AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಣವೀರ್​ ಸಿಂಗ್​ಗೆ ಮನೆಯಲ್ಲೇ ಬಿರಿಯಾನಿ ಮಾಡಿ ಬಡಿಸಿದ ರಾಮ್​ ಚರಣ್​; ಕಾರಣ ಏನು?

ರಣವೀರ್​ ಅವರು ಭಾನುವಾರ (ಡಿಸೆಂಬರ್​ 12) ಹೈದರಾಬಾದ್​ಗೆ ಬಂದಿದ್ದರು. ಜಾಹೀರಾತು ಶೂಟ್​ ಮುಗಿದ ಬಳಿಕ ರಾಮ್​ ಚರಣ್​ಗೆ ಸಿಕ್ಕಿದ್ದಾರೆ. ಈ ವೇಳೆ ದೀಪಿಕಾ ಪತಿಗೆ ವಿಶೇಷ ಹೈದರಾಬಾದಿ ಬಿರಿಯಾನಿ ಬಡಿಸಿದ್ದಾರೆ.

ರಣವೀರ್​ ಸಿಂಗ್​ಗೆ ಮನೆಯಲ್ಲೇ ಬಿರಿಯಾನಿ ಮಾಡಿ ಬಡಿಸಿದ ರಾಮ್​ ಚರಣ್​; ಕಾರಣ ಏನು?
ರಾಮ್ ಚರಣ್​-ರಣವೀರ್​
TV9 Web
| Updated By: Digi Tech Desk|

Updated on:Dec 13, 2021 | 11:15 AM

Share

ಬಾಲಿವುಡ್​ ನಟ ರಣವೀರ್​ ಸಿಂಗ್​ ಹಾಗೂ ಟಾಲಿವುಡ್​ ನಟ ರಾಮ್​ ಚರಣ್​ ನಡುವೆ ಒಳ್ಳೆಯ ಗೆಳೆತನವಿದೆ. ಮುಂಬೈಗೆ ತೆರಳಿದಾಗ ರಣವೀರ್​ ಸಿಂಗ್​ ಅವರನ್ನು ರಾಮ್​ ಚರಣ್​ ಭೇಟಿ ಆಗುತ್ತಾರೆ. ಅದೇ ರೀತಿ ರಣವೀರ್​ ಸಿಂಗ್​ ಹೈದರಾಬಾದ್​ಗೆ ಬಂದಾಗ ರಾಮ್​ ಚರಣ್​ ಅವರನ್ನು ಮೀಟ್​ ಮಾಡುತ್ತಾರೆ. ಈಗ ರಣವೀರ್​ ಸಿಂಗ್​ ಅವರು ಜಾಹೀರಾತು ಶೂಟ್​ಗಾಗಿ ಹೈದರಾಬಾದ್​ಗೆ ಆಗಮಿಸಿದ್ದರು. ವಿಶೇಷ ಎಂದರೆ ರಾಮ್​ ಚರಣ್​ ಅವರು ಬಾಲಿವುಡ್​ನ ಈ ಹೀರೋಗೆ ವಿಶೇಷ ಆತಿಥ್ಯ ಮಾಡಿದ್ದಾರೆ. ಇದನ್ನು ನೋಡಿ ರಣವೀರ್​ ಸಖತ್ ಖುಷಿ ಪಟ್ಟಿದ್ದಾರೆ.

ರಣವೀರ್​ ಅವರು ಭಾನುವಾರ (ಡಿಸೆಂಬರ್​ 12) ಹೈದರಾಬಾದ್​ಗೆ ಬಂದಿದ್ದರು. ಜಾಹೀರಾತು ಶೂಟ್​ ಮುಗಿದ ಬಳಿಕ ರಾಮ್​ ಚರಣ್​ಗೆ ಸಿಕ್ಕಿದ್ದಾರೆ. ಈ ವೇಳೆ ದೀಪಿಕಾ ಪತಿಗೆ ವಿಶೇಷ ಹೈದರಾಬಾದಿ ಬಿರಿಯಾನಿ ಬಡಿಸಿದ್ದಾರೆ. ಇದು ರಾಮ್​ ಚರಣ್​ ಮನೆಯಲ್ಲೇ ಮಾಡಿದ ಬಿರಿಯಾನಿ ಆಗಿತ್ತು ಅನ್ನೋದು ವಿಶೇಷ. ಇದನ್ನು ಸವಿದು ರಣವೀರ್​ ಸಖತ್​ ಖುಷಿಯಾಗಿದ್ದಾರೆ.

ಈ ಇಬ್ಬರು ಹೀರೋಗಳ ನಡುವೆ ಒಳ್ಳೆಯ ಬಾಂಡಿಗ್​ ಇದೆ. ರಾಮ್​ ಚರಣ್​ 15ನೇ ಚಿತ್ರಕ್ಕೆ ಶಂಕರ್​ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಕ್ಕೆ ಕ್ಲ್ಯಾಪ್​ ಮಾಡೋಕೆ ರಣವೀರ್​ ಸಿಂಗ್​ ಅವರು ಮುಂಬೈನಿಂದ ಹೈದರಾಬಾದ್​ಗೆ ಆಗಮಿಸಿದ್ದರು. ಇದು ರಾಮ್​ಗೆ ಖುಷಿ ನೀಡಿತ್ತು. ಇದನ್ನು ನೆನಪಿನಲ್ಲಿ ಇಟ್ಟುಕೊಂಡು ರಾಮ್​ ಚರಣ್​ ಅವರು ರಣವೀರ್​ಗೆ ಬಿರ್ಯಾನಿ ಬಡಿಸಿದ್ದಾರೆ.

ರಾಮ್​ ಚರಣ್​ ಹಾಗೂ ಸಲ್ಮಾನ್​ ಖಾನ್​ ನಡುವೆಯೂ ಒಳ್ಳೆಯ ಬಾಂಧವ್ಯ ಇದೆ. ಸಲ್ಲು ಹೈದರಾಬಾದ್​ಗೆ ಬಂದಾಗ ರಾಮ್​ ಚರಣ್​ ಬಿರ್ಯಾನಿ ಕಳುಹಿಸಿದ್ದರು. ರಾಮ್​ ಚರಣ್​ ನಟನೆಯ ‘ಜಂಜೀರ್​’ ಸಿನಿಮಾ ರಿಲೀಸ್​ ಆಗುವಾಗ ರಾಮ್​ ಚರಣ್​ ಬಗ್ಗೆ ಸಲ್ಮಾನ್​ ಖಾನ್​ ಹೆಚ್ಚಿನ ಕಾಳಜಿ ತೋರಿದ್ದರು. ‘ಜಂಜೀರ್​’ ಇದು ರಾಮ್​ ಚರಣ್​ ನಟನೆಯ ಮೊದಲ ಹಿಂದಿ ಸಿನಿಮಾ.

ಇದನ್ನೂ ಓದಿ: ಪ್ಯಾನ್ ಇಂಡಿಯಾ ಚಿತ್ರಗಳಿಂದ ಏರುತ್ತಲೇ ಇದೆ ಟಾಲಿವುಡ್ ನಟರ ಸಂಭಾವನೆ; ಪ್ರಭಾಸ್, ರಾಮ್ ಚರಣ್ ಪಡೆಯೋದು ಇಷ್ಟೊಂದಾ?

ಆಲಿಯಾಗೆ ಲಿಪ್​ ಲಾಕ್​ ಮಾಡಲ್ಲ ಎಂದು ದೀಪಿಕಾಗೆ ಪ್ರಾಮಿಸ್​ ಮಾಡಿದ ರಣವೀರ್​ ಸಿಂಗ್? ಏನಿದು ಕಥೆ?

Published On - 7:00 am, Mon, 13 December 21

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ