Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಯಸ್ಸಲ್ಲಿ ತಮಗಿಂತ ಹಿರಿಯ ನಟಿಯ ಜೊತೆ ಸೈಫ್ ಮಗ ಡೇಟಿಂಗ್

ಇಬ್ರಾಹಿಂ ಅಲಿ ಖಾನ್ ಅವರು ಸುತ್ತಾಟ ನಡೆಸುತ್ತಿರುವುದು ಪಲಕ್ ತಿವಾರಿ ಜೊತೆ. ಇಬ್ಬರೂ ಮಾಲ್ಡೀವ್ಸ್​​ನ ರೆಸಾರ್ಟ್​ನಲ್ಲಿ ಸಮಯ ಕಳೆಯುತ್ತಿದ್ದಾರೆ. ಪಲಕ್ ಅವರು ಖ್ಯಾತ ಕಿರುತೆರೆ ನಟಿ ಶ್ವೇತಾ ತಿವಾರಿ ಅವರ ಮಗಳು. ಇಬ್ಬರೂ ಒಟ್ಟಾಗಿ ಸುತ್ತಾಡುತ್ತಿದ್ದಾರೆ.

ವಯಸ್ಸಲ್ಲಿ ತಮಗಿಂತ ಹಿರಿಯ ನಟಿಯ ಜೊತೆ ಸೈಫ್ ಮಗ ಡೇಟಿಂಗ್
ಇಬ್ರಾಹಿಂ ಅಲಿ ಖಾನ್-ಪಲಕ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Nov 17, 2024 | 6:30 AM

ಸೈಫ್ ಅಲಿ ಖಾನ್ ಮಗ ಇಬ್ರಾಹಿಂ ಅಲಿ ಖಾನ್ ಆಗಾಗ ಸುದ್ದಿ ಆಗುತ್ತಾರೆ. ಸ್ಟಾರ್ ಹೀರೋನ ಮಗ ಎನ್ನುವ ಕಾರಣಕ್ಕೆ ಅವರ ಹೆಸರು ಆಗಾಗ ಚರ್ಚೆಗೆ ಬರುತ್ತದೆ. ಅವರು ಕಂಡಾಗ ಪಾಪರಾಜಿಗಳು ಮುತ್ತಿಕೊಳ್ಳುತ್ತಾರೆ. ಈಗ ಅವರ ವೈಯಕ್ತಿಕ ವಿಚಾರಕ್ಕೆ ಸುದ್ದಿ ಆಗುತ್ತಿದ್ದಾರೆ. ನಟಿಯೊಬ್ಬರ ಜೊತೆ ಸುತ್ತಾಟ ನಡೆಸುತ್ತಾ ಇದ್ದಾರೆ. ಇವರು ಈ ವಿಚಾರವನ್ನು ಮುಚ್ಚಿಡುತ್ತಿಲ್ಲ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆದಿದೆ.

ಇಬ್ರಾಹಿಂ ಅಲಿ ಖಾನ್ ಅವರು ಸುತ್ತಾಟ ನಡೆಸುತ್ತಿರುವುದು ಪಲಕ್ ತಿವಾರಿ ಜೊತೆ. ಇಬ್ಬರೂ ಮಾಲ್ಡೀವ್ಸ್​​ನ ರೆಸಾರ್ಟ್​ನಲ್ಲಿ ಸಮಯ ಕಳೆಯುತ್ತಿದ್ದಾರೆ. ಪಲಕ್ ಅವರು ಖ್ಯಾತ ಕಿರುತೆರೆ ನಟಿ ಶ್ವೇತಾ ತಿವಾರಿ ಅವರ ಮಗಳು. ಇಬ್ಬರೂ ಒಟ್ಟಾಗಿ ಇರುವ ವಿಡಿಯೋಗಳನ್ನು ಹಂಚಿಕೊಂಡಿಲ್ಲ. ಆದರೆ, ಇವರ ಹಿನ್ನೆಲೆ ನೋಡಿ ಫ್ಯಾನ್ಸ್ ಈ ರೀತಿಯಲ್ಲಿ ಊಹೆಗಳನ್ನು ಮಾಡುತ್ತಾ ಇದ್ದಾರೆ.

ಪಲಕ್ ಅವರು ಸೋಶಿಯಲ್ ಮೀಡಿಯಾದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಪಲಕ್ ಅವರು ನೀರಿನಿಂದ ಎದ್ದು ಬರುತ್ತಿರುವ ವಿಡಿಯೋಗಳು ಇವೆ. ಇದನ್ನು ಶೂಟ್ ಮಾಡಿದ್ದು ಇಬ್ರಾಹಿಂ ಅಲಿ ಖಾನ್ ಎನ್ನಲಾಗಿದೆ. ಇವರು ಸದ್ಯಕ್ಕಂತೂ ಈ ಬಗ್ಗೆ ಘೋಷಣೆ ಮಾಡೋದು ಅನುಮಾನವೇ.

ವಯಸ್ಸಿನ ಅಂತರದ ಬಗ್ಗೆಯೂ ಇಲ್ಲಿ  ನಾವು ನಿಮಗೆ ಹೇಳಲೇ ಬೇಕು. ಇಬ್ರಾಹಿಂ ಅಲಿ ಖಾನ್​ಗೆ ಈಗ 23 ವರ್ಷ. ಅದೇ ಪಲಕ್​ಗೆ 24 ವರ್ಷ. ವಯಸ್ಸಿನಲ್ಲಿ ಪಲಕ್ ಅವರು ಒಂದು ವರ್ಷ ಹಿರಿಯವರು ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ.

ಇಬ್ರಾಹಿಂ ಅಲಿ ಖಾನ್ ಅವರು ಸೈಫ್ ಅಲಿ ಖಾನ್ ಹಾಗೂ ಅಮೃತಾ ಸಿಂಗ್ ಅವರ ಮಗ. ಬಾಲಿವುಡ್​ ಯುವ ನಟಿ ಸಾರಾ ಅಲಿ ಖಾನ್ ಅವರ ಸಹೋದರ ಕೂಡ ಹೌದು. ಈಗ ಇಬ್ರಾಹಿಂ ಡೇಟಿಂಗ್ ವಿಚಾರಕ್ಕೆ ಸುದ್ದಿ ಆಗಿದ್ದಾರೆ.

ಇದನ್ನೂ ಓದಿ: ಸಲ್ಮಾನ್, ಶಾರುಖ್​ ಖಾನ್ ಮಾತ್ರವಲ್ಲ ಸೈಫ್ ಅಲಿ ಖಾನ್​ಗೂ ಬಂದಿತ್ತು ಬೆದರಿಕೆ 

ಬಾಲಿವುಡ್​ನಲ್ಲಿ ಇಬ್ರಾಹಿಂ ಹಾಗೂ ಪಲಕ್ ಬ್ಯುಸಿ ಆಗಲಿದ್ದಾರೆ. ಪಲಕ್ ಅವರು ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಇಬ್ರಾಹಿಂ ಅಲಿ ಖಾನ್ ಶೀಘ್ರವೇ ಚಿತ್ರರಂಗಕ್ಕೆ ಕಾಲಿಡೋ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?