಯೂ ಒಳ್ಳೆಯ ಬಾಂಧವ್ಯ ಇದೆ. ಸಲ್ಲು ಹೈದರಾಬಾದ್​ಗೆ ಬಂದಾಗ ರಾಮ್​ ಚರಣ್​ ಬಿರ್ಯಾನಿ ಕಳುಹಿಸಿದ್ದರು. ರಾಮ್​ ಚರಣ್​ ನಟನೆಯ ‘ಜಂಜೀರ್​’ ಸಿನಿಮಾ ರಿಲೀಸ್​ ಆಗುವಾಗ ರಾಮ್​ ಚರಣ್​ ಬಗ್ಗೆ ಸಲ್ಮಾನ್​ ಖಾನ್​ ಹೆಚ್ಚಿನ ಕಾಳಜಿ ತೋರಿದ್ದರು. ‘ಜಂಜೀರ್​’ ಇದು ರಾಮ್​ ಚರಣ್​ ನಟನೆಯ ಮೊದಲ ಹಿಂದಿ ಸಿನಿಮಾ.

ಇದನ್ನೂ ಓದಿ: ಪ್ಯಾನ್ ಇಂಡಿಯಾ ಚಿತ್ರಗಳಿಂದ ಏರುತ್ತಲೇ ಇದೆ ಟಾಲಿವುಡ್ ನಟರ ಸಂಭಾವನೆ; ಪ್ರಭಾಸ್, ರಾಮ್ ಚರಣ್ ಪಡೆಯೋದು ಇಷ್ಟೊಂದಾ?

ಆಲಿಯಾಗೆ ಲಿಪ್​ ಲಾಕ್​ ಮಾಡಲ್ಲ ಎಂದು ದೀಪಿಕಾಗೆ ಪ್ರಾಮಿಸ್​ ಮಾಡಿದ ರಣವೀರ್​ ಸಿಂಗ್? ಏನಿದು ಕಥೆ?

Published On - 7:00 am, Mon, 13 December 21

ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ