AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅನಿಮಲ್’ ಸಿನಿಮಾದಲ್ಲಿ ನಟಿಸಿದ್ದಕ್ಕೆ ಹಲವರ ಬಳಿ ಕ್ಷಮೆ ಕೇಳಿದ್ದ ರಣ್​ಬೀರ್ ಕಪೂರ್

ರಣ್​ಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಭಾರಿ ಕಲೆಕ್ಷನ್ ಮಾಡಿತ್ತು, ಆದರೆ ಸಿನಿಮಾದ ಬಗ್ಗೆ ಅಷ್ಟೆ ನೆಗೆಟಿವ್ ವಿಮರ್ಶೆಗಳು ಸಹ ಬಂದಿದ್ದವು. ಆ ಬಗ್ಗೆ ಮಾತನಾಡಿರುವ ರಣ್​ಬೀರ್ ಕಪೂರ್ ಸಿನಿಮಾ ಮಾಡಿದ್ದಕ್ಕೆ ಹಲವರ ಬಳಿ ನಾನು ಕ್ಷಮೆ ಕೇಳಿದ್ದೇನೆ ಎಂದಿದ್ದಾರೆ.

‘ಅನಿಮಲ್’ ಸಿನಿಮಾದಲ್ಲಿ ನಟಿಸಿದ್ದಕ್ಕೆ ಹಲವರ ಬಳಿ ಕ್ಷಮೆ ಕೇಳಿದ್ದ ರಣ್​ಬೀರ್ ಕಪೂರ್
ಮಂಜುನಾಥ ಸಿ.
|

Updated on: Nov 06, 2024 | 11:33 AM

Share

ಬಾಲಿವುಡ್ ಸ್ಟಾರ್ ನಟ ರಣ್​ಬೀರ್ ಕಪೂರ್, ಅವರ ಸಾಲು-ಸಾಲು ಸಿನಿಮಾಗಳು ಸೋಲುತ್ತಿರುವಾಗ ಮರುಜೀವ ಕೊಟ್ಟ ಸಿನಿಮಾ ‘ಅನಿಮಲ್’ ಅದಕ್ಕೆ ಮುಂಚೆ ಬಿಡುಗಡೆ ಆಗಿದ್ದ ‘ಬ್ರಹ್ಮಾಸ್ತ್ರ’ ಹಿಟ್ ಆಗಿತ್ತಾದರೂ ರಣ್​ಬೀರ್ ಕಪೂರ್​ಗೆ ಮಾಸ್ ಇಮೇಜು ತಂದುಕೊಟ್ಟ ಸಿನಿಮಾ ಎಂದರೆ ಅದು ‘ಅನಿಮಲ್’. ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ ‘ಅನಿಮಲ್’ ಸಿನಿಮಾ ಬಿಡುಗಡೆ ಆದ ಬಳಿಕ ಹಲವು ಟೀಕೆ, ವಿಮರ್ಶೆಗಳಿಗೆ ಗುರಿಯಾಯ್ತು, ಹಾಗಿದ್ದರೂ ಸಹ ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು. ಆದರೆ ರಣ್​ಬೀರ್ ಕಪೂರ್ ಮಾತ್ರ ‘ಅನಿಮಲ್’ ಸಿನಿಮಾದಲ್ಲಿ ನಟಿಸಿದ್ದಕ್ಕೆ ಆಪ್ತರಿಂದಲೇ ಟೀಕೆಗೆ ಒಳಗಾದರಂತೆ, ಆ ಬಗ್ಗೆ ಕ್ಷಮೆಯನ್ನೂ ಸಹ ಕೇಳಿದರಂತೆ.

ಪಾಡ್​ಕಾಸ್ಟ್ ಒಂದರಲ್ಲಿ ಈ ಬಗ್ಗೆ ಮಾತನಾಡಿರುವ ರಣ್​ಬೀರ್ ಕಪೂರ್, ‘ಅನಿಮಲ್’ ಸಿನಿಮಾದಲ್ಲಿ ನಟಿಸಿದ ಬಳಿಕ ನನ್ನ ಹಲವು ಆಪ್ತರು, ಹತ್ತಿರದವರು ನನಗೆ ಈ ಸಿನಿಮಾದಲ್ಲಿ ನಟಿಸಬಾರದಿತ್ತು, ಇದೊಂದು ಕೆಟ್ಟ ಸಿನಿಮಾ ಎಂದೆಲ್ಲ ಹೇಳಿದರು. ನಾನು ಅವರಿಗೆ ಕ್ಷಮೆ ಕೇಳಿದೆ, ‘ಕ್ಷಮಿಸಿ, ಇನ್ನು ಮುಂದಕ್ಕೆ ನಾನು ಎಚ್ಚರದಿಂದ ಇರುತ್ತೇನೆ, ಇನ್ನೂ ಒಳ್ಳೆಯ ಸಿನಿಮಾಗಳನ್ನು ಆಯ್ದುಕೊಳ್ಳುತ್ತೇನೆ, ಇನ್ನಷ್ಟು ಕಷ್ಟಪಟ್ಟು ನಿಮ್ಮನ್ನು ರಂಜಿಸುತ್ತೇನೆ’ ಎಂದರಂತೆ.

ಇದನ್ನೂ ಓದಿ:‘ಅನಿಮಲ್​’ ಸಿನಿಮಾ ನಟಿ ತೃಪ್ತಿ ದಿಮ್ರಿ ಒಟ್ಟು ಆಸ್ತಿ ಎಷ್ಟು?

ಹಾಗೆಂದು ‘ಅನಿಮಲ್’ ಸಿನಿಮಾದಲ್ಲಿ ನಟಿಸಿರುವ ಬಗ್ಗೆ ರಣ್​ಬೀರ್ ಕಪೂರ್​ಗೆ ಬೇಸರ ಅಥವಾ ಪಶ್ಚಾತ್ತಾಪ ಏನಿಲ್ಲ. ‘ಅನಿಮಲ್’ ಸಿನಿಮಾದಲ್ಲಿ ನಟಿಸಿದ್ದು ಜೀವನದ ಒಳ್ಳೆಯ ನಿರ್ಧಾರಗಳಲ್ಲಿ ಒಂದೆಂದು ಸಹ ರಣ್​ಬೀರ್ ಅದೇ ಶೋನಲ್ಲಿ ಹೇಳಿದ್ದಾರೆ. ಹಾಗಿದ್ದರೆ ಕ್ಷಮೆ ಏಕೆ ಕೇಳಿದಿರಿ ಎಂದರೆ, ‘ನನ್ನ ಜೀವನದಲ್ಲಿ ಒಂದು ಹಂತವನ್ನು ಈಗ ತಲುಪಿಟ್ಟಿದ್ದೀನಿ, ಯಾರೊಂದಿಗೂ ಬಿರುಸಿನ ಚರ್ಚೆ ಮಾಡುವುದಿಲ್ಲ, ಕ್ಷಮೆ ಕೇಳಿ ಮುಂದೆ ಹೋಗುತ್ತಿರುತ್ತೀನಿ, ನಾನು ಮಾಡಬೇಕಾದ ಕೆಲಸ, ನನಗೆ ಸರಿ ಎನಿಸಿದ ಕೆಲಸಗಳ ಮೇಲೆ ನಾನು ನಿಗಾ ವಹಿಸುತ್ತೇನೆ’ ಎಂದಿದ್ದಾರೆ.

‘ನಾನು ಒಂದು ಸಮಯದಲ್ಲಿ ದೊಡ್ಡ ಯಶಸ್ಸು ನೋಡಿದೆ. ನನ್ನನ್ನು ಮುಂದಿನ ಸೂಪರ್ ಸ್ಟಾರ್ ಎಂದು ಕರೆಯಲಾಗುತ್ತಿತ್ತು, ಆದರೆ ಆ ನಂತರ ನಾನು ಸತತ ಸೋಲುಗಳನ್ನು ಕಂಡೆ, ಟೀಕೆ, ವಿಮರ್ಶೆಗೆ ಗುರಿಯಾದೆ, ಒಂದೇ ರೀತಿಯ ಪಾತ್ರಗಳನ್ನು ಮಾಡುತ್ತಾನೆ ಎಂದರು. ಅಂಥಹಾ ಸಮಯದಲ್ಲಿ ನನಗೆ ‘ಅನಿಮಲ್’ ಸಿಕ್ಕಿತು. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡೆ, ನನಗೆ ಆ ರೀತಿಯ ಒಂದು ಸಿನಿಮಾ ಬೇಕಿತ್ತು, ಲವ್ವರ್ ಬಾಯ್​ನಿಂದ ಮಾಚೋ ಮ್ಯಾನ್ ಹಂತಕ್ಕೆ ಹೋಗಲು ಅದು ಸಹಾಯ ಮಾಡಿತು’ ಎಂದಿದ್ದಾರೆ ರಣ್​ಬೀರ್ ಕಪೂರ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ